NWKRTC-ಬ್ರೇಕ್ ಹಿಡಿಯದ ಬಸ್ಕೊಟ್ಟು ತಪ್ಪುಮಾಡಿದ ನಾಲಾಯಕ್ ಡಿಸಿ, ಡಿಎಂಇ: ತಪ್ಪಿನಿಂದ ಪಾರಾಗಲು ಹಾರಹಾಕಿ ಚಾಲಕರ ಅವಮಾನಿಸಿ ದರ್ಪ ಮೆರೆದ ದುರಹಂಕಾರಿಗಳು

- ಅಧಿಕಾರ ಮದದಲ್ಲಿ ತೇಲುತ್ತಿರುವ ಅಧಿಕಾರಿಗಳ ಅಮಾನತಿಗೆ ಆಗ್ರಹ
- ಅಮಾನತು ಮಾಡದಿದ್ದರೆ ಕೇಂದ್ರ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಎಚ್ಚರಿಕೆ ಕೊಟ್ಟ ಕೂಟ
ಧಾರವಾಡ: ಬ್ರೇಕ್ ಹಿಡಿಯದ ಬಸ್ಗಳನ್ನು ಚಾಲಕರಿಗೆ ಕೊಟ್ಟಿದ್ದ ಪರಿಣಾಮ ಬಸ್ ಹಿಂದಿನಿಂದ ಮುಂದೆ ಹೋಗುತ್ತಿದ್ದ ಬಸ್ಗೆ ಡಿಕ್ಕಿ ಹೊಡೆದಿದೆ. ಆದರೆ, ಇದನ್ನು ಬೇಕಂತಲೇ ಇಬ್ಬರೂ ಚಾಲಕರು ಮಾಡಿದ್ದಾರೆ ಎಂದು ಅವರಿಗೆ ಹೂವಿನ ಹಾರ ಹಾಕಿ ಅಧಿಕಾರಿಗಳು ಭಾರಿ ಅವಮಾನ ಮಾಡಿರುವ ಘಟನೆ ಧಾರವಾಡದಲ್ಲಿ ನಿನ್ನೆ ನಡೆದಿದೆ.
ನಿನ್ನೆ ಅಂದರೆ ಬುಧವಾರ ಹುಬ್ಬಳ್ಳಿ ಧಾರವಾಡ ನಗರ ಸಾರಿಗೆ ವಿಭಾಗದ BRTS ಹುಬ್ಬಳ್ಳಿ ಘಟಕಕ್ಕೆ ಸೇರಿದ ಬಸ್ಗಳು ಬ್ರೇಕ್ ಸರಿಯಾಗಿ ಹಿಡಿಯದ ಕಾರಣ ಧಾರವಾಡ ನಗರದ ಟೋಲ್ ನಾಕಾ ಹತ್ತಿರ ಸಣ್ಣ ಮಟ್ಟದ ಅಪಘಾತವಾಗಿದೆ.
ಇನ್ನು ಈ ಟೋಲ್ ನಾಕಾಭಾಗದಲ್ಲಿ ಅವೈಜ್ಞಾನಿಕವಾಗಿ BRTS ಸಂಸ್ಥೆ ರಸ್ತೆ ನಿರ್ಮಿಸಿದ್ದರಿಂದ ಈ ಜಾಗದಲ್ಲಿ ಮಳೆ ಬಿದ್ದ ಸಂದರ್ಭದಲ್ಲಿ ನೀರು ನಿಲ್ಲುತ್ತದೆ. ಅದೇ ಜಾಗದಲ್ಲಿ ಚಾಲಕ ಜಗದೀಶ್ ಹೊಸಮನಿ 20 ಅಡಿ ಹಿಂದಿನಿಂದ (ವಾಹನ ಸಂಖ್ಯೆ KA 25 F 3475) ಬಸ್ ಬ್ರೇಕ್ ಹಾಕಿದ್ದಾರೆ. ಆದರೆ ಅದು ನಿಲ್ಲದೆ ಮುಂದೆ ಹೋಗಿ ನಾಗಪ್ಪ ಮಾದರ ಅವರು ಚಲಾಯಿಸುತ್ತಿದ್ದ ವಾಹನಕ್ಕೆ ಗುದ್ದಿದೆ.
ಈ ವೇಳೆ ಒಂದು ವಾಹನದ ಹಿಂದಿನ ಹಾಗೂ ಮತ್ತೊಂದು ಬಸ್ನ ಮುಂದಿನ ಗಾಜುಗಳು ಜಖಂ ಆಗಿದ್ದು ಚಾಲಕರ ಸಮಯ ಪ್ರಜ್ಞೆಯಿಂದಾಗಿ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ. ಆದರೆ, ಈ ವಿಷಯವನ್ನು ತಿಳಿದ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದಲಿಂಗೇಶ್ ಹಾಗೂ ಡಿಎಂಇ ಪ್ರವೀಣ್ ಆ ಚಾಲನಾ ಸಿಬ್ಬಂದಿಗಳನ್ನು ಧಾರವಾಡ ಘಟಕಕ್ಕೆ ಕರೆಸಿಕೊಂಡು ಘಟನೆಯ ವಿವರವನ್ನು ಪಡೆಯದೆ ಅವರಿಗೆ ತಿಳಿವಳಿಕೆಯನ್ನೂ ಸಹ ನೀಡದೆ ಧಾರವಾಡ ಘಟಕದ ಘಟಕ ವ್ಯವಸ್ಥಾಪಕ ಹಟ್ಟಿ ಯವರಿಂದ ಹೂವಿನ ಹಾರ ಹಾಕಿಸಿ ಅವಮಾನ ಮಾಡುವ ಮೂಲಕ ಅಮಾನವೀಯತೆ ಮೆರೆದಿದ್ದಾರೆ.
ಆ ಸಮಯದಲ್ಲಿ ಡಿಸಿ ಸಿದ್ದಲಿಂಗೇಶ ಧಾರವಾಡದಲ್ಲಿ ಇದ್ದು ಈ ಅಮಾನವೀಯ ಘಟನೆ ಜರುಗುವಂತೆ ಮಾಡಿದ್ದಾರೆ. ಇದನ್ನು ನೌಕರರ ಕೂಟವು ಬಲವಾಗಿ ಖಂಡಿಸಿದ್ದು ಸಂಬಂಧಪಟ್ಟ ವಿಭಾಗೀಯ ನಿಯಂತ್ರಣಾಧಿಕಾರಿ, DME ಹಾಗೂ ಘಟಕ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೂಡಲೇ ಅವರನ್ನು ಅಮಾನತು ಮಾಡಬೇಕು ಇಲ್ಲದಿದ್ದರೆ ಕೇಂದ್ರ ಕಚೇರಿ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯಾಧ್ಯಕ್ಷ ಚಂದ್ರಶೇಖರ್, ವಲಯ ಮಟ್ಟದ ಕಾರ್ಯಾಧ್ಯಕ್ಷರಾದ V.G ಪೂಜಾರ ಎಚ್ಚರಿಕೆ ನೀಡಿದ್ದಾರೆ.
ಇನ್ನು ಈ ಡಿಸಿ ಮತ್ತು ಡಿಎಂಇ ಇಬ್ಬರಿಗೂ ವಯಸ್ಸಾಗಿದೆ ಆದರೆ, ನೌಕರರಿಗೆ ಯಾವ ರೀತಿ ಗೌರವ ಕೊಡಬೇಕು ಎಂಬ ಪರಿಜ್ಞಾನ ಮಾತ್ರ ಇಲ್ಲ. ಜತೆಗೆ ಅಧಿಕಾರ ದರ್ಪದಿಂದ ನೌಕರರನ್ನು ಈರೀತಿ ಅವಮಾನ ಮಾಡಿದ್ದಾರಲ್ಲ, ಮೊದಲು ಇವರಿಗೆ ಹೂವಿನ ಹಾರ ಹಾಕಬೇಕು. ಕಾರಣ ಬ್ರೇಕ್ ಹಿಡಿಯದ ಬಸ್ಸನ್ನು ಕೊಟ್ಟು ಓಡಿಸುವುದಕ್ಕೆ ಹೇಳಿರುವುದು ಇವರೆ ಅಲ್ಲವಾ?
ಇನ್ನು ತಾವು ಮಾಡಿದ ತಪ್ಪನ್ನು ಮುಚ್ಚಿಕೊಂಡು ತಮ್ಮ ಕೈಯಲ್ಲಿ ಅಧಿಕಾರವಿದೆ ಎಂದು ನೌಕರರ ಮೇಲೆ ನಿಯಮ ಬಾಹಿರವಾಗಿ ಅವಮಾನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಮೊದಲು ಇಂಥ ಕೆಲಸಕ್ಕೆ ಬಾರದ ದುರಹಂಕಾರದ ಅಧಿಕಾರಿಗಳನ್ನು ವಜಾ ಮಾಡಬೇಕು. ಇವರು ಫಿಟ್ನೆಸ್ ಬಸ್ಗಳನ್ನು ಕೊಟ್ಟರೆ ಅಪಘಾತಗಳು ಏಕಾಗುತ್ತವೆ. ಚಾಲಕರಿಗೆ ಬಸ್ಗಳ ಡ್ರೈವಿಂಗ್ ಬರುವುದಿಲ್ಲವೇ?
ಫಿಟ್ಆಗಿರುವ ಬಸ್ಗಳನ್ನು ಚಾಲಕರಿಗೆ ಕೊಡದೆ ಈ ರೀತಿ ಅಪಘಾತವಾದಾಗ ಅವರನ್ನು ಅವಮಾನ ಮಾಡುವುದು ಜತೆಗೆ ಬಸ್ಗೆ ಆಗಿರುವ ಹಾನಿಗೆ ಚಾಲಕರ ವೇತನದಲ್ಲಿ ಕಡಿತಮಾಡಿಕೊಳ್ಳುವುದು. ಇದು ಯಾವ ನ್ಯಾಯಸ್ವಾಮಿ? ನಿಜ ಹೇಳಬೇಕು ಎಂದರೆ ಇದಕ್ಕೆಲ್ಲ ನಿಮ್ಮ ಬೇಜವಾಬ್ದಾರಿತನ ಹಾಗೂ ಬಸ್ಗಳನ್ನು ಸರಿಯಾಗಿ ರಿಪೇರಿ ಮಾಡದಿರುವುದೇ ಕಾರಣ. ಅಂದಮೇಲೆ ಈಗ ಹೇಳಿ ಹೂವಿನ ಹಾರವನ್ನು ಯಾರ ಕೊರಳಿಗೆ ಹಾಕಬೇಕು? ನಿಮ್ಮಂತಹ ಕೆಲಸಕ್ಕೆ ಬಾರದ ಅಧಿಕಾರಿಗಳಿಗೆ ಅಲ್ಲವೇ ಎಂದು ನೌಕರರು ಪ್ರಶ್ನಿಸಿದ್ದಾರೆ.
ಅಲ್ಲದೆ, ತಾವು ದೊಡ್ಡವರೆಂದು ಬಿಂಬಿಸಿಕೊಳ್ಳಲು ತಾವು ಮಾಡಿದ ತಪ್ಪಿಗೆ ಚಾಲಕರಿಗೆ ಶಿಕ್ಷೆ ಕೊಟ್ಟುಬಿಡುತ್ತೀರಿ. ಇದನ್ನು ಈ ಹಿಂದೆ ಇದ್ದ ಸಂಘಟನೆಗಳು ಕೇಳುತ್ತಿರಲಿಲ್ಲ. ಆದರೆ ನಾವು ಇಂಥ ಅವಮಾನವನ್ನು ಎಂದಿಗೂ ಸಹಿಸುವುದಿಲ್ಲ ಎಂದು ಚಂದ್ರಶೇಖರ್ ಎಚ್ಚರಿಕೆ ನೀಡಿದ್ದು, ಈ ರೀತಿ ಕೃತ್ಯ ಎಸಗಿ ಚಾಲನಾ ಸಿಬ್ಬಂದಿಗೆ ಅವಮಾನ ಮಾಡಿರುವ ಈ ಮೂವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಎಂಡಿ ಪ್ರಿಯಾಂಗಾ ಅವರಲ್ಲಿ ಮನವಿ ಮಾಡಿದ್ದಾರೆ.
Related

You Might Also Like
ನೀರಿನ ಪೈಪ್ಲೈನ್ ದುರಸ್ತಿ ಕಳಪೆ: ಜಲಮಂಡಳಿ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡ ಆಯುಕ್ತೆ ಸ್ನೇಹಲ್
ಬೆಂಗಳೂರು: ಜಲಮಂಡಳಿ ವತಿಯಿಂದ ಆಸೆನ್ಷನ್ ಚರ್ಚ್ ರಸ್ತೆಯಲ್ಲಿ ನೀರಿನ ಪೈಪ್ಲೈನ್ ದುರಸ್ತಿ ಕಾರ್ಯ ಮಾಡಿದ್ದರೂ ಕೂಡ ಕುಸಿಯುತಿದ್ದು, ಅದನ್ನು ತ್ವರಿತವಾಗಿ ಮರುಸ್ಥಾಪಸಲು ತಕ್ಷಣ ಕ್ರಮವಹಿಸಿ ಎಂದು ಬಿಬಿಎಂಪಿ...
KSRTC: ನಾಳೆ ಸಿಎಂ ಜತೆ ನೌಕರರ ವೇತನ ಹೆಚ್ಚಳ ಸಂಬಂಧ ಹೈವೋಲ್ಟೆಜ್ ಸಭೆ – ಸರಿ ಸಮಾನ ವೇತನ ಬಹುತೇಕ ಖಚಿತ!
ಜುಲೈ 4ರಂದು ನೌಕರರ ವೇತನ ಹೆಚ್ಚಳ ಸಂಬಂಧ ಎಲ್ಲ ಸಂಘಟನೆಗಳ ಜತೆ ಸಭೆ ಆಯೋಜನೆ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಸಂಘಟನೆಗಳ...
KSRTC ನೌಕರರಿಗೆ ವೇತನ ಆಯೋಗದಂತೆ ಸಂಬಳ ಹೆಚ್ಚಳಕ್ಕೆ ಕ್ರಮವಹಿಸಿ: ನೂತನ ಎಂಡಿಗೆ APSSWA ಸಂಘ ಮನವಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ವ್ಯವಸ್ಥಾಪಕ ನಿರ್ದೇಶಕರು ಅಧಿಕಾರ ವಹಿಸಿಕೊಂಡ ಕೂಡಲೇ ನೌಕರರಿಗೆ ಬಿಡಿಎ ಹಾಗೂ ಡಿಎ ಕೊಡಲು ಆದೇಶಿಸಿದಕ್ಕೆ ಸಂಸ್ಥೆಯ ಲೆಕ್ಕಪತ್ರ...
KSRTC ನೌಕರರ ವೇತನ ಹೆಚ್ಚಳ ಸಂಬಂಧದ ಪ್ರಕರಣ: ಜು.16ಕ್ಕೆ ಮುಂದೂಡಿದ ಹೈಕೋರ್ಟ್
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಹೆಚ್ಚಳ ಸಂಬಂಧ ಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತ ಮಂಡಳಿ ವಿರುದ್ಧ ಕಳೆದ ಮಾರ್ಚ್ನಲ್ಲಿ...
ನಂದಿ ಬೆಟ್ಟದಲ್ಲಿ 14ನೇ ಸಚಿವ ಸಂಪುಟ ಸಭೆ: ಇನ್ನು ಮುಂದೆ ಬೆಂಗಳೂರು ಉತ್ತರ ಜಿಲ್ಲೆಯಾದ ಬೆಂಗಳೂರು ಗ್ರಾಮಾಂತರ ಜಿಲ್ಲೆ
ಎತ್ತಿನಹೊಳೆ ಯೋಜನೆಗೆ ಒಟ್ಟು 23,251 ಕೋಟಿ ರೂ. ಪರಿಷ್ಕೃತ ಅಂದಾಜು ಮಾಡಲಾಗಿದ್ದು, ಇಲ್ಲಿಯವರೆಗೂ 17,147 ಕೋಟಿ ರೂ. ಖರ್ಚಾಗಿದೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ...
KSRTC ಬಸ್ ಪಲ್ಟಿ: ಯುವತಿಗೆ ಕೈ ಮುರಿತ- ಒಬ್ಬರ ತಲೆಗೆ ಗಂಭೀರ ಪೆಟ್ಟು ಸೇರಿ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪಲ್ಟಿ ಹೊಡೆದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದರೆ, 20ಕ್ಕೂ ಹೆಚ್ಚು ಪ್ರಯಾಣಿಕರು ಸಣ್ಣಪುಟ್ಟ...
ಕರ್ನಾಟಕ ವಿಕಾಸ ರಂಗದ ಕೊಡಗು ಜಿಲ್ಲಾಧ್ಯಕ್ಷರಾಗಿ KSRTC ನಿವೃತ್ತ ನೌಕರ, ಸಾಹಿತಿ ವೈಲೇಶ್ ನೇಮಕ
ಕೊಡಗು: ಕರ್ನಾಟಕ "ವಿಕಾಸ ರಂಗ"ವು ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಸಂವರ್ಧನೆಗಾಗಿ, ನೆಲ-ಜಲದ ರಕ್ಷಣೆಗಾಗಿ ಶ್ರಮಿಸುವ ಧ್ಯೇಯೋದ್ಧೇಶಗಳೊಂದಿಗೆ ರಾಜ್ಯಮಟ್ಟದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೊಡಗು...
ನಂದಿಗಿರಿಯ ಯೋಗ – ಭೋಗ ನಂದೀಶ್ವರರ ಸನ್ನಿಧಿಯಲಿ ಸಚಿವ ಸಂಪುಟ ಸಭೆ
ನಂದಿ ಗಿರಿಯಲ್ಲಿ ನಡೆಯುತಿರುವ ವೈಭೋಗವ ಕಂಡ ಬೆಳಗಿನ ಚುಮು ಚುಮು ಚಳಿಯಿಂದ ಮೈಮುದುರಿ ಮಲಗಿದ್ದ ಸೂರ್ಯದೇವ ತನ್ನ ಕಿರಣಗಳನು ನಿಧಾನವಾಗಿ ಪಸರಿಸಲು ಪ್ರಯತ್ನಿಸಿದರೂ ಬೆಟ್ಟಕ್ಕೆ ಹೊದಿಕೆಯಾಗಿದ್ದ ಮಂಜು...
BMTC ನೌಕರರಿಗೆ ಸಾರಿಗೆ ಸಚಿವರಿಂದ ಪಿಂಚಣಿ ಪಾವತಿ ಆದೇಶ ಪತ್ರ ವಿತರಣೆ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಸಹಯೋಗದೊಂದಿಗೆ ಜೂನ್-2025ರ ಮಾಹೆಯ ಸಂಸ್ಥೆಯ 100ಕ್ಕೂ ಹೆಚ್ಚು ಅರ್ಹ ನೌಕರರಿಗೆ ಪ್ರಯಾಸ್ ಯೋಜನೆಯಡಿ...