NEWSಉದ್ಯೋಗನಮ್ಮರಾಜ್ಯಶಿಕ್ಷಣ-

ಡಾ.ಅಶ್ವಿನಿ ಅವರ ಪಾಠಕೇಳಿ 101ನೇರ‍್ಯಾಂಕ್‌ ಪಡೆದ ಕನ್ನಡತಿ ಸೌಭಾಗ್ಯ ಬೀಳಗಿಮಠ

ವಿಜಯಪಥ ಸಮಗ್ರ ಸುದ್ದಿ

ಧಾರವಾಡ: ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶ (UPSC Results 2023) ಇಂದು ಪ್ರಕಟವಾಗಿdfdu, ದಾವಣಗೆರೆ ನಿವಾಸಿ ಸೌಭಾಗ್ಯ ಬೀಳಗಿಮಠ ಅವರು ತಮ್ಮ ಎರಡನೇ ಪ್ರಯತ್ನದಲ್ಲೇ 101ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ.

ದಾವಣಗೆರೆ ಮೂಲದ ಸೌಭಾಗ್ಯ ಬೀಳಗಿಮಠ ಅವರು ಬಿಎಸ್ಸಿ ಅಗ್ರಿಕಲ್ಚರ್ ಎರಡನೇ ವರ್ಷದಲ್ಲಿದ್ದಾಗಲೇ ಕೋಚಿಂಗ್ ಆರಂಭಿಸಿದ್ದರಂತೆ. ಕೃಷಿ ವಿವಿಯ ಡಾ.ಅಶ್ವಿನಿ ಸಹಾಯಕ ಪ್ರಾಧ್ಯಾಪಕಿಯವರ ಜತೆ ಕೋಚಿಂಗ್ ಆರಂಭಿಸಿದ್ದರು. ಯುಪಿಎಸ್‌ಸಿ ಕುರಿತು ಡಾ.ಅಶ್ವಿನಿ ಅವರು ಸೌಭಾಗ್ಯಗೆ ತರಬೇತಿ ನೀಡುತ್ತಿದ್ದರಂತೆ.

2015 ರಲ್ಲಿ ಡಾ.ಅಶ್ವಿನಿ ಯುಪಿಎಸ್‌ಸಿ ಪಾಸ್ ಮಾಡಿಕೊಂಡಿದ್ದರು. ಡಾ.ಅಶ್ವಿನಿ ಎಂ. ಧಾರವಾಡದ ನಾರಾಯಣಪುರದ ನಿವಾಸಿ. 3 ವರ್ಷದಿಂದ ಸೌಭಾಗ್ಯ ಡಾ.ಅಶ್ವಿನಿ ಅವರ ಮನೆಯಲ್ಲೇ ಉಳಿದುಕೊಂಡು ತರಬೇತಿ ಪಡೆದುಕೊಳ್ಳುತ್ತಿದ್ದರಂತೆ. ಸೌಭಾಗ್ಯ ಅವರು ಯುಪಿಎಸ್‌ಸಿ ಪರೀಕ್ಷೆಗಾಗಿ ಬೇರೆ ಎಲ್ಲೂ ತರಬೇತಿ ಪಡೆಯದೇ ಕೇವಲ ಉಪನ್ಯಾಸಕಿ ನೀಡಿದ ಕೋಚಿಂಗ್ ಮೇಲೆಯೇ ರ‍್ಯಾಂಕ್‌​ ಪಡೆದುಕೊಂಡಿದ್ದಾರೆ.

ಇನ್ನು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಸೌಭಾಗ್ಯ ಬೀಳಗಿಮಠ, ಈ ಬಾರಿಯ UPSC ಪರೀಕ್ಷೆಯಲ್ಲಿ 101ನೇ ರ‍್ಯಾಂಕಿಂಗ್​ ಪಡೆದುಕೊಂಡಿದ್ದೇನೆ. ನನ್ನ ಕುಟುಂಬಸ್ಥರು, ಶಿಕ್ಷಕರು ಹಾಗೂ ಸ್ನೇಹಿತರು ಫುಲ್​ ಖುಷ್​ ಆಗಿದ್ದಾರೆ.

ಇನ್ನು ನಾನು ಯಾವುದೇ ಕೋಚಿಂಗ್​ಗೆ ಹೋಗಿಲ್ಲ. ನಮ್ಮ ಮೇಡಂ ಮನೆಯಲ್ಲೇ ಇದ್ದುಕೊಂಡು ನಾನು UPSC ಪಾಸ್ ಮಾಡಿಕೊಂಡಿದ್ದೇನೆ. ನಾನು ಪಾಸ್​ ಆದ ವಿಚಾರ ಕೇಳಿ ನಮ್ಮ ಮೇಡಂ ಖುಷಿಯಾಗಿದ್ದಾರೆ. ಡಾ.ಅಶ್ವಿನಿ ಅವರು ನನಗೆ ತರಬೇತಿ ನೀಡಿದ್ದರಿಂದ ಎರಡನೇ ಪ್ರಯತ್ನದಲ್ಲೇ ರ‍್ಯಾಂಕ್​ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

Leave a Reply

error: Content is protected !!
LATEST
ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಮಕ್ಕಳಿಂದ ಅರ್ಜಿ ಆಹ್ವಾನ: ಷರತ್ತು ಅನ್ವಯ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ- ಬೆಂಗಳೂರಿಗೂ ಆಗಮಿಸಲಿದ್ದಾನೆ ವರುಣ