KSRTC ತುಮಕೂರು: ಡ್ಯೂಟಿರೋಟದಡಿ ಲಾಂಗ್ರೂಟ್- ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸಲು ಚಾಲಕ ಕಂ ನಿರ್ವಾಹಕರ ನೇಮಿಸಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ತುಮಕೂರು ವಿಭಾಗದ ಡ್ಯೂಟಿ ರೋಟ ಪದ್ಧತಿಯಲ್ಲಿ ರಾತ್ರಿ ಪಾಳೆಯ ಕರ್ತವ್ಯ ನಿರ್ವಹಿಸುವಾಗ ಚಾಲಕ ಹಾಗೂ ಚಾಲಕ ಕಂ ನಿರ್ವಾಹಕರನ್ನು ನಿಯೋಜಿಸಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರಿಗೆ ನೌಕರರು ಮನವಿ ಮಾಡಿದ್ದಾರೆ.
ಈ ಸಂಬಂಧ ಇತ್ತೀಚೆಗಷ್ಟೆ KSRTC: ಡ್ಯೂಟಿರೋಟ ಜೇಷ್ಠತೆ ಆಧಾರದ ಮೇಲಾಗುತ್ತಿಲ್ಲ- ಎಂಡಿಗೆ ಲಿಖಿತ ದೂರು ಕೊಟ್ಟ ಲೋಕೇಶ್ ಎಂಬ ಶೀರ್ಷಿಕೆಯಡಿ ವಿಜಯಪೈದಲ್ಲಿ ವರದಿಯಾಗಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ತುಮಕೂರು ವಿಭಾಗದಲ್ಲಿ ಇತ್ತೀಚಿಗೆ ಡ್ಯೂಟಿರೋಟ ಪದ್ಧತಿ ಪಟ್ಟಿ ಪ್ರಕಟಿಸಿದ್ದು, ಪ್ರಕ್ರಿಯೆ ನಡೆಸುವ ಬಗ್ಗೆ ಚಾಲನಾ ಸಿಬ್ಬಂದಿಗೆ ತಿಳಿಸಿದ್ದಾರೆ.
ಹೀಗಾಗಿ ಡ್ಯೂಟಿ ರೋಟ ಪದ್ಧತಿಯಲ್ಲಿ ರಾತ್ರಿ ಪಾಳೆಯ ಕರ್ತವ್ಯ ನಿರ್ವಹಿಸುವಾಗ ಚಾಲಕ ಹಾಗೂ ಚಾಲಕ ಕಂ ನಿರ್ವಾಹಕರನ್ನು ನಿಯೋಜಿಸಬೇಕು ಎಂದು ನೌಕರರು ಮನವಿ ಮಾಡಿದ್ದು ಈ ಸಂಬಂಧ ಲೋಕೇಶ್ ಅವರು ಎಂಡಿಗೆ ಲಿಖಿತವಾಗಿ ಕೋರಿಕೊಂಡಿದ್ದಾರೆ.
ಇತ್ತೀಚಿಗೆ ಶಿರಾ ಘಟಕದ ಬಸ್ ಹುಬ್ಬಳ್ಳಿ ಮಾರ್ಗಾಚರಣೆ ಮಾಡುತ್ತಿದ್ದ ವೇಳೆ ಚಾಲಕ ಹಾಗೂ ನಿರ್ವಾಹಕರು ಮಾರ್ಗಕ್ಕೆ ಹೋಗಿದ್ದ ಸಂದರ್ಭದಲ್ಲಿ ಚಾಲಕರು ವಾಹನ ಓಡಿಸಲು ನಿರ್ವಾಹಕರಿಗೆ ಕೊಟ್ಟಿದ್ದಾರೆ. ಈ ವೇಳೆ ವಾಹನವು ಅಪಘಾತವಾಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದರು.
ಚಾಲಕರು ಆ ಸಂದರ್ಭದಲ್ಲಿ ಮಲಗಿದ್ದು ಚಾಲನೆ ಮಾಡಲು ಅವಕಾಶ ಮಾಡಿಕೊಟ್ಟಿರುವ ಕಾರಣಕ್ಕಾಗಿ ಅವರಿಗೆ ಅಮಾನತು ಶಿಕ್ಷೆ ನೀಡಲಾಗಿದೆ. ಪ್ರಸ್ತುತ ತುಮಕೂರು ವಿಭಾಗದಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂತಹ ಎಲ್ಲ ಮಾರ್ಗಗಳಿಗೂ ಚಾಲಕರು ಹಾಗೂ ಚಾಲಕ ಕಂ ನಿರ್ವಾಹಕರನ್ನು ನಿಯೋಜಿಸಬೇಕಿದೆ.
500ಕ್ಕೂ ಹೆಚ್ಚು ಕಿಮೀ ಒಂದು ಸುತ್ತುಗಳಿ ಮಾರ್ಗಗಳಿರುವುದರಿಂದ ಬರೀ ಚಾಲಕರಿಗೆ ತುಂಬಾ ಪ್ರಯಾಸದಾಯಕವಾಗುತ್ತಿದೆ. ಆ ಕಾರಣಕ್ಕಾಗಿ ಅಂಥ ಮಾರ್ಗಗಳಲ್ಲಿ ನಿರ್ವಾಹಕರಿಗೆ ವಾಹನ ನೀಡಿದರೆ ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಅದು ತಪ್ಪಾಗುತ್ತದೆ ಮತ್ತು ಕೆಲವು ಘಟಕಗಳಲ್ಲಿ ಬರಿ ನಿರ್ವಾಹಕರೇ ರಾತ್ರಿ ಪಾಳಿಯಲ್ಲಿ ಡ್ಯೂಟಿ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ವಾಹನವನ್ನು ಚಲಾವಣೆ ಮಾಡುವುದು ಕಂಡು ಬರುತ್ತಿದೆ. ಇದು ಪೂರ್ತಿ ಕಾನೂನಿಗೆ ವಿರೋಧವಾಗಿದ್ದು ಕೆಲವು ನಿರ್ವಾಹಕರಿಗೆ ಯಾವುದೇ ರೀತಿಯ ಭಾರಿ ವಾಹನಗಳ ಚಾಲನೆ ಪರವಾನಿಗೆ ಇರುವುದಿಲ್ಲ. ನಿರ್ವಾಹಕರು ವಾಹನ ಓಡಿಸಿದರೆ ಅದು ಸಂಸ್ಥೆಗೂ ಕೆಟ್ಟ ಹೆಸರು ಬರುವ ಸಾಧ್ಯತೆ ಇದೆ.
ಈ ಬಾರಿ ರಾತ್ರಿ ಪಾಳಿಯ ಮಾರ್ಗಗಳನ್ನು ನಿಯೋಜನೆ ಮಾಡುವಾಗ ಚಾಲಕ ಕಂ ನಿರ್ವಾಹಕರ ಹೆಸರು ಹಾಗೂ ಬಿಲ್ಲೆ ಸಂಖ್ಯೆಗಳು ಲಾಲ್ಸೀಟ್ನಲ್ಲಿ ನಮೂದಿಸುವುದು ಒಳ್ಳೆಯದು ಹಾಗೂ ಫಾರಂ 4 ಗಳಲ್ಲಿ ಚಾಲಕ ಕಂ. ನಿರ್ವಾಹಕರು ಇಂತಿಷ್ಟು ಕಿಲೋಮೀಟರ್ಗಳ ವಾಹನ ಚಲಾವಣೆ ಮಾಡುವುದನ್ನು ನಿಗದಿಪಡಿಸಿ ಆದೇಶ ಹೊರಡಿಸುವುದು ಚಾಲನಾ ಸಿಬ್ಬಂದಿಗಳು ಹಾಗೂ ಸಂಸ್ಥೆಯ ಹಿತ ದೃಷ್ಟಿಯಿಂದ ಒಳ್ಳೆಯದಾಗುತ್ತದೆ. ಅಲ್ಲದೆ ಅನಾವಶ್ಯಕವಾಗಿ ವಾಹನ ನೀಡಿದ ಚಾಲಕರನ್ನು ಹೊಣೆಗಾರಿಕೆ ಮಾಡುವುದು ತಪ್ಪುತ್ತದೆ.
ಇತ್ತೀಚಿನ ದಿನಗಳಲ್ಲಿ ತುಮಕೂರು ವಿಭಾಗದ ಸಂಚಲನಾಧಿಕಾರಿ ಮನಸೋ ಇಚ್ಛೆ ಬೇಕಾಬಿಟ್ಟಿಯಾಗಿ ಮಾರ್ಗದ ಫಾರಂ 4 ಬದಲಿಸುತ್ತಿದ್ದಾರೆ. ಕೆಲವು ಮಾರ್ಗದ ಫಾರಂ 4 ಗಳನ್ನು ಒಂದು ತಿಂಗಳಿಗೆ ನಾಲ್ಕರಿಂದ ಐದು ಬಾರಿ ಬದಲಾಯಿಸಿರುವಂತಹ ಉದಾಹರಣೆಗಳು ಸಹ ಇವೆ. ಚಾಲನಾ ಸಿಬ್ಬಂದಿಗಳು ಈ ಬಗ್ಗೆ ವಿಚಾರಿಸಿದರೆ ಆರಿಕೆ ಉತ್ತರ ನೀಡುತ್ತಾರೆ ಹಾಗೂ ಸಾರ್ವಜನಿಕರಿಂದ ಮನವಿ ಬಂದಿದೆ ಎಂದು ತಿಳಿಸುತ್ತಾರೆ.
ಮುಖ್ಯವಾಗಿ ಫಾರಂ ಫೋರ್ ಬದಲಾಯಿಸಲು ವಿಭಾಗಿಯ ಸಂಚಲನ ಅಧಿಕಾರಿಗಳು ಖಾಸಗಿ ವಾಹನಗಳ ಮಾಲೀಕರ ನಡುವಿನ ಹೊಂದಾಣಿಕೆ ಘಟಕ ವ್ಯವಸ್ಥಾಪಕರು ಹಾಗೂ ಸಂಚಾರ ಶಾಖೆಯವರು ಹೊಂದಾಣಿಕೆ ಇಲ್ಲದ ಚಾಲನಾ ಸಿಬ್ಬಂದಿಗಳ ಮಾರ್ಗಗಳ ಫಾರಂ ಬೋರ್ಡ್ ಗಳನ್ನು ಬದಲಿಸಿ ಕೊಡುವಂತೆ ವಿಭಾಗೀ ಸಂಚಲನಾಧಿಕಾರಿಗಳಿಗೆ ಕೇಳಿಕೊಳ್ಳುತ್ತಾರೆ ಹಾಗೂ ಕೆಲವು ಸ್ವಯಂಘೋಷಿತ ಯೂನಿಯನ್ ಲೀಡರ್ಗಳು ಓಡಾಡುವ ಮಾರ್ಗಗಳನ್ನು ಸಾಮಾನ್ಯ ಪಾಳಿ ಇದ್ದರೂ ವೇಗದೂತ ಮಾಡಿಸಿಕೊಳ್ಳುತ್ತಾರೆ.
ವೇಗದೂತ ವಿದ್ದರೆ ಸಾಮಾನ್ಯ ಪಾಳಿ ಮಾಡಿಸಿಕೊಳ್ಳುತ್ತಾರೆ. ಇವೆಲ್ಲದಕ್ಕೂ ಪರೋಕ್ಷವಾಗಿ ಸಂಚಲನಾಧಿಕಾರಿ ಬೆಂಬಲ ನೀಡುತ್ತಾ ಬರುತ್ತಿದ್ದಾರೆ. ಮಾರ್ಗಗಳ ಫಾರಂ 4 ಬದಲಾಯಿಸುವುದು ಮುಖ್ಯವಾಗಿ ಚಾಲನಾ ಸಿಬ್ಬಂದಿಗಳಿಗೆ ಕಿರುಕುಳ ನೀಡುವುದೇ ಆಗಿದೆ. ಫಾರಂ 4 ಗಳನ್ನು ಬದಲಾಯಿಸುವ ಸಂದರ್ಭದಲ್ಲಿ. ಆ ಮಾರ್ಗಗಳ ರೂಟ್ ಸರ್ವೆ ಮಾಡುವ ಪದ್ದತಿಯೇ ಕಾಣುತ್ತಿಲ್ಲ. ಇನ್ನೂ ಮುಖ್ಯವಾಗಿ ಕೆಲವು ಮಾರ್ಗಗಳಲ್ಲಿ ಕೆಲವು ಪಕ್ಷದ ಮುಖಂಡರು ಹೇಳಿರುವ ಕಾರಣಕ್ಕೆ ಆದಾಯ ಬರದಿದ್ದರೂ ಸಹ ಅವರ ಊರುಗಳ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿದ್ದಾರೆ.
ಈ ಎಲ್ಲ ಅಂಶಗಳನ್ನು ಹಾಗೂ ವಿಚಾರಗಳನ್ನು ಪರಿಶೀಲಿಸಿ ಸೂಕ್ತ ರೀತಿಯ ಕ್ರಮ ಕೈಗೊಳ್ಳ ಬೇಕೆಂದು ಲೋಕೇಶ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
Related

You Might Also Like
KSRTC ಅಧಿಕಾರಿಗಳು ಕಚೇರಿಗೆ ಬಂದಾಗ ತಮ್ಮ ಹಣ ಎಷ್ಟಿತ್ತು ಹೋಗುವಾಗ ಎಷ್ಟಿದೆ ಅಂತ ತಿಳಿಸಬೇಕು: ಎಂಡಿ ಆದೇಶ
ಬೆಂಗಳೂರು: ರಾಜ್ಯ ಸರ್ಕಾರವು ಕಚೇರಿಗಳಲ್ಲಿ ನಗದು ಘೋಷಣೆ ವಹಿ ನಿರ್ವಹಣೆ ಕುರಿತು ವಿವರವಾಗಿ ಮಾರ್ಗಸೂಚಿಗಳನ್ನು ನೀಡಿ, ನಿಗಮ/ ಮಂಡಳಿಗಳಲ್ಲಿ ಸಹ ನಗದು ಘೋಷಣೆ ವಹಿ ನಿರ್ವಹಣೆ ಮಾಡುವಂತೆ...
ಕರ್ನಾಟಕ ಹೈಕೋರ್ಟ್ ಸಿಜೆಯಾಗಿ ನ್ಯಾ.ವಿಭು ಬಖ್ರು ಪ್ರಮಾಣ ವಚನ ಸ್ವೀಕಾರ
ಬೆಂಗಳೂರು: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ವಿಭು ಬಖ್ರು ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಇಂದು ರಾಜ್ಯಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ...
BMTC ನೌಕರರಿಗೆ ಕಿರುಕುಳ: ಸಮಸ್ಯೆ ಕೇಳದ ಘಟಕ- 20ರ ಡಿಎಂ- ಸರ್ವಾಧಿಕಾರಿಯ ವರ್ತನೆ
2 ಗಂಟೆ ಬಳಿಕ ತನ್ನ ಕಚೇರಿ ಬಾಗಿಲು ಹಾಕಿಕೊಂಡು ಚೇಳಗಳ ಜತೆ ಹರಟೆ ನೌಕರರ ಸಮಸ್ಯೆ ಬಗೆಹರಿಸದೆ ದರ್ಪ ಮೆರೆಯುತ್ತಿರುವ ಕಿರಾತಕ ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ...
BMTC: ಹೋಟೆಲ್ಗೆ ನುಗ್ಗಿದ ಎಲೆಕ್ಟ್ರಿಕ್ ಬಸ್, ಓರ್ವ ಯುವತಿ ಸಾವು, ಮೂವರಿಗೆ ಗಾಯ
ಬೆಂಗಳೂರು: ಕಿಲ್ಲರ್ ಬಿಎಂಟಿಸಿ ಎಂದು ಕರೆಸಿಕೊಳ್ಳುವ ಬೆಂಗಳೂರು ಮಹಾನಗರ ಸಾರಿಗೆಯ ಎಲೆಕ್ಟ್ರಿಕ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಫುಟ್ಪಾತ್ಗೆ ನುಗ್ಗಿದ ಪರಿಣಾಮ ಯುವತಿಯೋರ್ವರು ಮೃತಪಪ್ಟಿದ್ದು, ಫುಟ್ಪಾತ್ ಮೇಲೆ...
ಸಾರಿಗೆ ನೌಕರರು ಮುಷ್ಕರ ಹೂಡುವುದಾಗಿ ಕೊಟ್ಟ ಮುಷ್ಕರದ ನೋಟಿಸ್ ಸಂಬಂಧ ನಿರ್ದೇಶನ ಕೋರಿ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದ ಎಂಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಆ.5ರಿಂದ...
ಸಾರಿಗೆ ನೌಕರರ ಮುಷ್ಕರದ ಬಗ್ಗೆ ನನ್ನ ಅಭಿಪ್ರಾಯ-ಅನಿಸಿಕೆಗಳು
ಸಾರಿಗೆ ಮುಷ್ಕರ ಎಂಬುದು ಎಲ್ಲಾ ಅಧಿಕಾರಿಗಳು ಮತ್ತು ನೌಕರ ಸಿಬ್ಬಂದಿಗಳ ವೇತನಕ್ಕೆ ಸಂಬಂಧಪಟ್ಟಿರುವುದಾಗಿರುತ್ತದೆ.ಎಲ್ಲರೂ ಒಗ್ಗಟ್ಟಿನಿಂದ ಒಟ್ಟಾಗಿ ಮುಷ್ಕರ ಮಾಡಬೇಕಾಗಿದೆ. ಆದರೆ ನಮ್ಮ ನಿಗಮದಲ್ಲಿ ಅಧಿಕಾರಿಗಳು ಮತ್ತು ಆಡಳಿತ...
ಡಿ.31ರವರೆಗೆ ಸಾರಿಗೆ ನೌಕರರು ಮುಷ್ಕರ ಮಾಡದಂತೆ ಎಸ್ಮಾಜಾರಿ ಮಾಡಿದ ಸರ್ಕಾರ- ಎಸ್ಮಾ ಜಾರಿ ಮಾಡಿದರೆ ಮುಷ್ಕರಕ್ಕೆ ಅವಕಾಶವಿಲ್ಲವೇ? ತಜ್ಞರ ಹೇಳಿಕೆ ಏನು?
ಬೆಂಗಳೂರು: ತಮ್ಮ ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ಬಾಗಿಲು ಬಡಿದು ಸುಸ್ತಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಸಿಬ್ಬಂದಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಜುಲೈ 29ರಿಂದ...
KSRTC ನೌಕರರ ವೇತನ ಹೆಚ್ಚಳ ಸಂಬಂಧ ಉಪವಾಸ ಸತ್ಯಾಗ್ರಹ ಮಾಡುವ ಕುರಿತು ಜು.18ರಂದು ಸುದ್ದಿಗೋಷ್ಠಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ನೌಕರರ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜು.29ರಿಂದ ಒಕ್ಕೂಟದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವ...
ಜು.29ರೊಳಗೆ KSRTC ನೌಕರರ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ: ಎಂಡಿಗೆ ಒಕ್ಕೂಟ ಮನವಿ
ಬೆಂಗಳೂರು: ಇಲ್ಲಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಇದೇ ಜುಲೈ...