NEWSಲೇಖನಗಳುಸಂಸ್ಕೃತಿ

ನಂದಿಗಿರಿಯ ಯೋಗ – ಭೋಗ ನಂದೀಶ್ವರರ ಸನ್ನಿಧಿಯಲಿ ಸಚಿವ ಸಂಪುಟ ಸಭೆ

ವಿಜಯಪಥ ಸಮಗ್ರ ಸುದ್ದಿ

ನಂದಿ ಗಿರಿಯಲ್ಲಿ ನಡೆಯುತಿರುವ ವೈಭೋಗವ ಕಂಡ ಬೆಳಗಿನ ಚುಮು ಚುಮು ಚಳಿಯಿಂದ ಮೈಮುದುರಿ ಮಲಗಿದ್ದ ಸೂರ್ಯದೇವ ತನ್ನ ಕಿರಣಗಳನು ನಿಧಾನವಾಗಿ ಪಸರಿಸಲು ಪ್ರಯತ್ನಿಸಿದರೂ ಬೆಟ್ಟಕ್ಕೆ ಹೊದಿಕೆಯಾಗಿದ್ದ ಮಂಜು ಅಷ್ಟು ಸಲೀಸಾಗಿ ಬಿಟ್ಟುಕೊಡಲು ಸಿದ್ದವಾಗಿರಲಿಲ್ಲವಾದರೂ ತನ್ನ ಡ್ಯೂಟಿ ಮಾಡಲೇಬೇಕಾದುದರಿಂದ ಮೋಡಗಳನು ಸೀಳಿ ಬೆಳಕು ಚೆಲ್ಲಿದ.

ನವ ವಧುವಿನಂತೆ ಸಿಂಗರಿಸಿಕೊಂಡಿದ್ದ ನಂದಿಬೆಟ್ಟದ ಮೇಲೆ ನೆಲೆಸಿರುವ ಯೋಗ ನಂದೀಶ್ವರನಿಗೂ ಈ ಬೆಳವಣಿಗೆಯಿಂದ ಆಶ್ಚರ್ಯ. ನಾಡಿನ ಮಂತ್ರಿ ಮಹೋದಯರ ದಂಡು ಬೆಟ್ಟದ ಮೇಲೆ ಧಾಂಗುಡಿಯಿಡುತ್ತಿರುವುದನ್ನು ತಿಳಿದ ಯೋಗ ನಂದೀಶ್ವರನಿಗೆ ಆದ ಪುಳಕ ಅಷ್ಟಿಷ್ಟಲ್ಲ.

ತಕ್ಷಣ ತನ್ನ ಜಂಗಮವಾಣಿಯಿಂದ ಬೆಟ್ಟದ ತಪ್ಪಲಲ್ಲಿರುವ ಭೋಗ ನಂದೀಶ್ವರನಿಗೆ ಕರೆಮಾಡಿ ಬೆಟ್ಟದ ಮೇಲಿನ ವೈಭೋಗವನ್ನು ವಿವರಿಸಿದ ಅಷ್ಟಕ್ಕೆ ಪ್ರತಿಕ್ರಿಯಿಸಿದ ಭೋಗನಂದೀಶ್ವರ ಗುರೂ ನನ್ನ ದೇವಾಲಯದ ಆವರಣವೂ ಕೂಡ  ಹಾಗೆಯೇ ಸಿಂಗಾರಗೊಂಡಿದೆ.

ಮಂಗಳ ವಾದ್ಯದ ನಿನಾದ ನೀರ ಅಲೆಯಂತೆ ತೇಲಿ ಬರುತ್ತಿದೆ. ರಾಜ್ಯದ ಮಂತ್ರಿ ಮಹೋದಯರೆಲ್ಲಾ ಮೊದಲು ನನ್ನ ಸನ್ನಿಧಿಗೆ ಬಂದು ನಂತರ ಬೆಟ್ಟಕ್ಕೆ ತೆರಳಲು ನಿಗದಿಯಾಗಿದೆಯಂತೆ. ರಾಜ್ಯ ಸಚಿವ ಸಂಪುಟ ಸಭೆ ಇಲ್ಲಿ ನಡೆಯುವುದರಿಂದ ಈ ಭಾಗದ ಅಭಿವೃದ್ಧಿಗೆ ವೇಗ ದೊರೆತು ಒಳ್ಳೆಯದಾದರೆ ಸಾಕು.

ಇನ್ನೇನು ಸಭೆ ಆರಂಭವಾಗುವ ಸಮಯ ಹತ್ತಿರ ಬರುತ್ತಿದೆ ನಾವು ಬೇಗ ರೆಡಿಯಾಗೋಣ ಮತ್ತೆ ಸಂಜೆ ಭೇಟಿಯಾಗೋಣ ಎಂದು ಯೋಗ ನಂದೀಶ್ವರ ಜಂಗಮವಾಣಿ(ಪೋನ್) ಕಟ್ ಮಾಡಿದ.

Megha
the authorMegha

Leave a Reply

error: Content is protected !!
Latest news
KSRTC: ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಾಡುತ್ತಿರುವ ಪಾದಯಾತ್ರೆಗೂ ಅಡ್ಡಿ ಮಾಡುತ್ತಿರುವ ಜಂಟಿ ಸಂಘಟನೆ... ಸಾವಿರಾರು ಜನರನ್ನು ಅವರ ಗಮ್ಯಸ್ಥಾನಕ್ಕೆ ತಲುಪಿಸಲು ಆರೋಗ್ಯ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಸಾರಿಗೆ ನೌಕರರು... ಸಾರಿಗೆ ನೌಕರರೇ.. ಎಚ್ಚರ! ಕೈಕಟ್ಟಿ ಕುಳಿತರೆ ನಿಮ್ಮ ನಿಮ್ಮ ಕುಟುಂಬದ ಭವಿಷ್ಯ ಶೂನ್ಯ! ನಾಳೆ ಸಕ್ಕರೆ ನಾಡು ಮಂಡ್ಯಕ್ಕೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ: ಸ್ವಾಗತಕ್ಕೆ ಸಜ್ಜಾದ ಶ್ರೀಮಠ 6ನೇ ದಿನ ಪೂರ್ಣಗೊಂಡ ಸಾರಿಗೆ ನೌಕರರ ಪಾದಯಾತ್ರೆ: ಏ.15ರಂದು ಸೀಬಿಯಿಂದ ಮುಂದುವರಿಕೆ ಕಬ್ಬಿನ ಹಣ ಪಾವತಿಗಾಗಿ ಡಿಸಿ ಕಚೇರಿ ಮುಂದೆ ಏ.21ರಿಂದ ನಿರಂತರ ಪ್ರತಿಭಟನಾ ಧರಣಿ: ಕುರುಬೂರ್ ಶಾಂತಕುಮಾರ್ ಚುನಾವಣೆವೇಳೆ ಕೊಟ್ಟ ಭರವಸೆ ಈಡೇರಿಸಿದ್ದೇವೆ: ಶಾಸಕ ಶ್ರೀನಿವಾಸ್ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ- ನಾಲ್ಕನೇ ದಿನಕ್ಕೆ ಕಾಲಿಟ್ಟ ಪಾದಯಾತ್ರೆ: ಇಂದು ಶಿರಾದಲ್ಲಿ ವಾಸ್ತವ್ಯ ಸಾರಿಗೆ ನೌಕರರ ಒಕ್ಕೂಟದ ಪಾದಯಾತ್ರೆಗೆ ಸಂಪೂರ್ಣ ಬೆಂಬಲ: ಮಹಾಮಂಡಳದ ಅಧ್ಯಕ್ಷ ಆರ್‌.ಪಿ.ಕೊಪರ್ಡೆ ನಡದು ಹೋಗುತ್ತಿರುವ ನಮ್ಮ ನೌಕರರಿಗೆ ಕೃತಜ್ಞತೆ ಸಲ್ಲಿಸಿ: ಸಾರಿಗೆ ನೌಕರ ಮನವಿ