NEWSನಮ್ಮಜಿಲ್ಲೆನಮ್ಮರಾಜ್ಯ

ಸಂಘ- ಸಂಘಗಳ ನಡುವೆ ಭಿನ್ನಾಭಿಪ್ರಾಯಗಳು ಇರಬಹುದು.. ಒಟ್ಟಾರೆ ಸಾರಿಗೆ ನೌಕರರಿಗೆ ಅನುಕೂಲ ಏನು ಅನ್ನೋದು ಮುಖ್ಯ: ಜಂಟಿ ಕ್ರಿಯಾಸಮಿತಿ

ವಿಜಯಪಥ ಸಮಗ್ರ ಸುದ್ದಿ

 ನೀವುಗಳು ಕೂಟ ಕಟ್ಟಿದ ಆರಂಭದಿಂದಲೂ ಈ ರಾಜ್ಯದ ಎಲ್ಲ ಮಠಾಧೀಶರು- ಅಧಿಕಾರದಲ್ಲಿದ್ದ BJP ನಾಯಕರೂ, ವಿಪಕ್ಷದ ರಾಜಕಾರಣಿಗಳು ಎಲ್ಲರನ್ನೂ ಓಲೈಸಿದ್ದು/ ಕಾಲಿಗೆ ಬಿದ್ದದ್ದು/ ಹಾಲಿನ ಅಭಿಷೇಕ ಮಾಡಿದ್ದು/ ದಾವಣಗೆರೆಯೂ ಒಳಗೊಂಡಂತೆ ಸಭೆ ಸಮಾರಂಭ ಮಾಡಿದ್ದು ಎಲ್ಲವನ್ನೂ ಕೂಟದ ಮುಖಂಡರು/ ಕೂಟದ ಅಸಂಖ್ಯಾತ ನೌಕರರು ನೋಡಿದ್ದಾರೆ.

ನೀವು ಶೂನ್ಯದಿಂದ ಸರ್ವವನ್ನು ಸೃಷ್ಟಿಮಾಡುವ ಬಾಬಾಗಳ ರೀತಿಯಲ್ಲಿ ವರ್ತಿಸಬೇಡಿ. 2018-19 ರಿಂದ 2024 ರವರೆಗೆ ಎಲ್ಲವನ್ನೂ ನೋಡಿದ್ದೇವೆ. ನೀವು ಇಷ್ಟೆಲ್ಲಾ ಮಾಡಿ ಅಂತಿಮವಾಗಿ ಮುಷ್ಕರ ನಡೆದರೂ ಸಾರಿಗೆ  ನೌಕರರಿಗೆ  ಒಂದು ಬಿಡಿಗಾಸಿನ ವೇತನ ಸೌಲಭ್ಯಗಳು ಸಿಗಲಿಲ್ಲ. ಬದಲು ಸಾವಿರಾರು ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆದವು. ಸಾವಿರಾರು ನೌಕರರು ಪಡಬಾರದ ಕಷ್ಟ ಪಟ್ಟರು.

ನೌಕರರನ್ನು ತೆನಾಲಿ ರಾಮಕೃಷ್ಣನ ಬೆಕ್ಕು ಮಾಡಿದ್ದೀರಿ. ನೌಕರರ ಪ್ರಜಾಸತ್ತಾತ್ಮಕ ಚಳವಳಿಗಳು ನಿಷ್ಪ್ರಯೋಜಕ ಅನ್ನುವ ಮನಸ್ಥಿತಿಗೆ ತಂದಿದ್ದೀರಿ. ನೀವು ನಿಮ್ಮ ಸಂಘದ ತೀರ್ಮಾನದ ರೀತಿ ಯಾವುದೇ ಕಾರ್ಯಕ್ರಮ ನಡೆಸಿ. ಆದರೆ ಜಂಟಿ ಕ್ರಿಯಾ ಸಮಿತಿಯನ್ನು ಟೀಕಿಸುವುದನ್ನು ಏಕೆ ಮಾಡುತ್ತೀರಿ?

ನಿಮ್ಮೆಲ್ಲಾ ಘನ ಸಾಧನೆಯ ನಂತರ BJP ಸರ್ಕಾರ ಸಾರಿಗೆ ನೌಕರರಿಗೆ ಉಂಡೆ ನಾಮ ಹಾಕಿ ಹೋಗುವ ಪ್ರಯತ್ನದಲ್ಲಿ ಇತ್ತು. ಇದನ್ನರಿತ ನೌಕರರ ಸಂಘಟನೆಗಳು ಕೂಟವನ್ನು ಒಳಗೊಂಡು ಜಂಟಿ ಸಮಿತಿ ಮಾಡಲು ಪ್ರಯತ್ನಿಸಿದವು. ಕೂಟದ ಮುಖಂಡರು ಜಂಟಿ ಸಮಿತಿ ಜತೆ ಸೇರದೆ ಇದ್ದ ಕಾರಣ ಇತರೆ ಸಂಘಟನೆಗಳು ಜಂಟಿಯಾಗಿ ಸರ್ಕಾರ ಮತ್ತು ಆಡಳಿತ ವರ್ಗಗಳು ಸಾರಿಗೆ ಕಾರ್ಮಿಕರಿಗೆ 1-1-2020 ರಿಂದ ವೇತನ ಪರಿಷ್ಕರಣೆ ಮಾಡಬೇಕೆಂದು ಜುಲೈ- 2022 ರಿಂದ ಚಳವಳಿ ನಡೆಸಿದ ಪರಿಣಾಮ ಶೇ. 15 ವೇತನ ಹೆಚ್ಚಳ ಪಡೆದಿದ್ದೇವೆ.

ನಾವು ನಿಮ್ಮ ರೀತಿ ನಡೆದುಕೊಂಡಿದ್ದರೆ ಲಕ್ಷಾಂತರ ನೌಕರರು  4 ವರ್ಷದ ಒಂದು ಅವಧಿಯ ವೇತನ ಹೆಚ್ಚಳವನ್ನು ಕಳೆದುಕೊಳ್ಳಬೇಕಿತ್ತು. ಇದರಿಂದ ಲಕ್ಷಾಂತರ ಸಾರಿಗೆ ನೌಕರರಿಗೆ ಎಷ್ಷು ಅರ್ಥಿಕ ನಷ್ಟ ಉಂಟಾಗುತ್ತಿತ್ತು ಎಂಬುದರ ಕನಿಷ್ಠ ತಿಳಿವಳಿಕೆ ತಮಗೆ ಇದ್ದಂತೆ ಇಲ್ಲ. ನಿಮ್ಮ ತರಹ ಅಲ್ಲಿ ಸ್ವರ್ಗ ಇದೆ ಅಂತ ತೋರಿಸಿದ್ದರೆ ಸಂಬಳ ಹೆಚ್ಚಳವಾಗುತ್ತಿರಲಿಲ್ಲ. ನೀವು ಸೊಸೈಟಿಯಲ್ಲಿ ಜಯಭೇರಿ ಬಾರಿಸಿ ಅಭ್ಯಂತರವಿಲ್ಲ. ಅದೇ ಎಲ್ಲವೂ ಅಲ್ಲ. ಲಕ್ಷಾಂತರ ನೌಕರರ  ಬದುಕಿನ ಜತೆ ಚೆಲ್ಲಾಟವಾಡಬೇಡಿ.

ಅತ್ಯಂತ ಜವಾಬ್ದಾರಿಯಿಂದ ನೌಕರ  ವರ್ಗದ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿ. ಸಾರಿಗೆ ನಿಗಮಗಳ ಆಡಳಿತ ವರ್ಗ ಮತ್ತು ಸರ್ಕಾರಗಳು ಕೂಟದ ಮುಷ್ಕರದ ವೇಳೆ ನೌಕರರ  ಮೇಲೆ ಧಮನಕಾರಿ ನೀತಿಗಳನ್ನು ಅನುಸರಿಸಿದವು. ಇನ್ನೂ ಮುಂದೆಯೂ ಇರಲ್ಲ ಅಂತ ಭಾವಿಸಬೇಡಿ.

ಜಂಟಿ ಕ್ರಿಯಾ ಸಮಿತಿಯಿಂದ ಸಾರಿಗೆ ನೌಕರರಿಗೆ  ಕೂಟದವರು ಮತ್ತು ಸರ್ಕಾರವೂ ಸೇರಿ ಉಂಡೆ ನಾಮ ಹಾಕುವುದನ್ನು ತಪ್ಪಿಸಿದ್ದೇವೆ. ನೀವು ಮತ್ತು ನಿಮ್ಮ ಸ್ನೇಹಿತರು ಯಾರಾದರೂ ಆರ್ಥಿಕ ತಜ್ಞರ ಬಳಿ ಹೋಗಿ ವಿಚಾರಿಸಿ. 4 ವರ್ಷದ ಒಂದು ಅವಧಿಯ ಶೇ. 15 ವೇತನ ಹೆಚ್ಚಳ ಕೈ ತಪ್ಪಿದ್ದರೆ ಎಷ್ಟು ನಷ್ಟ ಆಗುತ್ತಿತ್ತು ಅಂತ.

ನಿಮ್ಮ ಕಾರ್ಯ ಯೋಜನೆಗಳನ್ನು ನೌಕರರ  ಮುಂದೆ ಮಂಡಿಸಿ. ಅದು ನಿಮ್ಮ ಸ್ವತಂತ್ರ. ಆದರೆ ಜಂಟಿ ಕ್ರಿಯಾ ಸಮಿತಿಯ ಬಗ್ಗೆ ಮಾತನಾಡುವಾಗ ಜವಾಬ್ದಾರಿಯಿಂದ ಮಾತನಾಡಿ. ಏಕೆಂದರೆ ಆಳುವ ವರ್ಗದ ನೀತಿಗಳನ್ನು ವಿರೋಧಿಸಲು ಇಂದಲ್ಲಾ ನಾಳೆ ನೌಕರ ವರ್ಗಕ್ಕೆ ಜಂಟಿ ಹೋರಾಟಗಳು ಅನಿವಾರ್ಯ.

ಸಂಘ- ಸಂಘಗಳ ನಡುವೆ ಭೀನ್ನ ಅಭಿಪ್ರಾಯಗಳು ಇರಬಹುದು. ಒಟ್ಟಾರೆ ಸಾರಿಗೆ ಕಾರ್ಮಿಕರಿಗೆ ಅನುಕೂಲ ಏನು ಅನ್ನೋದು ಮುಖ್ಯ. ನೌಕರ ವರ್ಗ ಭ್ರಮೆಯ ಆಲೋಚನೆಗಳಿಂದ ಆಳುವ ವರ್ಗಗಳಿಂದ ಸೌಲಭ್ಯಗಳನ್ನು ಪಡೆಯುವುದು ಕಷ್ಟ ಎಂದು ಜಂಟಿ ಕ್ರಿಯಾ ಸಮಿತಿಯ ಕೆಲ ಪದಾಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಇದನ್ನು ಹರಿಯಬಿಟ್ಟಿದ್ದಾರೆ.

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...