NEWSನಮ್ಮರಾಜ್ಯಸಿನಿಪಥ

ರಂಗಭೂಮಿ ಸೇರಿ ಕಲೆಗಾಗಿ ಶ್ರಮಿಸುತ್ತಿರುವವರ ಸಂಕಷ್ಟ ನೀಗಿಸಿ

 ಸಿಎಂ ಯಡಿಯೂರಪ್ಪರಿಗೆ  ರಂಗನಟದ ಮಾಜಿ ಸದಸ್ಯ ವೆಂಕಟರಾಜು ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಂಗಭೂಮಿ ಸೇರಿದಂತೆ ಕಲೆಗಾಗಿ ದುಡಿಯುವ ಕಲಾವಿದರು ಕೊರೊನಾದಂತದ ವಿಷಮ ಪರಿಸ್ಥಿಯಿಂದ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು ಅವರಿಗೆ ಸರ್ಕಾರ ನೆರವಾಗಬೇಕು ಎಂದು ರಂಗನಟದ ಮಾಜಿ ಸದಸ್ಯ ಆರ್. ವೆಂಕಟರಾಜು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದಾರೆ.

ಕಲೆಗಾಗಿ ದುಡಿಯುವ ಜನ ಹವ್ಯಾಸಿ, ವೃತ್ತಿ-ಅರೆ ವೃತ್ತಿ, ಪೌರಾಣಿಕ, ಸೇರಿದಂತೆ ಚಲನಚಿತ್ರಗಳಲ್ಲಿನ ಪೋಷಕ ಕಲಾವಿದ, ಬರಹಗಾರ ಇವರೆಲ್ಲರೂ ಒಂದೇ ರಂಗ ಬಳ್ಳಿಯ ಹೂಗಳು. ಈ ಜನರ ಸಾಂಸ್ಕೃತಿಕ ಸಂಪನ್ನತೆ ನಾಡಿಗೆ ದೇಶಕ್ಕೆ ಗುರುತರ ಕೊಡುಗೆ ನೀಡಿದೆ. ಆದರೆ ಈಗ ಕರೋನವೈರಸ್ ಭೀಕರ ಮಾರಿಯ ಕಾರಣಕ್ಕೆ ಕಲಾವಿದರು ತಮ್ಮ ಕುತ್ತಿಗೆ, ಕಾಲುಗಳಿಗೆ, ಸರಪಳಿ ಕಟ್ಟಿಸಿಕೊಂಡು ಗೃಹ ಬಂಧಿಯಾಗಿದ್ದಾರೆ.

ಬೆಂಕಿಯ ಕುಲುಮೆಯಲ್ಲಿ ಬೆಂದು ಹೋಗುವ ಹೇಳಿಕೊಳ್ಳಲಾರದ ಸ್ವಾಭಿಮಾನಿಗಳು ಅವರು . ಇಂತಹ ವಿಷಮ ಪರಿಸ್ಥಿತಿಯಲ್ಲಿ ಅವರ ಕುಟುಂಬಗಳಿಗೆ ಆಹಾರ ಪೂರೈಕೆಯ ಜೊತೆಗೆ, ಒಂದಿಷ್ಟು ಹಣಕಾಸಿನ ನೆರವು ಬೇಕು ಎಂದು ಕೋರಿದ್ದಾರೆ.

ಕಲಾವಿದರ ಅಗತ್ಯ ಮಾಹಿತಿಯನ್ನು ಪಡೆದು, ದಿನವೊಂದಕ್ಕೆ ಕನಿಷ್ಠ 500ರೂಪಾಯಿಯ ಗರಿಷ್ಠ ಸರ್ಕಾರದ ವಿವೇಚನೆಗೆ ಸಂಬಂಧಿಸಿದ ಹಾಗೆ, “ಜೀವನಭತ್ಯೆ” ನೀಡುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಇದು ಅವರ ಕುಟುಂಬಕ್ಕೆ ಸಹಕಾರಿ ಆಗುವುದರ ಜೊತೆಗೆ ಮುಂದಿನ ಕಲಾಸೇವೆಗೆ ಮನೋಬಲ ದೊರಕಿಸಿ ಕೊಟ್ಟಂತಾಗುತ್ತದೆ. ಕೃಷಿಕರ ಜೀವನವನ್ನು ಸುಭದ್ರಗೊಳಿಸಲು ತಾವು ಮಾಡಿದ ನಿರಂತರ ಹೋರಾಟವನ್ನು ಸ್ಮರಿಸುತ್ತಾ, ಕಲೆಗಾಗಿ ದುಡಿಯುವವರ ಕೈಯನ್ನು ಬಲಪಡಿಸಬೇಕೆಂದು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ