Please assign a menu to the primary menu location under menu

NEWSಉದ್ಯೋಗನಮ್ಮರಾಜ್ಯಶಿಕ್ಷಣ-

ಡಾ.ಅಶ್ವಿನಿ ಅವರ ಪಾಠಕೇಳಿ 101ನೇರ‍್ಯಾಂಕ್‌ ಪಡೆದ ಕನ್ನಡತಿ ಸೌಭಾಗ್ಯ ಬೀಳಗಿಮಠ

ವಿಜಯಪಥ ಸಮಗ್ರ ಸುದ್ದಿ

ಧಾರವಾಡ: ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶ (UPSC Results 2023) ಇಂದು ಪ್ರಕಟವಾಗಿdfdu, ದಾವಣಗೆರೆ ನಿವಾಸಿ ಸೌಭಾಗ್ಯ ಬೀಳಗಿಮಠ ಅವರು ತಮ್ಮ ಎರಡನೇ ಪ್ರಯತ್ನದಲ್ಲೇ 101ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ.

ದಾವಣಗೆರೆ ಮೂಲದ ಸೌಭಾಗ್ಯ ಬೀಳಗಿಮಠ ಅವರು ಬಿಎಸ್ಸಿ ಅಗ್ರಿಕಲ್ಚರ್ ಎರಡನೇ ವರ್ಷದಲ್ಲಿದ್ದಾಗಲೇ ಕೋಚಿಂಗ್ ಆರಂಭಿಸಿದ್ದರಂತೆ. ಕೃಷಿ ವಿವಿಯ ಡಾ.ಅಶ್ವಿನಿ ಸಹಾಯಕ ಪ್ರಾಧ್ಯಾಪಕಿಯವರ ಜತೆ ಕೋಚಿಂಗ್ ಆರಂಭಿಸಿದ್ದರು. ಯುಪಿಎಸ್‌ಸಿ ಕುರಿತು ಡಾ.ಅಶ್ವಿನಿ ಅವರು ಸೌಭಾಗ್ಯಗೆ ತರಬೇತಿ ನೀಡುತ್ತಿದ್ದರಂತೆ.

2015 ರಲ್ಲಿ ಡಾ.ಅಶ್ವಿನಿ ಯುಪಿಎಸ್‌ಸಿ ಪಾಸ್ ಮಾಡಿಕೊಂಡಿದ್ದರು. ಡಾ.ಅಶ್ವಿನಿ ಎಂ. ಧಾರವಾಡದ ನಾರಾಯಣಪುರದ ನಿವಾಸಿ. 3 ವರ್ಷದಿಂದ ಸೌಭಾಗ್ಯ ಡಾ.ಅಶ್ವಿನಿ ಅವರ ಮನೆಯಲ್ಲೇ ಉಳಿದುಕೊಂಡು ತರಬೇತಿ ಪಡೆದುಕೊಳ್ಳುತ್ತಿದ್ದರಂತೆ. ಸೌಭಾಗ್ಯ ಅವರು ಯುಪಿಎಸ್‌ಸಿ ಪರೀಕ್ಷೆಗಾಗಿ ಬೇರೆ ಎಲ್ಲೂ ತರಬೇತಿ ಪಡೆಯದೇ ಕೇವಲ ಉಪನ್ಯಾಸಕಿ ನೀಡಿದ ಕೋಚಿಂಗ್ ಮೇಲೆಯೇ ರ‍್ಯಾಂಕ್‌​ ಪಡೆದುಕೊಂಡಿದ್ದಾರೆ.

ಇನ್ನು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಸೌಭಾಗ್ಯ ಬೀಳಗಿಮಠ, ಈ ಬಾರಿಯ UPSC ಪರೀಕ್ಷೆಯಲ್ಲಿ 101ನೇ ರ‍್ಯಾಂಕಿಂಗ್​ ಪಡೆದುಕೊಂಡಿದ್ದೇನೆ. ನನ್ನ ಕುಟುಂಬಸ್ಥರು, ಶಿಕ್ಷಕರು ಹಾಗೂ ಸ್ನೇಹಿತರು ಫುಲ್​ ಖುಷ್​ ಆಗಿದ್ದಾರೆ.

ಇನ್ನು ನಾನು ಯಾವುದೇ ಕೋಚಿಂಗ್​ಗೆ ಹೋಗಿಲ್ಲ. ನಮ್ಮ ಮೇಡಂ ಮನೆಯಲ್ಲೇ ಇದ್ದುಕೊಂಡು ನಾನು UPSC ಪಾಸ್ ಮಾಡಿಕೊಂಡಿದ್ದೇನೆ. ನಾನು ಪಾಸ್​ ಆದ ವಿಚಾರ ಕೇಳಿ ನಮ್ಮ ಮೇಡಂ ಖುಷಿಯಾಗಿದ್ದಾರೆ. ಡಾ.ಅಶ್ವಿನಿ ಅವರು ನನಗೆ ತರಬೇತಿ ನೀಡಿದ್ದರಿಂದ ಎರಡನೇ ಪ್ರಯತ್ನದಲ್ಲೇ ರ‍್ಯಾಂಕ್​ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

Leave a Reply

error: Content is protected !!
LATEST
ನಮ್ಮ ಕ್ಲಿನಿಕ್ ಹೆಸರಲ್ಲಿ ನೂರಾರು ಕೋಟಿ ಗುಳುಂ: ಎಎಪಿ ಉಷಾ ಮೋಹನ್ KSRTC- ಫೋನ್‌ ಪೇ ಹಗರಣ- ₹20 ಸಾವಿರ ಲಂಚ ಕೊಟ್ಟ ಡಿಸಿ, ಡಿಟಿಒ ಅಮಾನತುಮಾಡಿ: ಎಂಡಿ ಭೇಟಿ ಮಾಡಿದ ನಾಗರಾಜ್‌ ಇಂದು ಸಾರಿಗೆ ನಿಗಮಗಳಲ್ಲಿ ಚಾಲಕರ ದಿನದ ಸಂಭ್ರಮ - ಘಟಕಗಳಲ್ಲಿ ಹೂಗುಚ್ಛ ನೀಡಿ ಶುಭ ಕೋರಿದ ಸಹೋದ್ಯೋಗಿಗಳು KSRTC ಬಸ್ ನಿಲ್ದಾಣದ ಅವ್ಯವಸ್ಥೆ ಕಂಡು ಡಿಸಿ ಬೆವರಿಳಿಸಿದ  ಉಪಲೋಕಾಯುಕ್ತರು BMTC: ಅತೀ ಶೀಘ್ರದಲ್ಲೇ ಸಂಸ್ಥೆಯ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ- ಎಂಡಿ ರಾಮಚಂದ್ರನ್‌ KKRTC ಬಸ್‌-ಟ್ರ್ಯಾಕ್ಟರ್‌ ನಡುವೆ ಡಿಕ್ಕಿ: ಯುವತಿ ಸಾವು, 18ಮಂದಿಗೆ ಗಾಯ KSRTC: ಭ್ರಷ್ಟಾಚಾರ ಬಯಲು ಮಾಡದಂತೆ ದೂರುದಾರನ ಬಾಯಿ ಮುಚ್ಚಿಸಲು ATI ಮೂಲಕ ₹20 ಸಾವಿರ ಕೊಟ್ಟರೇ ಡಿಸಿ, ಡಿಟಿಒ! ಮಗನ ಎದುರೇ ಪೆಟ್ರೋಲ್‌ ಸುರಿದು ಪತ್ನಿಗೆ ಬೆಂಕಿ ಹಚ್ಚಿದ KSRTC ಮೆಕ್ಯಾನಿಕ್‌ ಚಾಲಕನ ನಿಯಂತ್ರಣ ತಪ್ಪಿ ಹಣ್ಣು ತರಕಾರಿ ತುಂಬಿದ ಲಾರಿ ಪಲ್ಟಿ: 14 ಜನ ಮೃತ 2026ಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಜಾರಿ ಸಾಧ್ಯತೆ: ರಾಜ್ಯಾಧ್ಯಕ್ಷ ಷಡಾಕ್ಷರಿ