Please assign a menu to the primary menu location under menu

NEWSನಮ್ಮರಾಜ್ಯಸಿನಿಪಥ

ರಂಗಭೂಮಿ ಸೇರಿ ಕಲೆಗಾಗಿ ಶ್ರಮಿಸುತ್ತಿರುವವರ ಸಂಕಷ್ಟ ನೀಗಿಸಿ

 ಸಿಎಂ ಯಡಿಯೂರಪ್ಪರಿಗೆ  ರಂಗನಟದ ಮಾಜಿ ಸದಸ್ಯ ವೆಂಕಟರಾಜು ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಂಗಭೂಮಿ ಸೇರಿದಂತೆ ಕಲೆಗಾಗಿ ದುಡಿಯುವ ಕಲಾವಿದರು ಕೊರೊನಾದಂತದ ವಿಷಮ ಪರಿಸ್ಥಿಯಿಂದ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು ಅವರಿಗೆ ಸರ್ಕಾರ ನೆರವಾಗಬೇಕು ಎಂದು ರಂಗನಟದ ಮಾಜಿ ಸದಸ್ಯ ಆರ್. ವೆಂಕಟರಾಜು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದಾರೆ.

ಕಲೆಗಾಗಿ ದುಡಿಯುವ ಜನ ಹವ್ಯಾಸಿ, ವೃತ್ತಿ-ಅರೆ ವೃತ್ತಿ, ಪೌರಾಣಿಕ, ಸೇರಿದಂತೆ ಚಲನಚಿತ್ರಗಳಲ್ಲಿನ ಪೋಷಕ ಕಲಾವಿದ, ಬರಹಗಾರ ಇವರೆಲ್ಲರೂ ಒಂದೇ ರಂಗ ಬಳ್ಳಿಯ ಹೂಗಳು. ಈ ಜನರ ಸಾಂಸ್ಕೃತಿಕ ಸಂಪನ್ನತೆ ನಾಡಿಗೆ ದೇಶಕ್ಕೆ ಗುರುತರ ಕೊಡುಗೆ ನೀಡಿದೆ. ಆದರೆ ಈಗ ಕರೋನವೈರಸ್ ಭೀಕರ ಮಾರಿಯ ಕಾರಣಕ್ಕೆ ಕಲಾವಿದರು ತಮ್ಮ ಕುತ್ತಿಗೆ, ಕಾಲುಗಳಿಗೆ, ಸರಪಳಿ ಕಟ್ಟಿಸಿಕೊಂಡು ಗೃಹ ಬಂಧಿಯಾಗಿದ್ದಾರೆ.

ಬೆಂಕಿಯ ಕುಲುಮೆಯಲ್ಲಿ ಬೆಂದು ಹೋಗುವ ಹೇಳಿಕೊಳ್ಳಲಾರದ ಸ್ವಾಭಿಮಾನಿಗಳು ಅವರು . ಇಂತಹ ವಿಷಮ ಪರಿಸ್ಥಿತಿಯಲ್ಲಿ ಅವರ ಕುಟುಂಬಗಳಿಗೆ ಆಹಾರ ಪೂರೈಕೆಯ ಜೊತೆಗೆ, ಒಂದಿಷ್ಟು ಹಣಕಾಸಿನ ನೆರವು ಬೇಕು ಎಂದು ಕೋರಿದ್ದಾರೆ.

ಕಲಾವಿದರ ಅಗತ್ಯ ಮಾಹಿತಿಯನ್ನು ಪಡೆದು, ದಿನವೊಂದಕ್ಕೆ ಕನಿಷ್ಠ 500ರೂಪಾಯಿಯ ಗರಿಷ್ಠ ಸರ್ಕಾರದ ವಿವೇಚನೆಗೆ ಸಂಬಂಧಿಸಿದ ಹಾಗೆ, “ಜೀವನಭತ್ಯೆ” ನೀಡುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಇದು ಅವರ ಕುಟುಂಬಕ್ಕೆ ಸಹಕಾರಿ ಆಗುವುದರ ಜೊತೆಗೆ ಮುಂದಿನ ಕಲಾಸೇವೆಗೆ ಮನೋಬಲ ದೊರಕಿಸಿ ಕೊಟ್ಟಂತಾಗುತ್ತದೆ. ಕೃಷಿಕರ ಜೀವನವನ್ನು ಸುಭದ್ರಗೊಳಿಸಲು ತಾವು ಮಾಡಿದ ನಿರಂತರ ಹೋರಾಟವನ್ನು ಸ್ಮರಿಸುತ್ತಾ, ಕಲೆಗಾಗಿ ದುಡಿಯುವವರ ಕೈಯನ್ನು ಬಲಪಡಿಸಬೇಕೆಂದು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
Kho Kho World Cup 2025: ತಿ.ನರಸೀಪುರದ ಚೈತ್ರಾ ನಾಡು, ದೇಶದ ಕೀರ್ತಿಯ ಮುಗಿಲೆತ್ತೆಕ್ಕೆ ಹಾರಿಸಿದ ಅಪ್ಪಟ ಗ್ರಾಮೀಣ ಪ... ಜಗಜಿತ್ ದಲೈವಾಲ 53 ದಿನಗಳ ಉಪವಾಸ ಕೈ ಬಿಟ್ಟು ಚಿಕಿತ್ಸೆಗೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ: ಕುರುಬೂರ್ ಶಾಂತಕುಮಾರ್ KSRTC ಬಸ್‌ ಬ್ರೇಕ್‌ ವೈಫಲ್ಯಗೊಂಡು ಪಲ್ಟಿ: 30ಕ್ಕೂ ಹೆಚ್ಚು ಮಂದಿಗೆ ಗಾಯ BMTC ಎಲೆಕ್ಟ್ರಿಕ್ ಬಸ್ ಬ್ರೇಕ್ ವೈಫಲ್ಯ: ಡಾಬಾ, ಬೀಡಾ ಅಂಗಡಿಗೆ ಡಿಕ್ಕಿ KSRTC: ಅಧಿಕಾರಿಗಳು, ಸಿಬ್ಬಂದಿಗಳಿಗೂ ಕಿರುಕುಳ ನೀಡುತ್ತಿದ್ದ ಸಂಚಾರಿ ನಿರೀಕ್ಷಕ ಉಮೇಶ್‌  ವಜಾ- ಸಿಟಿಎಂ ಆದೇಶ ಬೆಂಗಳೂರಿನಲ್ಲಿ ಶಾಲೆ ಕಲಿತ ಆ ದಿನಗಳ ಕನ್ನಡದಲ್ಲೇ ಬ್ಯಾಂಕಾಕ್‌ನಲ್ಲಿ ಮೆಲುಕುಹಾಕಿದ ಸೂಪರ್‌ಸ್ಟಾರ್‌ ರಜನಿಕಾಂತ್ KSRTC ನೌಕರರಿಗೆ ಉಚಿತ ಚಿಕಿತ್ಸೆ ನೀಡದಿದ್ದರೆ ಅಂಥ ಆಸ್ಪತ್ರೆಗಳು ಹೊರಕ್ಕೆ: ಅಧಿಕಾರಿಗಳ ಎಚ್ಚರಿಕೆ KSRTC: ನೌಕರರಿಗೆ ಸರಿ ಸಮಾನ ವೇತನ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ-ಬೈರೇಗೌಡ KSRTC: ಗೊಂದಲದ ನಡುವೆಯೂ 1280 ಸಿಬ್ಬಂದಿಗಳಿಗೆ ಆರೋಗ್ಯ ಸೇವೆ ಮದುವೆಗೆ ಒಪ್ಪಿ ಬಳಿಕ ತಿರಸ್ಕರಿಸಿದ ಪ್ರಿಯತಮೆ: ಕೋಪಗೊಂಡು ಇರಿದ ಪ್ರಿಯತಮ