NEWSಲೇಖನಗಳುಸಂಸ್ಕೃತಿ

ನಂದಿಗಿರಿಯ ಯೋಗ – ಭೋಗ ನಂದೀಶ್ವರರ ಸನ್ನಿಧಿಯಲಿ ಸಚಿವ ಸಂಪುಟ ಸಭೆ

ವಿಜಯಪಥ ಸಮಗ್ರ ಸುದ್ದಿ

ನಂದಿ ಗಿರಿಯಲ್ಲಿ ನಡೆಯುತಿರುವ ವೈಭೋಗವ ಕಂಡ ಬೆಳಗಿನ ಚುಮು ಚುಮು ಚಳಿಯಿಂದ ಮೈಮುದುರಿ ಮಲಗಿದ್ದ ಸೂರ್ಯದೇವ ತನ್ನ ಕಿರಣಗಳನು ನಿಧಾನವಾಗಿ ಪಸರಿಸಲು ಪ್ರಯತ್ನಿಸಿದರೂ ಬೆಟ್ಟಕ್ಕೆ ಹೊದಿಕೆಯಾಗಿದ್ದ ಮಂಜು ಅಷ್ಟು ಸಲೀಸಾಗಿ ಬಿಟ್ಟುಕೊಡಲು ಸಿದ್ದವಾಗಿರಲಿಲ್ಲವಾದರೂ ತನ್ನ ಡ್ಯೂಟಿ ಮಾಡಲೇಬೇಕಾದುದರಿಂದ ಮೋಡಗಳನು ಸೀಳಿ ಬೆಳಕು ಚೆಲ್ಲಿದ.

ನವ ವಧುವಿನಂತೆ ಸಿಂಗರಿಸಿಕೊಂಡಿದ್ದ ನಂದಿಬೆಟ್ಟದ ಮೇಲೆ ನೆಲೆಸಿರುವ ಯೋಗ ನಂದೀಶ್ವರನಿಗೂ ಈ ಬೆಳವಣಿಗೆಯಿಂದ ಆಶ್ಚರ್ಯ. ನಾಡಿನ ಮಂತ್ರಿ ಮಹೋದಯರ ದಂಡು ಬೆಟ್ಟದ ಮೇಲೆ ಧಾಂಗುಡಿಯಿಡುತ್ತಿರುವುದನ್ನು ತಿಳಿದ ಯೋಗ ನಂದೀಶ್ವರನಿಗೆ ಆದ ಪುಳಕ ಅಷ್ಟಿಷ್ಟಲ್ಲ.

ತಕ್ಷಣ ತನ್ನ ಜಂಗಮವಾಣಿಯಿಂದ ಬೆಟ್ಟದ ತಪ್ಪಲಲ್ಲಿರುವ ಭೋಗ ನಂದೀಶ್ವರನಿಗೆ ಕರೆಮಾಡಿ ಬೆಟ್ಟದ ಮೇಲಿನ ವೈಭೋಗವನ್ನು ವಿವರಿಸಿದ ಅಷ್ಟಕ್ಕೆ ಪ್ರತಿಕ್ರಿಯಿಸಿದ ಭೋಗನಂದೀಶ್ವರ ಗುರೂ ನನ್ನ ದೇವಾಲಯದ ಆವರಣವೂ ಕೂಡ  ಹಾಗೆಯೇ ಸಿಂಗಾರಗೊಂಡಿದೆ.

ಮಂಗಳ ವಾದ್ಯದ ನಿನಾದ ನೀರ ಅಲೆಯಂತೆ ತೇಲಿ ಬರುತ್ತಿದೆ. ರಾಜ್ಯದ ಮಂತ್ರಿ ಮಹೋದಯರೆಲ್ಲಾ ಮೊದಲು ನನ್ನ ಸನ್ನಿಧಿಗೆ ಬಂದು ನಂತರ ಬೆಟ್ಟಕ್ಕೆ ತೆರಳಲು ನಿಗದಿಯಾಗಿದೆಯಂತೆ. ರಾಜ್ಯ ಸಚಿವ ಸಂಪುಟ ಸಭೆ ಇಲ್ಲಿ ನಡೆಯುವುದರಿಂದ ಈ ಭಾಗದ ಅಭಿವೃದ್ಧಿಗೆ ವೇಗ ದೊರೆತು ಒಳ್ಳೆಯದಾದರೆ ಸಾಕು.

ಇನ್ನೇನು ಸಭೆ ಆರಂಭವಾಗುವ ಸಮಯ ಹತ್ತಿರ ಬರುತ್ತಿದೆ ನಾವು ಬೇಗ ರೆಡಿಯಾಗೋಣ ಮತ್ತೆ ಸಂಜೆ ಭೇಟಿಯಾಗೋಣ ಎಂದು ಯೋಗ ನಂದೀಶ್ವರ ಜಂಗಮವಾಣಿ(ಪೋನ್) ಕಟ್ ಮಾಡಿದ.

Megha
the authorMegha

Leave a Reply

error: Content is protected !!
Latest news
ಮುಖ್ಯ ಶಿಕ್ಷಕರ ಕಿರುಕುಳಕ್ಕೆ ಬೇಸತು 10ನೇ ತರಗತಿ ವಿದ್ಯಾರ್ಥಿ ಶಾಲಾ ಕಟ್ಟಡದಿಂದ ಜಿಗಿದು ಆತ್ಮಹತ್ಯೆ KSRTC ಎಂಡಿ ಅಕ್ರಮ್‌ಪಾಷ ವರ್ಗಾವಣೆ ಪ್ರಭಾರ ಎಂಡಿಯಾಗಿ ಡಾ.ಆರ್‌. ಸೆಲ್ವಮಣಿ ನೇಮಕ ಮಾಡಿ ಸರ್ಕಾರದ ಆದೇಶ 4.30 ಲಕ್ಷ ಮೃತಪಟ್ಟ, ಅನರ್ಹರ ಗೃಹಲಕ್ಷ್ಮಿ ಯೋಜನೆಯಿಂದ ಹೊರಗಿಟ್ಟ ಸರ್ಕಾರ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಗೋಕುಲದ ಅಧ್ಯಕ್ಷ ಲಯನ್ ಅರವಿಂದ ಕೆ.ಆರ್.ಮಾರುಕಟ್ಟೇಲಿ ಅಗ್ನಿ ಅವಘಡ ತಡೆಗೆ ಫೈರ್ ಆಡಿಟ್: ಮುಖ್ಯ ಆಯುಕ್ತ ಮಹೇಶ್ವರ್ ರಾವ್ KSRTC ಫ್ರೀ ಬಸ್‌ಪಾಸ್‌ ಈ ತಿಂಗಳು ಸಿಗುವುದು ಡೌಟ್‌- ನಿತ್ಯ ಹಣಕೊಟ್ಟು ಓಡಾಡುತ್ತಿರುವ ವಿದ್ಯಾರ್ಥಿಗಳ ಗೋಳು ಕೇಳುವವರು... ಉಕ್ಕು ಸ್ಥಾವರ ದುರಂತ: ಮೃತರ ಕುಟುಂಬಕ್ಕೆ 25 ಲಕ್ಷ ರೂ. ಗಾಯಗೊಂಡವರಿಗೆ 10 ಲಕ್ಷ ರೂ. ಪರಿಹಾರ: ಕೇಂದ್ರ ಸಚಿವ ಎಚ್‌ಡಿಕ... ಗೃಹಲಕ್ಷ್ಮಿ ಹಣ ಪಡೆಯಲು 5 ರೂ.ಪಾವತಿಸಿ ಬಯೋಮೆಟ್ರಿಕ್ ನೀಡುವುದು ಕಡ್ಡಾಯ: 20 ದಿನದೊಳಗೆ ಬಯೋಮೆಟ್ರಿಕ್ ಜಾರಿ 3,991 ಪೊಲೀಸ್‌ ಕಾನ್‌ಸ್ಟೆಬಲ್‌ (ಸಿವಿಲ್‌) ಹುದ್ದೆಗೆ ಅರ್ಜಿ ಆಹ್ವಾನ- ಕೊನೇದಿನ ಜು.3 ಡಿಸಿಎಂ ಸೇರಿ 13 ಸಚಿವರಿಗೆ ವಿಧಾನಸೌಧ, ವಿಕಾಸಸೌಧದಲ್ಲಿ ಕಚೇರಿ ಹಂಚಿಕೆ ಮಾಡಿ ಆಡಳಿತ ಸುಧಾರಣೆ ಇಲಾಖೆ ಆದೇಶ