NEWSದೇಶ-ವಿದೇಶಸಂಸ್ಕೃತಿ

80ರ ಮುಸ್ಸಂಜೆಯ ಹರೆಯದ ವ್ಯಕ್ತಿ ಜತೆ ಸಪ್ತಪದಿ ತುಳಿದ 23ರ ಯುವತಿ!

ವಿಜಯಪಥ ಸಮಗ್ರ ಸುದ್ದಿ

ಚೀನಾ: ಮುಸ್ಸಂಜೆಯ ಕಾಲದಲ್ಲಿ ಇರುವ 80ರ ಹರೆಯದ ವ್ಯಕ್ತಿ ಜತೆ  23 ವರ್ಷದ ಯುವತಿಯೊಬ್ಬಳು ಸಪ್ತಪದಿ ತುಳಿಯುವ ಮೂಲಕ ಆ ವೃದ್ಧರ ಕೈ ಹಿಡಿದಿದ್ದಾಳೆ.

ಹೌದು!  ಪ್ರೀತಿಗೂ ವಯಸ್ಸಿಗೂ ಯಾವುದೇ ಸಂಬಂಧವಿಲ್ಲ. ಕಿರಿಯರು, ಹಿರಿಯರು, ಬಣ್ಣ, ಜಾತಿ, ಮತ, ಲಿಂಗ ಈ ಯಾವುದೇ ಭೇದವೂ ಇಲ್ಲ ಎಂಬುವುದು ಅಲ್ಲಲ್ಲಿ ಸಾಬೀತಾಗುತ್ತಲೇ ಇರುತ್ತದೆ.  ಈ ಬಂಧ ಸಂಬಂಧದ ಎಷ್ಟೋ ಜೋಡಿಗಳನ್ನು ನೋಡಿ ನಾವು ಹುಬ್ಬೇರಿಸಿದ್ದೂ ಉಂಟು. ಇದೀಗ ಅಂಥದ್ದೇ ಜೋಡಿಯೊಂದು ಸಪ್ತಪದಿ ತುಳಿಯುವ ಮೂಲಕ ಸುದ್ದಿಯಲ್ಲಿದೆ.

23ರ ಯುವತಿಯೊಬ್ಬಳು ತನ್ನ ಅಜ್ಜನ ವಯಸ್ಸಿನ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾದ ಈ ಅಪರೂಪದ ಘಟನೆ ನಡೆದಿರುವುದು ಚೀನಾದಲ್ಲಿ.

ಆಡಿಟಿ ಸೆಂಟ್ರಲ್ ವೆಬ್‌ಸೈಟ್‌ನ ವರದಿಯ ಪ್ರಕಾರ ಹೆಬೈ ಪ್ರಾಂತ್ಯದ ವೃದ್ಧಾಶ್ರಮ ಒಂದರಲ್ಲಿ ಸ್ವಯಂಸೇವಕಳಾಗಿ ಕೆಲಸ ಮಾಡುತ್ತಿದ್ದ 23 ವರ್ಷದ ಯುವತಿ, 80 ವರ್ಷದ ವ್ಯಕ್ತಿಯನ್ನು ಭೇಟಿಯಾದರು. ಆರಂಭದ ಪರಿಚಯ ದಿನಗಳ ಬಳಿಕ ಸ್ನೇಹಕ್ಕೆ ತಿರುಗಿದೆ. ಇಬ್ಬರು ಒಟ್ಟಿಗೆ ಸಮಯ ಕಳೆಯಲು ಆರಂಭಿಸಿದ್ದಾರೆ. ಕ್ರಮೇಣ ಇಬ್ಬರ ಸ್ನೇಹ, ಪ್ರೀತಿಯ ಸ್ವರೂಪವನ್ನು ಪಡೆದುಕೊಂಡಿದೆ.

ವರದಿಗಳ ಪ್ರಕಾರ, ಮುದುಕನ ಪ್ರಬುದ್ಧತೆ, ಸ್ಥಿರತೆ ಮತ್ತು ಬುದ್ಧಿವಂತಿಕೆಗೆ ತಾನು ಆಕರ್ಷಿತಳಾಗಿದ್ದೇನೆ ಎಂದು ಹುಡುಗಿ ಹೇಳಿದ್ದಾಳೆ. ಅದೇ ಸಮಯದಲ್ಲಿ ಯುವತಿಯ ದಯೆ ಮತ್ತು ದೈಹಿಕ ಸೌಂದರ್ಯದಿಂದ ಪ್ರಭಾವಿತನಾಗಿದ್ದೇನೆ ಎಂದು ವೃದ್ಧ ಹೇಳಿದ್ದಾರೆ.

ಈ ಇಬ್ಬರೂ ಪರಸ್ಪರ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದು,  ಬಳಿಕ ಮದುವೆಯಾಗಲು ಬಯಸಿದ್ದಾರೆ. ಆದರೆ, ಇವರಿಬ್ಬರ ನಿರ್ಧಾರಕ್ಕೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದರು.  ಯುವತಿ ತನ್ನ ಪ್ರೀತಿಯ ಬಗ್ಗೆ ಪಾಲಕರಿಗೆ ತಿಳಿಸಿದಾಗ, ಮುದುಕನ ಜತೆ ಮಗಳ ಮದುವೆ ಮಾಡಿಕೊಡಲು ಒಪ್ಪಲೇ ಇಲ್ಲ.

ಆದರೆ, ಯುವತಿ ತನ್ನ ಪಾಲಕರನ್ನು ಧಿಕ್ಕರಿಸಿ, ಮನೆಯಿಂದ ಹೊರಬಂದು ಇತ್ತೀಚೆಗೆ ವೃದ್ಧನನ್ನು ಮದುವೆಯಾಗಿದ್ದಾಳೆ. ಈ ಮದುವೆಗೆ ಆಕೆಯ ಸಂಬಂಧಿಕರು ಯಾರೂ ಬಂದಿರಲಿಲ್ಲ. ಮದುವೆಯ ಸಮಯದಲ್ಲಿ, ತಾವಿಬ್ಬರು ಪರಸ್ಪರ ಬೇರ್ಪಡಿಸುವುದಿಲ್ಲ ಎಂದು ಭರವಸೆಗಳನ್ನು ವಿನಿಮಯ ಮಾಡಿಕೊಂಡರು ಎಂದು ವರದಿಯಾಗಿದೆ.

ಇದೇ ಸಂದರ್ಭದಲ್ಲಿ ಈ ಮದುವೆಗೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ತಮ್ಮದೇಯಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಮದುವೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಯುವತಿಯು ಹಣಕ್ಕಾಗಿ ವೃದ್ಧನನ್ನು ಮದುವೆಯಾಗಿರಬಹುದು ಎನ್ನುತ್ತಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ