ಬನ್ನೂರು: ಕೊರೊನಾ ಭಯದಿಂದ ದೇವಾಲಯಗಳನ್ನು ಲಾಕ್ಡೌನ್ ಮಾಡಿದ್ದ ಹಿನ್ನೆಲೆಯಲ್ಲಿ ದೇವಾಲಯಗಳ ಅರ್ಚಕರು ನಿತ್ಯ ಜೀವನಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಹೋಬಳಿಯ ಮುಜರಾಯಿ ದೇವಾಲಯಗಳ ಸುಮಾರು ನೂರು ಅರ್ಚಕರಿಗೆ ಜ್ಯೋತಿಷಿ ಬೋಳಪ್ಪ ಗುರೂಜಿ ಆಹಾರ ಕಿಟ್ಗಳನ್ನು ವಿತರಿಸಿದ್ದಾರೆ.
ಇತ್ತೀಚೆಗೆ ನಡೆದ ಆಹಾರ ಕಿಟ್ ವಿತರಣೆ ಸಮಾರಂಭದಲ್ಲಿ ತಿ.ನರಸೀಪುರ ತಹಸೀಲ್ದಾರ್ ನಾಗೇಶ್ ಅವರಿಂದ ಆಹಾರ ಕಿಟ್ಗಳನ್ನು ಅರ್ಚಕರಿಗೆ ಕೊಡಿಸಿ ಮಾತನಾಡಿದ ಬೋಳಪ್ಪ ಗುರೂಜಿ, ಬನ್ನೂರು ಹೋಬಳಿಯಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಎಲ್ಲಾ ದೇವಾಲಯಗಳ ಅರ್ಚಕರನ್ನು ಗುರುತಿಸಿ ಸ್ವಂತ ಹಣದಿಂದ 5ಕೆಜಿ ಅಕ್ಕಿ, ಅರ್ಧ ಕೆಜಿ ಬೇಳೆ ಸೇರಿದಂತೆ 18 ನಿತ್ಯೋಪಯೋಗಿ ವಸ್ತುಗಳನ್ನು ವಿತರಣೆ ಮಾಡಲಾಗಿದೆ ಎಂದರು.
ತಹಸೀಲ್ದಾರ್ ನಾಗೇಶ್ ಮಾತನಾಡಿ, ಮುಜರಾಯಿ ದೇವಾಲಯಗಳ ಅರ್ಚಕರಿಗೆ ಸರ್ಕಾರದಿಂದ ನೆರವು ನೀಡಲಾಗುತ್ತಿದೆ. ಜತೆಗೆ ಇಂಥ ದಾನಿಗಳು ನೆರವು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ, ಜ್ಯೋತಿಷಿ ಬೋಳಪ್ಪ ಗುರೂಜಿ ಅವರಂತೆ ಉಳ್ಳವರು ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು ಎಂದು ಕರೆ ನೀಡಿದರು.
ಇಂಟರ್ ನ್ಯಾಷನಲ್ ಸ್ಕೂಲ್ ಕಾರ್ಯದರ್ಶಿ ರಾಜೇಶ್, ಕೆ.ವಿ.ಉಷಾರಾಣಿ, ಕುಮಾರ್ ಮತ್ತಿತರರು ಇದ್ದರು.