NEWSಸಿನಿಪಥ

ಕಿರುತೆರೆ ವೀಕ್ಷಕರ ಮನ ಸೆಳೆದ ನಟಿ ನಯನಾ ಈಗೇನುಮಾಡುತ್ತಿದ್ದಾರೆ ಗೊತ್ತಾ? 

ವಿಜಯಪಥ ಸಮಗ್ರ ಸುದ್ದಿ

ಭಾರತದ ಜನಪ್ರಿಯ ವರ್ಣ ಚಿತ್ರಗಾರ ರಾಜಾ ರವಿವರ್ಮ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಅವರು ಬರೆದಂತಹ ಒಂದೊಂದು ಚಿತ್ರಗಳು ಇಂದು ಜೀವಂತವಾಗಿವೆ. ಅವರು ಬರೆದ ಸುಂದರ ಕಲಾಕೃತಿಗೆ ಮನ ಸೋಲದವರಿಲ್ಲ. ತಮ್ಮ ಕಲಾಕುಂಚದಿಂದ ನಿರ್ಜೀವ ವಸ್ತುವಿಗೂ ಜೀವ ಭರಿಸುವ ಶಕ್ತಿ ರಾಜ ರವಿವರ್ಮರಿಗಿತ್ತು. ಅಂದ ಹಾಗೇ ಈಗ್ಯಾಕೆ ರಾಜಾ ರವಿವರ್ಮನ ವಿಚಾರ ಎಂದು ಕೇಳುತ್ತಿದ್ದೀರಾ?

ಕಿರುತೆರೆ ನಟಿಯೊಬ್ಬರು ಇದೀಗ ಹೊಸತಾಗಿ ಫೋಟೋಶೂಟ್ ಒಂದನ್ನು ಮಾಡಿಸಿಕೊಂಡಿದ್ದು ಅದನ್ನು ನೋಡಿದಾಗ ರವಿವರ್ಮನ ವರ್ಣಚಿತ್ರ ನೆನಪಾಗಿಯೇ ಆಗುತ್ತದೆ. ಅಂದ ಹಾಗೇ ರವಿವರ್ಮನ ಕಲಾಕೃತಿಯನ್ನು ಫೋಟೋಶೂಟ್ ಮೂಲಕ ಮರು ಸೃಷ್ಟಿ ಮಾಡಿಸಿಕೊಂಡಿರುವ ಆ ಕಿರುತೆರೆ ನಟಿ ಹೆಸರು ನಯನಾ ವೆಂಕಟೇಶ್.

ಕಳೆದ ಅಕ್ಟೋಬರ್ 30 ರಂದು ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ನಯನಾ ತಮ್ಮ ಮಗುವಿಗೆ ಪ್ರಯಾನ್ ಭಾರದ್ವಾಜ್ ಎಂದು ನಾಮಕರಣವನ್ನು ಮಾಡಿದ್ದಾರೆ.

5 ತಿಂಗಳ ಮುದ್ದು ಹುಡುಗ ಪ್ರಯಾನ್ ಇನ್ ಸ್ಟಾ ಗ್ರಾಂ ಖಾತೆಯನ್ನು ಕೂಡಾ ಹೊಂದಿದ್ದಾನೆ. ಲಿಟಲ್ ಎನ್ವಿಸ್ ಎಂಬ ಹೆಸರಿನ ಈ ಖಾತೆಗೆ ಈಗಾಗಲೇ ಮೂರುವರೆ ಸಾವಿರಕ್ಕಿಂತಲೂ ಹೆಚ್ಚಿನ ಫಾಲೋವರ್ಸ್ ಇದ್ದಾರೆ.

ಚಿಕ್ಕಮ್ಮ, ಮನೆದೇವ್ರು, ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ನಯನಾ ಸದ್ಯ ಪತಿ ವೆಂಕಟೇಶ್ ಮತ್ತು ಮಗ ಪ್ರಯಾನ್ ರೊಂದಿಗೆ ಕಾಲ ಕಳೆಯುತ್ತಿದ್ದಾರೆ. ತಾಯ್ತನವನ್ನು ಸಕತ್ ಎಂಜಾಯ್ ಕೂಡಾ ಮಾಡುತ್ತಿದ್ದಾರೆ.

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...