ಅಪರೇಷನ್ ಸಿಂಧೂರ ಬಳಿಕ ಶಬ್ದಾತೀತ ವೇಗದ ಬ್ರಹ್ಮೋಸ್ ಖರೀದಿಗೆ ಮುಗಿಬೀಳುತ್ತಿವೆ ಏಷ್ಯಾ, ಮಧ್ಯಪ್ರಾಚ್ಯ ಸೇರಿ ಹಲವು ದೇಶಗಳು

ಬೆಂಗಳೂರು: ಭಾರತವು ಅಪರೇಷನ್ ಸಿಂಧೂರದಲ್ಲಿ ಪಡೆದ ಯಶಸ್ಸಿಗೆ ಶಬ್ದಾತೀತವೇಗದ ಬ್ರಹ್ಮೋಸ್ ಕ್ಷಿಪಣಿ ಬಳಕೆ ಮಾಡಿದ್ದೇ ಕಾರಣವಾಗಿದೆ ಎಂದು ಈಗಾಗಲ್ಲೆ ಎಲ್ಲೆಡೆ ಹೇಳಲಾಗುತ್ತಿದೆ. ಹೀಗಾಗಿ ಈಗ ಇದು ಜಗತ್ತಿನ ಗಮನವನ್ನು ಸೆಳೆಯುತ್ತಿದ್ದು, ಏಷ್ಯಾ, ಮಧ್ಯಪ್ರಾಚ್ಯ ಮತ್ತು ಲ್ಯಾಟಿನ್ ಅಮೆರಿಕದಂತ ದೇಶಗಳು ಈಗ ಈ ಶಕ್ತಿಶಾಲಿ ಕ್ಷಿಪಣಿ ಖರೀದಿಸಲು ಆಸಕ್ತಿ ತೋರಿಸುತ್ತಿವೆಯಂತೆ.
ಬ್ರಹ್ಮೋಸ್ ಕ್ಷಿಪಣಿ ಎಂದರೇನು?: ಬ್ರಹ್ಮೋಸ್ ಒಂದು ದೀರ್ಘ ವ್ಯಾಪ್ತಿಯ ಶಬ್ದಾತೀತ ವೇಗದ ಸಮರ ಕ್ಷಿಪಣಿಯಾಗಿದ್ದು ಇದನ್ನು ಭಾರತದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ಮತ್ತು ರಷ್ಯಾದ ಎನ್ಪಿಒಎಂ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇದನ್ನು ನೆಲದಿಂದ, ಗಾಳಿಯಲ್ಲಿ, ಸಮುದ್ರದಿಂದ ಅಥವಾ ಜಲಾಂತರ್ಗಾಮಿಯಿಂದ ಹೇಗೆ ಬೇಕಾದರೂ ಉಡಾವಣೆ ಮಾಡಬಹುದಾಗಿದೆ. ಮಾರ್ಚ್ 3 ರವರೆಗಿನ ವೇಗದಲ್ಲಿ ಇದು ಪಯಣಿಸಬಲ್ಲದು. ಇದು ಫೈರ್ ಆಂಡ್ ಫರ್ಗೆಟ್ ಮಾದರಿಯನ್ನು ಹೈ ಪ್ರಿಸಿಷನ್ ಅನುಸರಿಸುತ್ತದೆ.
ಬ್ರಹ್ಮೋಸ್ ಕೆಲಸ ಮಾಡುವ ವಿಧಾನ: ಈ ಕ್ಷಿಪಣಿ ಎರಡು ಹಂತಗಳಲ್ಲಿ ಚಲಿಸುತ್ತದೆ. ಉಡಾವಣೆಗೆ ಘನ ಬೂಸ್ಟರ್ ಅನ್ನು ಮತ್ತು ಅತಿವೇಗದ ಚಲನೆಗೆ ದ್ರವ ಲ್ಯಾಮ್ಜೆಟ್ ಅನ್ನು ಇದು ಬಳಕೆ ಮಾಡುತ್ತದೆ. 15 ಕಿ.ಮೀ. ಎತ್ತರದಲ್ಲಿ ಹಾರುವ ಇದು ನೆಲದಿಂದ ಕೇವಲ 10 ಮೀಟರ್ ಎತ್ತರದಲ್ಲೂ ಹಾರುವ ಸಾಮರ್ಥ್ಯ ಹೊಂದಿದೆ. ಇದನ್ನು ಪತ್ತೆ ಮಾಡುವುದು ಕಷ್ಟಕರ. ತಡೆಯುವುದು ಇನ್ನೂ ಕ್ಲಷ್ಟವಾಗಿದೆ.
ಫಿಲಿಪ್ಪಿನ್ಸ್: ಮಾಧ್ಯಮ ವರದಿಗಳ ಪ್ರಕಾರ ಭಾರತವು 2025 ರ ಏಪ್ರಿಲ್ನಲ್ಲಿ ಫಿಲಿಫೀನ್ಸ್ಗೆ 375 ದಶಲಕ್ಷ ಡಾಲರ್ಗಳ ಒಪ್ಪಂದದಡಿ ಬ್ರಹ್ಮೋಸ್ ಕ್ಷಿಪಣಿಯ ಎರಡನೇ ತಂಡವನ್ನು ಕಳುಹಿಸಿಕೊಟ್ಟಿದೆ. ಇದು ಭಾರತವನ್ನು ಪ್ರಥಮ ಪ್ರಮುಖ ಕ್ಷಿಪಣಿ ರಫ್ತುದಾರ ದೇಶವನ್ನಾಗಿ ಮಾಡಿದೆ ಮತ್ತು ಈ ವಿಶ್ವಾಸಾರ್ಹ ದೀರ್ಘ ಶ್ರೇಣಿಯ ಶಸ್ತ್ರಾಸ್ತ್ರಕ್ಕೆ ಜಾಗತಿಕ ಖರೀದಿದಾರರಿಗೆ ಬಾಗಿಲು ತೆರೆದಿದೆ.
ವಿಯೆಟ್ನಾಂ: ವಿಯೆಟ್ನಾಂ ತನ್ನ ನೌಕಾಪಡೆ ಬಲವರ್ಧನೆಗಾಗಿ ಬ್ರಹ್ಮೋಸ್ ಕ್ಷಿಪಣಿಯನ್ನು 700 ದಶಲಕ್ಷ ಡಾಲರ್ ಒಪ್ಪಂದದಡಿ ಖರೀದಿಸಲಿದೆ. ಮಲೇಶಿಯಾ ತನ್ನ ಸು-30 ಜೆಟ್ಗಳು ಮತ್ತು ಕೆಡಾಹ್ ವರ್ಗದ ಸಮರ ನೌಕೆಗಳನ್ನು ಬ್ರಹ್ಮೋಸ್ನಿಂದ ಬಲಪಡಿಸಲು ಮುಂದಾಗುವ ಸಾಧ್ಯತೆಗಳಿವೆ. ಎರಡೂ ದೇಶಗಳು ದಕ್ಷಿಣ ಚೀನಾ ಸಮುದ್ರದಲ್ಲಿ ವ್ಯಕ್ತವಾಗುವ ಬೆದರಿಕೆಗಳನ್ನು ಎದುರಿಸಲು ಬ್ರಹ್ಮೋಸ್ನಿಂದ ಸಜ್ಜಾಗುವ ಗುರಿ ಹೊಂದಿವೆ.
ಮಧ್ಯಪ್ರಾಚ್ಯ ಮತ್ತು ದಕ್ಷಿಣ ಅಮೆರಿಕ ಕ್ಯೂನಲ್ಲಿ: ಈಜಿಪ್ಟ್, ಯುಎಇ, ಸೌದಿ ಅರೇಬಿಯಾ, ಖತಾರ್, ಓಮಾನ್ ಮತ್ತು ಚಿಲಿ, ಬ್ರೆಜಿಲ್, ಅರ್ಜೆಂಟೀನಾ, ವೆನಿಜುವೆಲಾದಂತಹ ದೇಶಗಳು ಬ್ರಹ್ಮೋಸ್ನ ಕರಾವಳಿ ಮತ್ತು ನೌಕಾ ಆವೃತ್ತಿಗಳನ್ನು ಖರೀದಿಸಲು ಆಸಕ್ತಿ ತೋರಿವೆ. ಈ ನಿಟ್ಟಿನಲ್ಲಿ ಈಗಾಗಲೇ ಮಾತುಕತೆಗಳು ಪ್ರಗತಿಯಲ್ಲಿವೆ. ಭಾರತದ ಬ್ರಹ್ಮಸ್ ಅನ್ನು ಈಗ ಜಾಗತಿಕ ಗೇಮ್ ಚೇಂಜರ್ ಆಗಿ ಭಾವಿಸಲಾಗುತ್ತಿದೆ. ಆಪರೇಷನ್ ಸಿಂಧೂರದಲ್ಲಿ ಇದರ ಬಳಕೆಯಿಂದ ವಿಶ್ವಾದ್ಯಂತ ಬ್ರಹ್ಮೋಸ್ ಕ್ಷಿಪಣಿಗೆ ವ್ಯಕ್ತವಾಗಿರುವ ಬೇಡಿಕೆ ಭಾರತದ ರಕ್ಷಣಾ ಉತ್ಪನ್ನಗಳ ರಪ್ತಿನ ಹೆಚ್ಚಳ, ಸ್ವಾವಲಂಬನೆ ಮತ್ತು ಕಾರ್ಯತಂತ್ರಾತ್ಮಕ ಪ್ರಭಾವವನ್ನು ಬಿಂಬಿಸುತ್ತದೆ.
Related

You Might Also Like
ಕರ್ತವ್ಯ ಲೋಪವೆಸಗಿದ ಮೂವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ
ಬೆಂಗಳೂರು: ಬಿಬಿಎಂಪಿ ಪಶ್ಚಿಮ ವಲಯ ಮಹಾಲಕ್ಷ್ಮಿಪುರ ವಿಭಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಸಿಬ್ಬಂದಿಯನ್ನು ಕರ್ತವ್ಯ ಲೋಪವೆಸಗಿರುವ ಕಾರಣ ಕರ್ತವ್ಯದಿಂದ ಬಿಡುಗಡೆಗೊಳಿ ಪಶ್ಚಿಮ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್...
ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ: ಜಿಲ್ಲಾಧಿಕಾರಿ ಬಸವರಾಜು
10,165 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯ ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ 10.165 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯ ಇದ್ದು, ಬೇಡಿಕೆಗಿಂತ ಹೆಚ್ಚಿನ ರಸಗೊಬ್ಬರ ದಾಸ್ತಾನು ಇದೆ ಹಾಗಾಗಿ...
ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸುವ ನೌಕರರ ವಿರುದ್ಧ ಕ್ರಮ: KSRTC ಎಂಡಿ ಅಕ್ರಮ್ ಪಾಷ ಆದೇಶ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ತೀರ್ಮಾನಿಸಿರುವುದರಿಂದ ನೌಕರರು...
ಆ.5ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆ ನಾಳೆ ಖಾಸಗಿ ಬಸ್ ಮಾಲೀಕರ ಸಭೆ ಕರೆದ ಸಾರಿಗೆ ಆಯುಕ್ತರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಾರಿಗೆ ಇಲಾಖೆ ಆಯುಕ್ತರ...
ಮೊಂಡುತನ ಬಿಟ್ಟು ಸಾರಿಗೆ ನೌಕರರಿಗೆ ಕೊಡಬೇಕಿರುವುದ ಕೊಡಿ: ಅಧಿಕಾರವಿದೆ ಎಂಬ ದರ್ಪ ಬಿಡಿ ಸಿದ್ದುಜೀ- ಇದು ಶಾಶ್ವತವಲ್ಲ!
ಸಿಎಂ ಸಿದ್ದರಾಮಯ್ಯ ಸಾಹೇಬರೆ ನೀವು ಈಗ ವಕೀಲರಲ್ಲ ಸರ್ಕಾರದ ಸಂಬಳ ಪಡೆಯುವವರಲ್ಲಿ ನೀವು ಒಬ್ಬರು ಈಗ ನಿಮಗೆ ವಕೀಲ ವೃತ್ತಿ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬುದನ್ನು ಮರೆತಿರ...
ಆ.5ರಿಂದ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ: ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ನ್ಯಾಯಯುತ ಬೇಡಿಕೆಯ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ...
KSRTC ನಾಲ್ಕೂ ನಿಗಮಗಳ ನೌಕರರ ವೇತನ ಪರಿಷ್ಕರಣೆ 2027ರ ನಂತರ ಮಾಡಲು ಮಾತ್ರ ಸಾಧ್ಯ: ಪ್ರತಿಪಾದಿಸುತ್ತಿರುವ ಸಾರಿಗೆ ಇಲಾಖೆ
ಬೆಂಗಳೂರು: ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳು/ನೌಕರರ ವೇತನ ಪರಿಷ್ಕರಣೆ 2023ರ ಮಾರ್ಚ್ನಲ್ಲಿ ಶೇ.15ರಷ್ಟು ಹೆಚ್ಚಳ ಮಾಡಿರುವುದರಿಂದ ಮುಂದಿನ ಪರಿಷ್ಕರಣೆಯನ್ನು 2027ರ ನಂತರ ಮಾಡಲು ಮಾತ್ರ ಸಾಧ್ಯ ಎಂದು...
ಪ್ರಣವ್ ಮೊಹಾಂತಿ ಅವರ ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿಲ್ಲ: ಗೃಹ ಸಚಿವ ಡಾ. ಜಿ.ಪರಮೇಶ್ವರ ಸ್ಪಷ್ಟನೆ
ಬೆಂಗಳೂರು: ಕೇಂದ್ರ ಸರ್ಕಾರದ ಡೆಪ್ಯೂಟೇಷನ್ ಪಟ್ಟಿಯಲ್ಲಿ ಎಸ್ಐಟಿ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಅವರ ಹೆಸರಿದ್ದು, ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ...
ಅತ್ತ ದರಿ ಇತ್ತ ಪುಲಿ ಎತ್ತ ಹೋಗಲಿ ಎಂಬ ಸ್ಥಿತಿಯಲ್ಲಿ ಸಾರಿಗೆ ನೌಕರರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರಕ್ಕೆ ಹೋಗಲು ಬಹುತೇಕ ನೌಕರರು ಸಿದ್ಧರಿದ್ದಾರೆ. ಆದರೆ, ನಾವು ಡ್ಯೂಟಿ...