NEWSದೇಶ-ವಿದೇಶನಮ್ಮರಾಜ್ಯ

ಖಾಸಗಿ ಕಂಪನಿಯ ಮುಖ್ಯ ಕಾನೂನು ಸಲಹೆಗಾರರಾಗಿ ನೇಮಕಗೊಂಡ ವಕೀಲ ಶಿವರಾಜುರಿಗೆ ಅಭಿನಂದನೆಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಹಲವು ನೌಕರರು ಸೇರಿದಂತೆ ಇತರರಿಗೆ ಉಚಿತವಾಗಿ ಕಾನೂನು ಸೇವೆ ನೀಡಿದ ಫಲವಾಗಿ ವಕೀಲರಾದ ಎಚ್‌.ಬಿ.ಶಿವರಾಜು ಅವರಿಗೆ ಕೈ ತುಂಬ ವೇತನ ಕೊಡುವ ಖಾಸಗಿ ಕಂಪನಿಯಲ್ಲಿ ಮುಖ್ಯ ಕಾನೂನು ಸಲಹೆಗಾರ ಹುದ್ದೆ ಸಿಕ್ಕಿದೆ.

ಕಳೆದ 2019ರಿಂದ ಇಲ್ಲಿಯ ವರೆವಿಗೂ ಸಾರಿಗೆ ಅಧಿಕಾರಿಗಳ ಕಿರುಕುಳಕ್ಕೆ ಒಳಗಾಗಿ ಹಾಗೂ 2021ರ ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ವೇಳೆ ಕೇಸ್‌ ದಾಖಲಾಗಿದ್ದ ಹಲವು ನೌಕರರ ಪರ ಉಚಿತವಾಗಿ ವಕಾಲತ್ತು ವಹಿಸುವ ಮೂಲಕ ಕರ್ನಾಟಕ ಹೈ ಕೋರ್ಟ್‌ನಲ್ಲಿ ಅವರಿಗೆ ನ್ಯಾಯದೊರಕಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಅಲ್ಲದೆ ಮೈಸೂರು ನಗರದ ಮಾಜಿ  ಶಾಸಕ ಎಸ್‌.ಎ.ರಾಮದಾಸ್‌  ಅವರಿಂದ ದೌರ್ಜನ್ಯಕ್ಕೆ ಒಳಗಾಗಿದ್ದ ಮೈಸೂರು ಮೂಲಕ ಮಹಿಳೆಗೆ ಪ್ರೇಮಕುಮಾರಿ ಪರ ಸುಪ್ರೀಂ ಕೋರ್ಟ್‌ನಲ್ಲಿ ಉಚಿತವಾಗಿ ವಕಲತ್ತು ಹಾಕುವ ಮೂಲಕ ಅವರಿಗೂ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಜತೆಗೆ ಹಲವು ಶಾಸಕರ ಪರವಾಗಿ ಕ್ರಿಮಿನಲ್‌ ಮತ್ತು ಸಿವಿಲ್‌ ಪ್ರಕರಣಗಳ ವಕಾಲತ್ತು ವಹಿಸಿದ್ದಾರೆ.

ಇನ್ನು ಬಹಳ ಮುಖ್ಯವಾಗಿ ವಿಜಯಪಥ ಸಂಪಾದಕರಾದ ದೇವರಾಜು ಅವರು ಸಾರಿಗೆ ನೌಕರರ ಪರ ಧ್ವನಿಯಾಗಿದ್ದಕ್ಕೆ ಬಿಎಂಟಿಸಿ ಜಯನಗರ ಡಿಪೋ -4ರ ಘಟಕ ವ್ಯವಸ್ಥಾಪಕನಾಗಿದ್ದ ಪ್ರಶಾಂತ್‌ ಎಂಬುವನು ಡ್ಯೂಟಿ ಮಾಡುತ್ತಿದ್ದ ನಮ್ಮ ನೌಕರನಿಗೆ ಭಯಹುಟ್ಟಿಸಿ ಡ್ಯೂಟಿಗೆ ಅಡ್ಡಿಪಡಿಸಿದ್ದಾರೆ ಎಂದು ಸುಳ್ಳು ಕೇಸ್‌ ಹಾಕಿದ್ದರ ವಿರುದ್ಧ ಹೈ ಕೋರ್ಟ್‌ನಲ್ಲಿ ಉಚಿತವಾಗಿ ವಕಾಲತ್ತು ವಹಿಸಿ ಕೆಳಹಂತದ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣಕ್ಕೆ ಸ್ಟೇ ತರುವ ಮೂಲಕ ನ್ಯಾಯದ ಪರ ನಿಂತಿದ್ದಾರೆ.

ಹೀಗೆ ಹಲವಾರು ರೀತಿಯಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೊಂದ ಸಾರಿಗೆ ನೌಕರರು ಸೇರಿದಂತೆ ಹಲವರಿಗೆ ಕಾನೂನಿಕೊಂಡಿಯಾಗಿ ನ್ಯಾಯಾಲಯಗಳಲ್ಲಿ ವಕಾಲತ್ತು ವಹಿಸಿ ನ್ಯಾಯಕೊಡಿಸಿದ್ದು, ಈಗಲೂ ಕೊಡಿಸುತ್ತಿರುವ ವಕೀಲರ ಶಿವರಾಜು ಅವರಿಗೆ ಆಂಧ್ರ ಮೂಲದ ಆರ್‌.ಆರ್‌.ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಯ ಮುಖ್ಯ ಕಾನೂನು ಸಲಹೆಗಾರ ಹುದ್ದೆಗೆ ನೇಮಕಗೊಂಡಿದ್ದಾರೆ.

ವಕೀಲ ಶಿವರಾಜು ಅವರು ಆರ್‌.ಆರ್‌.ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಗೆ ಸಂಬಂಧಪಟ್ಟ ಸಿವಿಲ್‌ ಪ್ರಕರಣಗಳ ಸಂಬಂಧ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಕಟ ಹೈ ಕೋರ್ಟ್‌ಗಳಲ್ಲಿ ಹಾಗೂ ಸುಪ್ರೀಂ ಕೋರ್ಟ್‌ಗಳಲ್ಲಿ ವಕಾಲತ್ತು ವಹಿಸಲಿದ್ದಾರೆ. ಹೀಗಾಗಿ ಇವರಿಗೆ ಕಾರ್ಯಭಾರ ಹೆಚ್ಚಾಗಿರುವುದರಿಂದ ಉಳಿದುಕೊಳ್ಳುವುದಕ್ಕೆ ಮನೆ, ಓಡಾಡುವುಕ್ಕೆ ಕಾರು ಸೇರಿದಂತೆ ಇತರೆ ಸೌಲಭ್ಯಗಳನ್ನು ಕಂಪನಿ ನೀಡಲಿದ್ದು, ಜತೆಗೆ ಕೈ ತುಂಬ ವೇತನವನ್ನು ಕೊಡಲಿದೆ.

ಈ ಹಿನ್ನೆಲೆಯಲ್ಲಿ ಕಂಪನಿಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕಿರುವುದರಿಂದ ಇತರೆ ಪ್ರಕರಣಗಳ ಬಗ್ಗೆ ಹೆಚ್ಚಿನ ಗಮನಕೊಡಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಕಾವೇರಿ ಲಾ ಅಸೋಸಿಯೇಷನ್‌ನ ಎಲ್ಲ ಜವಾಬ್ದಾರಿಗಳನ್ನು ನಮ್ಮ ಸಂಬಂಧಿ ವಕೀಲರಾದ ಕಾವೇರಿ ಅವರು ನೋಡಿಕೊಳ್ಳಲಿದ್ದಾರೆ.

ಇನ್ನು ಇಲ್ಲಿಯವರೆವಿಗೂ ನಾವು ಸಾರಿಗೆಯ ಕೆಲ ನೌಕರರು ಏನೆ ಅಂದುಕೊಂಡರು ಅದಕ್ಕೆ ಕಿವಿಯಾಗದೆ ನೊಂದ ನೌಕರರ ಪರವಾಗಿ ಸಾಧ್ಯವಾದಷ್ಟು ಸೇವೆ ನೀಡಿದ್ದೇವೆ ಹೀಗಾಗಿಯೇ ನಮಗೆ ಈ ಹುದ್ದೆ ಒಲಿದುಬಂದಿದೆ ಎಂದರೂ ತಪ್ಪಾಗುವುದಿಲ್ಲ ಎಂದು ವಕೀಲರು ಖುಷಿ ಹಂಚಿಕೊಂಡಿದ್ದಾರೆ.

ಸಾರಿಗೆ ನೌಕರರು ಸೇರಿದಂತೆ ನೂರಾರು ಜನರಿಗೆ ಉಚಿತವಾಗಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಿ ನೊಂದವ ಪರ ನಿಂತ ವಕೀಲರಾದ ಶಿವರಾಜು ಅವರು ನೂರಾರುಕಾಲ ಸುಖವಾಗಿ, ಇನ್ನಷ್ಟು ಉನ್ನತ ಹುದ್ದೆಗೇರಲಿ. ಅವರಿಗೆ ಸಿಕ್ಕಿರುವ ಹುದ್ದೆ ಕೀರ್ತಿಯ ಜತೆಗೆ ಅಷ್ಟೈಶ್ವರ್ಯಸಂಪನ್ನರನ್ನಾಗಿ ಮಾಡಲಿ ಎಂದು ನಾವೆಲ್ಲರೂ ಮನತುಂಬಿ ಹಾರೈಸೋಣ.

Megha
the authorMegha

Leave a Reply

error: Content is protected !!