KKRTC: ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ಬಸ್ಗೆ ಕಾರು ಗುದ್ದಿದ ಕಾಂಗ್ರೆಸ್ ಮುಖಂಡ- ಈವರೆಗೂ FIR ದಾಖಲಿಸದ ಪೊಲೀಸರು!!?

ಮುಧೋಳ್: ಕಾಂಗ್ರೆಸ್ ಲೀಡರ್ ಒಬ್ಬ ಕುಡಿದ ಮತ್ತಿಲ್ಲಿನ ಕಾರು ಚಾಲನೆ ಮಾಡಿಕೊಂಡು ಬಂದು ಕೆಕೆಆರ್ಟಿಸಿ ಸಂಸ್ಥೆಯ ಬಸ್ಗೆ ಡಿಕ್ಕಿ ಹೊಡೆದಿದ್ದು, ಈ ಬಗ್ಗೆ ಎಫ್ಐಆರ್ ಕೂಡ ಮಾಡದೆ ಬಸ್ಅನ್ನು ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ 12ಗಂಟೆಯಿಂದಲೂ ನಿಲ್ಲಿಸಿಕೊಂಡು ಪ್ರಯಾಣಿಕರಿಗೆ ಸಮಸ್ಯೆಯನ್ನುಂಟು ಮಾಡಿರುವ ಘಟನೆ ಮುಧೋಳ್ನಲ್ಲಿ ನಡೆದಿದೆ.
ಕುಡಿದ ಅಮಲಿನಲ್ಲಿ ಕಾರು ಚಾಲನೆ ಮಾಡಿಕೊಂಡು ಬಂದ ಕಾಂಗ್ರೆಸ್ ಲೀಡರ್ ಭೀಮ್ಸೆ ಸರ್ಕಾರ್ ಕುರಿ ಎಂಬುವರು ತಾನು ಮಾಡಿರುವ ತಪ್ಪನ್ನು ಮುಚ್ಚಿಹಾಕಲು ಬಸ್ಅನ್ನು ಪೊಲೀಸ್ಠಾಣೆಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದ ಬಳಿಕ ಈವರೆಗೂ ಅಂದರೆ ಏ.23ರ ಸಂಜೆ 6 ಗಂಟೆ ಆದರೂ ಆಸಾಮಿ ಪತ್ತೆಯಿಲ್ಲ.
ಇನ್ನು ಇತ್ತ ಈತ ಒಬ್ಬ ಕಾಂಗ್ರೆಸ್ ಮುಖಂಡ ಈತ ಹೇಳಿದಂತೆ ನಾವು ಕೇಳಬೇಕು ಎಂದು ಪೊಲೀಸರು ಪ್ರಯಾಣಿಕರಿಗೆ ತೊಂದರೆ ಕೊಟ್ಟಿರುವುದೂ ಅಲ್ಲದೆ ಈವರೆಗೂ ಸಾರಿಗೆ ಬಸ್ ಚಾಲಕ ಕೊಡುವ ದೂರನ್ನು ತೆಗೆದುಕೊಳ್ಳದೆ ಠಾಣೆ ಮುಂದೆ ಚಾಲಕ ಕಾದು ಕುಳಿತು ಕೊಳ್ಳುವಂತೆ ಮಾಡಿದ್ದಾರೆ.
ಕಾಂಗ್ರೆಸ್ ಲೀಡರ್ ಭೀಮ್ಸೆ ಸರ್ಕಾರ್ ಕುರಿ ಎಂಬಾತ ಈವರೆಗೂ ಯಾವುದೇ ದೂರು ನೀಡಿಲ್ಲ. ಇನ್ನು ಬಸ್ ಚಾಲಕ ದೂರು ನೀಡಿದರೆ ಅವರ ದೂರನ್ನು ಪೊಲೀಸರು ತೆಗೆದುಕೊಳ್ಳುತ್ತಿಲ್ಲ. ಈ ನಡುವೆ ಇಂದು ಬೆಳಗ್ಗೆ ಯಾವುದೋ ಒಂದು ಸಮಾರಂಭವಿದೆ ಎಂದು ಹೇಳಿ ಸರ್ಕಾರ್ ಕುರಿ ಜಮಖಂಡಿಗೆ ಹೋಗಿದ್ದಾರೆ. ಅಂದರೆ ಅವರನ್ನು ಪೊಲೀಸರು ಕಳಿಸಿದ್ದು, ಚಾಲಕ ಮತ್ತು ನಿರ್ವಾಹಕರನ್ನು ಮಾತ್ರ ಠಾಣೆಯಲ್ಲಿ ಕೂರಿಸಿಕೊಂಡಿದ್ದಾರೆ. ಇದನ್ನು ಗಮನಿಸಿದರೆ ಇಲ್ಲಿ ನ್ಯಾಯ ಎಲ್ಲಿದೆ ಎಂಬ ಅನುಮಾನ ಮೂಡುತ್ತಿದೆ.
ಇನ್ನು ಈ ಬಗ್ಗೆ ವಿಚಾರಿಸಲು ಮುಧೋಳ್ ಪೊಲೀಸ್ ಠಾಣೆಯ ಪಿಎಸ್ಐ ಅಜಿತ್ ಅವರಿಗೆ ಕರೆ ಮಾಡಿದರೆ ಅವರ ಕಚೇರಿಯ ಮೊಬೈಲ್ ಫೋನ್ ಸ್ವಿಚ್ ಆಫ್ ಎಂದು ಬಂದಿತು. ಬಳಿಕ ಸರ್ಕಲ್ ಇನ್ಸ್ಪೆಕ್ಟರ್ಗೆ ಕರೆ ಮಾಡಿದಾಗ ಅವರು ಕರೆಯನ್ನು ಸ್ವೀಕರಿಸಿ ಪಿಎಸ್ಐ ಅವರ ಖಾಸಗಿ ಫೋನ್ ನಂಬರ್ ಕೊಟ್ಟರು ಅದಕ್ಕೆ ಎರಡು ಬಾರಿ ಕರೆ ಮಾಡಿದರೂ ಪಿಎಸ್ಐ ಕರೆಯನ್ನು ಸ್ವೀಕರಿಸಲಿಲ್ಲ.
ಇತ್ತ ನಿನ್ನೆ ರಾತ್ರಿಯಿಂದ ಸರಿಯಾಗಿ ನಿದ್ರೆ ಇಲ್ಲದೆ ಜತೆಗೆ ಊಟ ಕೂಡ ಮಾಡದೆ ಬಸ್ ಚಾಲಕ ಮತ್ತು ನಿರ್ವಾಹಕರು ಪೊಲೀಸ್ ಠಾಣೆಯಲ್ಲೇ ಕುಳಿತಿದ್ದಾರೆ. ಇನ್ನು ಭೀಮ್ಸೆ ಸರ್ಕಾರ್ ಕುರಿ ನಾನು ಕಾಂಗ್ರೆಸ್ ಲೀಡರ್ ಎಂದು ಹೇಳಿಕೊಂಡು ಕಾನೂನನ್ನೇ ಗಾಳಿತೂರಿ ಒಂದು ಸರ್ಕಾರಿ ಬಸ್ಅನ್ನು ಪೊಲೀಸ್ ಠಾಣೆಯಲ್ಲೇ ಅದೂ ದೂರು ನೀಡದೆ ನಿಲ್ಲಿಸಿಕೊಂಡು ದರ್ಪ ಮೆರೆಯುತ್ತಿದ್ದಾರೆ.
ಪೊಲೀಸರು ಈತ ಸಿಎಂ ಸಿದ್ದರಾಮಯ್ಯ ಅವರಿಗೆ ಫೋನ್ ಮಾಡಿ ನಮ್ಮ ಮೇಲೆ ಕಿಡಿಕಾರಿದರೆ ನಾವೇನು ಮಾಡುವುದು, ನಾವು ಅಮಾನತಾಗಬೇಕಾಗುತ್ತದೆ ಎಂದು ಹೆದರೆ ಆ ಭಯದಲ್ಲೇ ಈ ಭೀಮ್ಸೆ ಸರ್ಕಾರ್ ಕುರಿಯ ವಿರುದ್ಧ ಈವರೆಗೂ ದೂರು ದಾಖಲಿಸಿಕೊಂಡೇ ಇಲ್ಲ.
ಇನ್ನು ಇಂದು ಪರೀಕ್ಷೆ ಇದ್ದ ಕಾರಣ ರಾತ್ರಿಯೇ ಹುಬ್ಬಳ್ಳಿಯಿಂದ ಬೀದರ್ಗೆ ಪ್ರಯಾಣ ಬೆಳೆಸಿದ ವಿದ್ಯಾರ್ಥಿಗಳು ಇದರಿಂದ ಗಾಬರಿಗೊಂಡಿದ್ದರು. ಅವರನ್ನಾದರೂ ಸುರಕ್ಷಿತವಾಗಿ ಕಳಿಸಿಕೊಡುವ ವ್ಯವಸ್ಥೆಯನ್ನು ಪೊಲೀಸರು ಮಾಡಲಿಲ್ಲ. ಇತ್ತ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮುಂದೆ ಕೂರಲಾಗದೆ ಪರಿತಪ್ಪಿಸಿದ್ದಾರೆ.
ಇದನ್ನು ನೋಡಲಾರದೆ ಸಾರಿಗೆ ಬಸ್ ಚಾಲಕ ಅವರನ್ನು ಬೇರೆ ಬಸ್ಗೆ ಹತ್ತಿಸಿಬಿಟ್ಟು ಬರುತ್ತೇವೆ ಅಲ್ಲಿಯವರೆಗಾದರು ಬಸ್ ತೆಗೆದುಕೊಂಡು ಹೋಗುವುದಕ್ಕೆ ಅನುಮತಿ ಕೊಡಿ ಎಂದು ಪೊಲೀಸರ ಬಳಿ ಬೇಡಿಕೊಂಡಿದ್ದಾರೆ. ಆ ಬಳಿಕ ಇಬ್ಬರು ಪೊಲೀಸ್ ಸಿಬ್ಬಂದಿಗಳ ಕಾವಲಿನಲ್ಲಿ ಬಸ್ಅನ್ನು ತೆಗೆದುಕೊಂಡು ಗೋಗಲು ಅನುಮತಿ ನೀಡಿದ್ದಾರೆ.
ಮುಂಜಾನೆ ಸುಮಾರು 3.30ರ ವೇಳೆಗೆ ಒಂದು ಬಸ್ ಬಂದಿದ್ದು ಅದು ಸಿಂಧಗಿ ವರೆಗೆ ಮಾತ್ರ ಹೋಗುತ್ತಿತ್ತು. ಅದೇ ಬಸ್ಗೆ ಪ್ರಯಾಣಿಕರನ್ನು ಹತ್ತಿಸಿ ಸಿಂಧಗಿಯಿಂದ ಮುಂದಕ್ಕೆ ಬೇರೆ ಬಸ್ಗೆ ಹತ್ತಿಸುವಂತೆ ತಮ್ಮ ಸಹೋದ್ಯೋಗಿಗೆ ಚಾಲಕರು ಮನವಿ ಮಾಡಿದ್ದಾರೆ. ಅಲ್ಲದೆ ಆ ಪ್ರಯಾಣಿಕರು ಸುರಕ್ಷಿತವಾಗಿ ಅವರ ಸ್ಥಳ ತಲುಪುವ ವರೆಗೂ ಅವರಿಗೆ ಕರೆ ಮಾಡಿ ಚಾಲಕರು ವಿಚಾರಿಸಿಕೊಂಡಿದ್ದಾರೆ.
ನೋಡಿ ಒಬ್ಬ ಕಾಂಗ್ರೆಸ್ ಲೀಡರ್ ಈ ರೀತಿ ನಡೆದುಕೊಂಡದರೆ ಇನ್ನು ಸಾಮಾನ್ಯರು ಯಾವ ರೀತಿ ನಡೆದುಕೊಳ್ಳಬೇಕು. ಜತೆಗೆ ಈವರೆಗೂ ಪೊಲೀಸ್ ಠಾಣೆಗೆ ಬರದೆ ಯಾರೋ ಹಿಂಬಾಲಕರನ್ನು ಕಳಿಸಿ ಕಾರು ರೆಡಿ ಮಾಡಿಸಿಕೊಡುವಂತೆ ಚಾಲಕನಿಗೆ ಹೇಳಿದ್ದಾನಂತೆ ಈ ಬೀಮ್ಸೇ ಸರ್ಕಾರ್ ಕುರಿ. ತಪ್ಪು ಮಾಡಿ ಬಸ್ಗೆ ಡಿಕ್ಕಿ ಹೊಡೆದಿರುವುದು ಈತ. ಆದರೆ ಬಸ್ ಚಾಲಕ ಕಾರನ್ನು ಏಕೆ ರೆಡಿ ಮಾಡಿಸಿಕೊಡಬೇಕು. ಅಲ್ಲದೆ ಪೊಲೀಸರು ಏಕೆ ಈವರೆಗೂ ಚಾಲಕ ಕೊಡುತ್ತಿರುವ ದೂರನ್ನು ತೆಗೆದುಕೊಳ್ಳುತ್ತಿಲ್ಲ ಎಂಬುವುದು ಗೊತ್ತಾಗುತ್ತಿಲ್ಲ.
ಇನ್ನು ಸಾರಿಗೆಯ ಸಂಬಂಧಪಟ್ಟ ಮೇಲಧಿಕಾರಿಗಳು ಕೂಡ ಈ ಕಾಂಗ್ರೆಸ್ ಮುಖಂಡ ಎಂಬ ವಿಷಯ ತಿಳಿದ ಮೇಲೆ ಪೊಲೀಸ್ ಠಾಣೆಗೆ ಬರುವ ಧೈರ್ಯವನ್ನೇ ಮಾಡಿಲ್ಲ. ಈ ರೀತಿ ಆದರೆ ತಮ್ಮ ಅಧೀನ ನೌಕರರ ಗತಿ ಏನು ಡಿಸಿ ಮತ್ತು ಡಿಟಿಒ ಸಾಹೇಬರೆ ನಿಮಗೆ ಕಾನೂನು ಪಾಲನೆ ಯಾವರೀತಿ ಮಾಡಬೇಕು ಎಂಬು ನಾವು ಹೇಳಿಕೊಡಬೇಕಾ? ಈಗಲಾದರೂ ನಿಮ್ಮ ಚಾಲಕನ ಪರ ನಿಂತು ದೂರುಕೊಡಲು ಮುಂದಾಗಿ ಇಲ್ಲ ನಾವು ಈ ಹುದ್ದೆಗೆ ಲಾಯಕ್ ಇಲ್ಲ ಎಂದು ಮನೆಗಾದರೂ ಹೋಗಿ.

Related

You Might Also Like
KSRTC: ಸಾರಿಗೆ ನೌಕರರಿಗೆ ಈ ಕೂಡಲೇ ವೇತನ ಹೆಚ್ಚಳ ಮಾಡಿ- ಸಿಎಂಗೆ ಮನವಿ ಸಲ್ಲಿಸಿದ ಕುಕನೂರು ಪಪಂ ಸದಸ್ಯೆ ಫಿರ್ದೋಶ್ ಬೇಗಂ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಹಾಗೂ 38 ತಿಂಗಳ ಹಿಂಬಾಕಿ ಬಗ್ಗೆ ಕೂಡಲೇ ಆದೇಶ ಹೊರಡಿಸಬೇಕು ಎಂದು ಕುಕನೂರು ಪಟ್ಟಣಪಂಚಾಯಿತಿ ಸದಸ್ಯರಾದ...
KKRTC ಬೀದರ್: ಕಿರಿಯ ಸಹಾಯಕ 10ಹುದ್ದೆ ಖಾಲಿ ಇದ್ದರು ಬೇರೆ ಹುದ್ದೆ ಆಯ್ಕೆಗೆ ಮೃತ ನೌಕರರ ಮಕ್ಕಳಿಗೆ ಅಧಿಕಾರಿಗಳಿಂದ ಒತ್ತಡ !
ಬೀದರ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯ ಬೀದರ್ವಿಭಾಗದಲ್ಲಿ ಅನುಕಂಪ ಆಧಾರದ ಮೇಲಿನ ಕಿರಿಯ ಸಹಾಯಕ ಹುದ್ದೆ ನೇಮಕಾತಿ ನಡೆಯದೆ ಹಲವಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಬಲಿಯಾಗುತ್ತಿವೆ. ಇನ್ನು...
ನಾಳೆ ಲಾಲ್ಬಾಗ್ ಆಭರಣದಲ್ಲಿ EPS ಪಿಂಚಣಿದಾರರ 89ನೇ ಮಾಸಿಕ ಸಭೆ
ಬೆಂಗಳೂರು: ಶತಮಾನಗಳ ಭವ್ಯ ಪರಂಪರೆಯನ್ನು ಹೊಂದಿರುವ, ನಡಿಗೆದಾರರ ಸ್ವರ್ಗ ಎಂದು ಕರೆಯುವ, ವಿಶ್ವ ವಿಖ್ಯಾತ ಲಾಲ್ಬಾಗ್ಗೂ ಇಪಿಎಸ್ ಪಿಂಚಣಿದಾರರಿಗೂ ಅವಿನವಬಾವ ಸಂಬಂಧ, ಈ ಸುಂದರ ಪರಿಸರ ತಾಣದಲ್ಲಿ...
ನಟ ದರ್ಶನ್ ಸಿನಿಮಾ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು ಕೋರ್ಟ್ ಅನುಮತಿ
ಬೆಂಗಳೂರು: ನಟ ದರ್ಶನ್ ಅವರಿಗೆ ಸಿನಿಮಾ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು 57ನೇ ಸಿಸಿಎಚ್ ನ್ಯಾಯಾಲಯ ಅನುಮತಿ ನೀಡಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿಯಾಗಿರುವ ದರ್ಶನ್...
NWKRTC: 2024-25ನೇ ಸಾಲಿನ ಐಚ್ಛಿಕ ಭ.ನಿ. ಚೀಟಿಗಳ ಆನ್ಲೈನ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ: ನೌಕರರಿಗೆ CAO ಆದೇಶ
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ವಿಭಾಗಗಳ ಎಲ್ಲ ಅಧಿಕಾರಿಗಳ- ನೌಕರರ 2024-25ನೇ ಸಾಲಿನ ಭವಿಷ್ಯ ನಿಧಿ/ ಐಚ್ಛಿಕ ಭವಿಷ್ಯನಿಧಿ ಚೀಟಿಗಳನ್ನು ಆನ್ಲೈನ್ ಮೂಲಕ...
ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡಹುತ್ತಿರುವವರ ಸರ್ಕಾರ ಮಟ್ಟಹಾಕದೆ ಬಿಡೆದು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸುವ ವಾಗ್ದಾನವನ್ನು ನಾಡಿನ ಜನತೆಗೆ ನಾವು ಚುನಾವಣಾ ಪೂರ್ವದಲ್ಲೇ ನೀಡಿದ್ದೆವು, ಅದರಂತೆ ಜನತೆ ನಮ್ಮ ಮೇಲೆ ವಿಶ್ವಾಸವಿಟ್ಟು ಬಹುಮತದ ಸರ್ಕಾರ ರಚನೆಗೆ...
KKRTC ಯಾದಗಿರಿ: ಇಬ್ಬರು ವಿಭಾಗಮಟ್ಟದ ಅಧಿಕಾರಗಳ ವಿರುದ್ಧ ಜಾತಿ ನಿಂದನೆ, ಲೈಂಗಿಕ ಕಿರುಕುಳ-2ಪ್ರತ್ಯೇಕ ಪ್ರಕಣಗಳು ದಾಖಲು
ಯಾದಗಿರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಇಬ್ಬರು ಪ್ರಮುಖ ಅಧಿಕಾರಿಗಳ ವಿರುದ್ಧ ವಿಭಾಗದ ಸಿಬ್ಬಂದಿಗಳೇ ಪ್ರತ್ಯೇಕವಾಗಿ ದೂರು ನೀಡಿದ್ದು, ವಾರದೊಳಗೆ ಅಧಿಕಾರಿಗಳ ಮೇಲೆ ಪ್ರತ್ಯೇಕ ಎರಡು...
KSRTC: 2006ರಲ್ಲಿ ಡ್ಯೂಟಿಗೆ ಸೇರಿ ಹಲವರು ನಿವೃತ್ತರಾಗುತ್ತಿದ್ದಾರೆ- ಅಚ್ಚರಿ ಎಂದರೆ ಬೇಸಿಕ್ ಪೇ 27 ಸಾವಿರ ದಾಟಲೇ ಇಲ್ಲಆದರೆ..!
ಸರ್ಕಾರಿ ಡಿ ಗ್ರೂಪ್ ನೌಕರರ ಮೂಲ ವೇತನ ಸೇರಿದ ಕೂಡಲೇ 27 ಸಾವಿರ ಬೇಸಿಕ್ ಪೇ ನಮ್ಮ ಈ ದುರಂತ ಕತೆಗೆ ನಾಯಕರು ಯಾರು? ಜಂಟಿ ಸಂಘಟನೆಗಳ...
ರಾಜಕಾಲುವೆ ರಕ್ಕಸರ ವಿರುದ್ಧ ಕ್ರಮ ಜರುಗಿಸುವ ದಮ್ಮು ತಾಕತ್ತು ನಿಮಗೆ ಇದೆಯಾ ಡಿಕೆಶಿ ಅವರೇ: ಕೇಂದ್ರ ಸಚಿವ ಎಚ್ಡಿಕೆ ಪ್ರಶ್ನೆ
ಬೆಂಗಳೂರು: ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾನ್ಯತಾ ಟೆಕ್ ಪಾರ್ಕ್ ಬಳಿಗೆ ಭೇಟಿ ಕೊಟ್ಟು ಮಳೆ, ನೆರೆ ಪರಿಸ್ಥಿತಿ ವೀಕ್ಷಣೆ ಮಾಡಿರುವುದೇನೋ ಸರಿ. ಆದರೆ, ಅವರ ಭೇಟಿ...