KKRTC: ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ಬಸ್ಗೆ ಕಾರು ಗುದ್ದಿದ ಕಾಂಗ್ರೆಸ್ ಮುಖಂಡ- ಈವರೆಗೂ FIR ದಾಖಲಿಸದ ಪೊಲೀಸರು!!?

ಮುಧೋಳ್: ಕಾಂಗ್ರೆಸ್ ಲೀಡರ್ ಒಬ್ಬ ಕುಡಿದ ಮತ್ತಿಲ್ಲಿನ ಕಾರು ಚಾಲನೆ ಮಾಡಿಕೊಂಡು ಬಂದು ಕೆಕೆಆರ್ಟಿಸಿ ಸಂಸ್ಥೆಯ ಬಸ್ಗೆ ಡಿಕ್ಕಿ ಹೊಡೆದಿದ್ದು, ಈ ಬಗ್ಗೆ ಎಫ್ಐಆರ್ ಕೂಡ ಮಾಡದೆ ಬಸ್ಅನ್ನು ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ 12ಗಂಟೆಯಿಂದಲೂ ನಿಲ್ಲಿಸಿಕೊಂಡು ಪ್ರಯಾಣಿಕರಿಗೆ ಸಮಸ್ಯೆಯನ್ನುಂಟು ಮಾಡಿರುವ ಘಟನೆ ಮುಧೋಳ್ನಲ್ಲಿ ನಡೆದಿದೆ.
ಕುಡಿದ ಅಮಲಿನಲ್ಲಿ ಕಾರು ಚಾಲನೆ ಮಾಡಿಕೊಂಡು ಬಂದ ಕಾಂಗ್ರೆಸ್ ಲೀಡರ್ ಭೀಮ್ಸೆ ಸರ್ಕಾರ್ ಕುರಿ ಎಂಬುವರು ತಾನು ಮಾಡಿರುವ ತಪ್ಪನ್ನು ಮುಚ್ಚಿಹಾಕಲು ಬಸ್ಅನ್ನು ಪೊಲೀಸ್ಠಾಣೆಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದ ಬಳಿಕ ಈವರೆಗೂ ಅಂದರೆ ಏ.23ರ ಸಂಜೆ 6 ಗಂಟೆ ಆದರೂ ಆಸಾಮಿ ಪತ್ತೆಯಿಲ್ಲ.
ಇನ್ನು ಇತ್ತ ಈತ ಒಬ್ಬ ಕಾಂಗ್ರೆಸ್ ಮುಖಂಡ ಈತ ಹೇಳಿದಂತೆ ನಾವು ಕೇಳಬೇಕು ಎಂದು ಪೊಲೀಸರು ಪ್ರಯಾಣಿಕರಿಗೆ ತೊಂದರೆ ಕೊಟ್ಟಿರುವುದೂ ಅಲ್ಲದೆ ಈವರೆಗೂ ಸಾರಿಗೆ ಬಸ್ ಚಾಲಕ ಕೊಡುವ ದೂರನ್ನು ತೆಗೆದುಕೊಳ್ಳದೆ ಠಾಣೆ ಮುಂದೆ ಚಾಲಕ ಕಾದು ಕುಳಿತು ಕೊಳ್ಳುವಂತೆ ಮಾಡಿದ್ದಾರೆ.
ಕಾಂಗ್ರೆಸ್ ಲೀಡರ್ ಭೀಮ್ಸೆ ಸರ್ಕಾರ್ ಕುರಿ ಎಂಬಾತ ಈವರೆಗೂ ಯಾವುದೇ ದೂರು ನೀಡಿಲ್ಲ. ಇನ್ನು ಬಸ್ ಚಾಲಕ ದೂರು ನೀಡಿದರೆ ಅವರ ದೂರನ್ನು ಪೊಲೀಸರು ತೆಗೆದುಕೊಳ್ಳುತ್ತಿಲ್ಲ. ಈ ನಡುವೆ ಇಂದು ಬೆಳಗ್ಗೆ ಯಾವುದೋ ಒಂದು ಸಮಾರಂಭವಿದೆ ಎಂದು ಹೇಳಿ ಸರ್ಕಾರ್ ಕುರಿ ಜಮಖಂಡಿಗೆ ಹೋಗಿದ್ದಾರೆ. ಅಂದರೆ ಅವರನ್ನು ಪೊಲೀಸರು ಕಳಿಸಿದ್ದು, ಚಾಲಕ ಮತ್ತು ನಿರ್ವಾಹಕರನ್ನು ಮಾತ್ರ ಠಾಣೆಯಲ್ಲಿ ಕೂರಿಸಿಕೊಂಡಿದ್ದಾರೆ. ಇದನ್ನು ಗಮನಿಸಿದರೆ ಇಲ್ಲಿ ನ್ಯಾಯ ಎಲ್ಲಿದೆ ಎಂಬ ಅನುಮಾನ ಮೂಡುತ್ತಿದೆ.
ಇನ್ನು ಈ ಬಗ್ಗೆ ವಿಚಾರಿಸಲು ಮುಧೋಳ್ ಪೊಲೀಸ್ ಠಾಣೆಯ ಪಿಎಸ್ಐ ಅಜಿತ್ ಅವರಿಗೆ ಕರೆ ಮಾಡಿದರೆ ಅವರ ಕಚೇರಿಯ ಮೊಬೈಲ್ ಫೋನ್ ಸ್ವಿಚ್ ಆಫ್ ಎಂದು ಬಂದಿತು. ಬಳಿಕ ಸರ್ಕಲ್ ಇನ್ಸ್ಪೆಕ್ಟರ್ಗೆ ಕರೆ ಮಾಡಿದಾಗ ಅವರು ಕರೆಯನ್ನು ಸ್ವೀಕರಿಸಿ ಪಿಎಸ್ಐ ಅವರ ಖಾಸಗಿ ಫೋನ್ ನಂಬರ್ ಕೊಟ್ಟರು ಅದಕ್ಕೆ ಎರಡು ಬಾರಿ ಕರೆ ಮಾಡಿದರೂ ಪಿಎಸ್ಐ ಕರೆಯನ್ನು ಸ್ವೀಕರಿಸಲಿಲ್ಲ.
ಇತ್ತ ನಿನ್ನೆ ರಾತ್ರಿಯಿಂದ ಸರಿಯಾಗಿ ನಿದ್ರೆ ಇಲ್ಲದೆ ಜತೆಗೆ ಊಟ ಕೂಡ ಮಾಡದೆ ಬಸ್ ಚಾಲಕ ಮತ್ತು ನಿರ್ವಾಹಕರು ಪೊಲೀಸ್ ಠಾಣೆಯಲ್ಲೇ ಕುಳಿತಿದ್ದಾರೆ. ಇನ್ನು ಭೀಮ್ಸೆ ಸರ್ಕಾರ್ ಕುರಿ ನಾನು ಕಾಂಗ್ರೆಸ್ ಲೀಡರ್ ಎಂದು ಹೇಳಿಕೊಂಡು ಕಾನೂನನ್ನೇ ಗಾಳಿತೂರಿ ಒಂದು ಸರ್ಕಾರಿ ಬಸ್ಅನ್ನು ಪೊಲೀಸ್ ಠಾಣೆಯಲ್ಲೇ ಅದೂ ದೂರು ನೀಡದೆ ನಿಲ್ಲಿಸಿಕೊಂಡು ದರ್ಪ ಮೆರೆಯುತ್ತಿದ್ದಾರೆ.
ಪೊಲೀಸರು ಈತ ಸಿಎಂ ಸಿದ್ದರಾಮಯ್ಯ ಅವರಿಗೆ ಫೋನ್ ಮಾಡಿ ನಮ್ಮ ಮೇಲೆ ಕಿಡಿಕಾರಿದರೆ ನಾವೇನು ಮಾಡುವುದು, ನಾವು ಅಮಾನತಾಗಬೇಕಾಗುತ್ತದೆ ಎಂದು ಹೆದರೆ ಆ ಭಯದಲ್ಲೇ ಈ ಭೀಮ್ಸೆ ಸರ್ಕಾರ್ ಕುರಿಯ ವಿರುದ್ಧ ಈವರೆಗೂ ದೂರು ದಾಖಲಿಸಿಕೊಂಡೇ ಇಲ್ಲ.
ಇನ್ನು ಇಂದು ಪರೀಕ್ಷೆ ಇದ್ದ ಕಾರಣ ರಾತ್ರಿಯೇ ಹುಬ್ಬಳ್ಳಿಯಿಂದ ಬೀದರ್ಗೆ ಪ್ರಯಾಣ ಬೆಳೆಸಿದ ವಿದ್ಯಾರ್ಥಿಗಳು ಇದರಿಂದ ಗಾಬರಿಗೊಂಡಿದ್ದರು. ಅವರನ್ನಾದರೂ ಸುರಕ್ಷಿತವಾಗಿ ಕಳಿಸಿಕೊಡುವ ವ್ಯವಸ್ಥೆಯನ್ನು ಪೊಲೀಸರು ಮಾಡಲಿಲ್ಲ. ಇತ್ತ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮುಂದೆ ಕೂರಲಾಗದೆ ಪರಿತಪ್ಪಿಸಿದ್ದಾರೆ.
ಇದನ್ನು ನೋಡಲಾರದೆ ಸಾರಿಗೆ ಬಸ್ ಚಾಲಕ ಅವರನ್ನು ಬೇರೆ ಬಸ್ಗೆ ಹತ್ತಿಸಿಬಿಟ್ಟು ಬರುತ್ತೇವೆ ಅಲ್ಲಿಯವರೆಗಾದರು ಬಸ್ ತೆಗೆದುಕೊಂಡು ಹೋಗುವುದಕ್ಕೆ ಅನುಮತಿ ಕೊಡಿ ಎಂದು ಪೊಲೀಸರ ಬಳಿ ಬೇಡಿಕೊಂಡಿದ್ದಾರೆ. ಆ ಬಳಿಕ ಇಬ್ಬರು ಪೊಲೀಸ್ ಸಿಬ್ಬಂದಿಗಳ ಕಾವಲಿನಲ್ಲಿ ಬಸ್ಅನ್ನು ತೆಗೆದುಕೊಂಡು ಗೋಗಲು ಅನುಮತಿ ನೀಡಿದ್ದಾರೆ.
ಮುಂಜಾನೆ ಸುಮಾರು 3.30ರ ವೇಳೆಗೆ ಒಂದು ಬಸ್ ಬಂದಿದ್ದು ಅದು ಸಿಂಧಗಿ ವರೆಗೆ ಮಾತ್ರ ಹೋಗುತ್ತಿತ್ತು. ಅದೇ ಬಸ್ಗೆ ಪ್ರಯಾಣಿಕರನ್ನು ಹತ್ತಿಸಿ ಸಿಂಧಗಿಯಿಂದ ಮುಂದಕ್ಕೆ ಬೇರೆ ಬಸ್ಗೆ ಹತ್ತಿಸುವಂತೆ ತಮ್ಮ ಸಹೋದ್ಯೋಗಿಗೆ ಚಾಲಕರು ಮನವಿ ಮಾಡಿದ್ದಾರೆ. ಅಲ್ಲದೆ ಆ ಪ್ರಯಾಣಿಕರು ಸುರಕ್ಷಿತವಾಗಿ ಅವರ ಸ್ಥಳ ತಲುಪುವ ವರೆಗೂ ಅವರಿಗೆ ಕರೆ ಮಾಡಿ ಚಾಲಕರು ವಿಚಾರಿಸಿಕೊಂಡಿದ್ದಾರೆ.
ನೋಡಿ ಒಬ್ಬ ಕಾಂಗ್ರೆಸ್ ಲೀಡರ್ ಈ ರೀತಿ ನಡೆದುಕೊಂಡದರೆ ಇನ್ನು ಸಾಮಾನ್ಯರು ಯಾವ ರೀತಿ ನಡೆದುಕೊಳ್ಳಬೇಕು. ಜತೆಗೆ ಈವರೆಗೂ ಪೊಲೀಸ್ ಠಾಣೆಗೆ ಬರದೆ ಯಾರೋ ಹಿಂಬಾಲಕರನ್ನು ಕಳಿಸಿ ಕಾರು ರೆಡಿ ಮಾಡಿಸಿಕೊಡುವಂತೆ ಚಾಲಕನಿಗೆ ಹೇಳಿದ್ದಾನಂತೆ ಈ ಬೀಮ್ಸೇ ಸರ್ಕಾರ್ ಕುರಿ. ತಪ್ಪು ಮಾಡಿ ಬಸ್ಗೆ ಡಿಕ್ಕಿ ಹೊಡೆದಿರುವುದು ಈತ. ಆದರೆ ಬಸ್ ಚಾಲಕ ಕಾರನ್ನು ಏಕೆ ರೆಡಿ ಮಾಡಿಸಿಕೊಡಬೇಕು. ಅಲ್ಲದೆ ಪೊಲೀಸರು ಏಕೆ ಈವರೆಗೂ ಚಾಲಕ ಕೊಡುತ್ತಿರುವ ದೂರನ್ನು ತೆಗೆದುಕೊಳ್ಳುತ್ತಿಲ್ಲ ಎಂಬುವುದು ಗೊತ್ತಾಗುತ್ತಿಲ್ಲ.
ಇನ್ನು ಸಾರಿಗೆಯ ಸಂಬಂಧಪಟ್ಟ ಮೇಲಧಿಕಾರಿಗಳು ಕೂಡ ಈ ಕಾಂಗ್ರೆಸ್ ಮುಖಂಡ ಎಂಬ ವಿಷಯ ತಿಳಿದ ಮೇಲೆ ಪೊಲೀಸ್ ಠಾಣೆಗೆ ಬರುವ ಧೈರ್ಯವನ್ನೇ ಮಾಡಿಲ್ಲ. ಈ ರೀತಿ ಆದರೆ ತಮ್ಮ ಅಧೀನ ನೌಕರರ ಗತಿ ಏನು ಡಿಸಿ ಮತ್ತು ಡಿಟಿಒ ಸಾಹೇಬರೆ ನಿಮಗೆ ಕಾನೂನು ಪಾಲನೆ ಯಾವರೀತಿ ಮಾಡಬೇಕು ಎಂಬು ನಾವು ಹೇಳಿಕೊಡಬೇಕಾ? ಈಗಲಾದರೂ ನಿಮ್ಮ ಚಾಲಕನ ಪರ ನಿಂತು ದೂರುಕೊಡಲು ಮುಂದಾಗಿ ಇಲ್ಲ ನಾವು ಈ ಹುದ್ದೆಗೆ ಲಾಯಕ್ ಇಲ್ಲ ಎಂದು ಮನೆಗಾದರೂ ಹೋಗಿ.
Related

You Might Also Like
NWKRTC: ಸಾರಿಗೆ ನೌಕರರ ವೇತನ ಹೆಚ್ಚಳ ಯಾವಾಗ? ನಾಟಕದ ಮೂಲಕ ಸರ್ಕಾರದ ಗಮನ ಸೆಳೆದ ನಗರ ಸಾರಿಗೆ ಸಿಬ್ಬಂದಿ
ಹುಬ್ಬಳ್ಳಿ: ರಾಜ್ಯದಲ್ಲಿರುವ ನಮ್ಮ ಸಾರಿಗೆ ನಿಗಮಗಳ ಅಧಿಕಾರಿಗಳು - ನೌಕರರಲ್ಲಿ ಹಾಗೂ ನೌಕರರು - ನೌಕರರಲ್ಲೇ ಒಗ್ಗಟ್ಟಿಲ್ಲ. ಪರಿಣಾಮ ನಾಲ್ಕೂ ನಿಗಮಗಳಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಹೀಗಾಗಿ...
ಮೈಸೂರು ಅರಮನೆ ಸೇರಿದಂತೆ ಸೂಕ್ಷ್ಮ ವಲಯಗಳಲ್ಲಿ ಡ್ರೋನ್ ಹಾರಾಟ ನಿಷೇಧ
ಮೈಸೂರು: ಭಯೋತ್ಪಾದಕರು/ ದೇಶ ವಿರೋಧಿಗಳು ಡ್ರೋನ್ಗಳು, ರಿಮೋಟ್ ಕಂಟ್ರೋಲ್ಡ್ ಮೈಕ್ರೋ-ಲೈಟ್ ಏರ್ಕ್ರಾಫ್ಟ್ ಗಳು, ಪ್ಯಾರಿ-ಗ್ಲೈಡರ್ ಗಳನ್ನು ಬಳಸಿಕೊಂಡು ದಾಳಿಯ ಮೂಲಕ ಸಾರ್ವಜನಿಕ ಆಸ್ತಿ-ಪಾಸ್ತಿ ನಾಶಪಡಿಸಿ ಕಾನೂನು ಸುವ್ಯವಸ್ಥೆಗೆ...
ಸೂಕ್ಷ್ಮ ವಲಯಗಳಲ್ಲಿ ಖಾಸಗಿ ಡ್ರೋನ್ ಚಟುವಟಿಕೆ ನಿಷೇಧ: ಡಿಸಿ ಬಸವರಾಜು
ಬೆಂಗಳೂರು ಗ್ರಾಮಾಂತರ: ಭಯೋತ್ಪಾದಕರು/ ದೇಶ ವಿರೋಧಿಗಳು ಡ್ರೋನ್ಗಳು, ರಿಮೋಟ್ ಕಂಟ್ರೋಲ್ಡ್ ಮೈಕ್ರೋ-ಲೈಟ್ ಏರ್ಕ್ರಾಫ್ಟ್ ಗಳು, ಪ್ಯಾರಿ-ಗ್ಲೈಡರ್ ಗಳನ್ನು ಬಳಸಿಕೊಂಡು ದಾಳಿಯ ಮೂಲಕ ಸಾರ್ವಜನಿಕ ಆಸ್ತಿ-ಪಾಸ್ತಿ ನಾಶಪಡಿಸಿ ಕಾನೂನು...
ವೈದ್ಯರು, ದಾದಿಯರಿಗೆ ಶೇ. 55 ರಷ್ಟು ವೇತನ ಪರಿಷ್ಕರಣೆ: ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮತ್ತು ದಾದಿಯರಿಗೆ ಶೇ. 55 ರಷ್ಟು ವೇತನ ಪರಿಷ್ಕರಣೆಗೆ ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ ರಾಜ್ಯ ಸರ್ಕಾರ ಅನುಮೋದನೆ...
ರಾಜ್ಯಾದ್ಯಂತ 7 ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ 40 ಕಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ: ದಾಖಲೆಗಳು ವಶ
ಬೆಂಗಳೂರು: ರಾಜ್ಯಾದ್ಯಂತ 40 ಕಡೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದ್ದು, ಭ್ರಷ್ಟರ ಭೇಟಿಯಾಡುತ್ತಾ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಭಷ್ಟ್ರ ಅಧಿಕಾರಿಗಳ ವಿರುದ್ಧ ಅಕ್ರಮ...
BMTC: ಸಾರಿಗೆ ನೌಕರರಿಗೆ ಹಿಂಬಾಕಿ, ವೇತನ ಹೆಚ್ಚಳ ಮಾಡದಿದ್ದರೂ ಪ್ರಯಾಣಿಕರಿಗೆ ಹೊಸ ಹೊಸ ಯೋಜನೆ ಮಾತ್ರ ನಿಂತಿಲ್ಲ
ಬೆಂಗಳೂರು: ರಾಜ್ಯ ಸರ್ಕಾರಿ ಸಾರಿಗೆ ನೌಕರರಿಗೆ 2024ರ ಜನವರಿಯಿಂದ ಆಗಬೇಕಿರುವ ವೇತನ ಹೆಚ್ಚಳ ಹಾಗೂ ಕಳೆದ 2020ರ ಜನವರಿಯಿಂದ ಆಗಿರುವ ತೇತನ ಹೆಚ್ಚಳದ 38 ತಿಂಗಳ ಹಿಂಬಾಕಿ...
44ನೇ ವಯಸ್ಸಿಗೇ ಸಿಎಂ ಆಗಿ ಸಾಧನೆಗೈದ ಆರ್. ಗುಂಡೂರಾವ್: ಸಿದ್ದರಾಮಯ್ಯ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರು ಸಿಎಂ ಆಗಿದ್ದಾಗ ನಾನು ಜನತಾ ಪಕ್ಷದಲ್ಲಿ ಇದ್ದೇ, ಲೋಕಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ಅವರನ್ನು ನೋಡಲು ಹೋಗಿದ್ದೇ ಎಂದು ಸಿಎಂ ಸಿದ್ದರಾಮಯ್ಯ...
ಸಾಮಾಜಿಕ ನ್ಯಾಯದ ಬದ್ಧತೆ ಇರಬೇಕು ತೋರಿಕೆಯಲ್ಲ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಇರಬೇಕು. ತೋರಿಕೆ ಇರಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಸಿಎಂ ನಿವಾಸ ಕಾವೇರಿಯಲ್ಲಿ ಹಿರಿಯ ಪತ್ರಕರ್ತ ಡಾ.ಎಂ.ಎಸ್.ಮಣಿ ಅವರ...
ಕೆಂಪೇಗೌಡ ಬಸ್ ನಿಲ್ದಾಣದ ನಿರ್ಮಾತೃ ರಾಜ್ಯದ ಧೀಮಂತ ಸಿಎಂ ಎನಿಸಿಕೊಂಡಿದ್ದ ಆರ್. ಗುಂಡೂರಾವ್ ಪ್ರತಿಮೆ ಅನಾವರಣ
ಬೆಂಗಳೂರು: ದಕ್ಷಿಣ ಏಷ್ಯಾದಲ್ಲೇ ಪ್ರಪ್ರಥಮ ಹಾಗೂ ಅತ್ಯಪೂರ್ವ ಎಂಬ ಖ್ಯಾತಿಯ ಕೆಂಪೇಗೌಡ ಸಾರಿಗೆ ನಿಲ್ದಾಣದ ನಿರ್ಮಾತೃ ರಾಜ್ಯದ ಧೀಮಂತ ಮುಖ್ಯ ಮಂತ್ರಿ ಎನಿಸಿಕೊಂಡಿದ್ದ ಪ್ರಾತ:ಸ್ಮರಣಿಯ ಆರ್. ಗುಂಡೂರಾವ್...