NEWSಕ್ರೀಡೆ

ಹಾವೇರಿ: ಮಾರ್ಚ್ 8 ರಿಂದ ಜಿಲ್ಲಾ ಕ್ರೀಡಾ ಶಾಲೆಗೆ ಆಯ್ಕೆ ಪ್ರಕ್ರಿಯೆ

ಜಿಲ್ಲಾ ಕ್ರೀಡಾ ಶಾಲೆಯ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಹಾವೇರಿ: ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ 2021-22 ನೇ ಸಾಲಿಗೆ ಜಿಲ್ಲಾ ಕ್ರೀಡಾ ಶಾಲೆಯ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಊಟ,ವಸತಿ ನೀಡಲಾಗುವುದು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 5ನೇ ತರಗತಿಗೆ ಸೇರ್ಪಡೆಯಾಗಲು ಅರ್ಹರಿರಬೇಕು. ದಿನಾಂಕ 01-06-2021ಕ್ಕೆ 11 ವರ್ಷದೊಳಗಿರಬೇಕು ಹಾಗೂ 31-05-2010ರ ನಂತರ ಜನಿಸಿದವರಾಗಿರಬೇಕು.

ಅಥ್ಲೆಟಿಕ್ಸ್, ಹಾಕಿ, ಈಜು ಕ್ರೀಡೆಗಳನ್ನು ಬಾಲಕ/ಬಾಲಕಿಯರಿಗಾಗಿ ನಡೆಸಲಾಗುವುದು. ಬಾಲಕರಿಗೆ ಅಥ್ಲೆಟಿಕ್ಸ್‍ನಲ್ಲಿ 60ಮೀ.ಓಟ ಸ್ಟ್ಯಾಂಡಿಂಗ್ ಬ್ರಾಡ ಜಂಪ, 600ಮೀ.ಓಟ(138ಸೆಂ.ಮೀ), ಬಾಲಕಿಯರಿಗೆ ಅಥ್ಲೆಟಿಕ್ಸ್ ನಲ್ಲಿ 60ಮೀ.ಓಟ ಸ್ಟ್ಯಾಂಡಿಂಗ್ ಬ್ರಾಡ ಜಂಪ, 600ಮೀ.ಓಟ(138ಸೆಂ.ಮೀ).

ಬಾಲಕರ ಹಾಕಿ ಕ್ರೀಡೆಯಲ್ಲಿ 60ಮೀ ಓಟ,6×10 ಶೆಟಲ್ ರನ್, ಸ್ಟ್ಯಾಂಡಿಂಗ ಬ್ರಾಡ ಜಂಪ್, 800 ಮೀ.ಓಟ (ಬಾಲಕರ ಎತ್ತರ 145 ಸೆಂ.ಮೀ, ತೂಕ 35 ಕೆಜಿ), ಬಾಲಕಿಯರ ಹಾಕಿ ಕ್ರೀಡೆಯಲ್ಲಿ 60ಮೀ ಓಟ,6×10 ಶೆಟಲ್ ರನ್, ಸ್ಟ್ಯಾಂಡಿಂಗ ಬ್ರಾಡ ಜಂಪ್, 800 ಮೀ.ಓಟ (ಬಾಲಕಿಯರ ಎತ್ತರ 142 ಸೆಂ.ಮೀ, ತೂಕ 31 ಕೆಜಿ) ಇರುತ್ತದೆ.

ಮಾರ್ಚ್ 8 ರಂದು ಬೆಳಿಗ್ಗೆ 10-30ರಿಂದ 1-30ರವರೆಗೆ ರಾಣೇಬೆನ್ನೂರ ನಗರಸಭಾ ಕ್ರೀಡಾಂಗಣದಲ್ಲಿ, ಹಿರೇಕೆರೂರು ಹಾಗೂ ಹಾನಗಲ್ಲ ತಾಲೂಕಾ ಕ್ರೀಡಾಂಗಣದಲ್ಲಿ, ಮಾರ್ಚ್ 9 ರಂದು 10-30 ರಿಂದ 1-30ರವರೆಗೆ ಸವಣೂರು ಹಾಗೂ ಬ್ಯಾಡಗಿ ತಾಲೂಕಾ ಕ್ರೀಡಾಂಗಣದಲ್ಲಿ, ಮಧ್ಯಾಹ್ನ 1-30 ರಿಂದ 5-30ರವರೆಗೆ ಶಿಗ್ಗಾಂವ ತಾಲೂಕಾ ಕ್ರೀಡಾಂಗಣದಲ್ಲಿ ಹಾಗೂ ಮಾರ್ಚ್ 12ರಂದು ಬೆಳಿಗ್ಗೆ 10-30ರಿಂದ 5-30ರವರೆಗೆ ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳ ಆಯ್ಕೆ ನಡೆಯಲಿದೆ.

ತಾಲೂಕಾ ಕ್ರೀಡಾಂಗಣದಲ್ಲಿ ನಡೆಸುವ ಆಯ್ಕೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇದ್ದಲ್ಲಿ ಅರ್ಹ ಅಭ್ಯರ್ಥಿಗಳು ಮುಖ್ಯೋಪಾದ್ಯಾಯರಿಂದ ಜನ್ಮ ದಿನಾಂಕದ ದೃಡೀಕರಣದ ಮೂಲ ಪ್ರತಿಯೊಂದಿಗೆ ಮಾರ್ಚ್ 12 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಆಯ್ಕೆಪ್ರಕ್ರಿಯಲ್ಲಿ ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08375-232070 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್