NEWSನಮ್ಮರಾಜ್ಯ

ಇಂದು 15 ಮಂದಿಗೆ ಕೊರೊನಾ ಸೋಂಕು ದೃಢ

ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 247ಕ್ಕೆ ಏರಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಇಂದು (ಏ.13) 15 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು,  ಒಟ್ಟು ಕೊರೊನಾ ಪೀಡಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ.

ರಾಜ್ಯ ಸರ್ಕಾರ ಸೋಮವಾದ ಬೆಳಗಿನ ವರದಿಯನ್ನು ಬಿಡುಗಡೆ ಮಾಡಿದ್ದು, ಸಂಜೆ ಮತ್ತೊಂದು ವರದಿ ಬಿಡುಗಡೆ ಮಾಡಲಿದೆ. ಬೆಳಗಾವಿ ಮತ್ತು ಮಂಡ್ಯದಲ್ಲಿ ಒಬ್ಬನಿಂದ ಮೂವರಿಗೆ, ಬೀದರ್‌ನಲ್ಲಿ ಓರ್ವನಿಂದ ಇಬ್ಬರಿಗೆ ಕೊರೊನಾ ತಗುಲಿದೆ. ಇವರಿಗೆಲ್ಲ ನ್ಯೂಡೆಲ್ಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ತೆರಳಿದ ವ್ಯಕ್ತಿಗಳ ಸಂಪರ್ಕದಿಂದಾಗಿ ಸೋಂಕು ಬಂದಿದೆ.

ನ್ಯೂಡೆಲ್ಲಿಗೆ ವ್ಯಾಪಾರಕ್ಕೆ ತೆರಳಿದ ಹುಬ್ಬಳ್ಳಿಯ ವ್ಯಕ್ತಿಯಿಂದಾಗಿ ಇಂದು 4 ಮಂದಿಗೆ ಸೋಂಕು ತಗುಲಿದೆ. ನ್ಯೂಡೆಲ್ಲಿಗೆ ಪ್ರಯಾಣ ಬೆಳೆಸಿದ ದೊಡ್ಡಬಳ್ಳಾಪುರ ಮತ್ತು ಉಸಿರಾಟದ ತೊಂದರೆ ಇರುವ ಬೆಂಗಳೂರಿನ ವ್ಯಕ್ತಿಗೆ ಕೊರೊನಾ ಇರುವುದು ದೃಢಪಟ್ಟಿದೆ.

ರೋಗಿ 233 – 55 ವರ್ಷದ ಧಾರವಾಡದ ವ್ಯಕ್ತಿ, ರೋಗಿ 194ರ ಸಂಪರ್ಕ.
ರೋಗಿ 234 – 36 ವರ್ಷದ ಧಾರವಾಡದ ವ್ಯಕ್ತಿ ರೋಗಿ 194ರ ಸಂಪರ್ಕ.
ರೋಗಿ 235 – 74 ವರ್ಷದ ವರ್ಷದ ವೃದ್ಧೆ, ರೋಗಿ 194ರ ಸಂಪರ್ಕ.
ರೋಗಿ 236 – 37 ವರ್ಷದ ಧಾರವಾಡದ ವ್ಯಕ್ತಿ, ರೋಗಿ 194ರ ಸಂಪರ್ಕ.

ರೋಗಿ 237 – 60 ವರ್ಷದ ಮಳವಳ್ಳಿಯ ವೃದ್ಧೆ, ಮಗನ(ರೋಗಿ 179) ಸಂಪರ್ಕ.
ರೋಗಿ 238 – 8 ವರ್ಷದ ಹೆಣ್ಣು ಮಗು, ರೋಗಿ 179ರ ಸಂಪರ್ಕ.
ರೋಗಿ 239 – 18 ವರ್ಷದ ಯುವಕ, ರೋಗಿ 179ರ ಸಂಪರ್ಕ.

ರೋಗಿ 240 – 27 ವರ್ಷದ ಬಾಗಲಕೋಟೆ ಮುಧೋಳ್ ಯುವಕ, ರೋಗಿ 164ರ ಸಂಪರ್ಕ.
ರೋಗಿ 241 – 16 ವರ್ಷದ ಬೀದರ್ ಬಾಲಕಿ, ರೋಗಿ 211ರ(ಸಹೋದರನ ಮಗಳು) ಸಂಪರ್ಕ.

ರೋಗಿ 243 – 20 ವರ್ಷದ ಬೆಳಗಾವಿಯ ಯುವಕ, ರೋಗಿ 149ರ ಸಂಪರ್ಕ.
ರೋಗಿ 244 – 14 ವರ್ಷದ ಬೆಳಗಾವಿಯ ಬಾಲಕ, ರೋಗಿ 149ರ ಸಂಪರ್ಕ.
ರೋಗಿ 245 – 45 ವರ್ಷದ ಬೆಳಗಾವಿ ವ್ಯಕ್ತಿ, ರೋಗಿ 149ರ ಸಂಪರ್ಕ.

ರೋಗಿ 246 – 39 ವರ್ಷದ ದೊಡ್ಡಬಳ್ಳಾಪುರದ ವ್ಯಕ್ತಿ, ದೆಹಲಿ ಪ್ರಯಾಣದ ಹಿನ್ನೆಲೆ.
ರೋಗಿ 247 – 62 ವರ್ಷದ ಬೆಂಗಳೂರಿನ ವ್ಯಕ್ತಿಗೆ ತೀವ್ರ ಉಸಿರಾಟದ ತೊಂದರೆ.

Leave a Reply

error: Content is protected !!
LATEST
KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ