NEWSಕ್ರೀಡೆದೇಶ-ವಿದೇಶ

ಕೊಹ್ಲಿಗಾಗಿ ಈ ವರ್ಷ ಟಿ20 ವಿಶ್ವಕಪ್​  ಗೆಲ್ಲಬೇಕು : ಸುರೇಶ್​ ರೈನಾ ಕರೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಭಾರತದ ಎಲ್ಲಾ ಆಟಗಾರರು ನಾಯಕ ಕೊಹ್ಲಿಗಾಗಿ ಈ ವರ್ಷ ಐಸಿಸಿ ಟ್ರೋಫಿಯನ್ನು ಗೆಲ್ಲಬೇಕು ಎಂದು ಕರೆ ನೀಡಿದ್ದಾರೆ.

2007 ರ ನಂತರ ಭಾರತ ಈವರೆಗೆ ಟಿ20 ವಿಶ್ವಕಪ್​ ಗೆದ್ದಿಲ್ಲ, ಮತ್ತೊಂದೆಡೆ ನಾಯಕ ವಿರಾಟ್​ ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡ ಈವರೆಗೆ ಯಾವುದೇ ಐಸಿಸಿ ಪ್ರಶಸ್ತಿಯನ್ನು ಗೆದ್ದಿಲ್ಲ. ಹೀಗಾಗಿ ತಂಡದ ಮಾಜಿ ಆಟಗಾರ ಸುರೇಶ್​ ರೈನಾ ಮಾತನಾಡಿದ್ದಾರೆ.

ಈ ಹಿಂದೆ 2011ರ ಏಕದಿನ ವಿಶ್ವಕಪ್​ನಲ್ಲಿ ಭಾರತದ ಆಟಗಾರರು ಸಚಿನ್ ತೆಂಡೂಲ್ಕರ್​ಗಾಗಿ ವಿಶ್ವಕಪ್​ ಗೆಲ್ಲಬೇಕು ಎಂದು ಪಣ ತೊಟ್ಟಿದ್ದರು. ಅದರಂತೆ ವಿಶ್ವಕಪ್​ ಸಹ ಗೆದ್ದಿದ್ದರು. ಆದರೆ, ಒಂದು ದಶಕದ ನಂತರ ಮತ್ತೆ ಅದೇ ರೀತಿಯ ಮಾತುಗಳು ಕೊಹ್ಲಿಗಾಗಿ ಕೇಳಿ ಬರುತ್ತಿದೆ.

ಟಿ 20 ವಿಶ್ವಕಪ್ ನಂತರ ಭಾರತ ಟಿ 20 ನಾಯಕತ್ವದಿಂದ ಕೆಳಗಿಳಿಯಲು ನಾಯಕ ಕೊಹ್ಲಿ ನಿರ್ಧರಿಸಿದ್ದಾರೆ, ಆದರೂ ಅವರು ಟೆಸ್ಟ್ ಮತ್ತು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನು ಮುನ್ನಡೆಸಲಿದ್ದಾರೆ. ಆದರೆ, ನಾಯಕರಾಗಿ ಇದು ಕೊನೆಯ ಟಿ20 ವಿಶ್ವಕಪ್ ಆಗಿರುವ ಕಾರಣ ಪ್ರಶಸ್ತಿ ಗೆಲ್ಲಲೇಬೇಕಾದ ಇಕ್ಕಟ್ಟಿನಲ್ಲಿ ಕೊಹ್ಲಿ ಇದ್ದಾರೆ ಎನ್ನಲಾಗಿದೆ.

ಈ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಸುರೇಶ್​ ರೈನಾ, “ವಿರಾಟ್​ ಕೊಹ್ಲಿಗಾಗಿ ಭಾರತದ ಆಟಗಾರರು ಈ ವರ್ಷ ಟಿ20 ವಿಶ್ವಕಪ್​ ಅನ್ನು ಗೆಲ್ಲಲೇಬೇಕು” ಎಂದು ಸರಳ ಸಂದೇಶವನ್ನು ಮುಂದಿಟ್ಟಿದ್ದಾರೆ.

“ಭಾರತದ ಆಟಗಾರರು ಈಗಾಗಲೇ ಯುಎಇ ಯಲ್ಲಿ ಒಂದು ತಿಂಗಳ ಕಾಲ ಐಪಿಎಲ್​ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಸಾಕಷ್ಟು ಅಭ್ಯಾಸ ನಡೆಸಿದ್ದಾರೆ. ಅಲ್ಲದೆ, ಎಲ್ಲಾ ಆಟಗಾರರು ಅತ್ಯುತ್ತಮ ಫಾರ್ಮ್​ನಲ್ಲಿದ್ದು, ಈ ಭಾರಿ ಭಾರತ ತಂಡವೇ ಟಿ20 ವಿಶ್ವಕಪ್ ಗೆಲ್ಲಲಿದೆ ” ಎಂದು ಸುರೇಶ್​ ರೈನಾ ಭವಿಷ್ಯ ನುಡಿದಿದ್ದಾರೆ.

“ರೈನಾ ಐಪಿಎಲ್‌ನ ಅಬ್ಬರವು ಭಾರತೀಯ ಆಟಗಾರರಿಗೆ ಉತ್ತೇಜನ ನೀಡುತ್ತದೆ. ಕೆಲವು ಕಠಿಣ ಪಂದ್ಯಗಳನ್ನು ಭಾರತದ ಆಟಗಾರರು ಆಡಿದ್ದಾರೆ ಮತ್ತು ಯುಎಇ ವಾತಾವರಣಕ್ಕೆ ಒಗ್ಗಿಕೊಂಡಿದ್ದಾರೆ. ಇದು ಭಾರತವನ್ನು ಇತರ ಎಲ್ಲಾ ತಂಡಗಳ ಮೇಲೆ ಒಂದು ಹೆಜ್ಜೆ ಮೇಲುಗೈ ಸಾಧಿಸಿದಂತಾಗಿದೆ.

ಟೂರ್ನಿಯಲ್ಲಿ ಇನ್ನೂ ಅನೇಕ ಉತ್ತಮ ತಂಡಗಳಿವೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕೂಡ ಉತ್ತಮವಾಗಿ ಕಾಣುತ್ತವೆ. ಟಿ20 ಕ್ರಿಕೆಟ್​ನಲ್ಲಿ ಏನುಬೇಕಾದರೂ ಆಗಬಹುದು. ಆದರೆ, ಭಾರತಕ್ಕೆ ಯಾವಾಗಲೂ ಒಂದು ಹೆಜ್ಜೆ ಹೆಚ್ಚಿನ ಅವಕಾಶ ಇದೆ”ಎಂದು ರೈನಾ ತಿಳಿಸಿದ್ದಾರೆ.

ಭಾರತದ ಪರ 200 ಕ್ಕೂ ಹೆಚ್ಚು ಏಕದಿನ ಪಂದ್ಯಗಳು, 78 ಟಿ 20 ಮತ್ತು 18 ಟೆಸ್ಟ್ ಪಂದ್ಯಗಳನ್ನು ಆಡಿರುವ ರೈನಾ, ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಅವರು ಸಿಎಸ್​ಕೆ ಪರ ಐಪಿಎಲ್​ನಲ್ಲಿ ಮಾತ್ರ ಕಣಕ್ಕಿಳಿಯುತ್ತಿದ್ದಾರೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ