NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರ ಬೇಡಿಕೆ ಈಡೇರಲು ಸಾರಿಗೆ ಸಂಘಟನೆಗಳ ಮುಖಂಡರು ಸ್ವಾರ್ಥ ಪ್ರತಿಷ್ಠೆ ಬಿಟ್ಟು ಒಗ್ಗಟ್ಟಾಗಿ ಸಿಬ್ಬಂದಿ ಮನವಿ

ನೊಂದವರಿಗೆ ಹೆಗಲು

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಹಾಗೂ ಕಾರ್ಮಿಕರ ಸಂಘಟನೆಗಳ ಮುಖಂಡರಲ್ಲಿ ಸ್ವಾರ್ಥ ಮತ್ತು ಪ್ರತಿಷ್ಠೆ ತುಂಬಿಕೊಂಡಿದೆ. ಈ ಸಂಘಟನೆಗಳ ಕೆಲ ನಾಯಕರು ಇದನ್ನ ಬಿಟ್ಟು ಹೊರಬರುತ್ತಿಲ್ಲ. ಆದಕಾರಣ ಸಮಸ್ತ ನಾಡಿನ ಎಲ್ಲ ಸಾರಿಗೆ ನೌಕರರು ಒಂದಾಗಿ ಹೋರಾಟ ರೂಪಿಸಬೇಕಿದೆ.

ಅಲ್ಲದೇ ಈ ಒಂದು ವೇದಿಕೆಯಿಂದ ಹೋರಾಟ ರೂಪಿಸಿದರೆ ನಾವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೇವೆ ಎಂಬ ವಿಶ್ವಾಸವಿದೆ.

ಆದರೆ, ಈವರೆಗೂ ಒಬ್ಬ ವ್ಯಕ್ತಿ ತನ್ನ ಸ್ವಾರ್ಥಕ್ಕಾಗಿ ನನಗಿಂತ ಮೇಲೆ ಯಾರು ಬೆಳಿಬಾರ್ದು ಅನ್ನೋ ವಿಕೃತ ಮನಸ್ಸಿನ ಕಾರಣದಿಂದ ಸಂಘ- ಸಂಘಟನೆಗಳನ್ನು ಒಗ್ಗೂಡಿಸುವುದಕ್ಕೆ ಒಂದು ಸಣ್ಣ ಪ್ರಯತ್ನವನ್ನೂ ಮಾಡುತ್ತಿಲ್ಲ. ಇದರರ್ಥ ಇವರಿಗೆ ನೌಕರರ ಹಿತ ಚಿಂತನೆ ಅವಶ್ಯಕತೆ ಇಲ್ಲ ಎಂಬುವುದು ಸ್ಪಷ್ಟವಾಗುತ್ತಿದೆ.

ಇನ್ನು ಹೊಡೆದಾಳುವ ನೀತಿಯಲ್ಲಿ ಬಂದಿರುವಂತವರು ಈ ಒಮ್ಮತದ ಹೋರಾಟ ರೂಪಿಸಿದರೆ ನೌಕರರಿಗೆ ಒಳ್ಳೆಯದಾಗಿ ಬಿಟ್ಟದರೆ ಎಂಬ ಆತಂಕದಲ್ಲಿ ಇದೆಲ್ಲವನ್ನು ಮಾಡುತ್ತಿದ್ದಾರೆ. ಹೀಗಾಗಿ ಅವರು ಯಾವುದೇ ಕಾರಣಕ್ಕೂ ನೌಕರರಿಗೆ ಒಳ್ಳೆಯದಾಗಲು ಬಿಡುವುದಿಲ್ಲ. ಕೇವಲ ಬೂಟಾಟಿಕೆ ಮತ್ತು ನೆಪ ಮಾತ್ರಕ್ಕೆ ತೋರಿಕೆಗೋಸ್ಕರ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.

ಇವರ ಇಂಥ ವಿಕೃತ ಮನಸ್ಸಿನಿಂದ ಅಮಾಯಕ ನೌಕರರು ಬಲಿಯಾಗುತ್ತಿದ್ದಾರೆ. ಹಲವು ದಶಕಗಳಿಂದಳು ಈ ಉದ್ದೇಶವನ್ನು ಹಾಗೇಯೇ ಉಳಿಸಿಕೊಂಡು ಬರುತ್ತಿದ್ದಾರೆ. ಇಲ್ಲ ನಮಗೆ ನೌಕರರಿಗೆ ಒಳ್ಳೇದು ಮಾಡ್ಲೇಬೇಕು ಎಂಬುವುದು ಇದ್ದಿದ್ದರೆ ಈ ರೀತಿ ನೌಕರರು ವಜಾ, ಅಮಾನತು, ವರ್ಗಾವಣೆ ಹಾಗೂ ಪೊಲೀಸ್‌ ಕೇಸ್‌ಗಳಲ್ಲಿ ಸಿಲುಕಲು ಬಿಡುತ್ತಿರಲಿಲ್ಲ.

ಇನ್ನಾದರೂ ಎಲ್ಲರನ್ನೂ ಒಗ್ಗೂಡಿಸಿ ಎಲ್ಲರನ್ನು ಒಂದೇ ವೇದಿಕೆಗೆ ಕರೆತಂದು ಬೈದು ಬುದ್ದಿ ಹೇಳಿ ಒಂದೇ ವೇದಿಕೆಯಿಂದ ಹೋರಾಟ ರೂಪಿಸಬೇಕಿದೆ. ಆದರೆ ಅದು ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಅಸಾಧ್ಯವಾಗಿ ತೋರುತ್ತಿದೆ. ಕಾರಣ ಎತ್ತು ಹೆರೆಗೆ ಕೋಣ ನೀರಿಗೆ ಎಂಬುವುದು ನಡೆಯುತ್ತಿದೆ.

ಸತ್ಯ ಕೆಲ ಒಂದಷ್ಟು ಜನ ಸ್ಮಶಾನವಾಸಿಗಳಾಗುವವರೆಗೂ ಸಾರಿಗೆ ನೌಕರರಿಗೆ ಒಳ್ಳೆಯದಾಗುವುದಿಲ್ಲ. ಒಗ್ಗಟ್ಟಿನ ಮಂತ್ರ ಸೂಚಿಸದಿದ್ದರೆ ಇದೊಂದೇ ಹೋರಾಟ ಅಲ್ಲ ಇಂತಹ ಸಾವಿರ ಹೋರಾಟಗಳು ರೂಪಿಸಿದರು ಯಶಸ್ಸು ಕಾಣೋದಿಲ್ಲ. ಅತ್ಯಂತ ದಯನೀಯವಾಗಿ ನೋವಿನಿಂದ ಈ ವಿಚಾರವನ್ನು ಹಂಚಿಕೊಳ್ಳುತ್ತಿದ್ದೇನೆ ಧನ್ಯವಾದಗಳು ಎಂದು ನೌಕರರು ಸಾಮಾಜಿ ಜಾಲತಾಣದಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

Megha
the authorMegha

Leave a Reply

error: Content is protected !!
Latest news
KSRTC: 'ಸಾರಿಗೆ ಮಿತ್ರ' ಆಪ್ ದುರುಪಯೋಗ- ಕರ್ತವ್ಯಕ್ಕೆ ಹಾಜರಾಗದೆ ಸಹೋದ್ಯೋಗಿಗೆ ಫೋನ್‌ ಕೊಟ್ಟು ಹಾಜರಿ ಪಡೆಯುತ್ತಿರುವ... ಸಾರಿಗೆ ನೌಕರರಿಗೆ ಸಮಾನ ವೇತನ ಸೇರಿದಂತೆ 3 ಬೇಡಿಕೆಗಳ ಈಡೇರಿಕೆಗೆ ಕೂಟ ಒತ್ತಾಯ: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್‌ಗೆ ಮ... ಗುಟ್ಕಾ ಉಗಿಯಲು ಬಗ್ಗಿದ ವಿದ್ಯಾರ್ಥಿ ತಲೆಗೆ ಬಡಿದ ಟಿಪ್ಪರ್: ಕ್ಷಣಾರ್ಧದಲ್ಲೇ ರುಂಡ ಕಟ್‌, ಬಸ್ಸಿನಲ್ಲಿ ನೇತಾಡಿದ ಮುಂಡ... KSRTC: ನೌಕರರ ಹೆಚ್ಚಳದ ಶೇ.12.5ರಷ್ಟು ವೇತನ ಜುಲೈ ಅಂದರೆ ಈ ತಿಂಗಳ ವೇತನದಲ್ಲಿ ಅನುಷ್ಠಾನ- ಆಗಸ್ಟ್‌ನಲ್ಲಿ ಎಲ್ಲರ ಖಾತ... NWKRTC: ವಿದ್ಯಾರ್ಥಿಗಳ ಮನವಿ ಪರಿಗಣಿಸಿ ನೂತನ ಬಸ್ ಸೇವೆಗೆ ಚಾಲನೆ- ನಿಗಮದ ಉಪಾಧ್ಯಕ್ಷ ಸುನೀಲ್ ಜೆ. ಹಣಮನ್ನವರ ಇಂದಿನಿಂದ ಎರಡು ತಿಂಗಳ ಕಾಲ: ಗೃಹ ಜ್ಯೋತಿ ಯೋಜನೆ ಫಲಾನುಭವಿಗಳ ಮಾಹಿತಿ ಸಂಗ್ರಹಕ್ಕೆ ಬರಲಿದ್ದಾರೆ ಇಲಾಖಾ ಸಿಬ್ಬಂದಿ KSRTC: 50 ಹೊಸ ಬಸ್ ನೀಡಿ ಜತೆಗೆ ಆರ್‌ಟಿಒ ಕಚೇರಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ: ಸಾರಿಗೆ ಸಚಿವರಿಗೆ ರಾಜಣ್ಣ ಮ... ದಂಪತಿಗಳ ಏಕಾಂತದಿಂದ ಕಾಂತಿಯುತ ತ್ವಚೆ, ಯುವಕರಾಗಿಡುವ ಮೋಡಿ ಅಡಗಿದೆ! ಇಂದು ಸಾರಿಗೆ ನೌಕರರ ವೇತನ ಸಂಬಂಧ ಕರೆದಿದ್ದ ರಾಜೀ ಸಂಧಾನ ಸಭೆ ಮತ್ತೆ ವಿಫಲ! 2028ರ ವೇಳೆಗೆ ಮಾದಕ ವಸ್ತು- ನಶೆ ಮುಕ್ತ ಕರ್ನಾಟಕವೇ ನಮ್ಮ ಗುರಿ: ಸಿಎಂ ಡಿಕೆಶಿ