KSRTC ತುಮಕೂರು: ಡ್ಯೂಟಿರೋಟದಡಿ ಲಾಂಗ್ರೂಟ್- ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸಲು ಚಾಲಕ ಕಂ ನಿರ್ವಾಹಕರ ನೇಮಿಸಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ತುಮಕೂರು ವಿಭಾಗದ ಡ್ಯೂಟಿ ರೋಟ ಪದ್ಧತಿಯಲ್ಲಿ ರಾತ್ರಿ ಪಾಳೆಯ ಕರ್ತವ್ಯ ನಿರ್ವಹಿಸುವಾಗ ಚಾಲಕ ಹಾಗೂ ಚಾಲಕ ಕಂ ನಿರ್ವಾಹಕರನ್ನು ನಿಯೋಜಿಸಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರಿಗೆ ನೌಕರರು ಮನವಿ ಮಾಡಿದ್ದಾರೆ.
ಈ ಸಂಬಂಧ ಇತ್ತೀಚೆಗಷ್ಟೆ KSRTC: ಡ್ಯೂಟಿರೋಟ ಜೇಷ್ಠತೆ ಆಧಾರದ ಮೇಲಾಗುತ್ತಿಲ್ಲ- ಎಂಡಿಗೆ ಲಿಖಿತ ದೂರು ಕೊಟ್ಟ ಲೋಕೇಶ್ ಎಂಬ ಶೀರ್ಷಿಕೆಯಡಿ ವಿಜಯಪೈದಲ್ಲಿ ವರದಿಯಾಗಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ತುಮಕೂರು ವಿಭಾಗದಲ್ಲಿ ಇತ್ತೀಚಿಗೆ ಡ್ಯೂಟಿರೋಟ ಪದ್ಧತಿ ಪಟ್ಟಿ ಪ್ರಕಟಿಸಿದ್ದು, ಪ್ರಕ್ರಿಯೆ ನಡೆಸುವ ಬಗ್ಗೆ ಚಾಲನಾ ಸಿಬ್ಬಂದಿಗೆ ತಿಳಿಸಿದ್ದಾರೆ.
ಹೀಗಾಗಿ ಡ್ಯೂಟಿ ರೋಟ ಪದ್ಧತಿಯಲ್ಲಿ ರಾತ್ರಿ ಪಾಳೆಯ ಕರ್ತವ್ಯ ನಿರ್ವಹಿಸುವಾಗ ಚಾಲಕ ಹಾಗೂ ಚಾಲಕ ಕಂ ನಿರ್ವಾಹಕರನ್ನು ನಿಯೋಜಿಸಬೇಕು ಎಂದು ನೌಕರರು ಮನವಿ ಮಾಡಿದ್ದು ಈ ಸಂಬಂಧ ಲೋಕೇಶ್ ಅವರು ಎಂಡಿಗೆ ಲಿಖಿತವಾಗಿ ಕೋರಿಕೊಂಡಿದ್ದಾರೆ.
ಇತ್ತೀಚಿಗೆ ಶಿರಾ ಘಟಕದ ಬಸ್ ಹುಬ್ಬಳ್ಳಿ ಮಾರ್ಗಾಚರಣೆ ಮಾಡುತ್ತಿದ್ದ ವೇಳೆ ಚಾಲಕ ಹಾಗೂ ನಿರ್ವಾಹಕರು ಮಾರ್ಗಕ್ಕೆ ಹೋಗಿದ್ದ ಸಂದರ್ಭದಲ್ಲಿ ಚಾಲಕರು ವಾಹನ ಓಡಿಸಲು ನಿರ್ವಾಹಕರಿಗೆ ಕೊಟ್ಟಿದ್ದಾರೆ. ಈ ವೇಳೆ ವಾಹನವು ಅಪಘಾತವಾಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದರು.
ಚಾಲಕರು ಆ ಸಂದರ್ಭದಲ್ಲಿ ಮಲಗಿದ್ದು ಚಾಲನೆ ಮಾಡಲು ಅವಕಾಶ ಮಾಡಿಕೊಟ್ಟಿರುವ ಕಾರಣಕ್ಕಾಗಿ ಅವರಿಗೆ ಅಮಾನತು ಶಿಕ್ಷೆ ನೀಡಲಾಗಿದೆ. ಪ್ರಸ್ತುತ ತುಮಕೂರು ವಿಭಾಗದಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂತಹ ಎಲ್ಲ ಮಾರ್ಗಗಳಿಗೂ ಚಾಲಕರು ಹಾಗೂ ಚಾಲಕ ಕಂ ನಿರ್ವಾಹಕರನ್ನು ನಿಯೋಜಿಸಬೇಕಿದೆ.
500ಕ್ಕೂ ಹೆಚ್ಚು ಕಿಮೀ ಒಂದು ಸುತ್ತುಗಳಿ ಮಾರ್ಗಗಳಿರುವುದರಿಂದ ಬರೀ ಚಾಲಕರಿಗೆ ತುಂಬಾ ಪ್ರಯಾಸದಾಯಕವಾಗುತ್ತಿದೆ. ಆ ಕಾರಣಕ್ಕಾಗಿ ಅಂಥ ಮಾರ್ಗಗಳಲ್ಲಿ ನಿರ್ವಾಹಕರಿಗೆ ವಾಹನ ನೀಡಿದರೆ ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಅದು ತಪ್ಪಾಗುತ್ತದೆ ಮತ್ತು ಕೆಲವು ಘಟಕಗಳಲ್ಲಿ ಬರಿ ನಿರ್ವಾಹಕರೇ ರಾತ್ರಿ ಪಾಳಿಯಲ್ಲಿ ಡ್ಯೂಟಿ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ವಾಹನವನ್ನು ಚಲಾವಣೆ ಮಾಡುವುದು ಕಂಡು ಬರುತ್ತಿದೆ. ಇದು ಪೂರ್ತಿ ಕಾನೂನಿಗೆ ವಿರೋಧವಾಗಿದ್ದು ಕೆಲವು ನಿರ್ವಾಹಕರಿಗೆ ಯಾವುದೇ ರೀತಿಯ ಭಾರಿ ವಾಹನಗಳ ಚಾಲನೆ ಪರವಾನಿಗೆ ಇರುವುದಿಲ್ಲ. ನಿರ್ವಾಹಕರು ವಾಹನ ಓಡಿಸಿದರೆ ಅದು ಸಂಸ್ಥೆಗೂ ಕೆಟ್ಟ ಹೆಸರು ಬರುವ ಸಾಧ್ಯತೆ ಇದೆ.
ಈ ಬಾರಿ ರಾತ್ರಿ ಪಾಳಿಯ ಮಾರ್ಗಗಳನ್ನು ನಿಯೋಜನೆ ಮಾಡುವಾಗ ಚಾಲಕ ಕಂ ನಿರ್ವಾಹಕರ ಹೆಸರು ಹಾಗೂ ಬಿಲ್ಲೆ ಸಂಖ್ಯೆಗಳು ಲಾಲ್ಸೀಟ್ನಲ್ಲಿ ನಮೂದಿಸುವುದು ಒಳ್ಳೆಯದು ಹಾಗೂ ಫಾರಂ 4 ಗಳಲ್ಲಿ ಚಾಲಕ ಕಂ. ನಿರ್ವಾಹಕರು ಇಂತಿಷ್ಟು ಕಿಲೋಮೀಟರ್ಗಳ ವಾಹನ ಚಲಾವಣೆ ಮಾಡುವುದನ್ನು ನಿಗದಿಪಡಿಸಿ ಆದೇಶ ಹೊರಡಿಸುವುದು ಚಾಲನಾ ಸಿಬ್ಬಂದಿಗಳು ಹಾಗೂ ಸಂಸ್ಥೆಯ ಹಿತ ದೃಷ್ಟಿಯಿಂದ ಒಳ್ಳೆಯದಾಗುತ್ತದೆ. ಅಲ್ಲದೆ ಅನಾವಶ್ಯಕವಾಗಿ ವಾಹನ ನೀಡಿದ ಚಾಲಕರನ್ನು ಹೊಣೆಗಾರಿಕೆ ಮಾಡುವುದು ತಪ್ಪುತ್ತದೆ.
ಇತ್ತೀಚಿನ ದಿನಗಳಲ್ಲಿ ತುಮಕೂರು ವಿಭಾಗದ ಸಂಚಲನಾಧಿಕಾರಿ ಮನಸೋ ಇಚ್ಛೆ ಬೇಕಾಬಿಟ್ಟಿಯಾಗಿ ಮಾರ್ಗದ ಫಾರಂ 4 ಬದಲಿಸುತ್ತಿದ್ದಾರೆ. ಕೆಲವು ಮಾರ್ಗದ ಫಾರಂ 4 ಗಳನ್ನು ಒಂದು ತಿಂಗಳಿಗೆ ನಾಲ್ಕರಿಂದ ಐದು ಬಾರಿ ಬದಲಾಯಿಸಿರುವಂತಹ ಉದಾಹರಣೆಗಳು ಸಹ ಇವೆ. ಚಾಲನಾ ಸಿಬ್ಬಂದಿಗಳು ಈ ಬಗ್ಗೆ ವಿಚಾರಿಸಿದರೆ ಆರಿಕೆ ಉತ್ತರ ನೀಡುತ್ತಾರೆ ಹಾಗೂ ಸಾರ್ವಜನಿಕರಿಂದ ಮನವಿ ಬಂದಿದೆ ಎಂದು ತಿಳಿಸುತ್ತಾರೆ.
ಮುಖ್ಯವಾಗಿ ಫಾರಂ ಫೋರ್ ಬದಲಾಯಿಸಲು ವಿಭಾಗಿಯ ಸಂಚಲನ ಅಧಿಕಾರಿಗಳು ಖಾಸಗಿ ವಾಹನಗಳ ಮಾಲೀಕರ ನಡುವಿನ ಹೊಂದಾಣಿಕೆ ಘಟಕ ವ್ಯವಸ್ಥಾಪಕರು ಹಾಗೂ ಸಂಚಾರ ಶಾಖೆಯವರು ಹೊಂದಾಣಿಕೆ ಇಲ್ಲದ ಚಾಲನಾ ಸಿಬ್ಬಂದಿಗಳ ಮಾರ್ಗಗಳ ಫಾರಂ ಬೋರ್ಡ್ ಗಳನ್ನು ಬದಲಿಸಿ ಕೊಡುವಂತೆ ವಿಭಾಗೀ ಸಂಚಲನಾಧಿಕಾರಿಗಳಿಗೆ ಕೇಳಿಕೊಳ್ಳುತ್ತಾರೆ ಹಾಗೂ ಕೆಲವು ಸ್ವಯಂಘೋಷಿತ ಯೂನಿಯನ್ ಲೀಡರ್ಗಳು ಓಡಾಡುವ ಮಾರ್ಗಗಳನ್ನು ಸಾಮಾನ್ಯ ಪಾಳಿ ಇದ್ದರೂ ವೇಗದೂತ ಮಾಡಿಸಿಕೊಳ್ಳುತ್ತಾರೆ.
ವೇಗದೂತ ವಿದ್ದರೆ ಸಾಮಾನ್ಯ ಪಾಳಿ ಮಾಡಿಸಿಕೊಳ್ಳುತ್ತಾರೆ. ಇವೆಲ್ಲದಕ್ಕೂ ಪರೋಕ್ಷವಾಗಿ ಸಂಚಲನಾಧಿಕಾರಿ ಬೆಂಬಲ ನೀಡುತ್ತಾ ಬರುತ್ತಿದ್ದಾರೆ. ಮಾರ್ಗಗಳ ಫಾರಂ 4 ಬದಲಾಯಿಸುವುದು ಮುಖ್ಯವಾಗಿ ಚಾಲನಾ ಸಿಬ್ಬಂದಿಗಳಿಗೆ ಕಿರುಕುಳ ನೀಡುವುದೇ ಆಗಿದೆ. ಫಾರಂ 4 ಗಳನ್ನು ಬದಲಾಯಿಸುವ ಸಂದರ್ಭದಲ್ಲಿ. ಆ ಮಾರ್ಗಗಳ ರೂಟ್ ಸರ್ವೆ ಮಾಡುವ ಪದ್ದತಿಯೇ ಕಾಣುತ್ತಿಲ್ಲ. ಇನ್ನೂ ಮುಖ್ಯವಾಗಿ ಕೆಲವು ಮಾರ್ಗಗಳಲ್ಲಿ ಕೆಲವು ಪಕ್ಷದ ಮುಖಂಡರು ಹೇಳಿರುವ ಕಾರಣಕ್ಕೆ ಆದಾಯ ಬರದಿದ್ದರೂ ಸಹ ಅವರ ಊರುಗಳ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿದ್ದಾರೆ.
ಈ ಎಲ್ಲ ಅಂಶಗಳನ್ನು ಹಾಗೂ ವಿಚಾರಗಳನ್ನು ಪರಿಶೀಲಿಸಿ ಸೂಕ್ತ ರೀತಿಯ ಕ್ರಮ ಕೈಗೊಳ್ಳ ಬೇಕೆಂದು ಲೋಕೇಶ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
Related

You Might Also Like
ಆ.5ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಅಂಗವಾಗಿ ಒಂದು ದಿನದ ಸಾಮೂಹಿಕ ಉಪವಾಸ ಸತ್ಯಾಗ್ರಹ ಆರಂಭ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಬರಬೇಕಾಗದ 38 ತಿಂಗಳ ಹಿಂಬಾಕಿಯನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ 2024ರ ಜನವರಿ 1ರಿಂದ...
EPS Pensioners Protest: ಅಧಿವೇಶನ ಮುಗಿಯುವುದರೊಳಗೆ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ: ನಂಜುಂಡೇಗೌಡ ಎಚ್ಚರಿಕೆ
ಬೆಂಗಳೂರು: ಇದೇ ಜುಲೈ 21ರಿಂದ ಪಾರ್ಲಿಮೆಂಟ್ ಅಧಿವೇಶನ ಪ್ರಾರಂಭವಾಗಿದ್ದು, ಈ ಅಧಿವೇಶನ ಮುಗಿಯುವುದರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೊದಲ್ಲಿ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಬಿಎಂಟಿಸಿ...
ಸಮಾನ ವೇತನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಧರಣಿ ಸತ್ಯಾಗ್ರಹ ಮಾಡುತ್ತಿದ್ದ ಸಾರಿಗೆ ನೌಕರರ ಮುಖಂಡರ ಬಂಧನ
ಸಾರಿಗೆ ನೌಕರರ ಹೋರಾಟ ಹತ್ತಿಕ್ಕಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೊಟ್ಟ ಭರವಸೆ ಈಡೇರಿಸುವ ಬದಲಿಗೆ ದೌರ್ಜನ್ಯ ಎಸಗಿದ ಕಾಂಗ್ರೆಸ್ ಸರ್ಕಾರ ಬೆಂಗಳೂರು: ಸಮಾನ ವೇತನ,...
ರೈತರು ಮರ ಕಟಾವು ಮಾಡುವ ನಿಯಮ ಸರಳಗೊಳಿಸಿ: ಅತ್ತಹಳ್ಳಿ ದೇವರಾಜ್ ಒತ್ತಾಯ
ಮೈಸೂರು: ರೈತರು ತಮ್ಮ ಜಮೀನಿನಲ್ಲಿ ಇರುವ ಮರ ಕಟಾವು ಮಾಡಿ ಸಾಗಾಣಿಕೆ ಮಾಡಿಕೊಳ್ಳುವ ನಿಯಮ ಸರಳೀಕರಣ ಗೊಳಿಸಿಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕ್ರಮ ಕೈಗೊಳ್ಳಬೇಕು...
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಗ್ರಾಮದಲ್ಲೇ ಬೀಡುಬಿಟ್ಟ ವೈದ್ಯರ ತಂಡ
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಬ್ಯಾಲಿಹಾಳದಲ್ಲಿ ನಡೆದಿದೆ. ಗ್ರಾಮಕ್ಕೆ ಗ್ರಾಮ ಪಚಾಯಿತಿಯಿಂದ ಸರಬರಾಜು ಮಾಡಿರುವ ನೀರು...
KSRTC ನಾಲ್ಕೂ ನಿಗಮಗಳ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ-ಧರಣಿ ಸತ್ಯಾಗ್ರಹ ಆರಂಭ
ಬೆಂಗಳೂರು: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ಇಂದಿನಿಂದ (ಜು.29)...
ಅಂಗವಿಕಲರ ಬಸ್ಪಾಸ್ ಸೇರಿ ಎಲ್ಲ ಸರ್ಕಾರಿ ಸೌಲಭ್ಯಗಳಿಂದ ವಂಚಿತ ಅಂಗವಿಕಲ ಭೀಮಪ್ಪನಿಗೆ ಬೇಕಿದೆ ಸರ್ಕಾರದ ಆಸರೆ !
ತುಮಕೂರು: ಜಿಲ್ಲೆ ಹೊಸಹಳ್ಳಿ ಗ್ರಾಮ, ರೆಡ್ಡಿಹಳ್ಳಿ ಗ್ರಾಮಪಂಚಾಯಿತಿ ಮಿಡಿಗೆಸಿ, ಮಧುಗಿರಿ ತಾಲೂಕಿನ ಅಂಗವಿಕಲ ಭೀಮಪ್ಪನಿಗೆ ಸರ್ಕಾರಿ ಸೌಲಭ್ಯ ಸಿಗಬೇಕಿದೆ. ಪೋಲಿಯೋಗೆ ಒಳಗಾಗಿರುವ ಭೀಮಪ್ಪನಿಗೆ ಬೆರಳಿನ ಗುರುತು ಸಹ...
ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆ ತಲಕಾಡು ನಿಸರ್ಗ ಧಾಮಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧ
ಮೈಸೂರು: ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ, ಜಿಲ್ಲೆಯ ತಿ.ನರಸೀಪುರ ತಾಲೂಕಿನ ತಲಕಾಡು ನಿಸರ್ಗ ಧಾಮಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ತಾಲೂಕು ಆಡಳಿತ ಆದೇಶ ಹೊರಡಿಸಿದೆ. ಕೆಅರ್ಎಸ್,...
KSRTC: ನಾಳೆಯಿಂದ ಸಾರಿಗೆ ನೌಕರರ ಉಪವಾಸ-ಧರಣಿ ಸತ್ಯಾಗ್ರಹ: ಚಂದ್ರಶೇಖರ್
ಬೆಂಗಳೂರು: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ನಾಳೆಯಿಂದ (ಜು.29)...