ಬೆಂಗಳೂರು: ಸಾರಿಗೆ ನೌಕರರ ಬಹುಮುಖ್ಯ ಬೇಡಿಕೆಯಾಗಿರುವ ಸಾರಿಗೆ ನೌಕರರಿಗೂ ವೇತನ ಆಯೋಗದ ಶಿಫಾರಸು ಅಳವಡಿಸಿ ಎಂಬ ನೌಕರರ ಕೂಗಿಗೆ ಸರ್ಕಾರ ಸ್ಪಂದಿಸಲಿದೆಯೇ?
ಹೌದು! ನಮಗೂ ಸಮಾನ ಕೆಲಸಕ್ಕೆ ಸಮಾನ ವೇತನಕೊಡಿ ಎಂದು ಡಿಸೆಂಬರ್- 2020 ಮತ್ತು ಏಪ್ರಿಲ್ -2021ರಲ್ಲಿ ಸಾರಿಗೆ ನೌಕರರು ಇತಿಹಾಸದಲ್ಲಿ ಉಳಿಯುವಂತಹ ಹೋರಾಟವನ್ನೇ ಮಾಡಿದ್ದರು. ಆದರೆ ಕೊರೊನಾ ಮಹಾಮಾರಿ ಮತ್ತು ಅಂದಿನ ಬಿಜೆಪಿ ಸರ್ಕಾರದ ಇಚ್ಛಾಸಕ್ತಿಯ ಕೊರತೆಯಿಂದ ಅಂದು ನೌಕರರ ಬೇಡಿಕೆಗಳು ಮೂಲೆಗುಂಪಾದವು.
ಇನ್ನು ಹೋರಾಟಕ್ಕೆ ಪ್ರತ್ಯಕ್ಷವಾಗಿಯೋ ಇಲ್ಲ ಪರೋಕ್ಷವಾಗಿಯೋ ದುಮುಕಿದರು ಎಂಬ ಕಾರಣಕ್ಕೆ ಸಾವಿರಾರು ಸಾರಿಗೆ ನೌಕರರ ಅನ್ನ, ನೆಮ್ಮದಿಯನ್ನೇ (ವಜಾ, ಅಮಾನತು, ವರ್ಗಾವಣೆ, ಪೊಲೀಸ್ ಕೇಸ್ ಹಾಕಿ) ಹಿಂದಿನ ಸರ್ಕಾರ ಮತ್ತು ಕೆಲ ಭ್ರಷ್ಟ ಅಧಿಕಾರಿಗಳು ಕಸಿದುಕೊಂಡರು. ಇದರಿಂದ ನೌಕರರ ಒಗ್ಗಟ್ಟನ್ನು ಒಡೆಯಬಹುದು ಎಂಬ ಲೆಕ್ಕಾಚಾರ ನಿಗಮಗಳಲ್ಲಿರುವ ಕೆಲ ಭ್ರಷ್ಟ ಅಧಿಕಾರಿಗಳದ್ದಾಗಿತ್ತು. ಅದು ಸಫಲಕೂಡ ಆಯಿತು.
ನೌಕರರು ಪ್ರಸ್ತುತ ಅಲ್ಪ ವೇತನಕ್ಕೆ ಡ್ಯೂಟಿ ಮಾಡುತ್ತಿರುವುದಕ್ಕೆ ಇದೇ ನಿಗಮಗಳಲ್ಲಿ ಮಮ್ಮಲ ಮರಗುತ್ತಿರುವ ಅಧಿಕಾರಿಗಳು ಇದ್ದಾರೆ. ನಾವು ಕಚೇರಿಯಲ್ಲಿ ಎಸಿ/ ಫ್ಯಾನ್ ಕೆಳಗೆ ಕುಳಿತು ಕೆಲಸ ಮಾಡುತ್ತಿದ್ದೇವೆ ಎಂದರೆ ಅದು ನೌಕರರ ಬೆವರಿನ ಫಲ ಎಂದು ಕೊಂಡಿರುವ ಮತ್ತು ನೌಕರರ ಬಗ್ಗೆ ಕಾಳಜಿಯುಳ್ಳ ಅಧಿಕಾರಿಗಳು ಇದ್ದಾರೆ.
ನೌಕರರ ಶ್ರಮದಿಂದ ನಮಗೆ ಅನ್ನ ಸಿಗುತ್ತಿದೆ ಆದರೆ, ಆ ತಿಂದ ಅನ್ನ ಜೀರ್ಣವಾಗುವುದೆ ಎಂಬ ಯೋಚನೆಯಲ್ಲೂ ಕೆಲ ಅಧಿಕಾರಿಗಳ ಕಣ್ಣಾಲೆಗಳು ತೇವವಾಗುತ್ತಿವೆ. ಆದರೆ ಅದಾವುದನ್ನು ತೋರಿಸಿ ಕೊಳ್ಳದೆ ಅವರು ಇತರ ಅಧಿಕಾರಿಗಳಂತೆ ಕಚೇರಿಗೆ ಬಂದು ಹೋಗುತ್ತಿದ್ದಾರೆ. ಜತೆಗೆ ಈಗ ನೌಕರರಂತೆ ಅಲ್ಪ ವೇತನ ತೆಗೆದುಕೊಳ್ಳುವ ಪರಿಸ್ಥಿತಿಗೆ ತಲುಪುತ್ತಿದೆ ಅಧಿಕಾರಿ ವರ್ಗ ಎಂಬುವುದು ಕಟು ಸತ್ಯವಾಗುತ್ತಿದೆ.
2021ರಿಂದ ಇವರೆಗೂ ನೌಕರರ ಹಸಿವಿನ ಕೂಗು ಒಣಗಿದ ಗಂಟಲಿನಿಂದ ಬಾರದ ಧ್ವನಿ ಮತ್ತು ಇಂಥ ನೌಕರರ ಪರವಾದ ಅಧಿಕಾರಿಗಳ ಕಣ್ಣೀರನ ಹನಿಗಳು ಸರ್ಕಾರದ ಉನ್ನತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು, ಸಾರಿಗೆ ಸಚಿವರು ಮತ್ತು ಉನ್ನತ ಅಧಿಕಾರಿಗಳ ಒಳಮನಸ್ಸಿಗೆ ತಾಕಲೇ ಇಲ್ಲ. ಆದರೆ ಅದು ಇಂದಿನ ಸಿಎಂ ಸಾರಿಗೆ ಸಚಿವರಿಗೆ ಅರಿವಾಗುತ್ತದೆ ಎಂದರೆ ಅವರು ಕೂಡ ನೌಕರರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ.
ಹೀಗಾಗಿಯೇ ನೌಕರರು ಅನುಭವಿಸುತ್ತಿರುವ ಕಷ್ಟಗಳನ್ನು ನಿತ್ಯ ಕಣ್ಣಾರೆ ಕಾಣುತ್ತಿರುವ ಸಿಎಂ ಮತ್ತು ಸಾರಿಗೆ ಸಚಿವರು ಹಾಗೂ ಅಧಿಕಾರಿಗಳು ನೌಕರರಿಗೆ ಒಂದು ಒಳ್ಳೆಯದಾಗುವ ತೀರ್ಮಾನಕ್ಕೆ ಬರಬೇಕಿದೆ. ಅದಕ್ಕೆ ಸಮಸ್ತ ಸಂಘಟನೆಗಳು ಸರಿ ಸಮಾನ ವೇತನ ಕೊಡಿಸುವತ್ತ ಹೋರಾಟದ ರೂಪುರೇಷೆ ಹಾಕಿಕೊಳ್ಳಬೇಕಿದೆ.
ಅದೆ! ಸಾರಿಗೆ ಸಂಸ್ಥೆಗಳ ಅಧಿಕಾರಿಗಳು, ನೌಕರರಿಗೆ ವೇತನ ಆಯೋಗದ ಶಿಫಾರಸುಗಳನ್ನು ಅಳವಡಿಸುವ ಕುರಿತು ಚರ್ಚಿಸಲು ಸಾರಿಗೆ ಇಲಾಖೆ ಅಧಿಕಾರಿಗಳು ಕೂಡ ಸರ್ಕಾರಕ್ಕೆ ಒತ್ತಡ ಹೇರಬೇಕಿದೆ. ಆದರೆ ಅಧಿಕಾರಿಗಳು ಆ ಕೆಲಸಕ್ಕೆ ಇನ್ನೂ ಮುಂದಾಗುತ್ತಿಲ್ಲ. ಇದು ಸರ್ಕಾರಕ್ಕೆ ವರವಾಗುತ್ತಿದೆ.
ಇನ್ನಾದರೂ ಅಧಿಕಾರಿಗಳು. ಸಂಘಟನೆಗಳು ನೌಕರರ ಹೋರಾಟಕ್ಕೆ ಕೈ ಜೋಡಿಸಿದರೆ ಒಂದು ಶಾಶ್ವತ ಪರಿಹಾರ ಪಡೆದುಕೊಳ್ಳಲು ನೆರವಾಗುತ್ತದೆ. ಇನ್ನು ಇದೇ ಆ.28ರಂದು ಕಾರ್ಮಿಕ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯುವ ಸಾರಿಗೆ ಅಧಿಕಾರಿಗಳು -ಸಂಘಟನೆಗಳ ಸಭೆಯಲ್ಲಿ ಯಾವುದೇ ಮಹತ್ವದ ಬೆಳವಣಿಗೆಯಂತು ಆಗುವುದಿಲ್ಲ ಎಂಬುವುದು ಎಲ್ಲರಿಗೂ ಗೊತ್ತಿದೆ.
ಹೀಗಾಗಿ ಸಮಸ್ತರು ಹೊಂದಾಣಿಕೆಯಿಂದ ಮುಂದಾಗಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರದ ಮುಂದಿಡಬೇಕಿದೆ, ಇಲ್ಲದಿದ್ದರೆ ಸರ್ಕಾರ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸುವುದಿಲ್ಲ ಎಂಬುವುದು ಎಲ್ಲ ನೌಕರರ ಅಭಿಪ್ರಾಯವಾಗಿದೆ.
Related

You Might Also Like
BMTC: ನಿರ್ವಾಹಕರ ಸೀಟ್ನಲ್ಲಿ ಕುಳಿತು ಕೊಳ್ಳಬೇಡಿ ಎಂದ ಚಾಲಕನ ಮೇಲೆ ಕಿಡಿಗೇಡಿ ಹಲ್ಲೆ- FIR ದಾಖಲು, ಬಂಧನ
ಬೆಂಗಳೂರು: ಡ್ಯೂಟಿ ಮೇಲಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚಾಲಕರೊಬ್ಬರ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿ ವಿರುದ್ಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು...
ಬೈಕ್ನಿಂದ ಬಿದ್ದ ಬಾಲಕನ ಮೇಲೆ ಹರಿದ ಬಿಎಂಟಿಸಿ ಬಸ್: ಬಾಲಕ ಸ್ಥಳದಲ್ಲೇ ಸಾವು
ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭಾನುವಾರ ಸಂಜೆ 5 ಗಂಟೆ ಸುಮಾರಿಗೆ...
KSRTC: ಘಟಕಕ್ಕೆ ಬಂದರೂ ಡ್ಯೂಟಿ ಸಿಗದೆ ಹೋದರೆ ಕೆಲಸದ ಸಮಯ ಡಿಪೋದಲ್ಲೇ ಇದ್ದರೆ ಹಾಜರಾತಿ: ಮಾಹಿತಿ ನೀಡಿದ ಡಿಸಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಚಾಲನಾ ಸಿಬ್ಬಂದಿಗಳು ಘಟಕಕ್ಕೆ ಹಾಜರಾಗಿ ಅವರಿಗೆ ಡ್ಯೂಟಿ ಸಿಗದೆ ಹೋದರೆ ಅವರು, ಡಿಪೋದಲ್ಲೇ ಕೆಲಸದ ಸಮಯದಲ್ಲಿ ಇದ್ದರೆ...
ಪ್ಲಾಸ್ಟರ್ ಆಫ್ ಪ್ಯಾರಿಸ್ ಬಿಡಿ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಿ: ರಾಜ್ಯ ಮಾಲಿನ್ಯ ಮಂಡಳಿ
ಬೆಂಗಳೂರು: ಇದೇ ಆಗಸ್ಟ್ 26 ಮತ್ತು 27 ರಂದು ಸ್ವರ್ಣಗೌರಿ ಹಾಗೂ ಗಣೇಶ ಚತುರ್ಥಿ ಹಬ್ಬದ ಆಚರಣೆ ಮಾಡುವ ಸಲುವಾಗಿ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಒ.ಪಿ)...
BMTC ಚಾಲನಾ ಸಿಬ್ಬಂದಿಗಳ ವಿರುದ್ಧ ವಜಾ, ಅಮಾನತು ಕ್ರಮ- ಗುಬ್ಬಿ ಮೇಲೆ ಬ್ರಹ್ಮಾಸ್ತ್ರ!
ಎಲ್ಲ ಬಸ್ ಅಪಘಾತಗಳಿಗೂ ಚಾಲಕ-ನಿರ್ವಾಹಕರೇ ಹೊಣೆಯಲ್ಲ..!? ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್ಗಳಲ್ಲಾಗುವ ಎಲ್ಲ ಅಪಘಾತಗಳಿಗೂ ಸಾರಿಗೆ ಸಂಸ್ಥೆಯ ಚಾಲಕ ನಿರ್ವಾಹಕರನ್ನೇ ಹೊಣೆ...
BMTC: ಮೊಬೈಲಲ್ಲಿ ಮಾತನಾಡುತ್ತ ಬಸ್ ಓಡಿಸಿದರೆ 15 ದಿನ ಅಮಾನತು- ಎಚ್ಚರಿಕೆ
ಬೆಂಗಳೂರು: ಬಿಎಂಟಿಸಿ ಬಸ್ಗಳಿಂದ ಅಪಘಾತ ಹೆಚ್ಚುತ್ತಿರುವುದನ್ನು ತಡೆಯಲು ಸಂಸ್ಥೆಯ ಚಾಲಕರಿಗೆ ವಲಯವಾರು ವಾರದಲ್ಲಿ ಎರಡು ಬಾರಿ ಚಾಲನಾ ತರಬೇತಿ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಯಿತು. ಶಾಂತಿನಗರದಲ್ಲಿರುವ...
ಪತಿ ಹತ್ಯೆಮಾಡಿದ ಪತ್ನಿ ಸೇರಿದಂತೆ ಇಬ್ಬರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಕೊರ್ಟ್
ಶಿವಮೊಗ್ಗ: ಪತಿಯನ್ನು ಹತ್ಯೆಮಾಡಿದ ಪತ್ನಿ ಸೇರಿದಂತೆ ಇಬ್ಬರಿಗೆ ಮರಣದಂಡನೆ ಹಾಗೂ ಮತ್ತೊಬ್ಬನಿಗೆ ಏಳುವರ್ಷ ಜೈಲು ಶಿಕ್ಷೆ ವಿಧಿಸಿ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಾಲಯ ಮಹತ್ವದ...
ಕುಷ್ಠರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ: ಡಾ.ಪ್ರದೀಪ್ತಾ ಕುಮಾರ್ ನಾಯಕ್
ಬೆಂಗಳೂರು: ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದಂತೆ ಕುಷ್ಠರೋಗವು ಒಂದು ಬಾಧಿತ ರೋಗವಾಗಿದ್ದು, ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸಲು ಅಧಿಕಾರಿಗಳು ನಿರಂತರ ಕಾರ್ಯ ಪ್ರವೃತ್ತರಾಗಿರಬೇಕು ಎಂದು ಕೇಂದ್ರ ಮಾನವ ಹಕ್ಕುಗಳ...
NWKRTC: 45 ವರ್ಷದ ಮಹಿಳೆಗೆ ಅನುಕಂಪದ ಆಧಾರದಡಿ ಹುದ್ದೆಕೊಡಿ- ಹೈಕೋರ್ಟ್ ಆದೇಶ
ಬೆಂಗಳೂರು: ವಯೋಮಿತಿ ಮೀರಿದ ಮಹಿಳೆಗೆ ವಿಶೇಷ ಪ್ರಕರಣವೆಂದು ಅನುಕಂಪದ ಹುದ್ದೆ ನೀಡಬೇಕು ಎಂದು ಹೈಕೋರ್ಟ್ ಮಹತ್ವ ಆದೇಶ ಹೊರಡಿಸಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರನ...