ಇದೇ ತಿಂಗಳು ಫ್ರೀಡಂ ಪಾರ್ಕ್ನಲ್ಲಿ EPS ಪಿಂಚಣಿದಾರರ ಬೃಹತ್ ಪ್ರತಿಭಟನೆ: ನಿವೃತ್ತರ ಸಭೆಯಲ್ಲಿ ಒಮ್ಮತದ ನಿರ್ಧಾರ


ಕೆಎಸ್ಆರ್ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ನಿವೃತ್ತರ ಹೋರಾಟದ ಇದೇ ಮೇ ತಿಂಗಳಿನಲ್ಲಿ ನಗರದ ಫ್ರೀಡಂ ಪಾರ್ಕ್ನಲ್ಲಿ ನಮ್ಮ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಬಿಎಂಟಿಸಿ & ಕೆಎಸ್ಆರ್ಟಿಸಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ನಿನ್ನೆ ಅಂದರೆ ಭಾನುವಾರ ಮೇ 4ರ ಬೆಳಗ್ಗೆ ಲಾಲ್ಬಾಗ್ ಆವರಣದಲ್ಲಿ ಆಯೋಜಿಸಿದ್ದ ಇಪಿಎಸ್ ಪಿಂಚಣಿದಾರರ 88ನೇ ಮಾಸಿಕ ಸಭೆ ಭಾಗವಹಿಸಿದ್ದ ಎಲ್ಲ ನಿವೃತ್ತ ನೌಕರರು ಈ ನಿರ್ಧಾರ ತೆಗೆದುಕೊಳ್ಳಲು ಒಮ್ಮತದಿಂದ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ಇವರು ಎಲ್ಲ ಇಪಿಎಸ್ ನಿವೃತ್ತರನ್ನು ಒಗ್ಗೂಡಿಸಿ, ದಶಕದಿಂದ ನಡೆಸಿದ ಹೋರಾಟದ ಸಂಪೂರ್ಣ ಚಿತ್ರಣವನ್ನು ಮುಂದಿನ ಪ್ರತಿಭಟನೆಯಲ್ಲಿ ತೆರೆದಿಡುವ ಮೂಲಕ ಸರ್ಕಾರ ನಡೆಯನ್ನು ಖಂಡಿಸುವುದಾಗಿ ತಿಳಿಸಿದರು.
ನಾವು ಕೂಡ ದಶಕದಿಂದ ಇಂದಾಗುತ್ತದೆ ನಾಳೆ ನಮ್ಮ ಬೇಡಿಕೆ ಈಡೇರುತ್ತದೆ ಎಂದು ಚಾತಕಪಕ್ಷಿಯಂತೆ ಕಾದು ಕುಳಿತ್ತಿದ್ದೆವೆ. ಈ ಕಾಯುವಿಕೆಯಲ್ಲೆ ಈಗಾಗಲೇ ಹಲವಾರು ನಮ್ಮ ಇಳಿವಯಸ್ಸಿನ ಸಹೋದ್ಯೋಗಿಗ:ನ್ನು ಕಳೆದುಕೊಂಡಿದ್ದೇವೆ. ಆದರೆ ಸರ್ಕಾರ ಮಾತ್ರ ಈವರೆಗೂ ಹಿರಿಯರ ಭಾವನೆ ಮತ್ತು ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದಿರುವುದು ಭಾರಿ ಖೇದಕರ ಸಂಗತಿ ಎಂದು ಹೇಳಿದರು.
ಇನ್ನು ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ಬಣ್ಣ ಮಾತನಾಡಿ, ನಮ್ಮ ಸಂಘರ್ಷ ಮುಗಿಯುವ ಲಕ್ಷಣ ಕಂಡು ಬರುತ್ತಿಲ್ಲ. ಏಕೆಂದರೆ ಇಪಿಎಫ್ಒ ಅಧಿಕಾರಿಗಳು ಪೂರ್ವಗ್ರಹ ಪೀಡಿತರಾಗಿದ್ದು, ನಮಗೆಲ್ಲರಿಗೂ ಅಧಿಕ ಪಿಂಚಣಿಯನ್ನು ನಿರಾಕರಿಸಿ, ಹಿಂಬರ ನೀಡಿದ್ದಾರೆ. ಆದರೂ ನಾವು ಅಂತಿಮ ಗುರಿ ಮುಟ್ಟುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.
ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಟ್ರಸ್ಟ್ ಅಧ್ಯಕ್ಷ ಬ್ರಹ್ಮಚಾರಿ ಮಾತನಾಡಿ, ಇಪಿಎಫ್ಒ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ನಾವೆಲ್ಲರೂ “ದೆಹಲಿ ಯಾತ್ರೆ” ಕೈಗೊಳ್ಳುವುದು ಒಂದೇ ಮಾರ್ಗ, ರೈತ ಚಳವಳಿಯ ಮಾದರಿಯಲ್ಲಿ ನಮ್ಮ ಹೋರಾಟವನ್ನು ಮಾಡಿದಲ್ಲಿ, ಜಯ ಶತಸಿದ್ಧ ಎಂದರು.
ರಾಷ್ಟ್ರೀಯ ಸಂಘರ್ಷ ಸಮಿತಿ, ರಾಜ್ಯ ಖಜಾಂಚಿ, ಕುಲಕರ್ಣಿ ಮಾತನಾಡಿ, ದೇಶಾದ್ಯಂತ ಇರುವ ಎಲ್ಲ 78 ಲಕ್ಷ ಇಪಿಎಸ್ ನಿವೃತ್ತರಿಗೆ ಕನಿಷ್ಠ ಮಾಸಿಕ ₹7500 ಅಥವಾ ₹5000/- + ಭತ್ಯೆ ನೀಡಿದಲ್ಲಿ, ಕೇಂದ್ರ ಸರ್ಕಾರಕ್ಕೆ ಇದರಿಂದ ಹೆಚ್ಚಿನ ಹೊರೆ ಉಂಟಾಗುವುದಿಲ್ಲ ಹಾಗೂ ಇದನ್ನು ಭರಿಸುವ ಮಾರ್ಗೋಪಾಯಗಳ ಬಗ್ಗೆ ಇಪಿಎಫ್ಒ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡುತ್ತೇವೆ ಎಂದು ತಿಳಿಸಿದರು.

ಸಭೆಗೆ ಅತಿಥಿಯಾಗಿ ಸಾಮಾಜಿಕ ಕಾರ್ಯಕರ್ತ ಚಂದ್ರೇಗೌಡ ಸ್ವಯಂ ಪ್ರೇರಿತರಾಗಿ ಆಗಮಿಸಿದ್ದು, ಇಪಿಎಸ್ ನಿವೃತ್ತರ ಕಷ್ಟ ಕಾರ್ಪಣ್ಯಗಳ ಬಗ್ಗೆ ತನಗೆ ಸಂಪೂರ್ಣ ಅರಿವಿದ್ದು, ಈ ಹೋರಾಟದ ಭಾಗವಾಗಿ ತನ್ನನ್ನು ಸಹ ಪರಿಗಣಿಸಬೇಕೆಂದು ಸಭೆಯಲ್ಲಿ ಮನವಿ ಮಾಡಿದರು.
ಸಂಘದ ಪದಾಧಿಕಾರಿಗಳಾದ ನಾಗರಾಜ, ರುಕ್ಮೇಶ್ ಹಾಗೂ ಕೆಎಸ್ಆರ್ಟಿಸಿ ಚಿಕ್ಕಬಳ್ಳಾಪುರ ನಿವೃತ್ತ ನೌಕರರ ಟ್ರಸ್ಟ್ ಖಜಾಂಚಿ ರಮೇಶ್ ಭಾಗವಹಿಸಿದ್ದು, ಸಭೆಯ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ಸಭೆಯ ನಿರ್ಣಯಗಳ ಬಗ್ಗೆ ಸದಸ್ಯರು ಹರ್ಷ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಭಾನುವಾರದ ಬೆಳಗಿನ ನಿರ್ಮಲ ವಾತಾವರಣದಲ್ಲಿ, ಲಾಲ್ಬಾಗ್ ನಡಿಗೆದಾರರ ಜತೆ ಹೆಜ್ಜೆ ಹಾಕುತ್ತಾ, ತನ್ನ ಸಹಪಾಠಿಗಳನ್ನು ಕಂಡೊಡನೆ, ಎಲ್ಲಿಲ್ಲದ ನವೊಲ್ಲಾಸದಿಂದ, ಸುಂದರ ತಾಣದಲ್ಲಿ ಸಮಯ ಕಳೆದಿದ್ದೆ ತಿಳಿಯಲಿಲ್ಲ ಎಂದು ಇಳಿವಯಸ್ಸಸಿನಲ್ಲೂ ನವಯುಕರಂತೆ ಒಬ್ಬದಿಗೊಬ್ಬರು ಕುಶಲೋಪರಿ ಹಂಚಿಕೊಂಡರು.
ಸಭೆಯ ಪ್ರಾರಂಭಕ್ಕೂ ಮೊದಲು ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ಗುಂಡೇಟಿನಿಂದ ಮಡಿದ 26 ಪ್ರವಾಸಿಗರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘಟನಾ ಕಾರ್ಯದರ್ಶಿ ಮನೋಹರ್ ಅವರು ಎಲ್ಲ ಇಪಿಎಸ್ ನಿವೃತ್ತರು ಹಾಗೂ ಮುಖಂಡರಿಗೆ ಸ್ವಾಗತಿಸುವ ಮೂಲಕ ಸಭೆಗೆ ಚಾಲನೆ ನೀಡಿದರು.
Related
