NEWSನಮ್ಮಜಿಲ್ಲೆನಮ್ಮರಾಜ್ಯ

BMTC: QR ಕೋಡ್‌ ಸ್ಕ್ಯಾನ್‌ ನೀನೇ ಮಾಡಬೇಕು – ಕೆಲ ಪ್ರಯಾಣಿಕರಿಂದ ಕಂಡಕ್ಟರ್‌ಗಳಿಗೆ ಅವಾಜ್‌

ವಿಜಯಪಥ ಸಮಗ್ರ ಸುದ್ದಿ
  • ಜನರಿಗೆ ಅರಿವು ಮೂಡಿಸದ ಅಧಿಕಾರಿಗಳು- ನಿತ್ಯ ಒತ್ತಡದಲ್ಲೇ ಕೆಲಸ ಮಾಡುತ್ತಿರುವ ಚಾಲಕರು

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಪ್ರಯಾಣಿಕರಿಗೂ ನಿಯಮಗಳು ಇವೆ. ಆದರೆ, ಪ್ರಯಾಣಿಕರಿಗೆ ಸಂಸ್ಥೆಗಳಲ್ಲಿ ಇರುವ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಈವರೆಗೂ ಯಾವುದೇ ಅಧಿಕಾರಿಗಳು ಮಾಡುವ ಬಗ್ಗೆ ಆಸಕ್ತಿಯನ್ನೇ ತೋರಿಸಿಲ್ಲ.

ನಿಗಮಗಳ ಉನ್ನತ ಅಧಿಕಾರಿಗಳ ಈ ನಿರಾಸಕ್ತಿಯಿಂದ ನಿತ್ಯ ಜನರ ಒಡನಾಟದಲ್ಲಿ ಇರುವ ಚಾಲನಾ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ಒಂದಿಲ್ಲೊಂದು ರೀತಿ ಪ್ರತಿದಿನ ಸಂಘರ್ಷ ನಡೆಯುತ್ತಲ್ಲೇ ಇದೆ. ಇದಕ್ಕೆ ಮುಖ್ಯ ಕಾರಣ ಚಾಲನಾ ಸಿಬ್ಬಂದಿಗಳು ನಿಗಮಗಳಲ್ಲಿ ಇರುವ ನಿಯಮವನ್ನು ಕಡ್ಡಾಯವಾಗಿ ಪಾಲಿಸಲೇ ಬೇಕು. ಇಲ್ಲದಿದ್ದರೆ ದಂಡ, ಅಮಾನತು, ವರ್ಗಾವಣೆ ಇದನ್ನು ಮೀರಿ ವಜಾದಂತಹ ಶಿಕ್ಷೆಯನ್ನು ಅಧಿಕಾರಿಗಳು ಕೊಡುತ್ತಾರೆ.

ಅದಂತೆ ಪ್ರಯಾಣಿಕರು ಮಾಡುವ ತಪ್ಪಿಗೆ ಸಾರಿಗೆ ಸಂಸ್ಥೆಗಳಲ್ಲಿಯ ನಿಯಮಗಳಿವೆ. ಆದರೆ ಅವರು ಮಾಡುವ ತಪ್ಪಿಗೆ ಈವರೆಗೂ ಸಮರ್ಪಕವಾದ ಶಿಕ್ಷೆಯನ್ನು ಕೊಟ್ಟಿಲ್ಲ. ಈ ತಾರತಮ್ಯತೆ ಏಕೆ ನಾವು ನಮ್ಮ ಮನೆ ಕೆಲಸ ಮಾಡುತ್ತಿದ್ದೇವಾ? ಏಕೆ ಈ ರೀತಿ ನಿಗಮದ ಉನ್ನತ ಅಧಿಕಾರಿಗಳು ಈ ಬಗ್ಗೆ ಬೇಜವಾಬ್ದಾರಿ ತೋರಿಸುತ್ತಿದ್ದಾರೆ ಎಂದು ನಿತ್ಯ ಯಾತನೆ ಅನುಭವಿಸುತ್ತಿರುವ 100ಕ್ಕೂ ಹೆಚ್ಚು ನೌಕರರು ವಿಜಯಪಥಕ್ಕೆ ಪತ್ರ ಬರೆಯುವ ಮೂಲಕ ತಮ್ಮ ನೋವವನ್ನು ತೋಡಿಕೊಂಡಿದ್ದಾರೆ.

ಈ ವರದಿಯನ್ನು ಮಾಡುವುದಕ್ಕೆ ಮುಖ್ಯ ಕಾರಣವೂ ಇದೆ. ಹೌದು! ಸಾರಿಗೆಯ ನಿಗಮಗಳಲ್ಲಿ ಒಂದಾದ ಬಿಎಂಟಿಸಿಯಲ್ಲಿ ಆನ್‌ಲೈನ್‌ ಮೂಲಕ ದಿನದ, ವಾರದ ಮತ್ತು ತಿಂಗಳ ಪಾಸ್‌ ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ಇದರಿಂದ ಪ್ರಯಾಣಿಕರಿಗೆ ಸಮಯ ಉಳಿತಾಯವಾಗುತ್ತಿದೆ. ಆದರೆ, ಆನ್‌ಲೈನ್‌ ಮೂಲಕ ಪಡೆದ ಪಾಸ್‌ಅನ್ನು ಪ್ರಯಾಣಿಸುವಾಗ ಬಸ್‌ನಲ್ಲಿ ನಿರ್ವಾಹಕರಿಗೆ ತೋರಿಸಲು ಬಸ್‌ನ ಎರಡು ಕಡೆ ಸ್ಕ್ಯಾನಿಂಗ್‌ QR ಕೋಡ್‌ ಹಾಕಲಾಗಿದೆ.

ಆದರೆ, ಈ QR ಕೋಡ್‌ನಿಂದ ಮೊಬೈಲ್‌ನಲ್ಲಿ ಸ್ಕ್ಯಾನ್‌ ಮಾಡಿ ಓಕೆ ಎಂಬುದನ್ನು ನಿರ್ವಾಹಕರಿಗೆ ತೋರಿಸಬೇಕು. ಬಹುತೇಕ ಆನ್‌ಲೈನ್‌ಪಾಸ್‌ ಪಡೆದವರು ಇದನ್ನು ಮಾಡುತ್ತಾರೆ. ಆದರೆ, ಇನ್ನು ಕೆಲ ಪ್ರಯಾಣಿಕರು QR ಕೋಡ್‌ ಸ್ಕ್ಯಾನ್‌ ಮಾಡಿ ತೋರಿಸುವುದಕ್ಕೆ ಹೋಗುವುದಿಲ್ಲ. ಈ ಬಗ್ಗೆ ನಿರ್ವಾಹಕರು ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು. ಜತೆಗೆ ನೀನೆ ಸ್ಕ್ಯಾನಿಂಗ್‌ ಮಾಡು ಮೊಬೈಲ್ ತೆಗೆದುಕೊ ಎಂದು ಗಲಾಟೆ ಮಾಡುತ್ತಿರುವುದು ಕಂಡು ಬರುತ್ತಿದೆ.

ಇಲ್ಲಿ ನಿರ್ವಾಹಕರಿಗೆ ಸ್ಕ್ಯಾನಿಂಗ್‌ ಮಾಡುವುದಕ್ಕೆ ಅವಕಾಶವಿಲ್ಲ. ಕಾರಣ ಆನ್‌ಲೈನ್‌ನಲ್ಲಿ ಪಾಸ್‌ ಪಡೆದ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಸ್ಕ್ಯಾನ್‌ ಮಾಡಬೇಕು. ಈ ವೇಳೆ ಸ್ಕ್ಯಾನ್‌ ಮಾಡದೆ ಕೆಲ ಪ್ರಯಾಣಿಕರು ನಾನು ಆನ್‌ಲೈನ್‌ನಲ್ಲಿ ಪಾಸ್‌ ಪಡೆದುಕೊಂಡಿದ್ದೇನೆ. ನಾನು ಸುಳ್ಳು ಹೇಳುತ್ತಿಲ್ಲ ಬೇಕಾದರೆ ನೀನೆ ಸ್ಕ್ಯಾನ್‌ ಮಾಡಿ ನೋಡಿಕೊ ಎಂದು ಉದ್ಧಟತನದಿಂದ ವರ್ತಿಸುತ್ತಿದ್ದಾರೆ.

ಇಲ್ಲ ಇದು ನಿಮ್ಮ ಕೆಲಸ ಮಾಡಿ ಎಂದು ನಿರ್ವಾಹಕರು ಮನವಿ ಮನವಿ ಮಾಡಿದರೆ, ಹೌದ ನಾನು ಮೊಬೈಲ್‌ನಲ್ಲೇ ವಿಡಿಯೋ ಮಾಡುತ್ತೇನೆ ಇದು ನನ್ನ ಕೆಲಸವಲ್ಲ ಅಂಥ ಹೇಳು ಎಂದು ನಿರ್ವಾಹಕರ ಜತೆ ಗಲಾಟೆಗೆ ಇಳಿಯುತ್ತಿದ್ದಾರೆ. ಇದರಿಂದ ನಿರ್ವಾಹಕರು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ.

ಇನ್ನಾದರೂ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ ಅವರು, ಈ ಬಗ್ಗೆ ಕ್ರಮ ಕೈಗೊಂಡು ಬಸ್‌ನಲ್ಲಿ QR ಕೋಡ್‌ ಪಕ್ಕದಲ್ಲೇ ನಿರ್ವಾಹಕರಿಗೆ ಏನು ಸೂಚನೆಗಳನ್ನು ಕೊಟ್ಟಿದ್ದೀರಿ, ಅಂದರೆ, ಆನ್‌ಲೈನ್‌ ಮೂಲಕ ಪಾಸ್‌ ಪಡೆದ ಪ್ರಯಾಣಿಕರು ಬಸ್‌ ಹತ್ತಿದ ಕೂಡಲೇ QR ಕೋಡ್‌ ಸ್ಕ್ಯಾನ್‌ ಮಾಡಬೇಕು. ಒಂದು ವೇಳೆ ಸ್ಕ್ಯಾನ್‌ ಆಗಿಲ್ಲ ಎಂದರೆ ಹಣಕೊಟ್ಟು ಟಿಕೆಟ್‌ ಪಡೆದು ಪ್ರಯಾಣಿಸಬೇಕು ಎಂಬುದರ ಬಗ್ಗೆ ಸೂಚನಾ ಫಲಕವನ್ನು ಅಳವಡಿಸಬೇಕು ಎಂದು ನಿರ್ವಾಹಕರು ಮನವಿ ಮಾಡಿದ್ದಾರೆ.

ಚಾಲಕರಿಗೂ ತಪ್ಪದ ಕಿರಿಕಿರಿ: ಇನ್ನು ಚಾಲಕರು ಕೂಡ ಹಲವು ರೀತಿಯ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ. ಸಿಗ್ನಲ್‌ಗಳಲ್ಲಿ ಬಸ್‌ ನಿಲ್ಲಿಸಿದಾಗ ಕೆಲ ಪ್ರಯಾಣಿಕರು ಇಳಿಯಬೇಕು ಎಂದು ಹೇಳುತ್ತಾರೆ. ಈ ವೇಳೆ ಡೋರ್‌ ಓಪನ್‌ ಮಾಡುವಂತೆ ಕೇಳುತ್ತಾರೆ. ಆದರೆ ನಿಜವಾಗಿಯೂ ಸಿಗ್ನಲ್‌ಗಳಲ್ಲಿ ಇಳಿಸುವುದಕ್ಕೆ ಚಾಲಕರಿಗೆ ಅನುಮತಿ ಇಲ್ಲ. ಬಸ್‌ನಿಲ್ದಾಣದಲ್ಲೇ ಇಳಿಸಬೇಕು. ಒಂದು ವೇಳೆ ಸಿಗ್ನಲ್‌ನಲ್ಲಿ ಇಳಿಯುವುದಕ್ಕೆ ಡೋರ್‌ ಓಪನ್‌ ಮಾಡಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಉನ್ನತ ಅಧಿಕಾರಿಗಳು ಎಚ್ಚರಿಕೆ ಕೊಟ್ಟಿದ್ದಾರೆ.

ಆದರೆ, ಕೆಲ ಪ್ರಯಾಣಿಕರು ಸಿಗ್ನಲ್‌ನಲ್ಲಿ ಇಳಿಯುವುದಕ್ಕೆ ಚಾಲಕರು ಡೋರ್‌ ಓಪನ್‌ ಮಾಡಿಲ್ಲ ಎಂದು ಡಿಪೋಗಳಿಗೆ ಲಿಖಿತವಾಗಿ ದೂರು ನೀಡಿದರೆ, ಚಾಲಕರನ್ನೇ ಆರೋಪಿಯನ್ನಾಗಿ ಮಾಡಿ ವಿಚಾರಣೆ ಮಾಡುತ್ತಾರೆ ಕೆಳ ಹಂತದ ಅಧಿಕಾರಿಗಳು, ಇದರಿಂದ ಚಾಲಕರು ಕೂಡ ತಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ.

ಅಂದರೆ, ಸಿಗ್ನಲ್‌ನಲ್ಲಿ ಬಸ್‌ ನಿಲ್ಲಿಸಿದಾಗ ಇಳಿಸಿದರೂ ಕಷ್ಟ ಇಳಿಸದಿದ್ದರೂ ಕಷ್ಟ ಎಂಬ ಪರಿಸ್ಥಿತಿಯಲ್ಲಿ ಚಾಲಕರು ಸಿಲುಕಿ ಒದ್ದಾಡುತ್ತಿದ್ದಾರೆ. ಹಾಗಾಗಿ ಈ ಬಗ್ಗೆಯೂ ಡೋರ್‌ಬಳಿ ಪ್ರಯಾಣಿಕರಿಗೆ ಕಾಣುವಂತೆ ಸೂಚನಾ ಫಲಕವನ್ನು ಅಳವಡಿಸಿದರೆ ಪ್ರಯಾಣಿಕರು ಚಾಲಕರ ಜತೆ ಗಲಾಟೆ ಮಾಡುವುದು ತಪ್ಪುದೆ ಎಂದು ಕೆಲ ಚಾಲಕರು ಮನವಿ ಮಾಡಿದ್ದಾರೆ.

ಶನಿವಾರ (ಡಿ.16) ನಾವು ಮೆಜೆಸ್ಟಿಕ್‌ನಿಂದ ಮಾರ್ಕೆಟ್‌ ಮಾರ್ಗವಾಗಿ ಬಸ್‌ ಕಾರ್ಯಾಚರಣೆ ಮಾಡುತ್ತಿದ್ದಾಗ 40ರಿಂದ 45 ವರ್ಷದ ವ್ಯಕ್ತಿಯೊಬ್ಬರು ನಮ್ಮ ಬಸ್‌ ಹತ್ತಿದ್ದರು, ಈ ವೇಳೆ ಅವರನ್ನು ಟಿಕೆಟ್‌ ಪಡೆಯುವಂತೆ ಕೇಳಿದೆ, ಅವರು ಇಲ್ಲ ನನ್ನದು ಪಾಸ್‌ ಎಂದು ಹೇಳಿದರು. ತೋರಿಸಿ ಎಂದು ಕೇಳಿದಕ್ಕೆ ಅವರು ಬೇಕಾದರೆ ನೀನೆ ಸ್ಕ್ಯಾನ್‌ ಮಾಡಿಕೊ ಎಂದು ಬೇಜವಾಬ್ದಾರಿಯಿಂದ ವರ್ತಿಸಿದರು. ಆದರೂ ತಾಳ್ಮೆಯಿಂದಲೇ ನನ್ನ ಒಂದು ಕೈಯಲ್ಲಿ ಇಟಿಎಂ ಯಂತ್ರವಿದೆ ಮತ್ತೊಂದು ಕೈಯಲ್ಲಿ ಹಣವಿದೆ ಹೇಗೆ ಮಾಡುವುದು ನೀವೆ ಸ್ಕ್ಯಾನ್‌ ಮಾಡಿ ತೋರಿಸಿ ಎಂದೆ. ಅದಕ್ಕೆ ಈಗ ಹೇಳಿದ್ದನ್ನು ಮತ್ತೊಮ್ಮೆ ಹೇಳು ನಾನು ವಿಡಿಯೋ ಮಾಡಿಕೊಂಡು ನಿಮ್ಮ ಅಧಿಕಾರಿಗಳಿಗೆ ಕಳಿಸುತ್ತೇವೆ ಇದು ನಿನ್ನ ಕೆಲಸವಲ್ಲವಾ ಎಂದು ಏರು ಧ್ವನಿಯಲ್ಲೇ ಹೇಳಿದ. ಆ ಕೋಪದಲ್ಲೇ ಸ್ಕ್ಯಾನ್‌ ಮಾಡಿ ತೋರಿಸಿದ. ಬಳಿಕ ಪುರಭವನದಲ್ಲೇ ಇಳಿದು ಹೋದ. ಆದರೆ, ಆ ವ್ಯಕ್ತಿ ಮಾಡಿದ ಗಲಾಟೆಯಿಂದ ಇಡೀ ದಿನ ನನಗೆ ಕರ್ತವ್ಯ ಮಾಡುವುದಕ್ಕೆ ಆಗಲೇ ಇಲ್ಲ. ಆದರೂ ಒತ್ತಡದಲ್ಲೇ ಕೆಲಸ ಮಾಡಿದೆ. ಈ ಬಗ್ಗೆ ನಮ್ಮ ಎಂಡಿ ಮೇಡಂ ಅವರು ಸೂಕ್ತ ಗಮನಹರಿಸಬೇಕು.

l ಹೆಸರೇಳಲಿಚ್ಚಿಸದ ಬಿಎಂಟಿಸಿ ನಿರ್ವಾಹಕರು

1 Comment

  • ವಿಜಯಪಥ ಪೂರ್ಣ ಮಾಹಿತಿ ಪಡೆದು ಲೇಖನ ಬರೆಯಬೇಕು.ಬಿಎಂಟಿಸಿ ವತಿಯಿಂದ ಹೊರಡಿಸಿರುವ FAQ ಒಮ್ಮೆ ನೋಡಿ. ಕೆಲವೊಂದು ಬಸ್ ಗಳಲ್ಲಿ QR code ಮಾಸಿ ಹೋಗಿರುತ್ತೆ. ನಿರ್ವಾಹಕರು ಉದ್ದಟತನ ಮೆರೆದು ಡ್ರೈವರ್ ಬಳಿ ಇರುವ QR CODE ಸ್ಕ್ಯಾನ್ ಮಾಡೋಕೆ ಕಳಿಸುತ್ತಾರೆ.

    How can I validate my pass inside the bus?
    There are three ways to validate your ticket/pass.

    Once you open your ticket/pass on the Tummoc app:

    1. Tap on the Scan QR button in Tummoc app and scan the QR that the conductor presents.

    2. Show your QR code to the conductor for him/her to scan with his/her QR code scanner using ETM device/mobile app.

    3. Let the conductor go through the ticket/pass details manually to verify the validity and any other vital details.

    How do I present the pass to the conductor and the line checker?
    You need to show the ticket/pass on the Tummoc app for the conductor/line checker to verify your ticket.

    Additionally, in the case of passes, you may be asked for the ID number of the ID that you used while booking your pass.

    What happens if my internet is not working?
    If your internet isn’t working, then you can give the conductor your ticket number or the registered phone number with which you bought the ticket/pass. He/she will then verify this on his app/ETM device.

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...