NEWSನಮ್ಮಜಿಲ್ಲೆನಮ್ಮರಾಜ್ಯ

BMTC: ಏ.5ರೊಳಗೆ ನೌಕರರ ವೇತನ ಪರಿಷ್ಕರಣೆ ಹಿಂಬಾಕಿ ಸೇರಿ ಎಲ್ಲ ಹಿಂಬಾಕಿ  ಬಿಲ್ಲುಗಳ ಸಲ್ಲಿಸಿ – ಲೆಕ್ಕಾಧಿಕಾರಿ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಿಎಂಟಿಸಿಯ ಎಲ್ಲ ಘಟಕಗಳ ಹಿರಿಯ/ ಘಟಕ ವ್ಯವಸ್ಥಾಪಕರು, ಕಾರ್ಯ ವ್ಯವಸ್ಥಾಪಕರು, ಕಾರ್ಯಾಗಾರ, ನಿಲ್ದಾಣಾಧಿಕಾರಿಗಳು 31.03.2024 ರ ಅಂತಿಮ ಜವಾಬ್ದಾರಿ ಮತ್ತು ಹಬ್ಬದ ಮುಂಗಡ ಪಟ್ಟಿ (Outstanding liabilities & Festival Advance Schedule) ನೀಡುವುದಕ್ಕೆ ಸಂಬಂಧಿಸಿದ ವಿವರವನ್ನು  ಏ.5ರೊಳಗೆ ವೇತನ ಶಾಖೆಗೆ ಸಲ್ಲಿಸಬೇಕು ಎಂದು ಸಂಸ್ಥೆಯ ಉಪಮುಖ್ಯ ಲೆಕ್ಕಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಹೌದು! ಈ ಎಲ್ಲ ಮಾಹಿತಿಯನ್ನು ಬರುವ ಏಪ್ರಿಲ್‌ 5ರೊಳಗಾಗಿ ವಿಶೇಷ ಟಪಾಲಿನಲ್ಲಿ ಅಂದರೆ ವೈಯುಕ್ತಿಕವಾಗಿ ವೇತನ ಶಾಖೆಗೆ ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಗಳಿಗೆ ಬುಧವಾರ ಸೂಚನೆ ನೀಡಿದ್ದಾರೆ.

2023-24 ನೇ ಸಾಲಿನ ಆರ್ಥಿಕ ವರ್ಷವು ಇದೇ ಮಾರ್ಚ್‌ 31ಕ್ಕೆ ಅಂತ್ಯಗೊಳ್ಳಲಿದ್ದು ವೇತನ ಪಾವತಿಗೆ ಸಂಬಂಧಿಸಿದ ಈ ಕೆಳಕಂಡ ಎಲ್ಲ ಹೊಣೆಗಾರಿಕೆಗಳನ್ನು ಲೆಕ್ಕಾಚಾರ ಮಾಡಿ ಕೇಂದ್ರ ಕಚೇರಿಗೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

1. 31.03.2024ರ ಅಂತ್ಯಕ್ಕೆ ಸಂಸ್ಥೆಯ ನೌಕರರಿಗೆ ಪಾವತಿಸಲು ಬಾಕಿ ಇರುವ ರಜಾ ವೇತನ, ಹಿಂಬಾಕಿ ವೇತನ ಪಾವತಿಗಳ ಮೊತ್ತಗಳ ಸಿಬ್ಬಂದಿವಾರು/ ಲೆಕ್ಕಶೀರ್ಷಿಕೆವಾರು ವಿವರಗಳನ್ನು ನೀಡಬೇಕು.

2. 01.01.2020 ರಿಂದ 28.02.2023 ರವರೆಗಿನ ಎಲ್ಲ ಸಿಬ್ಬಂದಿಗಳ ವೇತನ ಪರಿಷ್ಕರಣೆ ಹಿಂಬಾಕಿ ಲೆಕ್ಕಾಚಾರ ಪಟ್ಟಿ (ವಾಸ್ತವಿಕ ಮೊತ್ತ ಲೆಕ್ಕಾಚಾರ ಮಾಡುವುದು, ಹೊಣೆಗಾರಿಕೆ ಕಲ್ಪಿಸಲು ಮಾತ್ರ).

3. 31.03.2024ರ ಒಳಗಾಗಿ ಮಾಸಿಕ ವೇತನ ಪಟ್ಟಿಯಲ್ಲಿ ಅನುಷ್ಠಾನವಾಗಿ ಆದರೆ ಪಾವತಿಸಲು ಬಾಕಿ ಇರುವ ವಾರ್ಷಿಕ ವೇತನ ಬಡ್ತಿಯ ಹಿಂಬಾಕಿ ಮೊತ್ತ, (ಕಳೆದ ವರ್ಷಗಳು ಸೇರಿದಂತೆ ಯಾವುದಾದರೂ ಪಾವತಿ ಬಾಕಿ ಇದ್ದರೆ.)

4. 31.03.2024ರೊಳಗಾಗಿ ಪಾವತಿಸಲು ಬಾಕಿ ಇರುವ ತುಟ್ಟಿ ಭತ್ಯೆ ಹಿಂಬಾಕಿ ಬಿಲ್ಲುಗಳು ಅಂದರೆ, 01.07.2022 ರಿಂದ ಅನ್ವಯವಾಗುವ 3.75% ತುಟ್ಟಿಭತ್ಯೆಯ 05 ತಿಂಗಳುಗಳ ಹಿಂಬಾಕಿ ತುಟ್ಟಿಭತ್ಯೆ. 01.01.2023 ರಿಂದ ಅನ್ವಯವಾಗುವ 4% ತುಟ್ಟಿಭತ್ಯೆಯ 7 ತಿಂಗಳುಗಳ ತುಟ್ಟಿ ಭತ್ಯೆ ಹಿಂಬಾಕಿ.

01.07.2023 ರಿಂದ ಅನ್ವಯವಾಗುವ 3.75% ತುಟ್ಟಿಭತ್ಯೆ 04 ತಿಂಗಳುಗಳ ಹಿಂಬಾಕಿ ತುಟ್ಟಿ ಭತ್ಯೆ. 01.01.2024 ರಿಂದ ಅನ್ವಯವಾಗುವ 3.75% ತುಟ್ಟಿಭತ್ಯೆಯ ತಿಂಗಳನ (ಫೆಬ್ರವರಿ-2024) ತುಟ್ಟಿ ಭತ್ಯೆ ಹಿಂಬಾಕಿ ಸಂಬಂಧ ಪ್ರತ್ಯೇಕ ವಿವರಗಳನ್ನು ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

5. ಮಾಸಿಕ ವೇತನ, ವೇತನ ಹಿಂಬಾಕಿ (ನ್ಯಾಯಾಲಯದ ಪ್ರಕರಣಗಳ ಹಿಂಬಾಕಿ ಮೊತ್ತ ಇತ್ಯಾದಿ) ಧನಾದೇಶಗಳ ಅವಧಿ ಮುಕ್ತಾಯಗೊಂಡಿದ್ದಲ್ಲಿ, ಸಂಬಂಧಿತ ಲೆಕ್ಕಶೀರ್ಷಿಕೆಯಡಿ UDP ಮೊತ್ತವನ್ನು (ನಗದು/ಧನಾದೇಶ) ಕೇಂದ್ರ ಕಚೇರಿಯಲ್ಲಿ 28/03/2024ರೊಳಗಾಗಿ ಸಂದಾಯ ಮಾಡಲು ಕ್ರಮ ವಹಿಸಬೇಕು.

6. 31.03.2024 ರ ಅಂತಿಮಕ್ಕೆ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗಿರುವ ಪ್ರಕರಣಗಳ ಹಿಂಬಾಕಿ ವೇತನ ಮೊತ್ತದ ಜವಾಬ್ದಾರಿಯ ಪಟ್ಟಿ (ಕಳೆದ ವರ್ಷಗಳು ಸೇರಿದಂತೆ) ಸಲ್ಲಿಸಬೇಕು.

7. ಪರೀಕ್ಷಣಾರ್ಥಿಗಳ ವೇತನ ವ್ಯತ್ಯಾಸದ ಬಾಕಿ ಮೊತ್ತದ ವಿವರಗಳು (ಲೆಕ್ಕಶೀರ್ಷಿಕೆವಾರು)-(ಕಳೆದ ವರ್ಷಗಳು ಸೇರಿದಂತೆ) ಎಲ್ಲವನ್ನು ಸಲ್ಲಿಸಬೇಕು.

8. ಘಟಕದಲ್ಲಿ ಹಬ್ಬದ ಮುಂಗಡ ಪಡೆದಿರುವ ಉದ್ಯೋಗಿಗಳಿಂದ 31.03.2024 ಕ್ಕೆ ಬಾಕಿಯಿರುವ ಮೊತ್ತದ ವಿವರಣಾ ಪಟ್ಟಿ (ವೇತನದಲ್ಲಿ ಕಡಿತವಾಗಿರುವ ಹಾಗೂ ಘಟಕದಲ್ಲಿ ಸಂದಾಯವಾಗಿರುವ ಮೊತ್ತವನ್ನು ಹಬ್ಬದ ಮುಂಗಡದೊಂದಿಂಗೆ ತಾಳೆ ಮಾಡಿ) ಸಲ್ಲಿಸಬೇಕು.

9. 2018 ನೇ ಸಾಲನ ಬಿ.ಡಿ.ಎ ಹಿಂಬಾಕಿ ಮೊತ್ತದ ವಾಸ್ತವಿಕ ವೆಚ್ಚದ ಬಿಲ್ಲುಗಳನ್ನು ಸಲ್ಲಿಸುವುದು. 10. 2018-19, 2019-20, 2021-22, 2022-23 ಹಾಗೂ 2023-24ನೇ ಸಾಲಿನ ಗಳಿಕೆ ರಜೆ ನಗದೀಕರಣದ ವಾಸ್ತವಿಕ ವೆಚ್ಚದ ಬಿಲ್ಲುಗಳನ್ನು ಸಲ್ಲಿಸಬೇಕು.

ಈ ಎಲ್ಲ ವಿವರವನ್ನು ಸಂಬಂಧಿಸಿದ ಲೆಕ್ಕಪತ್ರ ಮೇಲ್ವಿಚಾರಕರು/ ಅಧೀಕ್ಷಕರು ಯಾವುದೇ ವಿಳಂಬಕ್ಕೆ ಆಸ್ಪದ ನೀಡದೇ ವೈಯಕ್ತಿಕ ಗಮನ ಹರಿಸಿ ಕೋರಿದ ಮಾಹಿತಿಯನ್ನು ನಿಗದಿತ ಸಮಯದಲ್ಲಿ ದೃಢೀಕೃತ ಪಟ್ಟಿ ಸಲ್ಲಿಸಲು ಘಟಕ ವ್ಯವಸ್ಥಾಪಕರು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ.

ಇನ್ನು ಈ ಎಲ್ಲ ಹಿಂಬಾಕಿ ಲೆಕ್ಕಚಾರ ಪಟ್ಟಿಗಳನ್ನು ಸಲ್ಲಿಸುವಾಗ ಸೇವಾನಿರತ ಹಾಗೂ ಸೇವಾ ವಿಮುಕ್ತಿ ಪ್ರಕರಣಗಳ ಲೆಕ್ಕಾಚಾರ ಪಟ್ಟಿಗಳನ್ನು ಪ್ರತ್ಯೇಕವಾಗಿ ಸಲ್ಲಿಸಬೇಕು.

ನಿಧನ ಪ್ರಕರಣಗಳಲ್ಲಿ ಕಡ್ಡಾಯವಾಗಿ ನಾಮನಿರ್ದೇಶಿತರ ಹೆಸರು ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿ ಕಳುಹಿಸಬೇಕು. ಅಂತರ್‌ ನಿಗಮದ ವರ್ಗಾವಣೆ. ಶಾಶ್ವತ ವಿಲೀನಾತಿಯನ್ವಯ ನಿಯೋಜನೆಯ ಪ್ರಕರಣಗಳಲ್ಲಿ ವರ್ಗಾವಣೆ/ ನಿಯೋಜನೆಗೊಂಡ ನಿಗಮ ಹಾಗೂ ವಿಭಾಗಗಳ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು.

ಇನ್ನು ಪ್ರಮುಖವಾಗಿ ಎಲ್ಲ ಹಿಂಬಾಕಿ ಬಿಲ್ಲುಗಳನ್ನು ಪ್ರತ್ಯೇಕವಾಗಿ ಸಲ್ಲಿಸುವುದರ ಜತೆಗೆ ಅಡಕಗೊಳಿಸಿರುವ ವರ್ಗಾವಾರು/ ಲೆಕ್ಕಶೀರ್ಷಿಕೆವಾರು ಪ್ರತ್ಯೇಕಿಸಿ ದೃಢೀಕೃತ ಪಟ್ಟಿಯನ್ನು 5.04.2024 ರೊಳಗಾಗಿ ವೈಯುಕ್ತಿಕವಾಗಿ ವೇತನ ಶಾಖೆಗೆ ಸಲ್ಲಿಸಲುಕ್ರಮ ಕೈಗೊಳ್ಳಬೇಕು ಎಂದು ಉಪಮುಖ್ಯ ಲೆಕ್ಕಾಧಿಕಾರಿ ಸೂಚನೆ ನೀಡಿದ್ದಾರೆ.

Leave a Reply

error: Content is protected !!
LATEST
ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಮಕ್ಕಳಿಂದ ಅರ್ಜಿ ಆಹ್ವಾನ: ಷರತ್ತು ಅನ್ವಯ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ- ಬೆಂಗಳೂರಿಗೂ ಆಗಮಿಸಲಿದ್ದಾನೆ ವರುಣ