CrimeNEWSನಮ್ಮಜಿಲ್ಲೆ

ಕಬ್ಬು ಬೆಂಕಿಗಾಹುತಿಯಾದ ನೋವಿನಲ್ಲಿದ್ದ ರೈತನಿಂದ ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು 400 ರೂ. ಪಡೆದಿದ್ದ ASI ಅಮಾನತು

ವಿಜಯಪಥ ಸಮಗ್ರ ಸುದ್ದಿ

ಬೀದರ್‌: ತಾನು ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿದ್ದ ನೋವಿನಲ್ಲಿದ್ದ ಬಡಪಾಯಿ ರೈತನಿಂದ ಬೀದರ್​ನ ಎಎಸ್​ಐ ಒಬ್ಬ 1000 ರೂಪಾಯಿ ಲಂಚಕ್ಕೆ ಕೈ ಚಾಚಿ ಈಗ ಅಮಾನತು ಶಿಕ್ಷಗೆ ಒಳಗಾಗಿದ್ದಾನೆ.

ಭ್ರಷ್ಟ ಈ ಪೊಲೀಸನ ಬಗ್ಗೆ ಲಂಚಾವತಾರವನ್ನು ಕಾತರಿಪಡಿಸಿಕೊಂಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಲಂಚಬಾಕ ಎಎಸ್​ಐ ಶೌರಾಜ್‌ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಬೀದರ್​ನಲ್ಲಿ ಅಸಹಾಯಕ ರೈತನೆದುರು ಚಿಲ್ಲರೆ ಕಾಸಿಗೆ ಈ ಪೊಲೀಸಪ್ಪ ಕೈಚಾಚಿದ್ದ. ಕಬ್ಬು ಸುಟ್ಟು ಕರಕಲಾಗಿದ್ದ ಜಮೀನಿನ ಪಂಚನಾಮೆಗೆ ಬಂದಿದ್ದ ಎಎಸ್‌ಐ ಶೌರಾಜ್, ಈ ಹೀನ ಕೃತ್ಯಕ್ಕೆ ಇಳಿದಿದ್ದ. ಜಿಲ್ಲೆಯ ಬೇಲೂರು ಗ್ರಾಮದ ರೈತನಿಂದ ಮಾನವೀಯತೆಯೇ ಇಲ್ಲದೇ ಎಎಸ್‌ಐ ಶೌರಾಜ್, ಹಣ ವಸೂಲಿ ಮಾಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಒಂದು ಸಾವಿರ ರೂಪಾಯಿಗೆ ರೈತನ ಬಳಿ ಬೇಡಿಕೆ ಇಟ್ಟಿದ್ದ ಹುಲಸೂರು ಠಾಣೆಯ ASI ಶೌರಾಜ್ ಕಡೆಗೂ 400 ರೂಪಾಯಿ ಪಡೆದೇ ತೀರಿದ್ರು. ಅನ್ನದಾತನ ಬಳಿ ಚಿಲ್ಲರೆ ಹಣಕ್ಕೆ ಕೈ ಚಾಚಿದ ಈತನ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು, ಆ ವರದಿ ಮಂದ ಕೆಲವೇ ಗಂಟೆಗಳಲ್ಲಿ ಎಎಸ್​ಐಯನ್ನು ಆಮಾನತು ಮಾಡಿ ಎಸ್‌ಪಿ ಆದೇಶ ಹೊರಡಿಸಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಬರದ ಛಾಯೆ ಆವರಿಸಿಕೊಂಡು ಮೊದಲೇ ಅನ್ನದಾತರು ಸಂಕಷ್ಟದಲ್ಲಿದ್ದರೆ. ಹಾಕಿರುವ ಫಸಲು ಕೈ ಸೇರದೆ ಬಳಲಿಹೊತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಮಾನವೀಯತೆ ಬಿಟ್ಟು ಇಂತಹ ಪರಿಸ್ಥಿತಿಯಲ್ಲಿ ರೈತರಿಂದ ಹಣ ಪೀಕುವ ಕೆಲಸವನ್ನು ಭ್ರಷ್ಟ ಅಧಿಕಾರಿಗಳು ಮಾಡುತ್ತಿರುವುದು ಭಾರಿ ನೋವಿನ ಸಂಘತಿ. ಇನ್ನಾದರೂ ಇದನ್ನು ಬಿಟ್ಟು ನೇಗಿಲ ಯೋಗಿಯ ನೆರವಿಗೆ ಬರಬೇಕಿದೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ