ರಾಮನಗರ: ಲೋಕಸಭಾ ಚುನಾವಣೆ ಸನ್ನಿಹದಲ್ಲಿರುವಂತೆಯೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ವಿರುದ್ಧ ಮತದಾರರಿಗೆ ಕುಕ್ಕರ್ ಆಮಿಷದ ಆರೋಪ ಕೇಳಿಬಂದಿದೆ. ಅದಕ್ಕೆ ಪುಷ್ಟಿ ನೀಡುವಂತೆ ಮಾ.7ರಂದ ಮಾಗಡಿ ತಾಲೂಕಿನ ಕುದೂರು ಹೋಬಳಿಯ ಹಲವು ಗ್ರಾಮಗಳಿಗೆ ಕುಕ್ಕರ್ ವಿತರಿಸಲಾಗಿದೆ.
ಕಳೆದ ಫೆ.23ರಂದು ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದ ಬಿಜೆಪಿ, ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದ ಬ್ರದರ್ಸ್ಗಳ ಬ್ರದರ್ರಿಂದ ಕುಕ್ಕರ್ ಹಂಚಲಾಗುತ್ತಿದೆ. ದೇಶ ವಿಭಜನೆ ಮಾಡುವ ಸಂಚು ರೂಪಿಸಿದ್ದ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರಿಗೆ ಚುನಾವಣೆ ಘೋಷಣೆ ಮುನ್ನವೇ ಸೋಲಿನ ಭೀತಿ ಶುರುವಾಗಿದೆ ಎಂದು ಟೀಕಿಸಿತ್ತು.
ಗೂಂಡಾಗಿರಿ ಮಾಡುವ ಜತೆಗೆ ಸ್ವಲ್ಪ ಅಭಿವೃದ್ಧಿಯನ್ನು ಮಾಡಿದ್ದರೆ ಈಗ ಊರಿಗಿಂತ ಮುಂಚೆ ಮತದಾರರಿಗೆ ಕುಕ್ಕರ್ ಹಂಚುವ ಪ್ರಮೇಯ ಬರುತ್ತಿರಲಿಲ್ಲಾ. ಅಂದಹಾಗೆ ಕನಕಪುರದಲ್ಲಿ ನೀವು ಪ್ರತಿ ಬಾರಿ ಗೆಲ್ಲುವುದು ಗೂಂಡಾಗಿರಿಯಿಂದ ಎಂದು ತಿಳಿದಿತ್ತು. ಆದರೆ, ನಿಮ್ಮ ಗೂಂಡಾ ಮನಸ್ಸಿನೊಳಗೆ ವಾಮಮಾರ್ಗದ ಕುಕ್ಕರ್ ವಿಶಲ್ ಸಹ ಇದೆ ಎಂಬುದು ಜಗಜ್ಜಾಹೀರಾಗಿದೆ ಎಂದು ಕಿಡಿಕಾರಿದೆ.
ಮತದಾರರಿಗೆ ಕುಕ್ಕರ್ ಆಮಿಷ ಒಡ್ಡುತ್ತಿರುವ ಸಂಸದ ಡಿ.ಕೆ. ಸುರೇಶ್ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗದ ಅಧಿಕಾರಿಗಳನ್ನು ಒತ್ತಾಯಿಸುವುದಾಗಿ ಬಿಜೆಪಿ ತಿಳಿಸಿದೆ.
ಈ ನಡುವೆಯೂ ಮತ್ತೆ ಒಂದು ಕುಕ್ಕರ್, ಒಂದು ತವಾ, ಒಂದು ಸ್ಟೀಲ್ ಹಾಟ್ಬಾಕ್ಸ್ ಒಳಗೊಂಡಂತೆ ಐದು ರೀತಿಯ ಕುಕ್ಕರ್ಗಳನ್ನು ತಮ್ಮ ಕ್ಷೇತ್ರ ವ್ಯಾಪ್ತಿಯ ಮನೆಗಳಿಗೆ ಸಂಸದ ಡಿ.ಕೆ.ಸುರೇಶ್ ಹಿಂಬಾಲಕರು ಹಂಚಿಕೆ ಮಾಡುತ್ತಿದ್ದಾರೆ.
ಅಕ್ಷತೆ ಬೇಕಾ ಗ್ಯಾರಂಟಿ ಬೇಕಾ ಎಂದು ಈ ಹಿಂದೆ ಹೇಳಿಕೆ ಕೊಟ್ಟಿದ್ದ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಕೂಡ ಮಾ. 7ರಂದು ರಾತ್ರಿ 9.30ರ ಸಮಯದಲ್ಲಿ ಕುದೂರು ಹೋಬಳಿ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಿಗೆ ತಾವೇ ನಿಂತುಕೊಂಡು ಕುಕ್ಕರ್ ಹಂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದಿಷ್ಟೇ ಅಲ್ಲದೆ ಮಾಗಡಿ ಟೌನ್ನಲ್ಲೂ ಕೂಡ ಮನೆ ಮನೆಗೂ ಕುಕ್ಕರ್ ಹಂಚುವುದಕ್ಕೆ ಅಲ್ಲಿನ ವಾರ್ಡ್ ಕೌನ್ಸಿಲರ್ಗಳಿಗೆ ಆದೇಶ ಮಾಡಿದ್ದು ಅವರು ಕೂಡ ರಾತ್ರಿ ವೇಳೆ ಕುಕ್ಕರ್ ಹಂಚುವುದಕ್ಕೆ ತಯಾರಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಲೋಕಸಭೆ ಚುನಾವಣೆ ಸಮೀಪಿಸಿರುವುದರಿಂದ 2024ರ ಹೊಸ ವರ್ಷದ ಶುಭಾಶಗಳನ್ನು ಕ್ಷೇತ್ರದ ಶಾಸಕ ಬಾಲಕೃಷ್ಣ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಬ್ರದರ್ಗಳು ಕುಕ್ಕರಗಳ ವಿತರಣೆ ಮಾಡುವ ಮೂಲಕ ಕೋರುತ್ತಿದ್ದಾರೆ.
ಇನ್ನು ಸಂಸದ ಕ್ಷೇತ್ರದ ಜನರು ಕೂಡ ಅವರಿಗೆ ಪ್ರತಿ ಶುಭಾಶಯವನ್ನು ಕುಕ್ಕರ್ಗಳನ್ನು ಪಡೆಯುವ ಮೂಲಕ ಹೇಳುತ್ತಿರುವುದು ವಿಶೇಷವಾಗಿದೆ. ಇದು ನೋಡಿದರೆ ದೇಶದ್ ಕತೆ ಇಷ್ಟೆ ಕಣಮ್ಮೋ ಹಾಡು ನೆನಪಾಗದೆ ಇರದು.
![](https://vijayapatha.in/wp-content/uploads/2024/02/QR-Code-VP-1-1-300x62.png)