NEWSನಮ್ಮಜಿಲ್ಲೆನಮ್ಮರಾಜ್ಯ

ತೆಲಂಗಾಣ ಸಾರಿಗೆ ಮಾದರಿ ನಿಯಮಗಳು KSRTC ನಿಗಮಗಳಲ್ಲೂ ಜಾರಿಯಾದರೆ ನೌಕರರು ತುಸು ನಿರಾಳ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾಗಿ ನಾಡಿನ ಮಹಿಳೆಯರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣ ಆರಂಭಿಸಿದ ದಿನದಿಂದ ಈವರೆಗೂ ನೂರಾರು ಚಾಲನಾ ಸಿಬ್ಬಂದಿಗಳು ಅಮಾನತು, ದಂಡ ಕಟ್ಟಿದ್ದಾರೋ. ಆದರೆ, ಟಿಕೆಟ್‌ ರಹಿತ ಪ್ರಯಾಣಿಕ ಮಹಿಳೆಯರಿಗೆ ಮಾತ್ರ ಯಾವುದೆ ದಂಡ ವಿಧಿಸಿಲ್ಲ.

ಆದರೆ, ತೆಲಂಗಾಣದಲ್ಲಿ ಇದೇ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಡಿ.9ರಿಂದ ತೆಲಂಗಾಣ ರಾಜ್ಯದ ಮಹಿಳೆಯರಿಗೂ ಟಿಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗಿದೆ. ಆದರೆ, ಅಲ್ಲಿನ ಪ್ರಯಾಣಿಕ ಮಹಿಳೆಯರು ಟಿಕೆಟ್‌ ರಹಿತ ಪ್ರಯಾಣ ಮಾಡಿದರೆ ಅವರಿಗೆ 500 ರೂ. ದಂಡ ವಿಧಿಸಲಾಗುವುದು ಎಂದು ನಿಗಮದ ಎಂಡಿ ಸಜ್ಜನರ್‌ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ಎಂಡಿ ಅವರ ರೀತಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಎಂಡಿ ಅನ್ಬುಕುಮಾರ್‌ ಅವರು ಕೂಡ ಈ ರೀತಿ ಆದೇಶ ಹೊರಡಿಸಿದ್ದರೆ, ಕೆಲ ಮಹಿಳಾ ಪ್ರಯಾಣಿಕರು ಮಾಡಿದ ತಪ್ಪಿಗೆ ಅಮಾನತು, ದಂಡದಂಥ ಶಿಕ್ಷೆ ಅನುಭವಿಸುವುದು ರಾಜ್ಯದ ಸಾರಿಗೆ ನೌಕರರಿಗೂ ತಪ್ಪುತ್ತಿತ್ತು.

ಆದರೆ, ಈ ರೀತಿಯ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡದೆ ಬರಿ ಸಾರಿಗೆ ನಿಗಮಗಳ ನೌಕರರ ಮೇಲೆ ಪ್ರತಿಯೊಂದನ್ನು ಹೊರಿಸಿ ಅವರನ್ನು ಮಾನಸಿಕವಾಗಿ ಹಿಂಸೆ ನೀಡುತ್ತಿರುವುದಲ್ಲದೆ. ಅವರಿಗೆ ಅಮಾನತು, ದಂಡ ಕಟ್ಟುವ ಶಿಕ್ಷೆಯನ್ನು ವಿಧಿಸುತ್ತಿರವುದು ಎಷ್ಟರ ಮಟ್ಟಿಗೆ ಸರಿ. ಇನ್ನಾದರೂ ಈ ಬಗ್ಗೆ ಎಂಡಿ ಅನ್ಬುಕುಮಾರ್‌ ಅವರು ಪ್ರತಿಯೊಂದಕ್ಕೂ ಸರ್ಕಾರದ ಆಜ್ಞೆಗಾಗಿ ಕಾಯದೆ ತಮ್ಮ ಅಧಿಕಾರ ವ್ಯಾಪ್ತಿಗೆ ಬರುವ ಅಧಿಕಾರವನ್ನು ಚಲಾಯಿಸಿ ಪ್ರಯಾಣಿಕ ಮಹಿಳೆಯರ ಜವಾಬ್ದಾರಿ ಏನು ಎಂಬುದನ್ನು ತೋರಿಸಬೇಕಿದೆ.

ಈಗಾಗಾಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳಲ್ಲಿ ನೌಕರರಿಗಷ್ಟೇ ನಿಯಮಗಳಡಿ ಶಿಕ್ಷೆ ವಿಧಿಸಲಾಗುತ್ತಿದೆ. ಆದರೆ, ತಪ್ಪು ಮಾಡಿದ ಪ್ರಯಾಣಿಕ ಮಹಿಳೆಯರಿಗೆ ಯಾವುದೆ ದಂಡ ವಿಧಿಸಿಲ್ಲ ಇದರಿಂದ ಬಹುತೇಕ ಮಹಿಳೆಯರು ನಿರ್ವಾಹಕರ ಜತೆಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ.

ಅಲ್ಲದೆ ಕಂಡಕ್ಟರ್‌ ಟಿಕೆಟ್‌ ತೆಗೆದುಕೊಳ್ಳಿ ಎಂದು ಹಲವಾರು ಬಾರಿ ಹೇಳಿದರೂ ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಕುಳಿತಿರುತ್ತಾರೆ. ಇನ್ನು ಕಂಡಕ್ಟರ್‌ಗಳೇ ಹತ್ತಿರ ಹೋಗಿ ನೀವು ಟಿಕೆಟ್‌ ತೆಗೆದುಕೊಂಡಿದ್ದಾರ ಎಂದು ಕೇಳಿದಾಗ ಇಲ್ಲ ಕೊಡಿ ಎನ್ನುತ್ತಾರೆ ಎಂಬ ಆರೋಪವು ಇದೆ. ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸುವ ಮಹಿಳಾ ಪ್ರಯಾಣಿಕರಿಗೆ ದಂಡದ ಬಿಸಿ ಮುಟ್ಟಿಸಿದರೆ ನಂತರ ಬಸ್‌ ಹತ್ತಿದ ಕೂಡಲೇ ಟಿಕೆಟ್‌ ತೆಗೆದುಕೊಳ್ಳುತ್ತಾರೆ.

ಹೀಗಾಗಿ ಇನ್ನಾದರ ನಿಗಮದ ತೆಲಂಗಾಣ ಟಿಎಸ್‌ಆರ್‌ಟಿಸಿ ಎಂಡಿ ಸಜ್ಜನರ್‌ ತೆಗೆದುಕೊಂಡ ರೀತಿ ಕರ್ನಾಟಕ ರಾಜ್ಯ ರಸ್ತೆಯ ಎಂಡಿ ಅನ್ಬುಕುಮಾರ್‌ ಅವರು ತೆಗೆದುಕೊಂಡರೆ, ಚಾಲನಾ ಸಿಬ್ಬಂದಿ ಮತ್ತು ಪ್ರಯಾಣಿಕ ಮಹಿಳೆಯರ ನಡುವೆ ಆಗುತ್ತಿರುವ ಘರ್ಷಣೆ ಮತ್ತು ಚಾಲನಾ ಸಿಬ್ಬಂದಿಗೆ ಆಗುತ್ತಿರುವ ಶಿಕ್ಷೆ ಕಡಿಮೆಯಾಗಬಹುದು.

ಈ ನಿಯಮ ಕರ್ನಾಟಕದಲ್ಲಿ ಬರುವುದಿಲ್ಲ. ಒಂದು ವೇಳೆ ಸರ್ಕಾರವೇ ಈ ರೀತಿಯ ನಿಯಮ ಜಾರಿ ಮಾಡಲು ಸಿದ್ದವಾದರೆ ಇಲ್ಲಿನ ಕೆಲವು ಸಂಘಟನೆಗಳು ಹಾಗೂ ಕೆಲವು ಅಧಿಕಾರಿಗಳು ಕೂಡಿ ಏನಾದರೂ ಸಬೂಬು ಹೇಳಿ ಇದನ್ನು ತಡೆಯುತ್ತಾರೆ. ಏಕೆಂದರೆ ಇಂಥಾ ಸುತ್ತೋಲೆ ಗಳು ಜಾರಿ ಆದರೆ ನಿರ್ವಾಹಕರ ಮೇಲೆ ಯಾವುದೇ ಪ್ರಕರಣ ದಾಖಲಾಗುವುದಿಲ್ಲ. ಪ್ರಕರಣ ದಾಖಲಾಗದಿದ್ದರೆ ಅಮಾನತು ಮಾಡಲು ಸಾದ್ಯವಿಲ್ಲ. ಅಮಾನತು ಆಗದಿದ್ದರೆ ಆ ನಿರ್ವಾಹಕ ಅಧಿಕಾರಿಗಳಿಗೆ ಯಾವುದೇ ಲಂಚ ನೀಡುವ ಪ್ರಮೇಯವೇ ಬರುವುದಿಲ್ಲ. ಇದು ವಾಸ್ತವ.

l ಹೆಸರೇಳಲಿಚ್ಛಿಸದ ಸಾರಿಗೆ ನೌಕರ

Leave a Reply

error: Content is protected !!
LATEST
KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ ದೀಪಾವಳಿ ಹಬ್ಬ ಹಿನ್ನೆಲೆ KKRTC ನೌಕರರಿಗೆ ಅ.29ರಂದೇ ವೇತನ ಕೊಡಲು ಎಂಡಿ ರಾಚಪ್ಪ ನಿರ್ದೇಶನ