ಪ್ರಯಾಣಿಕರ ಜನದಟ್ಟಣೆ ಸಮಯ ಆರಂಭವಾಗಿರುವುದರಿಂದ ಸಿಬ್ಬಂದಿಗಳ ಅಗತ್ಯತೆ ಅವಶ್ಯವಿದೆ. ಹೀಗಾಗಿ ವಿಭಾಗದ ಸಿಬ್ಬಂದಿಗಳ ಅಂತರಿಕ ವರ್ಗಾವಣೆಯನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ -ಸಿಪಿಎಂ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗ ಮಟ್ಟದ ಸಿಬ್ಬಂದಿಗಳ ವರ್ಗಾವಣೆಯನ್ನು ತಡೆಹಿಡಿಯುವಂತೆ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಮಾ.12ರಂದು ಆದೇಶ ಹೊರಡಿಸಿದ್ದಾರೆ.

ಪ್ರಸ್ತುತ ಪ್ರಯಾಣಿಕರ ಜನದಟ್ಟಣೆ ಸಮಯ ಆರಂಭವಾಗಿರುವುದರಿಂದ ಸಿಬ್ಬಂದಿಗಳ ಅಗತ್ಯತೆ ಅವಶ್ಯವಿದೆ. ಹೀಗಾಗಿ ವಿಭಾಗದ ಸಿಬ್ಬಂದಿಗಳ ಅಂತರಿಕ ವರ್ಗಾವಣೆಯನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಇನ್ನು ಅನಿವಾರ್ಯ ತುರ್ತು ಸಂದರ್ಭಗಳಲ್ಲಿ ಹಾಗೂ ಅಮಾನತಿನಿಂದ ತೆರವುಗೊಂಡ ಪ್ರಕರಣಗಳಲ್ಲಿ ಮಾತ್ರ ಆಡಳಿತಾತ್ಮಕ ವರ್ಗಾವಣೆ ಮಾಡಲು ಅನುಮತಿಸಿದ್ದು, ಉಳಿದಂತೆ ಯಾವುದೇ ವರ್ಗಾವಣೆಯನ್ನು ಮಾಡುವ ಮೊದಲು ಖಡ್ಡಾಯವಾಗಿ ಕೇಂದ್ರ ಕಚೇರಿಯ ಪೂರ್ವಾನುಮತಿ ಪಡೆಯುವಂತೆ ಸಕ್ಷಮ ಪ್ರಾಧಿಕಾರಿಗಳು ಆದೇಶಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ ಇದರಂತೆ, ಎಲ್ಲ ಹಿರಿಯ, ವಿಭಾಗೀಯ ನಿಯಂತ್ರಣಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟವರೆಲ್ಲರು ಈ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ತಿಳಿಸಿದ್ದಾರೆ.
Related










