ನಾಳೆಯಿಂದ ಹಮ್ಮಿಕೊಂಡಿದ್ದ ಅರ್ನಿದಿಷ್ಟವಾಧಿ ಸಾರಿಗೆ ನೌಕರರ ಮುಷ್ಕರ ವಾಪಸ್: ಜಂಟಿ ಕ್ರಿಯಾ ಸಮಿತಿ
ಸಮಸ್ತ ಸಾರಿಗೆ ನೌಕರರು ಸಹಕರಿಸಿ ಈ ಹೋರಾಟದ ಯಶಸ್ವಿಗೆ ಕಾರಣರಾದ ಪ್ರತಿಯೊಬ್ಬ ಸಂಗಾತಿಗಳಿಗೆ ಅನಂತ ಅನಂತ ಧನ್ಯವಾದಗಳು ಜಂಟಿ ಕ್ರಿಯಾ ಸಮಿತಿ ಪರವಾಗಿ ಎಂದು ತಿಳಿಸಿದ್ದಾರೆ.

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿ ಮೇ 20ರಿಂದ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಮುಷ್ಕರಕ್ಕೆ ಹೈ ಕೋರ್ಟ್ ಇಂದು ತಡೆನೀಡಿದೆ.

ಇಂದು (ಮೇ 19) ಹೈಕೋರ್ಟ್ನ ದ್ವಿಸದಸ್ಯ ನ್ಯಾಯಪೀಠದ ಮುಂದೆ ಬಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸಂಘಟನೆಗಳ ಪರವಾಗಿ ಭಾಗವಹಿಸಿದ್ದ ವಕೀಲರು ಪ್ರಸ್ತುತ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಇನ್ನೂ ಸಹ ಬಗೆಹರಿಸದಿರದ ಬಗ್ಗೆ ಮತ್ತು ಹಿಂದೆ 05.08.2025 ರಂದು ಕರೆ ನೀಡಿದ ಮುಷ್ಕರದಲ್ಲಿ ಸಹ ಹೈ ಕೋರ್ಟ್ ನ ಆದೇಶದ ಹಿನ್ನೆಲೆಯಲ್ಲಿ ಜಂಟಿ ಕ್ರಿಯಾ ಸಮಿತಿಯು ಗೌರವದಿಂದ ಮುಷ್ಕರವನ್ನು ಹಿಂಪಡೆದಿತ್ತು.
ಆದರೆ 10 ತಿಂಗಳೂ ಕಳೆದರು ಇನ್ನೂ ಸಹ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಿಲ್ಲವೆಂದು ಕೋರ್ಟ್ ನ ಗಮನಕ್ಕೆ ತಂದರು. ಈ ಕಾರಣವನ್ನು ಉಲ್ಲೇಖಿಸಿ ಹೈಕೋರ್ಟ್ ನ್ಯಾಯಮೂರ್ತಿಗಳು ಇದೇ 21ರಂದು ಮುಖ್ಯಮಂತ್ರಿಗಳ ಅಥವಾ ಸಾರಿಗೆ ಮಂತ್ರಿಗಳು ಜಂಟಿ ಕ್ರಿಯಾ ಸಮಿತಿ ಜತೆ ಸಭೆ ನಡೆಸುವ ದಿನಾಂಕವನ್ನು ನಿಗದಿ ಮಾಡಿ ಕೋರ್ಟ್ ಗೆ ತಿಳಿಸುವಂತೆ ಸೂಚಿಸಿದ್ದಾರೆ.
ಈ ಹಿನ್ನೆಲ್ಲೇಯಲ್ಲಿ ಜಂಟಿ ಕ್ರಿಯಾ ಸಮಿತಿಯು ಸಭೆ ಸೇರಿ ಸಮಸ್ತ ಸಾರಿಗೆ ನೌಕರರ ಹಿತಕ್ಕಾಗಿ ಹೈಕೋರ್ಟ್ ನ ನಿರ್ದೇಶನದಂತೆ ಮುಂದಿನ ಸಭೆಯಲ್ಲಿ ಚರ್ಚಿಸಲು ಸರ್ಕಾರಕ್ಕೆ ಸೂಚನೆ ನೀಡಿರುವ ಕಾರಣ ಮೇ 20ರಿಂದ ಅಂದರೆ ನಾಳೆಯಿಂದ ಹಮ್ಮಿಕೊಂಡಿದ್ದ ಅರ್ನಿದಿಷ್ಟವಾಧಿ ಮುಷ್ಕರವನ್ನು ಹಿಂಪಡೆಯಲಾಗಿದೆ.
ಸಮಸ್ತ ಸಾರಿಗೆ ನೌಕರರು ಸಹಕರಿಸಿ ಈ ಹೋರಾಟದ ಯಶಸ್ವಿಗೆ ಕಾರಣರಾದ ಪ್ರತಿಯೊಬ್ಬ ಸಂಗಾತಿಗಳಿಗೆ ಅನಂತ ಅನಂತ ಧನ್ಯವಾದಗಳು ಜಂಟಿ ಕ್ರಿಯಾ ಸಮಿತಿ ಪರವಾಗಿ ಎಂದು ತಿಳಿಸಿದ್ದಾರೆ.
Related









