NEWSನಮ್ಮಜಿಲ್ಲೆನಮ್ಮರಾಜ್ಯ

ಮೊಂಡುತನ ಬಿಟ್ಟು ಸಾರಿಗೆ ನೌಕರರಿಗೆ ಕೊಡಬೇಕಿರುವುದ ಕೊಡಿ: ಅಧಿಕಾರವಿದೆ ಎಂಬ ದರ್ಪ ಬಿಡಿ ಸಿದ್ದುಜೀ- ಇದು ಶಾಶ್ವತವಲ್ಲ!

ವಿಜಯಪಥ ಸಮಗ್ರ ಸುದ್ದಿ
  • ಸಿಎಂ ಸಿದ್ದರಾಮಯ್ಯ ಸಾಹೇಬರೆ ನೀವು ಈಗ ವಕೀಲರಲ್ಲ ಸರ್ಕಾರದ ಸಂಬಳ ಪಡೆಯುವವರಲ್ಲಿ ನೀವು ಒಬ್ಬರು
  • ಈಗ ನಿಮಗೆ ವಕೀಲ ವೃತ್ತಿ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬುದನ್ನು ಮರೆತಿರ
  • ಸಿಎಂ ಹುದ್ದೆಯಲ್ಲಿದ್ದುಕೊಂಡು ಬಾಲಿಶ ಹೇಳಿಕೆ ಕೊಡುವುದು ನಿಮಗೆ ಶೋಭೆ ತರುವುದಿಲ್ಲ
  • 2027ಕ್ಕೆ ವೇತನ ಪರಿಷ್ಕರಣೆ ಅಂತ ಇಲ್ಲಿ ವಾದ ಮಾಡುತ್ತೀರಲ್ಲ ಏಕೆ ನೀವು ಪ್ರಣಾಳಿಕೆಯಲ್ಲಿ ಕೊಟ್ಟ ಮಾತನ್ನು ಅಧಿಕಾರದ ಮದದಲ್ಲಿ ಮರೆತಿರೆ ಸಾಹೇಬರೆ
  • ನೀವು ಮತ್ತೆ ವಕೀಲರಾಗಿ ಬರಬೇಕು ಎಂದರೆ ನಿಮ್ಮ ವಕೀಲ ಸನ್ನದನ್ನು ಮತ್ತೆ ಪಡೆಯಬೇಕು
  • ಅಲ್ಲದೆ ನೀವು ಮಾಜಿ ಸಿಎಂ ಆದ ಮೇಲೆ ತೆಗೆದುಕೊಳ್ಳುವ ಪಿಂಚಣಿಯನ್ನು ಬಿಡಬೇಕು
  • ಇದೆಲ್ಲ ನಿಮಗೆ ಗೊತ್ತಿಲ್ಲವೇ?

ಬೆಂಗಳೂರು: ಈ ಹಿಂದಿನಿಂದಲೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಪರಿಷ್ಕರಣೆಯನ್ನು ವರ್ಷಗಳು ಉರುಳಿದ ಬಳಿಕವೇ ಮಾಡಲಾಗುತ್ತಿತ್ತು. ಆದರೆ, ಕಳೆದ 2020 ಜನವರಿ 1ರಿಂದ ಆಗಬೇಕಿದ್ದ ವೇತನ ಪರಿಷ್ಕರಣೆಯನ್ನು ಅಂದಿನ ಬಿಜೆಪಿ ಸರ್ಕಾರ ಮೊಂಡುತನ ಪ್ರದರ್ಶಿಸಿ ನೌಕರರಿಗೆ ವಿಳಂಬವಾಗಿ ಶೇ.15ರಷ್ಟನ್ನು ಕೊಟ್ಟಿದೆ.

ಅದನ್ನೆ ಈಗಿನ ಕಾಂಗ್ರೆಸ್‌ ಸರ್ಕಾರ ದಾಳವಾಗಿ ಉಪಯೋಗಿಸಿಕೊಂಡು ಕೋವಿಡ್‌ ನೆಪವನ್ನೂ ಹೇಳಿಕೊಂಡು ನಾವು 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಡುವುದಿಲ್ಲ ಎಂದು ಉದ್ಧಟತನ ತೋರಿಸುತ್ತಿರುವುದು ವಕೀಲರಾಗಿ ಸೇವೆ ಸಲ್ಲಿಸಿದ್ದ ಪ್ರಸ್ತುತ ಸಿಎಂ ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ. ಇಂಥ ಬಾಲಿಶತನ ಹೇಳಿಕೆಯನ್ನು ಮೊದಲು ನಿಲ್ಲಿಸಿ ನೌಕರರಿಗೆ ಕೊಡಬೇಕಿರುವ ವೇತನ ಹೆಚ್ಚಳದ ಹಿಂಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒಕ್ಕೋರಲಿನಿಂದ ನೌಕರರ ಸಂಘಟನೆಗಳು ಆಗ್ರಹಿಸಿವೆ.

ನಿಮ್ಮ ಕಾಂಗ್ರೆಸ್‌ ಪಕ್ಷ ಕೂಡ ಈ ಹಿಂದೆ ಸಾರಿಗೆ ನೌಕರರಿಗೆ 4 ವರ್ಷಕ್ಕೊಮ್ಮೆ ಮಾಡುತ್ತಿದ್ದ ವೇತನ ಹೆಚ್ಚಳವನ್ನು ಕೂಡಲೇ ಮಾಡಿದ್ದೀರಾ, ನೀವು ಕೂಡ ಒಂದೇರಡು ವರ್ಷ ಕಳೆದ ಮೇಲೆಯೇ ಹೆಚ್ಚಳ ಮಾಡುತ್ತಿದ್ದದ್ದು ಇದನ್ನು ಮರೆತು ಈ ರೀತಿ ಹಿಂದಿನ ಬಿಜೆಪಿ ಸರ್ಕಾರ 2020 ಜನವರಿ 1ರಿಂದ ವೇತನ ಹೆಚ್ಚಳ ಮಾಡಿರುವುದಾಗಿ ಹೇಳಿಲ್ಲ ಎಂದು ಹೇಳುವುದು ನಿಮ್ಮ ಲಾಯರ್‌ ಗಿರಿಯ ವಾದವನ್ನು ಪ್ರತಿಪಾದಿಸುತ್ತದೆಯೇ ಹೊರತು ಮತ್ತೇನನ್ನು ಅಲ್ಲ.

ಕಾರಣ 2020 ಜನವರಿ 1ರಿಂದ ಶೇ.15ರಷ್ಟು ವೇತನ ಹೆಚ್ಚಳ ಮಾಡಿರುವುದಕ್ಕೆ ಅಂದಿನ ಬಿಜೆಪಿ ಸರ್ಕಾರ 31-12-2019ರಲ್ಲಿ ಇದ್ದ ಮೂಲ ವೇತನಕ್ಕೆ 2023 ಮಾರ್ಚ್‌ನಲ್ಲಿ ವೇತನ ಹೆಚ್ಚಳ ಘೊಷಣೆ ಮಾಡಿರುವುದರ ಅರ್ಥ ಇಂದು 2020ರ ಜನವರಿ 1ರಿಂದ ಅನ್ವಯವಾಗುವಂತೆ ಎಂಬುವುದೆ ಆಗಿರುತ್ತದೆ. ಅದನ್ನು ಬಿಟ್ಟು ಈ ರೀತಿ ನೌಕರರಿಗೆ ಎರಡು ಬಗರಯುವ ಕೆಲಸ ಮಾಡುವುದಕ್ಕಾಗಿಯೇ ತಾವು ಹಿಂದಿನ ಸರ್ಕಾರ ಎಲ್ಲಿ 2020ರ ಜನವರಿ 1ರಿಂದ ಅನ್ವಯವಾಗುವಂತೆ ಹೇಳಿದೆ ಎಂದು ಅಧಿಕ ಪ್ರಶಂಗಿತನವನ್ನು ಪ್ರದರ್ಶಿಸಬೇಡಿ ಸಿಎಂ ಸಿದ್ದರಾಮಯ್ಯ ಅವರೆ.

ತಾವು ಲಾಯರ್‌ ಆಗಿದ್ದೀರಿ ಈಗ ಸಿಎಂ ಆಗಿದ್ದೀರಿ ಲಾಯರ್‌ ಅಲ್ಲ ತಾವು ನಿಮಗೆ ವಕೀಲಿಕೆ ವೃತ್ತಿ ಮಾಡುವುದಕ್ಕೆ ಈಗ ಅವಕಾಶವಿಲ್ಲ. ಕಾರಣ ನೀವು ವೇತನ ಪಡೆಯುವ ಸಿಎಂ ಹುದ್ದೆಯಲ್ಲಿ ಇದ್ದೀರಿ. ಹೀಗಾಗಿ ತನ್ನ ಬುದ್ಧಿ ಪ್ರೌಢಿಮೆಯನ್ನು ಈ ರೀತಿ ಬೇಡದಕ್ಕೆ ಉಪಯೋಗಿಸಿಕೊಂಡು ಮಾತೆತ್ತಿದರೆ ನಾನು ಕೂಡ ವಕೀಲ ನನಗೆ ಹೇಳುತ್ತೀಯ ಎಂಬ ಅಹಂಅನ್ನು ಬಿಟ್ಟು ನೌಕರರಿಗೆ ನ್ಯಾಯಯುತವಾಗಿ ಕೊಡಬೇಕಿರುವುದನ್ನು ಕೂಡಲೇ ಬಿಡುಗಡೆ ಮಾಡಿ ಅದನ್ನು ಬಿಟ್ಟು ಈ ರೀತಿ ಉದಾಸೀನತೆ ತೋರಿಸಿದರೆ ಆ.5ರಿಂದ ನಿಮಗೆ ಪಾಠ ಕಲಿಸಬೇಕಾಗುತ್ತದೆ ಎಂದು ಸಾರಿಗೆ ನೌಕರರು ಎಚ್ಚರಿಗೆ ನೀಡಿದ್ದಾರೆ.

Megha
the authorMegha

Leave a Reply

error: Content is protected !!