- 2 ಗಂಟೆ ಬಳಿಕ ತನ್ನ ಕಚೇರಿ ಬಾಗಿಲು ಹಾಕಿಕೊಂಡು ಚೇಳಗಳ ಜತೆ ಹರಟೆ
- ನೌಕರರ ಸಮಸ್ಯೆ ಬಗೆಹರಿಸದೆ ದರ್ಪ ಮೆರೆಯುತ್ತಿರುವ ಕಿರಾತಕ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬನಶಂಕರಿ ಘಟಕ -20ರ ಪ್ರಭಾರ ಘಟಕ ವ್ಯವಸ್ಥಾಪಕನಿಗೆ ಕೋಡು ಬಂದಂತೆ ಕಾಣಿಸುತ್ತಿದೆ.
ಘಟಕದಲ್ಲಿ AWS ಆಗಿರುವ ನಾಗೇಶ್ ಎಂಬಾತನನ್ನು ಪ್ರಭಾರ ಡಿಎಂಆಗಿ ಕೂರಿಸಿದ್ದಾರೆ. ಆದರೆ ಈತ ನೌಕರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಜತೆಗೆ ಫಾರಂ 4ರಂತೆ ಸುತ್ತುವಳಿ ಪೂರ್ಣಗೊಳಿಸದಿದ್ದರೆ ನಾಳೆಯಿಂದ ಕೆಲಸಕ್ಕೆ ಬರಬೇಡ ಎಂದು ಅವಾಚ್ಯವಾಗಿ ನಿಂದಿಸುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಇದಲ್ಲದೆ ತುರ್ತು ಸಂದರ್ಭದಲ್ಲಿ ರಜೆ ಹಾಕಿದರೆ ಆ ರಜೆಗಳನ್ನು ರಿಜೆಕ್ಟ್ ಮಾಡುತ್ತಿದ್ದಾನೆ. ಇದರ ನಡುವೆ ನೌಕರರು ಸಮಸ್ಯೆ ಹೇಳಿಕೊಳ್ಳುವುದಕ್ಕೆ ಈತನ ಕಚೇರಿಗೆ ಹೋದರೆ ನೌಕರರನ್ನು ಸೌಜನ್ಯಕ್ಕೂ ಮಾತನಾಡಿಸುವುದಿಲ್ಲ. ಈತ ಘಟಕವನ್ನು ತನ್ನ ಸ್ವಂತ ಮನೆಯಂತೆ ಮಾಡಿಕೊಂಡಿದ್ದು, ಮೊದಲ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿ ಸಮಸ್ಯೆ ಹೇಳಿಕೊಳ್ಳಲು ನೌಕರರು ಹೋಗುವುದಕ್ಕೆ ಆಗುತ್ತಿಲ್ಲ.
ಕಾರಣ ಈತ ಮಧ್ಯಾಹ್ನ 2ಗಂಟೆ ಬಳಿಕ ತನ್ನ ಕಚೇರಿ ಒಳಗೆ ತನಗೆ ಬೇಕಾದವರನ್ನು ಕೂರಿಸಿಕೊಂಡು ಕೊಠಡಿಯ ಬಾಗಿಲು ಹಾಕಿಕೊಂಡು ಹರಟೆ ಹೊಡೆಯುತ್ತಿರುತ್ತಾನೆ. ಇದರಿಂದ ಸಮಸ್ಯೆ ಹೇಳಿಕೊಳ್ಳುವುದಕ್ಕೆ ಡ್ಯೂಟಿ ಮುಗಿಸಿಕೊಂಡು ಬರುವ ನೌಕರರು ಈತ ಬಾಗಿಲು ತೆಗೆಯುವವರೆಗೂ ಗಂಟೆಗಟ್ಟಲೆ ಕಾದು ಕುಳಿತಿರಬೇಕು. ಅಂದರೆ ಘಟಕದಲ್ಲಿ ಈತ ಸರ್ವಾಧಿಕಾರಿಯಾಗಿದ್ದಾನೆ.
ಇನ್ನು ತುರ್ತು ರಜೆ ಹಾಕಿದರೆ ಅದನ್ನು ಕೂಡ ಗಮನಿಸುವುದಿಲ್ಲ. ಅದನ್ನು ಟಿಐ ಚೌಡಯ್ಯ ಎಂಬಾತ ನೋಡಿಕೊಳ್ಳುತ್ತಿದ್ದಾನೆ. ಈತ ತನಗೆ ಬೇಕಾದವರಿಗೆ ವಾರಗಟ್ಟಲೆ ರಜೆ ಕೊಡುವುದಕ್ಕೆ ಶಿಫಾರಸು ಮಾಡುತ್ತಾನೆ. ಉಳಿದ ನೌಕರರ ರಜೆಯನ್ನು ರಿಜೆಕ್ಟ್ ಮಾಡುತ್ತಾನೆ. ಈ ತುರ್ತು ರಜೆ ಕೊಡುವುದಕ್ಕೆ ಇವನಿಗೆ ಅಧಿಕಾರ ಕೊಟ್ಟಿರುವ ಡಿಎಂಗೆ ತನ್ನ ಅಧಿಕಾರವನ್ನು ವರ್ಗಾಯಿಸುವ ಅಧಿಕಾರ ಕೊಟ್ಟವರು ಯಾರು?
ಇನ್ನು ಘಟಕದಲ್ಲಿ ಈ ಡಿಎಂ ಮಹಿಳಾ ಕಂಡಕ್ಟರ್ಗಳಿಗೆ ಕೊಠಡಿಯ ಕಸಗುಡಿಸುವಂತೆ ಆದೇಶ ಮಾಡುತ್ತಾನೆ. ಈ ಕೆಲಸವನ್ನು ನಾನೇಕೆ ಮಾಡಬೇಕು ಎಂದು ಮಹಿಳಾ ನೌಕರರು ಕೇಳಿದರೆ ನನ್ನನ್ನೇ ಪ್ರಶ್ನೆ ಮಾಡುತ್ತೀಯ ನೀನು ಹೇಗೆ ನನ್ನ ಘಟಕದಲ್ಲಿ ಕೆಲಸ ಮಾಡುತ್ತೀಯೆ ನೋಡುತ್ತೇನೆ ಎಂದು ಹೆದರಿಸುತ್ತಿದ್ದು ಇನ್ನಿಲ್ಲದ ಕಿರುಕುಳವನ್ನು ಕೊಡುತ್ತಿದ್ದಾನೆ.
ಒಟ್ಟಾರೆ ಈತ ಘಟಕದಲ್ಲಿ ಪ್ರಭಾರ ವ್ಯವಸ್ಥಾಪಕನಾಗಿ ಅಧಿಕಾರ ವಹಿಸಿಕೊಂಡ ಹೊಸದರಲ್ಲಿ ನೌಕರರ ಜತೆ ಭಾರಿ ವಿಶ್ವಾಸದಿಂದ ಇರುವಂತೆ ನಡೆದುಕೊಳ್ಳುತ್ತಿದ್ದ. ಬರ ಬರುತ್ತ ತನ್ನ ಮೊಸಳೆ ಬುದ್ಧಿಯನ್ನು ಈತ ತೋರಿಸುತ್ತಿದ್ದಾನೆ, ಇದರಿಂದ ಘಟಕದಲ್ಲಿ ನೌಕರರು ಡ್ಯೂಟಿ ಮಾಡುವುದಕ್ಕೆ ಈಗ ಒಂದು ರೀತಿ ಭಯಪಡುತ್ತಿದ್ದಾರೆ.
ಈ ಬಗ್ಗೆ ಮೇಲಧಿಕಾರಿಗಳಿಗೆ ಹೇಳೋಣ ಎಂದರೆ ಎಲ್ಲಿ ನಮ್ಮನ್ನು ಟಾರ್ಗೆಟ್ ಮಾಡಿ ಬಿಡುತ್ತಾನೋ ಈತ ಎಂಬ ಭಯದಲ್ಲಿ ನೌಕರರು ಈತನ ವಿರುದ್ಧ ಯಾವುದೇ ರೀತಿಯ ದೂರು ನೀಡಲು ಮುಂದಾಗುತ್ತಿಲ್ಲ.
ಇದರ ನಡುವೆ ಎಷ್ಟೇ ಸಮಯವಾದರೂ ಸರಿಯೇ ಫಾರಂ 4ರಂತೆ ಪೂರ್ಣ ಸುತ್ತುವಳಿ ಮಾಡಬೇಕು ಎಂದು ಒತ್ತಡ ಹೇರುತ್ತಿದ್ದಾನೆ. ಇಲ್ಲ ಸಾರ್ ತುಂಬಾ ಟ್ರಾಫಿಕ್ ಜಾಂ ಆಗುತ್ತಿದೆ ಇದರಿಂದ ಪೂರ್ಣ ಸುತ್ತುವಳಿ ಮಾಡಲು ಆಗುತ್ತಿಲ್ಲ. ಈ ಬಗ್ಗೆ ನೀವು ಸರ್ವೇ ಮಾಡಿಸಿ ಫಾರಂ -4 ಬದಲಾಯಿಸಲು ಮೇಲಧಿಕಾರಿಗಳಿಗೆ ವಿನಂತಿಸಿ ಎಂದು ನೌಕರರು ಮನವಿ ಮಾಡಿದರೆ, ಇದು ನನ್ನ ಕೆಲಸವಲ್ಲ ನೀನೇನು ಹೇಳಬೇಕಿಲ್ಲ. ನಾನು ಹೇಳಿದಷ್ಟನ್ನು ಮಾತ್ರ ಮಾಡು ಎಂದು ನೌಕರರಿಗೆ ಬೆದರಿಕೆ ಹಾಕುತ್ತಿದ್ದಾನೆ.
ಇನ್ನು ನೌಕರರು ಡ್ಯೂಟಿ ಮಾಡುವುದಕ್ಕೆ ಆಗುತ್ತಿರುವ ಸಮಸ್ಯೆಯನ್ನು ಹೇಳಿಕೊಳ್ಳಲು ಹೋದರೆ ನೀನೇನು ಹೇಳಬೇಡ. ನನಗೆ ಎಲ್ಲ ಗೊತ್ತಿದೆ ಎಂದು ನೌಕರರು ಏನು ಹೇಳುತ್ತಾರೆ ಎಂಬುದನ್ನು ಕೇಳಿಸಿಕೊಳ್ಳದೆ ಬೈದು ಕಳುಹಿಸುತ್ತಿದ್ದಾನೆ. ಇದರಿಂದ ನೊಂದ ನೌಕರರು ಕಣ್ಣೀರು ಹಾಕುತ್ತಿದ್ದಾರೆ.
ಹೀಗೆ ಈತ ಹಲವು ರೀತಿಯಲ್ಲಿ ನೌಕರರಿಗೆ ಕಿರುಕುಳ ಕೊಡುತ್ತಿದ್ದು ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳು ಖುದ್ದು ಘಟಕಕ್ಕೆ ಬಂದು ಪರಿಶೀಲಿಸಬೇಕು. ಜತೆಗೆ ಪೂರ್ಣ ಸುತ್ತುವಳಿ ಮಾಡಲಾಗದ ಮಾರ್ಗಗಳ ಫಾರಂ-4 ಅನ್ನು ಬದಲಾಯಿಸುವುದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಘಟಕ 20ರ ಬಹುತೇಕ ಎಲ್ಲ ನೌಕರರು ಒತ್ತಾಯ ಪೂರ್ವಕವಾಗಿ ಮನವಿ ಮಾಡಿದ್ದಾರೆ.
ಈ ಆರೋಪ ಸಂಬಂಧ ವಿಚಾರಿಸಲು ಡಿಎಂ ನಾಗೇಶ್ ಅವರಿಗೆ ವಿಜಯಪಥ ವರದಿಗಾರರು ಹಲವು ಬಾರಿ ಫೋನ್ ಮಾಡಿದ್ದರು. ಫೋನ್ ಪಿಕ್ ಮಾಡಿಲ್ಲ.
Related

You Might Also Like
ಸರ್ಕಾರಿ ನೌಕರರು ಜಾತಿ, ಧರ್ಮ ಮಾಡಬಾರದು: ಸಿಎಂ ಸಿದ್ದರಾಮಯ್ಯ ಸಲಹೆ
ಬೆಂಗಳೂರು: ಸರ್ಕಾರಿ ನೌಕರರು ಜಾತಿ, ಧರ್ಮ ಮಾಡಬಾರದು. ಇದು ವೃತ್ತಿಗೆ ಮಾಡುವ ಅವಮಾನ. ನಮ್ಮ ಮೇಲೆ, ಸರ್ಕಾರಿ ನೌಕರರ ಮೇಲೆ ಸಮಾಜದ ಋಣ ಇದೆ ಎಂದು ಮುಖ್ಯಮಂತ್ರಿ...
ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಆಹಾರ ಸಚಿವ ಮುನಿಯಪ್ಪ
ಮೈಸೂರು: ಮೈಸೂರಿನ ದಕ್ಷಿಣ ನಗರದ ಸಗಟು ಮಳಿಗೆ ಬಂಡಿಪಾಲ್ಯಕ್ಕೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಇಂದು ಭೇಟಿ ನೀಡಿ ಆಹಾರ ಧಾನ್ಯಗಳ...
ಪಾದಚಾರಿ ಮಾರ್ಗ ಒತ್ತುವರಿ, ಅನಧಿಕೃತ ಜಾಹೀರಾತು ತೆರವು: ಆಯುಕ್ತ ಸತೀಶ್
ಬೆಂಗಳೂರು: ಬಿಬಿಎಂಪಿ ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ, ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ಹಾಗೂ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಪಾಲಿಕೆ ವ್ಯಾಪ್ತಿಯ ರಾಜರಾಜೇಶ್ವರಿನಗರ ವಲಯದಲ್ಲಿ...
ನಿವೇಶನಗಳಲ್ಲಿ ತ್ಯಾಜ್ಯ ಸಂಗ್ರಹಣೆಯಾದರೆ ನಿವೇಶನ ಮಾಲೀಕರಿಗೆ ದಂಡ ವಿಧಿಸಿ: ಸ್ನೇಹಲ್
ಬೆಂಗಳೂರು: ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಸಂಗ್ರಹಣೆಯಾದಲ್ಲಿ ನಿವೇಶನ ಮಾಲೀಕರಿಗೆ ನೋಟಿಸ್ ನೀಡಿ ದಂಡ ವಿಧಿಸುವಂತೆ ಪೂರ್ವ ವಲಯ ಆಯುಕ್ತರಾದ ಸ್ನೇಹಲ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪೂರ್ವ...
KSRTC ಅಧಿಕಾರಿಗಳು ಕಚೇರಿಗೆ ಬಂದಾಗ ತಮ್ಮ ಹಣ ಎಷ್ಟಿತ್ತು ಹೋಗುವಾಗ ಎಷ್ಟಿದೆ ಅಂತ ತಿಳಿಸಬೇಕು: ಎಂಡಿ ಆದೇಶ
ಬೆಂಗಳೂರು: ರಾಜ್ಯ ಸರ್ಕಾರವು ಕಚೇರಿಗಳಲ್ಲಿ ನಗದು ಘೋಷಣೆ ವಹಿ ನಿರ್ವಹಣೆ ಕುರಿತು ವಿವರವಾಗಿ ಮಾರ್ಗಸೂಚಿಗಳನ್ನು ನೀಡಿ, ನಿಗಮ/ ಮಂಡಳಿಗಳಲ್ಲಿ ಸಹ ನಗದು ಘೋಷಣೆ ವಹಿ ನಿರ್ವಹಣೆ ಮಾಡುವಂತೆ...
ಕರ್ನಾಟಕ ಹೈಕೋರ್ಟ್ ಸಿಜೆಯಾಗಿ ನ್ಯಾ.ವಿಭು ಬಖ್ರು ಪ್ರಮಾಣ ವಚನ ಸ್ವೀಕಾರ
ಬೆಂಗಳೂರು: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ವಿಭು ಬಖ್ರು ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಇಂದು ರಾಜ್ಯಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ...
BMTC: ಹೋಟೆಲ್ಗೆ ನುಗ್ಗಿದ ಎಲೆಕ್ಟ್ರಿಕ್ ಬಸ್, ಓರ್ವ ಯುವತಿ ಸಾವು, ಮೂವರಿಗೆ ಗಾಯ
ಬೆಂಗಳೂರು: ಕಿಲ್ಲರ್ ಬಿಎಂಟಿಸಿ ಎಂದು ಕರೆಸಿಕೊಳ್ಳುವ ಬೆಂಗಳೂರು ಮಹಾನಗರ ಸಾರಿಗೆಯ ಎಲೆಕ್ಟ್ರಿಕ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಫುಟ್ಪಾತ್ಗೆ ನುಗ್ಗಿದ ಪರಿಣಾಮ ಯುವತಿಯೋರ್ವರು ಮೃತಪಪ್ಟಿದ್ದು, ಫುಟ್ಪಾತ್ ಮೇಲೆ...
ಸಾರಿಗೆ ನೌಕರರು ಮುಷ್ಕರ ಹೂಡುವುದಾಗಿ ಕೊಟ್ಟ ಮುಷ್ಕರದ ನೋಟಿಸ್ ಸಂಬಂಧ ನಿರ್ದೇಶನ ಕೋರಿ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದ ಎಂಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಆ.5ರಿಂದ...
ಸಾರಿಗೆ ನೌಕರರ ಮುಷ್ಕರದ ಬಗ್ಗೆ ನನ್ನ ಅಭಿಪ್ರಾಯ-ಅನಿಸಿಕೆಗಳು
ಸಾರಿಗೆ ಮುಷ್ಕರ ಎಂಬುದು ಎಲ್ಲಾ ಅಧಿಕಾರಿಗಳು ಮತ್ತು ನೌಕರ ಸಿಬ್ಬಂದಿಗಳ ವೇತನಕ್ಕೆ ಸಂಬಂಧಪಟ್ಟಿರುವುದಾಗಿರುತ್ತದೆ.ಎಲ್ಲರೂ ಒಗ್ಗಟ್ಟಿನಿಂದ ಒಟ್ಟಾಗಿ ಮುಷ್ಕರ ಮಾಡಬೇಕಾಗಿದೆ. ಆದರೆ ನಮ್ಮ ನಿಗಮದಲ್ಲಿ ಅಧಿಕಾರಿಗಳು ಮತ್ತು ಆಡಳಿತ...