CrimeNEWSನಮ್ಮರಾಜ್ಯ

ಸಿಡಿ ಸಂತ್ರಸ್ತೆ ಪರ ವಕೀಲರು ಕಿಡಿಕಾರಿದ್ದು ಯಾವ ಬಿಜೆಪಿ ಮುಖಂಡ, ಪೊಲೀಸ್‌ ಅಧಿಕಾರಿ ವಿರುದ್ಧ ಗೊತ್ತೇ?

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧಿಗಳಿಂದ ನನ್ನ ವಿರುದ್ಧ ದಾಳಿ ಶುರುವಾಗಿದೆ. ಜಗದೀಶ್‌ ಕುಮಾರ್ ಒಬ್ಬ ರೌಡಿಶೀಟರ್, ಅವರ ಜೀವನವೇ ಸರಿಯಿಲ್ಲ ಎಂದು ಪೊಲೀಸರು, ರಾಜಕಾರಣಿಗಳು ಆರೋಪ ಮಾಡುತ್ತಿದ್ದಾರೆ ಎಂದು ಸಂತ್ರಸ್ತೆ ಪರ ವಕೀಲ ಜಗದೀಶ್ ಫೇಸ್‌ಬುಕ್‌ ಲೈವ್‌ ವಿಡಿಯೋದಲ್ಲಿ ಕಿಡಿಕಾರಿದ್ದಾರೆ.

11 ವರ್ಷಗಳ ಹಿಂದಿನ ಸಂಗತಿಗಳನ್ನು ಬಿಚ್ಚಿಟ್ಟಿರುವ ಅವರು ಬಿಜೆಪಿ ಮುಖಂಡ, ಪೊಲೀಸ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಪದೇಪದೇ ನಂದಿ ಅಲ್ಲ ಜಗದೀಶ. ಯೂನಿಫಾರಂ ಹಾಕಿಕೊಂಡ ಕೇಡಿಗಳ ದಾಖಲೆ ಎಲ್ಲಾ ನಮ್ಮ ಬಳಿ ಇದೆ. ಭ್ರಷ್ಟ ಪಿಸಿ, ಭ್ರಷ್ಟ ಐಪಿಎಸ್‌, ಭ್ರಷ್ಟ ಮಂತ್ರಿಯಾದರೂ ಬಿಡಲ್ಲ ಎಂದಿದ್ದಾರೆ ಜಗದೀಶ್.

2010ರಲ್ಲಿ ನಾನು ಒಬ್ಬ ಹೋರಾಟಗಾರನಾಗಿದ್ದೆ ಆ ವೇಳೆ ಕೊಡಿಗೇಹಳ್ಳಿಯಲ್ಲಿ ಅಂಗವಿಕಲರಿಗೆ ಮೀಸಲಾಗಿದ್ದ ಬಡಬಗ್ಗರ ಜಮೀನನ್ನು ಕಂದಾಯ ಸಚಿವ ಆರ್. ಅಶೋಕ್ ಸಂಬಂಧಿಕರು ಖರೀದಿ ಮಾಡಿದ್ದರು. ಈ ಬಗ್ಗೆ ನಾನು ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ಅಲ್ಲಿನ ಇನ್ಸ್ಪೆಕ್ಟರ್ ಪುನೀತ್ ಮತ್ತು ಡಿಸಿಪಿ ರವಿಕಾಂತೇಗೌಡ ನನ್ನ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿದರು ಎಂದು ಫೇಸ್ಬುಕ್ ವಿಡಿಯೋದಲ್ಲಿ ಪ್ರಕರಣಗಳ ಕುರಿತಂತೆ ವಿವರಣೆ ಕೊಟ್ಟಿದ್ದಾರೆ.

ಇಷ್ಟೇ ಅಲ್ಲ ಇದರಿಂದ ನನ್ನ ಕುಟುಂಬವನ್ನು ಒಡೆಯುತ್ತಾರೆ, ನಾನು ಎಲ್‌ಎಲ್‌ಬಿ ಓದುವಾಗಲೇ ಆ ಎಲ್ಲ ಪ್ರಕರಣಗಳನ್ನು ಖುಲಾಸೆ ಮಾಡಿಕೊಂಡೆ. ನನ್ನನ್ನು ದುರ್ಬಲಗೊಳಿಸಲು ಹೊರಟಿದ್ದ ಪೊಲೀಸ್ ಅಧಿಕಾರಿಗಳ ಅಕ್ರಮಗಳ ದಾಖಲೆಗಳನ್ನು ಎಳೆಎಳೆಯಾಗಿಗಿ ತೆರೆದಿದ್ದೇನೆ. ಐಪಿಎಸ್ ಅಧಿಕಾರಿಗಳ ದಾಖಲೆ ನನ್ನ ಬಳಿ ಇವೆ. ನಿಮ್ಮ ಯೋಗ್ಯತೆಯನ್ನು ಈ ಮೂಲಕ ತೋರಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಕೊಡಿಗೇಹಳ್ಳಿ ಮಾಜಿ ಕಾರ್ಪೊರೇಟರ್ ನನ್ನ ವಿರುದ್ಧ 13 ಕೇಸ್‌ ಹಾಕಿದ್ದರು. ಅವರು ಬಿಜೆಪಿಯ ಮಾಜಿ ಕಾರ್ಪೊರೇಟರ್. ಈ ಬಗ್ಗೆ ಬಿಜೆಪಿ ಉತ್ತರಿಸುತ್ತಾ ಎಂದು ಪ್ರಶ್ನಿಸಿದರು. ಕೆ.ಎನ್‌. ಚಕ್ರಪಾಣಿ ಮನೆಯ ಪಕ್ಕದ ಲೋಕಕಲ್ಯಾಣ ಟ್ರಸ್ಟ್ ಭೂಮಿಯನ್ನು ನುಂಗಿ ಹಾಕಿದರು. ಸರ್ಕಾರಿ ಭೂಮಿ ಬಿಡಿ, ಅಂಗವಿಕಲರ ಜಾಗವನ್ನು ಬಿಡಲಿಲ್ಲ. ಇಂತಹ ಅನ್ಯಾಯದ ವಿರುದ್ಧ ಹೋರಾಡಿದ್ದೇನೆ. ಐಪಿಎಸ್ ಅಧಿಕಾರಿ ಇದ್ದಾನೆ ಅವನ ಹೆಸರು ಹೇಳುವುದಕ್ಕೆ ನನಗೆ ನಾಚಿಕೆ ಆಗುತ್ತೆ. ಅವರು ಭ್ರಷ್ಟ ವ್ಯವಸ್ಥೆಯ ಸಚಿವರಿಗೆ ಹೋರಾಟಗಾರರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿದ್ದರು ಎಂದು ಕಿಡಿಕಾರಿದರು.

ಮಾಜಿ ಕಾರ್ಪೊರೇಟರ್ ಅಶ್ವತ್ಥ ನಾರಾಯಣಗೌಡ ಎಲ್ಲ ಪ್ರಕರಣದ ರೂವಾರಿ. ನನ್ನ ಮೇಲೆ ಯಾವುದೇ ಕೊಲೆ, ವಂಚನೆ ಪ್ರಕರಣ ಇಲ್ಲ. ಆದರೂ ಮಾನಹಾನಿ ಮತ್ತು ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿದ್ದರು. ನನ್ನ ವಿರುದ್ಧ ಎರಡು-ಮೂರು ದಿನಗಳಲ್ಲಿ ರೌಡಿಶೀಟರ್ ಓಪನ್ ಮಾಡಿದ ಮಹಾನ್ ಭ್ರಷ್ಟ, ನಾಯಕ ಈಗ ಸಂತ್ರಸ್ತೆಯ ವಕೀಲರು ರೌಡಿಶೀಟರ್ ಅಂತ ಹೇಳುತ್ತಿದ್ದಾನೆ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...