NEWSನಮ್ಮಜಿಲ್ಲೆನಮ್ಮರಾಜ್ಯ

BMTC ಬಸ್‌ನಲ್ಲಿ ಕಳೆದುಕೊಂಡಿದ್ದ ಲ್ಯಾಪ್‌ಟಾಪ್‌ಅನ್ನು ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ನೌಕರರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೆಂಗೇರಿ – ಬನಶಂಕರಿ ನಡುವೆ ಸಂಚರಿಸುವ ( ಮಾರ್ಗ ಸಂಖ್ಯೆ 375) ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟುಹೋಗಿದ್ದ ಲ್ಯಾಪ್‌ಟಾಪ್‌ ಮತ್ತು ಬ್ಯಾಗನ್ನು ಮತ್ತೆ ಅವರಿಗೆ ತಲುಪಿಸುವ ಮೂಲಕ ಬಿಎಂಟಿಸಿ ನೌಕರರು ಪ್ರಾಮಾಣಿಕತೆ ಮೆರೆದಿದ್ದಾರೆ.

ಸಾರಿಗೆ ನೌಕರರು ಇಂಥ ಹಲವಾರು ಪ್ರಾಮಾಣಿಕ ಸೇವೆ ಮಾಡುತ್ತಿರುತ್ತಾರೆ. ಆದರೆ ಅವುಗಳಲ್ಲಿ ಬೆಳಕಿಗೆ ಬರುವುದು ತೀರ ಕಡಿಮೆ. ಜತೆಗೆ ಅವರಿಗೆ ಕೊಡುತ್ತಿರುವ ವೇತನವೂ ಅಷ್ಟೇ ಕಡಿಮೆ ಇದೆ. ಆದರೂ ನೌಕರರು ಪ್ರಾಮಾಣಿಕತೆ ಬಿಡುವುದಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತುತಲೇ ಇರುತ್ತದೆ.

ಹೌದು ! ಇಂದು (ನ.28) ಕೆಂಗೇರಿ – ಬನಶಂಕರಿ ನಡುವೆ ಸಂಚರಿಸುವ ಮಾರ್ಗ ಸಂಖ್ಯೆ 375 ರಲ್ಲಿ ಅಶ್ವಿನಿ ಎಂಬುವವರು ಪ್ರಯಾಣಿಸುವಾಗ ಮರೆತು ಬ್ಯಾಗು ಮತ್ತು ಲ್ಯಾಪ್‌ಟಾಪ್‌ ಬಿಟ್ಟುಹೋಗಿದ್ದರು. ಈ ವೇಳೆ ಅದನ್ನು ಗಮನಿಸಿದ ನಿರ್ವಾಹಕರು ಮತ್ತು ಚಾಲಕರು ಆ ಬ್ಯಾಗು ಮತ್ತು ಲ್ಯಾಪ್‌ಟಾಪ್‌ಅನ್ನು ಬನಶಂಕರಿ ಬಸ್ ನಿಲ್ದಾಣದಲ್ಲಿದ್ದ ಅಧಿಕಾರಿಗಳಿಗೆ ತಲುಪಿಸಿದರು.

ಆ ಬಳಿಕ ಬ್ಯಾಗ್‌ನಲ್ಲಿ ಇದ್ದ ಫೋನ್‌ಮೂಲಕ ಅಶ್ವಿನಿಯವರನ್ನು ಸಂಪರ್ಕಿಸಿದ ಅಧಿಕಾರಿಗಳು ಬಳಿಕ ಅದನ್ನು ಆಕೆಗೆ ರಾತ್ರಿ 7.30ರಲ್ಲಿ ತಲುಪಿಸಿದ್ದಾರೆ. ಈ ವೇಳೆ ನಿಲ್ದಾಣಾಧಿಕಾರಿ ಮಹಾದೇವಯ್ಯ ಹಾಗೂ ಮೆಕ್ಯಾನಿಕ್ ಲಕ್ಕಪ್ಪ ಅವರು ಅಶ್ವಿನಿ ಅವರಿಗೆ ಬ್ಯಾಗು ಮತ್ತು ಲ್ಯಾಪ್‌ಟಾಪ್‌ಅನ್ನು ಮರಳಿಸಿದ್ದಾರೆ.

ಈ ವೇಳೆ ಮಾತನಾಡಿದ ಅಶ್ವಿನಿ, ಬಿಎಂಟಿಸಿಯ ಪ್ರಾಮಾಣಿಕ ನೌಕರರ ಸೇವೆಯನ್ನು ಶ್ಲಾಘಿಸಿದ್ದು ಸಂಸ್ಥೆಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದರು.

ಇನ್ನು ಇಂತಹ ಶ್ಲಾಘನೀಯ ಕಾರ್ಯಗಳು ಎಲ್ಲರಿಗೂ ಮಾರ್ಗದರ್ಶನವಾಗಿ ಸಂಸ್ಥೆಗೆ ಒಳ್ಳೆಯ ಹೆಸರು ತರುವಲ್ಲಿ ನಮ್ಮ ನೌಕರರು ಹಿಂದೆ ಸರಿಯುವುದಿಲ್ಲ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ ಸಂತಸ ವ್ಯಕ್ತಪಡಿಸಿದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ