NEWSದೇಶ-ವಿದೇಶನಮ್ಮರಾಜ್ಯ

ಚಾಲಕನ ವಿದಾಯದ ಕಣ್ಣೀರು: ಬಸ್‌ನೊಂದಿಗಿನ ಈತನ ಒಡನಾಟ- ಅವಿನಾಭಾವ ಸಂಬಂಧ ಊಹೆಗೂ ನಿಲುಕದ್ದು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮಧುರೈ: ಮನುಷ್ಯ ಮತ್ತು ವ್ಯಕ್ತಿಗಳ ನಡುವೆ ಸಂಬಂಧ ಗಟ್ಟಿಯಾದರೆ ಆಸಂಬಂಧವನ್ನು ಕಳೆದುಕೊಳ್ಳುವಾಗ ಅಂಥ ವ್ಯಕ್ತಿಗಳಿಗೆ ಆಗುವ ತಳಮಳ ಯಾವ ಮಟ್ಟದಲ್ಲಿದೆ ಎಂಬುದನ್ನು ಊಹಿಸಿಕೊಳ್ಳುವುದು ಅಸಾಧ್ಯ.

ಅದಕ್ಕೆ ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರೊಬ್ಬರು ಸೇವೆಯಿಂದ ನಿವೃತ್ತಿಯಾದ ದಿನ ಅಂದರೆ ತನ್ನ ಕೆಲಸದ ಕೊನೆಯ ದಿನದಂದು ಬಸ್‌ನೊಂದಿಗೆ ಇಟ್ಟುಕೊಂಡಿದ್ದ ಅವಿನಾಭಾವ ಸಂಬಂಧ ಕಳೆದುಹೋಗುತ್ತಿರುವುದಕ್ಕೆ ಭಾವುಕರಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿದೆ.

ಜಿಲ್ಲೆಯ ಬಸ್‌ ಘಟಕದ ಮುತ್ತುಪಾಂಡಿ (60) ಎಂಬ ಚಾಲಕ ಭಾವುಕರಾದ ಕ್ಷಣದ ವಿಡಿಯೋ ನೋಡಿದ ಪ್ರತಿಯೊಬ್ಬ ಚಾಲಕನನ್ನು ಮೂಕವಿಸ್ಮಿತರನ್ನಾಗಿ ಮಾಡದೆ ಇರದು. ಮುತ್ತುಪಾಂಡಿ ಬಸ್​ ಚಾಲಕರಾಗಿದ್ದರು. ನಿವೃತ್ತಿಯಾದ ಹಿನ್ನೆಲೆಯಲ್ಲಿ ಬಸ್‌ನ ಸ್ಟೇರಿಂಗ್ ಚಕ್ರಕ್ಕೆ ಮುತ್ತಿಟ್ಟು ತನ್ನ ಮತ್ತು ತಾನು ಓಡಿಸುವ ಬಸ್‌ ನಡುವೆ ಇದ್ದ ಅವಿನಾಭಾವ ಸಂಬಂಧ, ಮೂರು ದಶಕಗಳಿಂದ ತಾನು ಮಾಡುತ್ತಿರುವ ಉದ್ಯೋಗ ಕುರಿತಾದ ಪ್ರೀತಿ ಎಷ್ಟು ಅಗಾಧವಾಗಿದೆ ಎಂಬುದನ್ನು ತೋರಿಸುತ್ತದೆ.

ಮುತ್ತುಪಾಂಡಿ ಅವರು, ಮಧುರೈ ಜಿಲ್ಲೆಯ ಅನುಪಾನಡಿ-ತಿರುಪರಂಗುನ್ರಂ-ಮಹಾಲಕ್ಷ್ಮೀ ಕಾಲೋನಿ ಮಾರ್ಗದಲ್ಲಿ ಬಸ್ ಓಡಿಸುತ್ತಿದ್ದರು. ಮುತ್ತುಪಾಂಡಿ ಕೆಲಸದ ಕೊನೆಯ ದಿನದಂದು ಮಹಾಲಕ್ಷ್ಮೀ ಕಾಲೋನಿಗೆ ಬಸ್​​ ಚಲಾಯಿಸಿಕೊಂಡು ಹೋಗುವಾಗ ಕಣ್ಣೀರು ಸುರಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಕೊನೆಯ ಬಾರಿಗೆ ಬಸ್ಸನ್ನು ನೋಡುತ್ತಾ ಅಳುತ್ತಾರೆ. ಸ್ಟೇರಿಂಗ್, ಚಕ್ರ, ಕ್ಲಚ್, ಗೇರ್, ಬ್ರೇಕ್.. ಹೀಗೆಲ್ಲ ಮುತ್ತಿಕ್ಕಿ ನಮಸ್ಕರಿಸಿ ಬಸ್‌ನಿಂದ ಕೆಳಗಿಳಿದು ಬಳಿಕ ಬಸ್​​ ಬೋರ್ಡಿಗೆ ನಮಸ್ಕರಿಸಿ ಬಸ್‌ನ ಮುಂದೆ ಬಂದು ಎರಡು ಕೈಗಳಿಂದ ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ.

ಸಮಾಜದಲ್ಲಿ ನನಗೆ ಈ ವೃತ್ತಿ ಗೌರವ ತಂದುಕೊಟ್ಟಿದೆ. ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮತ್ತು ನನ್ನ ಹೆತ್ತವರು ಮತ್ತು ಹೆಂಡತಿಯನ್ನು ನೋಡಿಕೊಳ್ಳಲು ಇದರಿಂದ ಸಾಧ್ಯವಾಯಿತು ಎಂದು ಮುತ್ತುಪಾಂಡಿ ಆನಂದಬಾಸ್ಪದ ಜತೆಗೆ ವಿದಾಯವನ್ನು ದುಃಖದಿಂದ ಹೇಳಿದರು.

ಇನ್ನು ಮುತ್ತುಪಾಂಡಿ ಅವರು ತಮ್ಮ ಸೇವಾವಧಿಯಲ್ಲಿ ಯಾರೊಂದಿಗೂ ಜೋರಾಗಿ ಕೂಗಾಡಿದ್ದೇ ಇಲ್ಲ. ಪ್ರಯಾಣಿಕರು ಹಾಗೂ ಸಹೋದ್ಯೋಗಿಗಳೊಂದಿಗೆ ಪ್ರಿತಿಯಿಂದಲೇ ಬೆರೆಯುತ್ತಿದ್ದರು ಎಂದು ಸಹೋದ್ಯೋಗಿಗಳು ಕೂಡ ಹೊಗಳಿದ್ದಾರೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ