ಬೆಂಗಳೂರು: ಕೊರೊನಾ ಸೋಂಕಿತರೊಬ್ಬರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಎಲ್ಲಿಯೂ ಬೆಡ್ ಸಿಗದೆ ಕೊನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಮನೆಮುಂದೆ ಬಂದು ನನ್ನನ್ನು ಆಸ್ಪತ್ರಗೆ ಸೇರಿಸಿ ಇಲ್ಲ ಇಲ್ಲೇ ಸಾಯುತ್ತೇನೆ ಎಂದು ನರಳಾಡಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಕೊರೊನಾ ಸೋಂಕಿತರಿಗೆ ಸರಿಯಾದ ವ್ಯವಸ್ಥೆ ಮಾಡದೆ ಎಲ್ಲವನ್ನೂ ಮಾಡಿದ್ದೇವೆ ಎಂದು ಬೊಗಳೆಯನ್ನು ಇನ್ನೂ ಬಿಡುತ್ತಿರುವುದು ಏಕೆ ಎಂದು ಅರ್ಥವಾಗುತ್ತಿಲ್ಲ.
ಇನ್ನು ಸಿಎಂ ಮನೆಮುಂದಕ್ಕೆ ಆಟೋದಲ್ಲಿ ಹೋದ ಕೊರೊನಾ ಪೀಡಿತ ವ್ಯಕ್ತಿ, ಇದಕ್ಕೂ ಮೊದಲು ಬೆಂಗಳೂರಿನ ಹಲವಾರು ಆಸ್ಪತ್ರೆಗೆ ಅಲೆದಾಡಿದ್ದಾರೆ. ಕೆಲ ಆಸ್ಪತ್ರೆಗಳು ಬೆಡ್ ಖಾಲಿ ಇಲ್ಲ ಎಂದು ಹೇಳಿದರೆ ಇನ್ನು ಕೆಲವು ಆಸ್ಪತ್ರೆಯವರು ಬಿಬಿಎಂಪಿ ಅಧಿಕಾರಿಗಳಿಂದ ಕೋವಿಡ್ ಇರುವ ಬಗ್ಗೆ ಒಂದು ಪತ್ರ ತೆಗೆದುಕೊಂಡು ಬನ್ನಿ ಎಂದು ಹೇಳಿ ಕಳುಹಿಸಿವೆ.
ಹೀಗೆ ಎಲ್ಲಕಡೆ ಅಲೆದಾಡಿ ಸುಸ್ತಾತ ಬಳಿಕ ಕೊನೆಗೆ ಬೇರೆ ದಾರಿ ಕಾಣದೆ ಸಿಎಂ ಮನೆಮುಂದೆ ಬಂದು ಕುಳಿತಿದ್ದಾರೆ. ಇದನ್ನು ಕಂಡ ಸಿಎಂ ಮನೆಯ ಕಾವಲಿನಲ್ಲಿದ್ದ ಸಿಬ್ಬಂದಿ ಕೊರೊನಾ ಸೋಂಕಿತ ವ್ಯಕ್ತಿಯನ್ನು ಕೊನೆಗೆ ಬೋರಿಂಗ್ ಆಸ್ಪತ್ರೆಗೆ ಸೇರಿಸಿದ್ದಾರೆ.
ಆದರೆ ಆ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲದೆ ರೋಗಿ ಇನ್ನಷ್ಟು ನರಳುತ್ತಿದ್ದಾನೆ. ಈರೀತಿಯ ಬೇಜವಾಬ್ದಾರಿ ಸರ್ಕಾರದ ನಡೆಯಿಂದ ಜನರು ಸೇಸತ್ತು ಹೋಗಿದ್ದು, ಇದು ಹೀಗೆಯೇ ಮುಂದುವರಿದರೆ ರೊಚ್ಚಿಗೆಳುವ ಕಾಲ ದೂರವಿಲ್ಲ ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕಿದೆ.
Nachike bitta sarkara enu madoke agallo bidi