ಬಿಎಂಟಿಸಿ ವಿರುದ್ಧ 10 ಸಾವಿರ ದೂರು’ ಮುಖಪುಟ ವರದಿ ತಿಳಿಸುವ ಸಲುವಾಗಿ ಈ ಬರಹ. ನಾನು ಬಿಂಎಂಟಿಸಿ ಬಸ್ನಲ್ಲಿ 35 ವರ್ಷಗಳಿಂದ ಪ್ರಯಾಣಿಸುತ್ತಿದ್ದೇನೆ. ಇದರಲ್ಲಿ ಯಾರದು ತಪ್ಪು, ಯಾರದು ಸರಿ ಎಂಬುದನ್ನು ಖಚಿತವಾಗಿ ವಿಶ್ಲೇಷಿಸುವಷ್ಟು ವಿಷಯಗಳು ನನ್ನಲ್ಲಿವೆ ಎಂದು ಲೇಖಕಿ ಹವ್ಯಾಸಿ ಬರಹಗಾರ್ತಿ ಸುಜಯ ಆರ್.ಕಣ್ಣೂರ ವಿಶ್ವವಾಣಿ ಪ್ರತಿಸ್ಪಂದನದಲ್ಲಿ ವಿವರವಾಗಿ ತಿಳಿಸಿದ್ದಾರೆ.
ಈಗ ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣದ ಸೌಲಭ್ಯ ಇರುವು ದರಿಂದ ಬಸ್ಸುಗಳಲ್ಲಿ ಅವರ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಇದ ನಿಂದಾಗಿ ನಿರ್ವಾಹಕರಿಗೆ ‘ಶೂನ್ಯ ಟಿಕೆಟ್’ ಕೊಡಲು ಸಮಯ ಸಾಲುತ್ತಿಲ್ಲ. ಅಷ್ಟರಲ್ಲಿ ಇನ್ನೊಂದು ಸ್ಟೇಜ್ ಬಂದುಬಿಡುತ್ತದೆ. ಕೆಲ ಹೆಣ್ಣು ಮಕ್ಕಳೂ ಆಧಾರ್ಕಾರ್ಡ್ ಅಥ ಅಥವಾ ಮತದಾರರ ಚೀಟಿ ತೋರಿಸುವ ತಮ್ಮ ಹೊಣೆಗಾರಿಕೆಯ ನಿರ್ವಹಣೆಯನ್ನು ನಿರ್ಲಕ್ಷ್ಯ, ಮಾಡುತ್ತಾರೆ. ಕೆಲವೊಮ್ಮೆ ಮೊಬೈಲ್ನಲ್ಲೇ ಮುಳುಗಿರುತ್ತಾರೆ.
ಟಿಕೆಟ್ ಕೊಡುವ/ ಪಡೆಯುವ ಪ್ರಕ್ರಿಯೆ ತಡವಾದಲ್ಲಿ ಮುಂದಿನ ಸ್ಟೇಜ್ನಲ್ಲಿ ಚೆಕಿಂಗ್ ಸ್ಟಾಡ್ ಬಂದಾಗ, ನಿರ್ವಾಹಕರು ಮೆಮೋ ಪಡೆಯಬೇಕಾಗುತ್ತದೆ ಅಥವಾ ದಂಡವನ್ನು ಪೀಕಬೇಕಾಗುತ್ತದೆ. ಇದನ್ನು ಹೆಣ್ಣುಮಕ್ಕಳು ಅರ್ಥಮಾಡಿಕೊಳ್ಳುವುದಿಲ್ಲ. ಕೆಲವೊಮ್ಮೆ, ಪಡೆದ ಉದ್ದೇಶಿತ ನಿಲ್ದಾಣಗ ಭಲ್ಲಿ ಇಳಿಯದೇ, ತಮ್ಮ ಅನುಕೂಲಕ್ಕೆ ಇನ್ನೆಲ್ಲೋ ಇಳಿಯುತ್ತಾರೆ ಕೇಳಿದರೆ, ಫ್ರೀ ತಾನೆ ನಿಮಗೇನು ಕಷ್ಟ? ನಾವು ಎಲ್ಲಾದರೂ ಇಳಿಯಬಹುದು’ ಎಂಬ ಉಡಾಫೆಯ ಉತ್ತರ ಬರುತ್ತದೆ. ಅವರಿಗೆ ಅರ್ಥಮಾಡಿಸಲು ನಿರ್ವಾಹಕರು ಹೆಣಗುತ್ತಿರುತ್ತಾರೆ. ಇದನ್ನು ಚೆಕಿಂಗ್ ಅಧಿಕಾರಿಗಳೂ ಅರ್ಥಮಾಡಿಕೊಳ್ಳಬೇಕು, ಪ್ರತಿಬಾರಿಯೂ ನಿರ್ವಾಹಕರದ್ದೇ ತಪ್ಪಿರುವುದಿಲ್ಲ.
‘ಶಕ್ತಿ’ ಯೋಜನೆಯಿಂದಾಗಿ ಬಸ್ಸಿನಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿ, ಎಲ್ಲಾ ಆಸನಗಳನ್ನೂ ಆಕ್ರಮಿಸಿಕೊಳ್ಳುತ್ತಿದ್ದಾರೆ. ಇದರಿಂದ ಗಂಡಸರು ನಿಂತು ಪಯಣಿಸುವಂತಾಗಿದೆ ಹಾಗೂ ಬಸ್ಸುಗಳಲ್ಲಿ ಜಗಳ ಹೆಚ್ಚಾಗಿದೆ. ಇದನ್ನು ಸುಧಾರಿಸುವ ಹೊಣೆಯೂ ನಿರ್ವಾಹಕರ ಮೇಲೆಯೇ.
ಎಷ್ಟೋ ಕಡೆ ಬಹಳ ಹಳೆಯ ಬಸ್ ಗಳಿವೆ, ಅದರಲ್ಲಿನ ಸಮಸ್ಯೆಗಳನ್ನೆಲ್ಲಾ ಸುಧಾರಿಸಿಕೊಂಡು ಚಾಲಕರು ಕಾರ್ಯನಿರ್ವಹಿಸುತ್ತಾರೆ. ಸಂಚಾರ ದಟ್ಟಣೆಯಿಂದಾಗಿ ಎಷ್ಟೋ ಬಾರಿ ಚಾಲಕ-ನಿರ್ವಾಹಕರಿಗೆ ಸಮಯಕ್ಕೆ ಸರಿಯಾಗಿ ಊಟ ಮಾಡಲೂ ಆಗುವುದಿಲ್ಲ, ಏಕೆಂದರೆ, ಸಕಾಲಕ್ಕೆ ನಿರ್ದಿಷ್ಟ ನಿಲ್ದಾಣ ವನ್ನು ತಲುಪದಿದ್ದರೆ ಅದಕ್ಕೂ ಪ್ರಯಾಣಿಕರು ದೂರು ಕೊಡು ತಾರಲ್ಲಾ! ಹೀಗೆ ಚಾಲಕರು-ನಿರ್ವಾಹಕರ ಕಷ್ಟಗಳನ್ನೂ ನಾವು ಅರ್ಥಮಾಡಿಕೊಳ್ಳಬೇಕು.
ಗುಂಡಿಬಿದ್ದ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು, ಅದನ್ನು ತಪ್ಪಿಸಲು ಇದ್ದಕ್ಕಿದ್ದಂತೆ ಪಕ್ಕಕ್ಕೆ ಸರಿಯುತ್ತಾರೆ. ಆಗ ಹಿಂದೆ ಬರುತ್ತಿರುವ ಬಸುಗಳ ಚಾಲಕರಿಗೆ ಕಂಟ್ರೋಲ್ ಮಾಡುವುದು ಕಷ್ಟವಾಗುತ್ತದೆ, ಅಪಘಾತಗಳಾಗುತ್ತವೆ. ಹೀಗಾಗಿ ಮೊದಲು ರಸ್ತೆಗಳು ಸರಿಯಾಗಬೇಕು. ಇನ್ನು, ರಾತ್ರಿ ವೇಳೆ ಬಸ್ಸುಗಳಲ್ಲಿ ಮಲಗುವ ಚಾಲಕ-ನಿರ್ವಾಹಕರಿಗೆ ಸರಿಯಾದ ವ್ಯವಸೆಯಾಗಲೀ ಭದ್ರತೆಯಾಗಲೀ ಇರುವುದಿಲ್ಲ, ತಮಗಿರುವ ಕೆಲಸದ ಒತ್ತಡ ದಿಂದಾಗಿ ಇಂಥ ಎಷ್ಟೋ ಸಿಬ್ಬಂದಿ ಆರೋಗ್ಯ ಸಮಸ್ಯೆಗಳಿಗೆ ಬಲಿ ಯಾಗಿದ್ದಾರೆ.

ಕೆಲವು ಸೂಕ್ತ ವಿಷಯಗಳು ಎಲ್ಲರಿಗೂ ಅರ್ಥವಾ ಗುವುದಿಲ್ಲ, ಹೀಗಾಗಿ, ಯಾರೇ ಆಗಲಿ ಸಾರಿಗೆ ಸಿಬ್ಬಂದಿಯ ಮೇಲೆ ದೂರು ನೀಡುವ ಮೊದಲು ಸ್ವಲ್ಪ ಯೋಚಿಸಬೇಕು. ಕೈಯಲ್ಲಿ ಮೊಬೈಲಿದೆ, ನಂಬರ್ ಸಿಗುತ್ತದೆ ಎಂಬ ಘಮಂಡಿತನದಲ್ಲಿ ದೂರು ನೀಡುವುದು ತರವೇ?
ಮೇಲೆ ಉಲ್ಲೇಖಿಸಿದ ವ್ಯವಸ್ಥೆಗಳು ಮೊದಲು ಸರಿಯಾಗಬೇಕು. ಯಾರೇ ದೂರು ನೀಡಿದರೂ. ಅಧಿಕಾರಿಗಳು ಅದನ್ನು ಸರಿಯಾದ ರೀತಿಯಲ್ಲಿ ವಿವೇಚಿಸಿ, ತನಿಖೆ ಮಾಡಿ ಯಥೋಚಿತ ಕ್ರಮ ಕೈಗೊಳ್ಳಬೇಕೇ ಹೊರತು, ಎಲ್ಲಾ ದೂರುಗಳಿಗೂ ಚಾಲಕ-ನಿರ್ವಾಹಕರನ್ನು ಹೊಣೆಮಾಡುವುದು ಸರಿಯಲ್ಲ.
Related


You Might Also Like
BMTC ಸಂಸ್ಥೆಯಿಂದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕೊಡಿ: ವ್ಯವಸ್ಥಾಪಕ ನಿರ್ದೇಶಕರಿಗೆ ಟಿಸಿ ಶ್ರೀನಿವಾಸ್ ಮನವಿ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಈ ಹಿಂದಿನಿಂದಲೂ ಸ್ವಾತಂತ್ರ್ಯೋತ್ಸವ, ಕನ್ನಡ ರಾಜ್ಯೋತ್ಸವದಂದು ಕೊಡಲಾಗುತ್ತಿತ್ತು ಆದರೆ, ಇತ್ತೀಚೆಗೆ ನಿಲ್ಲಿಸಿರುವುದು ಸರಿಯಾದ ಕ್ರಮವಲ್ಲ...
KKRTC ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ : ಆರೋಪಿಗೆ 3 ವರ್ಷ ಜೈಲು, 6 ಸಾವಿರ ರೂ. ದಂಡ ವಿಧಿಸಿದ ಕೋರ್ಟ್ ಮಹತ್ವದ ತೀರ್ಪು
ಹೊಸಪೇಟೆ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕರ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಪ್ರಕರಣದಲ್ಲಿ ಅಪರಾಧಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ...
ಮೆಜೆಸ್ಟಿಕ್ ಬಳಿ ಮೊಬೈಲ್ ಶೌಚಾಲಯ ವ್ಯವಸ್ಥೆ: ಆಯುಕ್ತ ರಾಜೇಂದ್ರ ಚೋಳನ್
ಬೆಂಗಳೂರು: ಮೆಜೆಸ್ಟಿಕ್ ಬಳಿ ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದನ್ನು ನಿಯಂತ್ರಿಸುವ ಸಲುವಾಗಿ ಮೊಬೈಲ್ ಶೌಚಾಲಯಗಳ ವ್ಯವಸ್ಥೆ ಮಾಡಲು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ...
BMTC ಬಸ್ ಚಾಲಕನ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ಖಂಡಿಸಿ ಚಾಲಕರ ಪ್ರತಿಭಟನೆ
ಬೆಂಗಳೂರು: ಕಾರಿಗೆ ಸೈಡ್ ಬಿಡಲಿಲ್ಲ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ಚಾಲಕನ ಮೇಲೆ ಜಿಗಣಿ ಠಾಣೆಯ ಪೊಲೀಸ್ ಸಿಬ್ಬಂದಿಯೊಬ್ಬರು ಹಲ್ಲೆ ಮಾಡಿರುವ ಘಟನೆ ನಡೆದಿದೆ....
ಭಾರತ-ಅಮೆರಿಕ ಸಂಬಂಧ ಸುಧಾರಣೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಸಕಾರಾತ್ಮಕ ನಡೆ ಶ್ಲಾಘನೀಯ: ಪ್ರಧಾನಿ ಮೋದಿ
ನ್ಯೂಡೆಲ್ಲಿ: ಭಾರತ-ಅಮೆರಿಕ ಸಂಬಂಧ ಸುಧಾರಣೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಕಾರಾತ್ಮಕ ನಡೆ ಶ್ಲಾಘನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಾನು ಮೋದಿ ಅವರೊಂದಿಗೆ...
“ಗಬ್ಬರ್ ಸಿಂಗ್ ತೆರಿಗೆ” ಸಣ್ಣ ವ್ಯಾಪಾರಿಗಳ ಸರ್ವನಾಶ ಮಾಡಲಿದೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ತೆರಿಗೆದಾರ ಜನತೆ ಮತ್ತು ವ್ಯಾಪಾರಿ ವರ್ಗದ ಮೇಲಿನ ಆರ್ಥಿಕ ಭಾರ ಮತ್ತು ಅನುಷ್ಠಾನದ ಜಂಜಾಟವನ್ನು ತಗ್ಗಿಸಲು ಅತ್ಯಗತ್ಯವಾಗಿದ್ದ ತೆರಿಗೆ ಸುಧಾರಣೆಯನ್ನು ಜಾರಿಗೆ ತರುವ ಸರಕು ಸೇವಾ...
ಜಾತಿ ವ್ಯವಸ್ಥೆ ಕಾರಣಕ್ಕೆ ಅವಕಾಶಗಳು ಎಲ್ಲರಿಗೂ ಸಿಗುತ್ತಿಲ್ಲ: CM ಸಿದ್ದರಾಮಯ್ಯ
ಬೆಂಗಳೂರು: ಜಾತಿ ವ್ಯವಸ್ಥೆ ಕಾರಣಕ್ಕೆ ಅಸಮಾನ ಸಮಾಜ ನಿರ್ಮಾಣವಾಗಿ ಅವಕಾಶಗಳು ಎಲ್ಲರಿಗೂ ಸಿಗುತ್ತಿಲ್ಲ. ಶೂದ್ರರ ಜತೆಗೆ ಮಹಿಳೆಯರನ್ನೂ ಶಿಕ್ಷಣದಿಂದ ಹೊರಗಿಡಲಾಗಿತ್ತು. ಆದರೆ ಈಗ ಶಿಕ್ಷಣದ ಹಕ್ಕಿನ ಕಾರಣಕ್ಕೆ...
ನಮ್ಮ ಸರ್ಕಾರ ವರ್ಷಕ್ಕೆ 65 ಸಾವಿರ ಕೋಟಿ ರೂ. ಶಿಕ್ಷಣಕ್ಕೆ ಖರ್ಚು ಮಾಡುತ್ತಿದೆ: ಸಿಎಂ
ಬೆಂಗಳೂರು: ಶಿಕ್ಷಣ ನಮ್ಮ ಸರ್ಕಾರದ ಆದ್ಯತಾ ಕಾರ್ಯಕ್ರಮವಾಗಿದ್ದು, ವರ್ಷಕ್ಕೆ 65 ಸಾವಿರ ಕೋಟಿ ರೂಪಾಯಿಯನ್ನು ಶಿಕ್ಷಣಕ್ಕೆ ಖರ್ಚು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇಂದು ವಿಧಾನಸೌಧದ...
ಜಿಬಿಎ: ಬೆಳ್ಳಂಬೆಳಗ್ಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಐದು ನಗರ ಪಾಲಿಕೆಗಳ ಆಯುಕ್ತರು
ಬೆಂಗಳೂರು: ಐದು ನಗರ ಪಾಲಿಕೆಗಳ ಆಯುಕ್ತರಿಂದ ಬೆಳಗ್ಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು ಇತ್ತ ಕೇಂದ್ರ ನಗರ ಪಾಲಿಕೆ ಆಯುಕ್ತರು ಅಧಿಕಾರಿಗಳೊಂದಿಗೆ ಸಭೆ...