ವಿಜಯಪಥ ಸಮಗ್ರ ಸುದ್ದಿ
ಗೋಕಾಕ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದ್ದು ಗೋಕಾಕ ತಾಲೂಕು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೂ ಮನೆಯಲ್ಲೇ 7-10 ದಿನಗಳು ಇರಬೇಕು. ಅವರಿಗೆ ಮನೆಯಲ್ಲೇ ಒಬ್ಬ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ ಎಂದು ಟಿಎಚ್ಒ ತಿಳಿಸಿದ್ದಾರೆ.
ಇನ್ನು ರಾಸಲೀಲೆ ವಿಚಾರಣೆ ಸಂಬಂಧ ಎಸ್ಐಟಿ ಅಧಿಕಾರಿಗಳು ಅವರ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಅವರು ಇನ್ನೂ ಸುಮಾರು 10ದಿನಗಳವರೆಗೂ ಚಿಕಿತ್ಸೆ ಮಡೆಯಬೇಕಾಗಿರುವುದರಿಂದ ಮತ್ತು ಬಿಪಿ, ಶುಗರ್ ಏರುಪೇರಾಗುತ್ತಿರುವುದರಿಂದ ಅವರು ಬೆಂಗಳೂರಿನಂತಹ ದೂರದೂರಿಗೆ ಪ್ರಯಾಣ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಹೀಗಾಗಿ ಅವರ ವಿಚಾರಣೆಯನ್ನು ಎಸ್ಐಟಿ ಅಧಿಕಾರಿಗಳು ಗೋಕಾಕಕ್ಕೆ ಬಂದು ನಡೆಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.