NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಬಸ್‌ನಲ್ಲಿ ಬೆಕ್ಕಿಗೂ ಮಗುವಿನ ಟಿಕೆಟ್‌ ತೆಗೆದುಕೊಂಡು ಮಡಿಕೇರಿಗೆ ಪ್ರಯಾಣ !

ನೊಂದವರಿಗೆ ಹೆಗಲು

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಾಮೂಲಿಯಾಗಿ ವಯಸ್ಕರಿಗೆ ಪೂರ್ಣ ದರದ ಟಿಕೆಟ್‌, ಹಿರಿಯ ನಾಗರಿಕರ ಪಾಸ್‌ ಆಧರಿಸಿ ಹಾಗೂ ರಾಜ್ಯದ ಮಹಿಳೆಯರಿಗೆ ಉಚಿತ ಟಿಕೆಟ್‌ ಕೊಡಲಾಗುತ್ತದೆ.

ಇನ್ನು ಮಕ್ಕಳಿಗೆ ಅದರಲ್ಲಿ ಶುಲ್ಕ ಕಡಿಮೆ ಇರುತ್ತದೆ. ಆದರೆ ಮೈಸೂರಿನಿಂದ ಮಡಿಕೇರಿಗೆ ಹೊರಟ ಬಸ್‌ವೊಂದರಲ್ಲಿ ಬೆಕ್ಕಿನ ಮರಿಗೂ ಅರ್ಧ ಟಿಕೆಟ್‌ ಅಂದರೆ ಮಕ್ಕಳ  ಟಿಕೆಟ್‌ ಶುಲ್ಕ ತೆಗೆದುಕೊಂಡಿದ್ದಾರೆ ಎಂದರೆ ಅಚ್ಚರಿಯಾಗಬಹುದು ಆದರೂ ಇದು ಸತ್ಯ.

ಮೈಸೂರು-ಮಡಿಕೇರಿ ಮಾರ್ಗದ ಕೆಎಸ್‌ಆರ್‌ಸಿ ಬಸ್‌ನಲ್ಲಿ ಬೆಕ್ಕಿನ ಮರಿಯೊಂದನ್ನು ಪ್ರಯಾಣಿಕರೊಬ್ಬರು ತೆಗೆದುಕೊಂಡು ಹೋಗಿದ್ದಾರೆ. ಅದನ್ನು ಗಮನಿಸಿದ ಕಂಡಕ್ಟರ್ ಬೆಕ್ಕಿನ ಮರಿಗೆ  6 ವರ್ಷದೊಳಗಿನ ಮಕ್ಕಳಿಗೆ ತೆಗೆದುಕೊಳ್ಳುವ ಅರ್ಧ ಚಾಜ್‌ ಬಸ್‌ ಟಿಕೆಟ್‌ ದರ ವಿಧಿಸಿದ್ದಾರೆ.

ಹೀಗೆ ಬೆಕ್ಕಿನ ಮರಿಗೂ ಟಿಕೆಟ್‌ ತೆಗೆದುಕೊಳ್ಳಬೇಕ ಎಂದು ಒಮ್ಮೆ ಅಚ್ಚರಿಗೊಳಗಾಗಬಹುದು ಆದರೆ ಇದು ವಿಚಿತ್ರ ಘಟನೆ ಎನಿಸಿದರು ನಂಬಲೇಬೇಕು. ಇನ್ನು ಈ ಟಿಕೆಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಧಾರ್ ಅಥವಾ ಐಡಿ ಕಾರ್ಡ್‌ ತೋರಿಸಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು. ಆದರೀಗ ಮೈಸೂರು – ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಅದನ್ನು ತೆಗೆದುಕೊಂಡು ಪ್ರಯಾಣಿಸುತ್ತಿದ್ದವರಿಗೆ ಒಂದು ಮಗುವೆಂದು ಭಾವಿಸಿ ಟಿಕೆಟ್‌ ಕೊಡಲಾಗಿದೆ.

ಟಿಕೆಟ್‌ ತೆಗೆದುಕೊಂಡರೂ ಸಹ ಆ ಬೆಕ್ಕಿನ ಮರಿಗೆ ಸೀಟ್‌ ನೀಡಿಲ್ಲ ಎನ್ನಲಾಗುತ್ತಿದೆ. ಆದರೆ ಅರ್ಥ ಟಿಕೆಟ್‌ ಚಾರ್ಜ್‌ ತೆಗೆದುಕೊಂಡಿದ್ದರಿಂದ ತೊಡೆಯಮೇಲೆ ಕುಳ್ಳರಿಸಿಕೊಂಡು ಪ್ರಯಾಣ ಮಾಡಬೇಕಿದೆ.

ಇನ್ನು ಸರ್ಕಾರಿ ಬಸ್‌ಗಳಲ್ಲಿ ಪ್ರಾಣಿಗಳನ್ನು ತೆಗೆದುಕೊಂಡು ಹೋಗುವುದಕ್ಕೆ ನಿಷೇಧವಿದೆ. ಹೀಗಾಗಿ ನಿರ್ವಾಹಕರು ಅದಕ್ಕೆ ಟಿಕೆಟ್‌ ವಿಧಿಸುವ ಮೂಲಕ ಅರಿವು ಮೂಡಿಸಿದ್ದಾರೆ.

ಇನ್ನು ಒಂದು ವೇಳೆ ಟಿಕೆಟ್‌ ಕೊಡದೆ ಹೋದರೆ ಬೇರಾರಾದರೂ ಮತ್ತೆ ಈ ರೀತಿ ಪ್ರಾಣಿಗಳನ್ನು ತೆಗೆದುಕೊಂಡು ಬರಬಹುದು. ಇದರಿಂದ ಕರ್ತವ್ಯ ನಿರತ ನಿರ್ವಾಹಕರು ಸಂಸ್ಥೆಯ ನಿಯಮದ ಪ್ರಕಾರ ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಬಗ್ಗೆ ಪ್ರಯಾಣಿಕರು ತಿಳಿದುಕೊಂಡರೆ ಖುಷಿ ಎಂದು ನೌಕರರೊಬ್ಬರು ಹೇಳಿದ್ದಾರೆ.

Megha
the authorMegha

Leave a Reply

error: Content is protected !!
Latest news
KSRTC: 'ಸಾರಿಗೆ ಮಿತ್ರ' ಆಪ್ ದುರುಪಯೋಗ- ಕರ್ತವ್ಯಕ್ಕೆ ಹಾಜರಾಗದೆ ಸಹೋದ್ಯೋಗಿಗೆ ಫೋನ್‌ ಕೊಟ್ಟು ಹಾಜರಿ ಪಡೆಯುತ್ತಿರುವ... ಸಾರಿಗೆ ನೌಕರರಿಗೆ ಸಮಾನ ವೇತನ ಸೇರಿದಂತೆ 3 ಬೇಡಿಕೆಗಳ ಈಡೇರಿಕೆಗೆ ಕೂಟ ಒತ್ತಾಯ: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್‌ಗೆ ಮ... ಗುಟ್ಕಾ ಉಗಿಯಲು ಬಗ್ಗಿದ ವಿದ್ಯಾರ್ಥಿ ತಲೆಗೆ ಬಡಿದ ಟಿಪ್ಪರ್: ಕ್ಷಣಾರ್ಧದಲ್ಲೇ ರುಂಡ ಕಟ್‌, ಬಸ್ಸಿನಲ್ಲಿ ನೇತಾಡಿದ ಮುಂಡ... KSRTC: ನೌಕರರ ಹೆಚ್ಚಳದ ಶೇ.12.5ರಷ್ಟು ವೇತನ ಜುಲೈ ಅಂದರೆ ಈ ತಿಂಗಳ ವೇತನದಲ್ಲಿ ಅನುಷ್ಠಾನ- ಆಗಸ್ಟ್‌ನಲ್ಲಿ ಎಲ್ಲರ ಖಾತ... NWKRTC: ವಿದ್ಯಾರ್ಥಿಗಳ ಮನವಿ ಪರಿಗಣಿಸಿ ನೂತನ ಬಸ್ ಸೇವೆಗೆ ಚಾಲನೆ- ನಿಗಮದ ಉಪಾಧ್ಯಕ್ಷ ಸುನೀಲ್ ಜೆ. ಹಣಮನ್ನವರ ಇಂದಿನಿಂದ ಎರಡು ತಿಂಗಳ ಕಾಲ: ಗೃಹ ಜ್ಯೋತಿ ಯೋಜನೆ ಫಲಾನುಭವಿಗಳ ಮಾಹಿತಿ ಸಂಗ್ರಹಕ್ಕೆ ಬರಲಿದ್ದಾರೆ ಇಲಾಖಾ ಸಿಬ್ಬಂದಿ KSRTC: 50 ಹೊಸ ಬಸ್ ನೀಡಿ ಜತೆಗೆ ಆರ್‌ಟಿಒ ಕಚೇರಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ: ಸಾರಿಗೆ ಸಚಿವರಿಗೆ ರಾಜಣ್ಣ ಮ... ದಂಪತಿಗಳ ಏಕಾಂತದಿಂದ ಕಾಂತಿಯುತ ತ್ವಚೆ, ಯುವಕರಾಗಿಡುವ ಮೋಡಿ ಅಡಗಿದೆ! ಇಂದು ಸಾರಿಗೆ ನೌಕರರ ವೇತನ ಸಂಬಂಧ ಕರೆದಿದ್ದ ರಾಜೀ ಸಂಧಾನ ಸಭೆ ಮತ್ತೆ ವಿಫಲ! 2028ರ ವೇಳೆಗೆ ಮಾದಕ ವಸ್ತು- ನಶೆ ಮುಕ್ತ ಕರ್ನಾಟಕವೇ ನಮ್ಮ ಗುರಿ: ಸಿಎಂ ಡಿಕೆಶಿ