NEWSನಮ್ಮಜಿಲ್ಲೆ

ಮಿಮ್ಸ್ ಬೋಧಕ  ಆಸ್ಪತ್ರೆಗೆ 50 ಲಕ್ಷ ರೂ. ತುರ್ತು ಬಿಡುಗಡೆಗೆ ಆದೇಶ

ನಾಲ್ಕು ತಿಂಗಳ ವೇತನವನ್ನು ದೇಣಿಗೆ ನೀಡಿದ  ಮಂಡ್ಯ ಸಂಸದೆ ಸುಮತಾ ಅಂಬರೀಶ್‌

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ:  ನಗರದ ಮಿಮ್ಸ್ ಬೋಧಕ  ಆಸ್ಪತ್ರೆಗೆ  ಅತ್ಯವಶ್ಯಕವಾಗಿರುವ ವೆಂಟಿಲೇಟರ್ ಯಂತ್ರಗಳನ್ನು  ಒದಗಿಸಲು 2019-20 ನೇ ಸಾಲಿನ ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ  ಮೊದಲನೇ ಕಂತಿನ ಅನುದಾನದಡಿ 50 ಲಕ್ಷ ರೂಗಳನ್ನು ಆಸ್ಪತ್ರೆಗೆ  ಬಿಡುಗಡೆಗೊಳಿಸಲು ತುರ್ತು ಅನುಮೋದನೆ ನೀಡುವಂತೆ ಸಂಸದೆ ಸುಮಲತಾ ಅಂಬರೀಶ್  ಮಂಡ್ಯ ಜಿಲ್ಲಾಧಿಕಾರಿ ಡಾ.ಕೆ. ವೆಂಕಟೇಸ್‌ ಅವರಿಗೆ ಸೂಚಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಕಾಣಿಸಿಕೊಂಡಿರುವ ಮಹಾಮಾರಿ ಕೊರೋನಾ (COVID-19) ಸೋಂಕಿಗೆ ಮುಂಜಾಗ್ರತಾ ಕ್ರಮವಾಗಿ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಸಂಶಯಾಸ್ಪದ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಚಿಕಿತ್ಸೆಗೆ ಸಂಬಂಧಿಸಿದಂತೆ ತುರ್ತು ವೈದ್ಯಕೀಯ ಸೇವೆಯನ್ನು ನೀಡುವ ಸಲುವಾಗಿ ಈ ಹಣವನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ

COVID- 19 ಎಂಬ ವೈರಾಣುವಿನಿಂದ ಹರಡುತ್ತಿರುವ ಸಾಂಕ್ರಾಮಿಕ ರೋಗಗಳ ಪರಿಸ್ಥಿತಿಯನ್ನು  ನಿಯಂತ್ರಿಸಲು ಪ್ರಧಾನಮಂತ್ರಿಯವರ ನಿರ್ದೇಶನ / ನಿರ್ಧಾರಗಳಿಂದ ಸದರಿ ರೋಗದಿಂದ ಬಳಲುತ್ತಿರುವ ಸಾರ್ವಜನಿಕರಿಗೆ ಸರ್ಕಾರದ ವತಿಯಿಂದ ವೈರಾಣು ತಡೆಗಟ್ಟಲು ಪ್ರಯೋಗಾಲಯಗಳ ಸ್ಥಾಪನೆ ಕಾರ್ಯತಂತ್ರ ರೂಪಿಸಿ  ಅಳವಡಿಸಲು ಆಯಾ ರಾಜ್ಯಗಳ ಜವಾಬ್ದಾರಿಯೂ ಹೆಚ್ಚಿನದಿದೆ ಎಂದು ಹೇಳಿದ್ದಾರೆ.

ಸಾರ್ವಜನಿಕ  ಕಾಣಿಕೆಗಳು ಅವಶ್ಯವಿದ್ದು, ಈ ನಿಟ್ಟಿನಲ್ಲಿ ಚುನಾವಣಾ ಪ್ರತಿನಿಧಿಗಳ ಕೈಜೋಡಣೆಯು ಅವಶ್ಯವಿರುವುದರಿಂದ, ದೇಣಿಗೆಯಾಗಿ ಸುಮಲತಾ ಅಂಬರೀಶ್ ಅವರು  ನಾಲ್ಕು ತಿಂಗಳ ಮಾಸಿಕ  ವೇತನವನ್ನು ನೀಡುತ್ತಿದ್ದಾರೆ.

ಅದರಲ್ಲಿ ಎರಡು ತಿಂಗಳ ಮಾಸಿಕ ವೇತನ 2 ಲಕ್ಷ ರೂ.ಗಳನ್ನು   ಪ್ರಧಾನಮಂತ್ರಿ ಪರಿಹಾರ  ನಿಧಿಗೆ

ಮತ್ತು ಇನ್ನೆರಡು ತಿಂಗಳ ವೇತನ 2 ಲಕ್ಷ ರೂ.ಗಳನ್ನು ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿ -COVID-19  ಖಾತೆಗೆ  ಬ್ಯಾಂಕ್‌ ಮುಖಾಂತರ ನೀಡುತ್ತಿರುವುದಾಗಿ ಹೇಳಿದ್ದಾರೆ.

 

 

Leave a Reply

error: Content is protected !!
LATEST
ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ ಸಾರಿಗೆ ನೌಕರರ ವೇತನದಲ್ಲಿ ಹಣ ಕಟ್‌ ಮಾಡಿ ಎಲ್‌ಐಸಿ ಪಾಲಿಸಿಗೆ ಪಾವತಿಸದ ಬಗ್ಗೆ ದೂರು ಕೊಟ್ಟರೆ ಅಮಾನತು: ಸಚಿವ ರಾಮಲಿಂಗ... BMTC: ಚಾಲಕ ಕಂ. ನಿರ್ವಾಹಕರು ಆಗಸ್ಟ್‌ 14ರೊಳಗೆ ಸಂಪೂರ್ಣ ನಿರ್ವಾಹಕರಾಗಿ ಬದಲಾಗಬೇಕು: ಸಿಟಿಎಂ ಆದೇಶ