NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರ ಮುಂದೆ ಹುಲಿ ಸರ್ಕಾರದ ಮುಂದೆ ನರಿ – ಇಂಥ ಸಂಘಟನೆಗಳಿಂದ  ಯಾವೊಬ್ಬ ನೌಕರನಿಗೂ ನಯ ಪೈಸೆ ಕೊಡಿಸಲು ಸಾಧ್ಯವಿಲ್ಲ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಇನ್ನೂ 100 ಸಂಘಟನೆಗಳು ಹುಟ್ಟಿ ಬಂದರು ಒಬ್ಬ ಸಾರಿಗೆ ನೌಕರನಿಗೂ ಒಂದು ನಯ ಪೈಸೆಯಷ್ಟು ಏನನ್ನು ಕೊಡಿಸಲು ಸಾಧ್ಯವಿಲ್ಲ.

ಹೌದು! ಈಗಿರುವ ಸಂಘಟನೆಗಳಿಂದ ಈವರೆಗೂ ಏನನ್ನು ಕೊಡಿಸಲು ಸಾಧ್ಯವಾಗಿಲ್ಲ. ನಾಲ್ಕು ವರ್ಷಕೊಮ್ಮೆ ಮಾಡುವ ವೇತನ ಹೆಚ್ಚಳದ ಅಗ್ರಿಮೆಂಟ್‌ ವೇಳೆ ಹುಲಿಗಳಂತೆ ಘರ್ಜಿಸಿ ನರಿಯಂತೆ ನಾಟಕವಾಡಿಕೊಂಡು ಬರುತ್ತಿರುವ ಈ ಸಂಘಟನೆಗಳಿಂದ ಈವರೆಗೂ ನೌಕರರಿಗೆ ಸೌಲಭ್ಯ ಕೊಡಿಸಿದ್ದಕ್ಕಿಂತ ಮಾನಸಿಕ ಮತ್ತು ದೈಹಿಕವಾಗಿ ನೋವು ಕೊಟ್ಟಿದ್ದೇ ಹೆಚ್ಚು.

ಈ ಹಿಂದೆಯೂ ಸರ್ಕಾರದಿಂದ ಇವರು ಏನನ್ನು ಕೊಡಿಸಿಲ್ಲ. ಸರ್ಕಾರ ಅಗ್ರಿಮೆಂಟ್‌ ವೇಳೆ ಘೋಷಣೆ ಮಾಡಿದ ಶೇ… ಇಷ್ಟನ್ನು ನಾವು ಒಪ್ಪಲು ಸಾಧ್ಯವಿಲ್ಲ. ನಾವು ಒಪ್ಪಿಲ್ಲ ಕೂಡ ಎಂದು ಹೇಳಿ ಸಭೆಯಿಂದ ಹೊರಬಂದು ಹೋರಾಟ ಮಾಡುವ ರೀತಿ ನಾಟಕವಾಡಿ, ಇದು ಸರ್ಕಾರದ ಏಕಪಕ್ಷೀಯ ನಿರ್ಧಾರ ಇದನ್ನು ನಾವು ಒಪ್ಪಿಲ್ಲ ಎನ್ನುತ್ತಾರೆ.

ಆದರೆ, ಸರ್ಕಾರ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರದ ವಿರುದ್ಧ ಈವರೆಗೂ ಪ್ರಬಲವಾದ ಹೋರಾಟವನ್ನು ಮಾಡಿಲ್ಲ. ಬಳಿಕ ಸರ್ಕಾರ ಘೋಷಣೆ ಮಾಡಿದ ಶೇ.. ಇಷ್ಟು ಪರ್ಸೆಂಟ್‌ ವೇತನ ಹೆಚ್ಚಳ ಎಂಬುದನ್ನೇ ಕೊನೆಗೆ ಸ್ವಾಗತಿಸಿ ಮುಖ್ಯಮಂತ್ರಿಗಳು ಸಚಿವರನ್ನು ಸನ್ಮಾನಿಸುವತ್ತಲೇ ಬಂದಿವೆ ಈ ಸಂಘಟನೆಗಳು.

ಇನ್ನು ಕಳೆದ 2020ರ ಜನವರಿಯಿಂದ ಆಗಬೇಕಿದ್ದ ವೇತನ ಹೆಚ್ಚಳದ ಅಗ್ರಿಮೆಂಟ್‌ ವೇಳೆಯೂ ಇದೇ ನಾಟಕ ಮರುಕಳಿಸಿತು. ಅದು ಕೂಡ 2020ರ ಜ.1ರಿಂದ ಅನ್ವಯವಾಗಬೇಕಿದ್ದನ್ನು 2023ರ ಮಾರ್ಚ್‌ನಲ್ಲಿ ಆಯಿತು. ಅಂದು ಶೇ.15ರಷ್ಟು ವೇತನ ಹೆಚ್ಚಿಸಿ ಸರ್ಕಾರ ಘೋಷಣೆ ಮಾಡಿತು. ಆ ವೇಳೆ ವಿಧಾನಸಭೆ ಚುನಾವಣೆ ಬರುತ್ತಿದ್ದರಿಂದ ಸರ್ಕಾರ ಇವರು ಹೇಳಿದಂತೆಯೇ ಏಕಪಕ್ಷೀಯವಾಗಿಯೇ ಶೇ.15ರಷ್ಟು ವೇತನ ಹೆಚ್ಚಳ ಮಾಡಿ ಘೋಷಣೆ ಮಾಡಿತು.

ಅಂದರೆ ಸಾರಿಗೆ ಸಂಘಟನೆಗಳ ಮುಖಂಡರು ಶೇ.25ರಷ್ಟು ವೇತನ ಹೆಚ್ಚಳ ಮಾಡಲೇಬೇಕು ಎಂದು ತಿಪ್ಪರಲಾಗಹಾಕಿದರು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅವರ ಒತ್ತಾಯವನ್ನು ಮೂಲೆಗೆ ಸರಿಸಿ ಇವರೇ ಹೇಳಿದಂತೆ ಏಕಪಕ್ಷೀಯವಾಗಿ ಶೇ.15ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದರು.

ಆ ಬಳಿಕ ಈ ಶೇ.15ರಷ್ಟು ವೇತನ ಹೆಚ್ಚಳ ನಮಗೆ ತೃಪ್ತಿತಂದಿಲ್ಲ ಹೀಗಾಗಿ ನಾವು ಮುಷ್ಕರ ಮಾಡುತ್ತೇವೆ ಎಂದು ಹೇಳಿ ಹುಲಿಯಂತೆ ಘರ್ಜಿಸಿ ಮತ್ತೆ ನರಿಯಂತೆ ಒಳಹೊಕ್ಕು ಸಿಎಂ ಅವರ ನಿರ್ಧಾರವನ್ನೇ ಸ್ವಾಗತಿಸಿ ನೌಕರರ ಜೀವನಕ್ಕೆ ಕೊಳ್ಳಿಯಿಟ್ಟು ಸಿಎಂ ಅವರಿಗೇ ಸನ್ಮಾನ ಮಾಡಿ ಬಳಿಕ ಈ ಶೇ.15ರಷ್ಟು ವೇತನ ಹೆಚ್ಚಳಕ್ಕೆ ನಾವೇ ಕಾರಣ ಎಂದು ಈಗಲೂ ಬೊಬ್ಬೆ ಹೊಡೆಯುತ್ತಿದ್ದಾರೆ.

ಆದರೆ, ಶೇ.15ರಷ್ಟು ವೇತನ ಹೆಚ್ಚಳವಾಗಿದ್ದು 2020ರ ಜನವರಿ 1ರಿಂದ ಅನ್ವಯವಾಗುಂತೆ. ಅದನ್ನು 2023ರ ಮಾರ್ಚ್‌ನಲ್ಲಿ ಘೋಷಣೆ ಮಾಡಲಾಗಿದೆ. ಇನ್ನು ಸಾರಿಗೆಯ ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೆ 38 ತಿಂಗಳ ಆ ವೇತನ ಹೆಚ್ಚಳದ ಹಿಂಬಾಕಿ ಇನ್ನು ಕೊಡಿಸಲು ಸಾಧ್ಯವಾಗಿಲ್ಲ ಏಕೆ? ತಾನೆ ಶೇ.15ರಷ್ಟು ವೇತನ ಹೆಚ್ಚಳ ಮಾಡಿಸಿದ್ದು ಎಂದು ಬೊಬ್ಬೆಹೊಡೆದ ಮೇಲೆ 38 ತಿಂಗಳ ಹಿಂಬಾಕಿ ಕೊಡಿಸಲು ಏಕೆ ಇವರಿಂದ ಆಗುತ್ತಿಲ್ಲ.

ಏಕೆಂದರೆ ಇವರು ನೌಕರರ ಮುಂದೆ ಹುಲಿಗಳು, ಸರ್ಕಾರ ಮತ್ತು ಸಾರಿಗೆ ನಿಗಮಗಳ ಆಡಳಿತ ಮಂಡಳಿ ಮುಂದೆ ನರಿಗಳು. ಹೀಗಾಗಿ ಈವರೆಗೂ ಇವರಿಂದ 38 ತಿಂಗಳ ವೇತನ ಹಿಂಬಾಕಿ ಕೊಡಿಸಲು ಸಾಧ್ಯವಾಗಿಲ್ಲ. ನೆನಪಿನಲ್ಲಿ ಇಟ್ಟುಕೊಳ್ಳಿ ಮುಂದೆಯೂ ಇವರಿಂದ ಕೊಡಿಸಲು ಸಾಧ್ಯವಾಗುವುದಿಲ್ಲ. ಸರ್ಕಾರ ಮತ್ತು ಆಡಳಿತ ಮಂಡಳಿ ಮನಸ್ಸು ಮಾಡಿದರೆ ಮಾತ್ರ ಅದು ಸಾಧ್ಯ.

ಇನ್ನು ಸರ್ಕಾರ 38 ತಿಂಗಳ ಈ ಹಿಂಬಾಕಿ ಹಣವನ್ನು ಕೊಡುವುದಕ್ಕೆ ತೀರ್ಮಾನ ಮಾಡಿದ ಮೇಲೆ ಮತ್ತೆ ಈ ನರಿಗಳು ಅವರ ಮುಂದೆ ಬಾಲ ಮುದುರಿಕೊಂಡು ನಮಸ್ಕರಿಸಿ ಬಳಿಕ ನೌಕರರ ಮುಂದೆ ಹುಲಿಯಂತೆ ನಿಂತು ನೋಡಿ ನಮ್ಮಿಂದಲೇ ಇದು ಆಗಿದ್ದು ಇಲ್ಲ ಅಂದಿದ್ದರೆ ಸರ್ಕಾರ ಕೊಡುತ್ತಿರಲಿಲ್ಲ ಎಂದು ಫೋಸುಕೊಡುತ್ತಾರೆ. ಇವರಿಗೆ ನಾಚಿಕೆ, ಮಾನ, ಮರ್ಯಾದೆ ಎಂಬುವುದು ಸ್ವಲ್ಪವಾದರೂ ಇದೆಯೇ?

ಹೀಗಾಗಿ ಹೇಳುತ್ತಿದ್ದೇವೆ ಸ್ವಲ್ಪವಾದರೂ ತಿಳಿದುಕೊಳ್ಳಿ ಇವರಿಂದ ನೌಕರರಿಗೆ ಮುಂದೆಯೂ ಏನನ್ನು ಕೊಡಿಸಲು ಸಾಧ್ಯವಿಲ್ಲ. ಸರ್ಕಾರ ಕೊಟ್ಟಿದ್ದೆ ನಮಗೆ ಸಿಗೋದು. ಆದ್ದರಿಂದ ಎಲ್ಲ ಸಂಘಟನೆಗಳು ಈವರೆಗೂ ನೌಕರರಿಗೆ ಕೊಟ್ಟಿದ್ದು ಸಾಕು. ಇನ್ನಾದರೂ ಸಾರಿಗೆ ಸಂಸ್ಥೆಯಲ್ಲಿ ಒಂದೇ ಸಂಘಟನೆ ಅದು ಒಬ್ಬ ನುರಿತ ಅಧ್ಯಕ್ಷನ ಒಳಗೊಂಡಂತೆ ಉದಯವಾದರೆ ಮಾತ್ರ ನಾವು ಇತರೆ ನಿಗಮಗಳ ಮತ್ತು ಸರ್ಕಾರಿ ನೌಕರರು ಪಡೆಯುತ್ತಿರುವಂತೆ ಸೌಲಭ್ಯ ಪಡೆಯಲು ಸಾಧ್ಯ.

ಉದಾಹರಣೆಗೆ: ಸರ್ಕಾರಿ ಇಲಾಖೆಗಳ ಸರ್ಕಾರಿ ನೌಕರರ ಸಂಘ ಹೇಗೆ ಇದೆಯೋ ಹಾಗೆಯೇ ಹೋರಾಟಕ್ಕೆ ಕರೆ ಕೊಟ್ಟಾಗ ಸಾರಿಗೆ ನಿಗಮದ ಅಧಿಕಾರಿಗಳು ಸಹ ಬಂದು ಭಾಗವಹಿಸಿದಾಗ ಮಾತ್ರ ಸಾರಿಗೆ ನೌಕರರ ಎಲ್ಲ ಬೇಡಿಕೆಗಳು ಈಡೇರುವುದು ಸತ್ಯ. ಅಲ್ಲಿಯವರೆಗೂ ಇಂಥ ಇನ್ನೂ ನೂರು ಸಂಘಟನೆ ಹುಟ್ಟಿ ಬಂದರು ಸಾರಿಗೆ ನೌಕರರಿಗೆ ನ್ಯಾಯ ಕೊಡಿಸಲು ಸಾಧ್ಯವಿಲ್ಲ.

ಆದ್ದರಿಂದ ನೌಕರರು ಮೊದಲು ಬುದ್ದಿ ಕಲಿಬೇಕು. ಇದು ನನ್ನ ಸಂಘಟನೆ ಇದು ಅವನ ಸಂಘಟನೆ ಅವನನ್ನು ತುಳಿಬೇಕು. ನಾವು ಮೇಲೆ ಬರಬೇಕು ಎಂಬುದನ್ನು ಬಿಡಬೇಕು. ಈ ತತ್ವವನ್ನು ಎಂದು ನಾವೆಲ್ಲರೂ ತಿಳಿಯುತ್ತೇವೆಯೋ ಆ ದಿನ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ, ಇಲ್ಲದಿದ್ದರೆ ನಮ್ಮ ಕನಸು ತಿರುಕನ ಕನಸಾಗುತ್ತದೆ ಎಂದು ನೊಂದ ನೌಕರರು ಮನದಾಳವನ್ನು ಹಂಚಿಕೊಂಡಿದ್ದಾರೆ.

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...