- ಒಣ ಮೆಣಸಿನ ಕಾಯಿ ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ಕೊಟ್ಟ ನಿರ್ವಾಹಕನಿಗೆ ತನಿಖಾ ಸಿಬ್ಬಂದಿಯಿಂದ ಮೆಮೋ
- ಅವಕಾಶ ಕೊಡದ ಕಂಡಕ್ಟರ್ಗೆ ಘಟಕ ವ್ಯವಸ್ಥಾಪಕರಿಂದ ಮೆಮೋ!
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಜಾರಿಯಲ್ಲಿರುವ ಕೆಲ ನಿಯಮಗಳು ಚಾಲನಾ ಸಿಬ್ಬಂದಿಗಳಿಗೆ ಅತ್ತ ದರಿ ಇತ್ತ ಪುಲಿ ಎಂಬಂತಿವೆ. ಕಾರಣ ನಿಯಮದಂತೆ ನಡೆದುಕೊಂಡರೂ ಶಿಕ್ಷೆ ಅನುಭವಿಸಬೇಕು ನಡೆದುಕೊಳ್ಳದಿದ್ದರೂ ಶಿಕ್ಷೆ ಅನುಭವಿಸಬೇಕಿದೆ.
ಇದಕ್ಕೆ ತಾಜಾ ನಿದರ್ಶನ ಒಂದನ್ನು ಕೇವಲ ಎರಡೇ ದಿನಗಳ ಅಂತರದಲ್ಲಿ ನಾವು ಕಾಣಬಹುದಾಗಿದೆ. ಒಂದು ಕಡೆ ಪ್ರಯಾಣಿಕರೊಬ್ಬರು ಒಣ ಮೆಣಸಿಕಾಯಿಯ ಚೀಲವೊಂದನ್ನು ತೆಗೆದುಕೊಂಡು ಬಸ್ನಲ್ಲಿ ಪ್ರಾಯಾಣಿಸುವುದಕ್ಕೆ ಅವಕಾಶ ಮಾಡಿಕೊಡುವ ಮೂಲಕ ಸಂಸ್ಥೆಯ ನಿಯಮವನ್ನು ಗಾಳಿ ತೂರಿದ್ದೀರಿ ಎಂದು ಅಪಾಧಿಸಿ ತಾಳಿಕೋಟೆ ಮಾರ್ಗದ ಸಾರಿಗೆ ಬಸ್ ನಿರ್ವಾಹಕರಿಗೆ ಏ.19ರಂದು ತನಿಖಾ ಸಿಬ್ಬಂದಿಗಳು ಮೆಮೋ ಕೊಟ್ಟಿದ್ದಾರೆ.
ಇದಾದ ಬಳಿಕ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉ.ಕ.ವಿಭಾಗ ಯಲ್ಲಾಪುರ ಘಟಕದ ವ್ಯವಸ್ಥಾಪಕರು ಪ್ರಯಾಣಿಕರೊಬ್ಬರು ಏ.20ರಂದು ಒಣ ಮೆಣಸಿನ ಕಾಯಿಯನ್ನು ಬಸ್ನಲ್ಲಿ ತೆಗೆದುಕೊಂಡು ಪ್ರಯಾಣಿಸುವುದಕ್ಕೆ ನೀವು ಅನುವು ಮಾಡಿಕೊಡದೆ ಪ್ರಯಾಣಿಕರಿಗೆ ತೊಂದರೆ ಕೊಡುವ ಮೂಲಕ ಸಂಸ್ಥೆಯ ನಿಮವನ್ನು ಉಲ್ಲಂಘನೆ ಮಾಡಿ ಬೇಜವಾಬ್ದಾರಿಯಿಂದ ವರ್ತಿಸಿದ್ದೀರಿ. ಏಕೆ ನಾವು ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಾರದು ಎಂದು ಕಾರಣ ಕೇಳಿ ಮೆಮೋ ಕೊಟ್ಟಿದ್ದಾರೆ.
ಈ ರೀತಿ ಅಧಿಕಾರಿಗಳು ದ್ವಿಮುಖ ನಡೆ ಅನುಸರಿಸಿದರೆ ನಿರ್ವಾಹಕರು ಕರ್ತವ್ಯ ನಿರ್ವಹಿಸುವುದಾದರೂ ಹೇಗೆ? ಒಂದು ಕಡೆ ಒಣ ಮೆಣಸಿನಕಾಯಿ ಹಾಕಿದರೆ ಅದಕ್ಕೂ ಮೆಮೋ ಕೊಡುತ್ತಾರೆ ಇನ್ನೊಂದು ಕಡೆ ಹಾಕಿಸಿಕೊಳ್ಳದಿದ್ದರೆ ಅದಕ್ಕೂ ಮೆಮೋ ಕೊಡುತ್ತಾರೆ. ಹೀಗಾಗಿ ನಿರ್ವಾಹಕರು ಕರ್ತವ್ಯ ನಿರ್ವಹಿಸುವುದು ತುಂಬ ಕಷ್ಟಕರವಾಗುತ್ತಿದೆ.
ಹೀಗೆ ಅಧಿಕಾರಿಗಳು ತಮಗೆ ಮನ ಬಂದಂತೆ ಅಧಿಕಾರ ಚಲಾಯಿಸಿ ವರ್ತಿಸಿದರೆ ನಿರ್ವಾಹಕರು ಏನು ಮಾಡುವುದು. ಒಂದು ಸ್ಪಷ್ಟವಾದ ನಿರ್ದೇಶನ ನೀಡಿ ಹಾಕುವುದಾದರೆ ಹಾಕಬೇಕು ಬೇಡವೆಂದರೆ ಬೇಡವೆಂದು ಆದೇಶ ಹೊರಡಿಸಬೇಕು. ಹೀಗೆ ಸಮಯಕ್ಕೆ ತಕ್ಕಂತೆ ಮನಬಂದಂತೆ ವರ್ತಿಸಿದರೆ ಹೇಗೆ ಎಂದು 4 ನಿಗಮಗಳ ನೌಕರರು ಪ್ರಶ್ನಿಸುತ್ತಿದ್ದಾರೆ.
ಯಲ್ಲಾಪುರ ಘಟಕ ವ್ಯವಸ್ಥಾಪಕರು ಕೊಟ್ಟಿರುವ ಮೆಮೋದಲ್ಲೇನಿದೆ?: ನಾನು ಘಟಕ ವ್ಯವಸ್ಥಾಪಕ/ ಶಿಸ್ತುಪಾಲನಾಧಿಕಾರಿ ವಾ.ಕ.ರ.ಸಾ.ಸಂಸ್ಥೆ ಉ.ಕ.ವಿಭಾಗ ಶಿರಸಿ ಯಲ್ಲಾಪುರ ಘಟಕ ನಿಮ್ಮ ಮೇಲೆ ಆರೋಪಗಳ ಬಗ್ಗೆ ನಿಜ ಸಂಗತಿಗಳನ್ನು ತಿಳಿಯಲು ಕೆಲವು ಆಧಾರಗಳು ಪುಷ್ಟಿಕರಿಸುತ್ತೇನೆಂದು ಅಭಿಪ್ರಾಯ ಪಟ್ಟಿರುತ್ತೇನೆ. ಆದ್ದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸೇವೆ (ನಡವಳಿಕೆ ಶಿಸ್ತಿ) 1971 ರ ನಿಯಮಾವಳಿ 22 ವಿಧಿಯ ಪ್ರಕಾರ ಬಸವರಾಜ ಅಂಬಿಗೇರ ಚಾಲಕ/ನಿರ್ವಾಹಕರಾದ (ಬಿಲ್ಲೆ ಸಂ:1581) ನಿಮ್ಮ ಮೇಲೆ ಈ ಕೇಳ ಕಾಣಿಸಿದ ಆರೋಪಗಳನ್ನು ಮಂಡಿಸಲಾಗಿದೆ.
ದಿನಾಂಕ: 20/04/2025 ರಂದು ಅನುಸೂಚಿ 76/77 ರ ಮೇಲೆ ನಿರ್ವಾಹಕರಾಗಿ ಕರ್ತವ್ಯದ ಮೇಲಿದ್ದ ವೇಳೆ ಅಂದರೆ 20/04/2025ರ ಬೆಳಗ್ಗೆ 11:30ರ ವೇಳೆಗೆ ಮಾಗೋಡ ಸರದಿಯಲ್ಲಿ ತಾವು ಯಲ್ಲಾಪುರ ಬಸ್ ನಿಲ್ದಾಣದಿಂದ ಕಾರ್ಯಾಚರಿಸುವಾಗ ಯಲ್ಲಾಪುರದಿಂದ ಮಾಗೋಡ ಕಾಲೋನಿಗೆ ಪ್ರಯಾಣಿಸಲು ಬಂದ ಮಹಿಳಾ ಪ್ರಯಾಣಿಕರಿಗೆ ತಾವು ಒಣ ಮೆಣಸನ್ನು ಒಯ್ಯುವ ಹಾಗಿಲ್ಲ ಎಂದು ಹೇಳಿ ಬಸ್ಸಿನಿಂದ ಕೆಳಗೆ ಇಳಿಸಿರುತ್ತೀರಿ. ಈ ರೀತಿ ತಾವು ನೌಕರನಿಗೆ ತಕ್ಕುದಲ್ಲದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದು ತಮ್ಮ ಮೇಲೆ ಏಕೆ ಶಿಸ್ತಿನ ಕ್ರಮ ಕೈಗೋಳ್ಳಬಾರದೆಂದು. ಈ ಆರೋಪಣ ಪತ್ರ ತಲುಪಿದ 3 ದಿನದೋಳಗಾಗಿ ಲಿಖಿತ ಉತ್ತರ ಸಲ್ಲಿಸಬೇಕು.
ನೀವು ಒಂದು ಪಕ್ಷ ಮೇಲೆ ಗೋತ್ತು ಪಡಿಸಿದ ಆರೋಪಗಳ ಬಗ್ಗೆ 3 ದಿನಗಳಲ್ಲಿ ಲಿಖಿತ ಉತ್ತರ ನೀಡದೇ ಹೋದಲ್ಲಿ ನಿಮ್ಮಿಂದ ಯಾವುದೇ ವಿವರಣೆ ಇಲ್ಲವೆಂದು ಊಹಿಸಿ ಶಿಸ್ತು ಮತ್ತು ನಡವಳಿಕೆ ನಿಯಮದ ಪ್ರಕಾರ ಏಕಪಕ್ಷಿಯವಾಗಿ ಕ್ರಮ ಕೈಗೋಳ್ಳಲಾಗುವುದು ಎಂದು ಘಟಕ ವ್ಯವಸ್ಥಾಪಕರು ಮೆಮೋ ಕೊಟ್ಟಿದ್ದಾರೆ.
ಇನ್ನು ಸಿ.ವಿ.ಸೊನ್ನದ ಎಂಬ ನಿರ್ವಾಹಕರಿಗೆ ನೀವು ಬಸ್ನಲ್ಲಿ ಒಣ ಮೆಣಸಿನ ಕಾಯಿ ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ಮಾಡಿಕೊಡುವ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಯಮವನ್ನು ಅಂದರೆ ಒಣ ಮೆಣಸಿನ ಕಾತಿ ಘಾಟು ಇರುವ ವಸ್ತುವನ್ನು ತೆಗೆದುಕೊಂಡು ಹೋಗಬಾರದು ಎಂಬ ನಿಯಮವನ್ನು ಉಲ್ಲಂಘನೆ ಮಾಡುವ ಮೂಲಕ ಸಂಸ್ಥೆಯ ನಿಯಮವನ್ನು ಪಾಲಿಸುವಲ್ಲಿ ವಿಫಲರಾಗಿದ್ದೀರಿ. ಹೀಗಾಗಿ ನಿಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂದು ಕಾರಣ ಕೇಳಿ ತನಿಖಾ ಸಿಬ್ಬಂದಿಗಳು ಏ.19ರಂದು ಮೆಮೋ ಕೊಟ್ಟಿದ್ದಾರೆ.
ಇನ್ನು ಇದಕ್ಕೆ ಸಂಬಂಧಪಟ್ಟ ಮೇಲಧಿಕಾರಿಗಳು ಉತ್ತರ ಕೊಡಬೇಕು. ಇಲ್ಲಿ ನಿರ್ವಾಹಕರು ಯಾವ ನಿಯಮವನ್ನು ಪಾಲನೆ ಮಾಡಬೇಕು. ಒಂದು ಕಡೆ ಇಳಿಸಿರುವುದು ತಪ್ಪು ಎಂದು ಹೇಳುತ್ತೀರಿ ಮತ್ತೊಂದುಕಡೆ ಒಣ ಮೆಣಸಿನ ಕಾಯಿ ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದು ತಪ್ಪು ಎನ್ನುತ್ತೀರಿ ಹೀಗಾದರೆ ನೌಕರರು ಯಾವ ರೀತಿ ಕೆಲಸ ಮಾಡಬೇಕು. ನೀವೆ ಉತ್ತರ ಕೊಡಬೇಕು.
Related

You Might Also Like
KSRTC ನೌಕರರ ಸಾಮಾನ್ಯ ಮರಣ ಪ್ರಕರಣಕ್ಕಿದ್ದ 10 ಲಕ್ಷ ರೂ. ಪರಿಹಾರ ಮೊತ್ತ 14 ಲಕ್ಷ ರೂ.ಗಳಿಗೆ ಏರಿಸಿ ಎಂಡಿ ಆದೇಶ
ಪರಿಷ್ಕರಿಸಿದ 14 ಲಕ್ಷ ರೂ. ಪರಿಹಾರ ಮೊತ್ತ ಸೆಪ್ಟೆಂಬರ್ 1-2025ರಿಂದ ಜಾರಿ ಬೆಂಗಳೂರು: 10 ಲಕ್ಷ ರೂ.ಗಳಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಕುಟುಂಬ...
KSRTC- ಪ್ರತಿಷ್ಠಿತ ವಿಶ್ವ ದಾಖಲೆ ಸೇರಿದ ಶಕ್ತಿ ಯೋಜನೆ: ಅತೀವ ಸಂತಸ, ಹೆಮ್ಮೆಯ ಕ್ಷಣ- ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ 2023ರ ಜೂನ್ 11ರಿಂದ ಜಾರಿಗೆ ಬಂದ ಶಕ್ತಿ ಯೋಜನೆ ಪ್ರತಿಷ್ಠಿತ ವಿಶ್ವ ದಾಖಲೆಗೆ ಸೇರ್ಪಡೆ (Golden Book...
KKRTC ವಿಜಯಪುರ: ಸಂಸ್ಥೆ ನಿಯಮವನ್ನೇ ಗಾಳಿಗೆ ತೂರಿ ಮತ್ತೆ ಮತ್ತೆ ನೌಕರರಿಂದ ಸ್ವಂತ ಕಾರನ್ನು ಸರ್ವಿಸ್ ಮಾಡಿಸಿಕೊಳ್ಳುತ್ತಿರುವ ಡಿಎಂ
ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅದರಲ್ಲೂ ವಿಜಯಪುರ ವಿಭಾಗದಲ್ಲಿ ಇವರ ಬಹುತೇಕ ಎಲ್ಲ ಘಟಕ ವ್ಯವಸ್ಥಾಪಕರು ಸೇರಿದಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳೂ ಅಂಕುಶವಿಲ್ಲದ ಆನೆಯಂತಾಗಿದ್ದಾರೆ. ಅಂದರೆ...
ಕಾವೇರಿ ನದಿಗೆ 31,550 ಕ್ಯೂಸೆಕ್ ನೀರು ಬಿಡುಗಡೆ- ನದಿ ತಟದ ಜನರಿಗೆ ಸೂಚನೆ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ವರುಣನ ಆರ್ಭಟ ಹೆಚ್ಚಾಗಿದ್ದು ಈ ಹಿನ್ನೆಲೆ ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ ಡ್ಯಾಂಗೆ ಒಳಹರಿವು ಹೆಚ್ಚಾಗುತ್ತಿದೆ. ಹೀಗಾಗಿ ನದಿ...
BMTC: ಬ್ರೇಕ್ ಫೇಲಾಗಿ ಕಂದಕಕ್ಕೆ ನುಗ್ಗಿದ ಬಸ್- ಅದೃಷ್ಟವಶಾತ್ ಪ್ರಯಾಣಿಕರು ಸೇಫ್
ಆನೇಕಲ್: ಬ್ರೇಕ್ ಫೇಲಾಗಿ ರಸ್ತೆ ಬದಿಯ ಕಂದಕಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ನುಗ್ಗಿರುವ ಘಟನೆ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಹರಪ್ಪನಹಳ್ಳಿ ಬಳಿ...
ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಸಿಗುತ್ತಿದೆ ಮುಕ್ತಿ
ಬೆಂಗಳೂರು: ರಾಜ್ಯ ರಾಜಧಾನಿಯ ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಮುಕ್ತಿ ಸಿಗುತ್ತಿದೆ. ಹೌದು! ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆ ಉದ್ಘಾಟನೆ ಆಗುತ್ತಿದೆ. ಇಂದು...
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...