CrimeNEWSನಮ್ಮರಾಜ್ಯ

BMTCಯಲ್ಲಿ ಲಂಚಾವತಾರ: 94 ವಿವಿಧ ಅಧಿಕಾರಿಗಳು, ನೌಕರರ ವಿರುದ್ಧ ಲೋಕಾಯುಕ್ತಕ್ಕೆ ದೂರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಭ್ರಷ್ಟಾಚಾರದ ಅಡ್ಡೆಯಾಗೋಗಿದೆ, ಇದರಿಂದ ಬೇಸತ್ತಿರುವ ನೌಕರರು ಇಲ್ಲಿ ನಮಗೆ ನ್ಯಾಯ ಸಿಗೋದಿಲ್ಲ ಎಂದು ಸಂಸ್ಥೆಯ ವಿವಿಧೆಡೆ ಡ್ಯೂಟಿ ಮಾಡುತ್ತಾ ಭ್ರಷ್ಟಾಚಾರವನ್ನೇ ಹೊದ್ದಿಕೊಂಡಿರುವ 94 ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಈ ಭ್ರಷ್ಟರ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಮೂಲಕ ನಮಗೆ ನ್ಯಾಯಕೊಡಿಸಿ ಎಂದು ಮನವಿ ಮಾಡಿದ್ದಾರೆ.

ಇತ್ತೀಚೆಗಷ್ಟೇ ಲೋಕಾಯುಕ್ತಕ್ಕೆ ದೂರು ನೀಡಿರುವ ನೌಕರರು ವಿವಿಧ ಡಿಪೋಗಳಲ್ಲಿ ಕರ್ತವ್ಯ ನಿರತ 94 ಅಧಿಕಾರಿಗಳ ವಿರುದ್ಧ ಹೆಸರು ಮತ್ತು ಅವರ ಹುದ್ದೆ ಸಹಿತ ದೂರು ನೀಡಿದ್ದಾರೆ.

ಆ ಎಲ್ಲ ಅಧಿಕಾರಿಗಳು ಮತ್ತು ಇತರ ನೌಕರರು ಯಾರೆಲ್ಲ ಲೋಕಾಯುಕ್ತರಿಗೆ ನೀಡಿರುವ ದೂರು ಪಟ್ಟಿಯಲ್ಲಿದ್ದಾರೆ ಎಂಬುದರ ಪಟ್ಟಿ ಈ ಕೆಳಗಿನಂತಿದೆ.

1) ಉತ್ತರ ವಿಭಾಗ, ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಮತ್ತು ವಾಹನ ಚಾಲಕರು. 2) ಡಿಟಿಒ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸ್ಥಳ ಮೆಜೆಸ್ಟಿಕ್ ಬಸ್‌ ನಿಲ್ದಾಣ. 3) ದಕ್ಷಿಣ ವಿಭಾಗ, ವೀಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್. 4) ಘಟಕ-4ರ ಅಟೆಂಡೆನ್ಸ್ ಕ್ಲರ್ಕ್‌ಗಳಾದ ಸೋಮನಕಟ್ಟಿ ಮತ್ತು ಲೋಹಿತ್. 5) ಡಿಎಸ್‌ಎಸ್ ವಿಭಾಗೀಯ ಭದ್ರತಾ ಅಧೀಕ್ಷಕರು ಕೇಂದ್ರ ಕಚೇರಿ, ಶ್ರವಣ ಕುಮಾರ್

6) ಪಶ್ಚಿಮ ವಿಭಾಗ, ಡಿಎಸ್‌ಐ ಮುನಿಕೃಷ್ಣ ಪ್ರತಿ ಘಟಕದಲ್ಲಿ ನಡೆಯುವ ಭ್ರಷ್ಟಾಚಾರದಲ್ಲಿ ಪಾಲುದಾರರು, ಎಲ್ಲ ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಡುತ್ತೇನೆಂದು 10 ರಿಂದ 15 ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಕೆಲಸದ ಸಮಯದಲ್ಲಿಯೇ ಮಧ್ಯಪಾನ ಮಾಡಿಕೊಂಡು ಇರುವ ರೂಡಿ ಮತ್ತು ತುಂಬಾ ವರ್ಷಗಳಿಂದ ಒಂದೇ ಕೆಲಸವನ್ನು ಮಾಡಿಕೊಂಡು ಮಂಥ್ಲಿ ಕಲೆಕ್ಷನ್ ಕೆಲಸವನ್ನು ಮಾಡಿಕೊಂಡು ಅಧಿಕಾರಿಗಳಿಗೆ ತಲುಪಿಸುವ ಕಾರ್ಯ, ಪ್ರತಿ ಘಟಕದ ವಾಷಿಂಗ್ ಅವರಿಂದ ಮಂಥ್ಲಿ ವಸೂಲಿ ಮಾಡುವ ಕಾರ್ಯ.

7) ಡಿಪೋ-8, ಹಿರಿಯ ಘಟಕ ವ್ಯವಸ್ಥಾಪಕರು, ಗೋಪಾಲ ಕೃಷ್ಣ, ಮೊಹಮ್ಮದ್ ರಫೀ ಸಿಬ್ಬಂದಿ ಮೇಲ್ವಿಚಾರಕ, ಕೆ. ಶರವಣ ಅಂಕಿ ಅಂಶ ಸಹಾಯಕ, ಕೆ.ಎಸ್.ಚಂದನ್, ಕಿರಿಯ ಸಹಾಯಕ ಮತ್ತು ಜಯರಾಂ ಚಾಲಕ ಇವರನ್ನು ಹಣ ವಸೂಲಿ ಮಾಡಿಕೊಡಲು ನೇಮಿಸಿರುವುದು.

8) ಡಿಪೋ–45, ಗಂಗಮ್ಮ ಎ.ಟಿ.ಎಸ್., ಮುತ್ತಮ್ಮ ಮಾಳಗಿ ಟಿ.ಎ. 9) ಘಟಕ-40, ಶ್ರೀನಿವಾಸ್ ಮೂರ್ತಿ (ಪ್ರಸ್ತುತ ಘಟಕ-26) ಘಟಕ ವ್ಯವಸ್ಥಾಪಕರು, ಕೋಮಲ್ ಟಿ.ಐ. 10) ಘಟಕ-43, ಮಂಜಮ್ಮ, ಡಿಪೋ ಮ್ಯಾನೇಜರ್, ಶೈಲಮ್ಮ ಎ.ಟಿ.ಐ., ನಿಧಿ ಜ್ಯೂನಿಯರ್ ಅಸಿಸ್ಟೆಂಟ್, ಆಂಜಿ ಚಾಲಕ ಕಂ ನಿರ್ವಾಹಕ, ನವೀನ್ ನಿರ್ವಾಹಕ, ಶಟ್ಟರ್ ಚಾಲಕ ಕಂ ನಿರ್ವಾಹಕ.

11) ಘಟಕ-26, ರೆಡ್ಡಿ ಎ.ಟಿ.ಐ., ಹಿರೇಮಟ್ ಚಾಲಕರ ಬುಕ್ಕಿಂಗ್. 12) ಪಶ್ಚಿಮ ವಿಭಾಗ ಡಿಪೋ ಮ್ಯಾನೇಜರ್ ಕೃಷ್ಣ, ಡಿಪೋ-12 ಚಂದ್ರಕಲಾ ಎ.ಟಿ.ಐ., ಕುಮಾರ್ ಪಾಟೀಲ್‌’ ಪ್ರಸ್ತುತ ಲೈನ್ ಚೆಕ್ಕಿಂಗ್‌ನಲ್ಲಿ ಕರ್ತವ್ಯ ನಿರ್ವಹಣೆ. 13) ಡಿಪೋ-16 ಉಮೇಶ್ ಅಟೆಂಡೆನ್ಸ್ ಕ್ಲರ್ಕ್ ಮತ್ತು ಸೋಮಣ್ಣ ಟಿ.ಐ.

14) ಡಿಪೋ-21, ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳ ಡಿಪೋ-33, ಅಕೌಂಟ್ ಸೂಪರ್‌ವೈಸರ್‌ ಮುನಿರಾಜು ಮತ್ತು ಅದೇ ಡಿಪೋನ ದಾಬೂಜಿ ಎ.ಟಿ.ಐ. ಮತ್ತು ಅದೇ ಘಟಕದ ಚಾಲಕರಾದ ಗಂಗರಾಜು ಮತ್ತು ಶಿವರಾಜು ಚಾಲಕ ಕಂ ನಿರ್ವಾಹಕ ಚಂದ್ರಶೇಖರ್, ಡಿ.ಸಿ. ವಿಜಯ್‌ ಕುಮಾರ್ ಮತ್ತು ಅರುಣ್ ಕುಮಾರ್‌ ಇದೇ ಘಟಕದ ಹೊಳೆ ಬಸಪ್ಪ ಅವರ ಸಾವಿಗೆ ಇವರುಗಳ ಹಣದ ದಾಹ ಪ್ರಮುಖ ಕಾರಣ.

15) ಡಿಪೋ-4, ಸೋಮನಕಟ್ಟಿ, ಅಟೆಂಡನ್ಸ್ ಕ್ಲರ್ಕ್, ಲೋಹಿತ್ ಅಟೆಂಡನ್ಸ್ ಕ್ಲರ್ಕ್, ರಮೇಶ್, 16) ಡಿಪೋ-20, ಮಂಜುನಾಥ್ ಎ.ಟಿ.ಎಸ್. ಪ್ರಸ್ತುತ ಕೇಂದ್ರ ಕಚೇರಿ, ಅಪಘಾತ ವಲಯದಲ್ಲಿ ಕರ್ತವ್ಯ, ಮಂಜು ಅಟೆಂಡೆನ್ಸ್ ಕ್ಲರ್ಕ್, ಪವನ್ ಅಟೆಂಡೆನ್ಸ್ ಕ್ಲರ್ಕ್, ರೂಪಾ ಟಿ.ಐ. ಮಹದೇವ ಹೊನ್ನಾಳಿ ಟಿ.ಐ. ಮತ್ತು 17) ಡಿಪೋ-15, ಎ.ಟಿ.ಎಸ್. ವೆಂಕಟೇಶಪ್ಪ, ರಾಜ್‌ಕುಮಾರ್ ಡೀಸೆಲ್ ಬಂಕ್ ಹುದ್ದೆ.

ಈ ಮೇಲಿನ ಎಲ್ಲರೂ ಒಂದಲ್ಲ ಒಂದು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ನೌಕರರು ದಿನನಿತ್ಯ ರೂಟ್ ಕಲೆಕ್ಷನ್, ರಜೆ, ಇತ್ಯಾದಿ ಹಾಗೂ ಸಣ್ಣ ಪುಟ್ಟ ಪ್ರಕರಣಗಳಿಗೆ ಮೆಮೊ ಜಾರಿ ಮಾಡುವುದು, ಮನಸೋ ಇಚ್ಛೆ ದಂಡ ವಿಧಿಸುವುದು, ಇಂಕ್ರಿಮೆಂಟ್ ಕಟ್ ಮಾಡುವುದು ಹಾಗೂ ಅಮಾನತು ಮತ್ತು ಘಟಕ ವರ್ಗಾವಣೆ ಹಾಗೂ ಇಲಾಖಾ ತನಿಖಾ ಹೆಸರಿನಲ್ಲಿ ಶಿಕ್ಷೆಗಳಿಗೆ ಗುರಿಪಡಿಸುವುದು.

ಈ ಶಿಕ್ಷಾ ಪ್ರಮಾಧಗಳು ಕಡಿತಗೊಳಿಸಬೇಕಾದರೆ ಈ ಮೇಲೆ ಕಾಣಿಸಿರುವ ಮಧ್ಯವರ್ತಿಗಳನ್ನು ಸಂಪರ್ಕಿಸುವಂತೆ ಅವರ ಮೂಲಕ ಹಣ ದಂದೆ ನಡೆಯುತ್ತಿದೆ. ಇದರಲ್ಲಿ ಕೆಲವು ಅಧಿಕಾರಿಗಳು ಸಂಸ್ಥೆಗೆ ಸೇರಿದಾಗಿನಿಂದ ಪ್ರಾಮಾಣಿಕವಾಗಿ ಸೇವೆಸಲ್ಲಿಸುತ್ತಿದ್ದು ಹಣ ಪಡೆಯದೇ ಇದ್ದವರು ಇದ್ದಾರೆ. ಆದರೆ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಡಿಟಿಒ, ಡಿಎಂಇ ಇವರ ಒತ್ತಡದ ಮೇಲೆ ಹಣದಂದಗೆ ಇಳಿದಿರುತ್ತಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ