ಕೆಎಸ್ಆರ್ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಮುಂಬೈ: ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಬಸ್ನಲ್ಲೇ ಮಗುವಿಗೆ ಜನ್ಮನೀಡಿ ಬಳಿಕ ಕಿಟಕಿಯಿಂದ ಆ ನಮಜಾತ ಶಿಶುವನ್ನು ಎಸೆದು ಕೊಂದಿರುವ ಘಟನೆ ಮಹಾರಾಷ್ಟ್ರದ ಪರ್ಭಾನಿ ನಗರದ ಪತ್ರಿ-ಸೇಲು ರಸ್ತೆಯಲ್ಲಿ ನಡೆದಿದೆ.
ಋತಿಕಾ ಧೇರೆ (19) ಮಗವಿಗೆ ಚಲಿಸುತ್ತಿದ್ದ ಬಸ್ನಲ್ಲೇ ಜನ್ಮನೀಡಿದ ಬಳಿಕ ಹೊರಗೆಸೆದು ಕೊಂದ ಪಾಪಿ. ಇನ್ನು ಈಕೆಯ ಪತಿ ಎಂದು ಹೇಳಿಕೊಂಡು ಇದೇ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಅಲ್ತಾಫ್ ಶೇಖ್ ಎಂಬಾತನೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ.
ಗರ್ಭಿಣಿ ಋತಿಕಾ ಧೇರೆ ತನ್ನ ಪತಿ ಎಂದು ಹೇಳಿಕೊಂಡು ಅಲ್ತಾಫ್ ಶೇಖ್ ವ್ಯಕ್ತಿಯ ಜೊತೆಗೆ ಖಾಸಗಿ ಟ್ರ್ಯಾವೆಲ್ಸ್ನ ಸ್ಲೀಪರ್ ಕೋಚ್ನಲ್ಲಿ ಪುಣೆಯಿಂದ ಪರ್ಭಾನಿ ನಗರಕ್ಕೆ ಪ್ರಯಾಣಿಸುತ್ತಿದ್ದಳು. ಈ ವೇಳೆ ಮಂಗಳವಾರ (ಜು.15) ಬೆಳಗ್ಗೆ 6:30ರ ಸುಮಾರಿಗೆ ಆಕೆಗೆ ಹೆರಿಗೆ ನೋವು ಶುರುವಾಗಿದ್ದು, ಚಲಿಸುತ್ತಿದ್ದ ಬಸ್ಸ್ನಲ್ಲಿಯೇ ಗಂಡು ಮಗುವಿಗೆ ಜನ್ಮನೀಡಿದ್ದಾಳೆ.
ಬಳಿಕ ಆ ಇಬ್ಬರು ಸೇರಿಕೊಂಡು ಆ ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ, ಕಿಟಕಿಯಿಂದ ಹೊರಗೆ ಎಸೆದಿದ್ದಾರೆ. ಬಸ್ನಿಂದ ಹೊರೆ ಎಸೆದಿದ್ದರಿಂದ ಶಿಶು ಅಸುನೀಗಿದೆ.
ಇತ್ತ ವಾಹನ ಚಲಾಯಿಸುತ್ತಿದ್ದ ಚಾಲಕ ಕಿಟಿಕಿಯಿಂದ ಏನ್ನೋ ಹೊರಗೆ ಎಸೆದರಲ್ಲ ಎಂಬುದನ್ನು ಗಮನಿಸಿ ಬಸ್ನಿಲ್ಲಿ ಬಂದು ಈ ಬಗ್ಗೆ ವಿಚಾರಿಸಿದಾರೆ. ಈ ವೇಳೆ ಆಕೆಯ ಪತಿ ಬಸ್ನಲ್ಲಿ ಪ್ರಯಾಣಿಸುತ್ತಿರುವ ಕಾರಣ ನನ್ನ ಹೆಂಡತಿ ವಾಂತಿ ಮಾಡಿಕೊಂಡಿದ್ದಾಳೆ ಎಂದು ಸುಳ್ಳು ಹೇಳಿ ಚಾಲಕನನ್ನು ನಂಬಿಸಿದ್ದಾನೆ.
ಇನ್ನು ಇದೇ ಸಮಯದಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬಸ್ನಿಂದ ಏನೋ ಹೊರಗೆ ಬಿತ್ತಲ್ಲ ಎಂದು ಅದನ್ನು ಗಮನಿಸಿದ್ದಾರೆ. ಬಳಿಕ ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ಅದೇ ತಾನೆ ಜನಿಸಿದ ಗಂಡು ಮಗು ಪತ್ತೆಯಾಗಿದೆ.

ಕೂಡಲೇ ಆತ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಸ್ಥಳೀಯ ಪೊಲೀಸರ ತಂಡ ಬಸನ್ನು ತಡೆದು, ವಾಹನವನ್ನು ಪರಿಶೀಲಿಸಿದಾಗ ಸತ್ಯ ಬಯಲಾಗಿದೆ.
ಬಳಿಕ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಮಹಿಳೆ ಹಾಗೂ ಶೇಖ್ನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ವಿಚಾರಣೆ ವೇಳೆ, ನಮಗೆ ಮಗುವನ್ನು ಬೆಳೆಸಲು ಸಾಧ್ಯವಾಗುವುದಿಲ್ಲ, ಹೀಗಾಗಿ ಎಸೆದಿದ್ದೇವೆ. ರಸ್ತೆಗೆ ಎಸೆದ ಬಳಿಕ ಅದು ಸಾವನ್ನಪ್ಪಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಋತಿಕಾ ಧೇರೆ ಹಾಗೂ ಶೇಖ್ ಇಬ್ಬರು ಮೂಲತಃ ಪರ್ಭಾನಿ ನಗರದವರು. ಕಳೆದ ಒಂದೂವರೆ ವರ್ಷದಿಂದ ಪುಣೆಯಲ್ಲಿ ವಾಸಿಸುತ್ತಿದ್ದಾರೆ. ಇನ್ನು ಅವರಿಬ್ಬರು ದಂಪತಿ ಎಂದು ಹೇಳಿಕೊಂಡಿದ್ದಾರೆ. ಆದರೆ ಯಾವುದೇ ದಾಖಲೆಗಳಿಲ್ಲ. ಪೊಲೀಸರು ಮಹಿಳೆಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಪರ್ಭಾನಿಯ ಪತ್ರಿ ಪೊಲೀಸ್ ಠಾಣೆಯಲ್ಲಿ ದಂಪತಿ ವಿರುದ್ಧ ಬಿಎನ್ಎಸ್ ಸೆಕ್ಷನ್ 94 (3), (5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ನೋಟಿಸ್ ಕೂಡ ನೀಡಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Related
