ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮದ ನೌಕರರನ್ನು ಪದೇಪದೆ ಕಾರ್ಮಿಕರು ಎಂದು ಕರೆಯು ಈ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಗೆ ನಿಜವಾಗಲು ನೌಕರರ ಬಗ್ಗೆ ಕಾಳಜಿಯೇ ಇದೆಯೇ ಎಂಬ ಅನುಮಾನ ಮೂಡುತ್ತಿದೆ.
ಒಂದು ವೇಳೆ ಕಾಳಜಿ ಎಂಬುವುದು ಇದ್ದಿದ್ದರೆ ಇವರು ಸಾರಿಗೆ ಸಿಬ್ಬಂದಿಗಳು/ನೌಕರರನ್ನು ಕಾರ್ಮಿಕರು ಎಂದು ಪದೇಪದೆ ಕರೆಯುತ್ತಿರಲಿಲ್ಲ. ಏನೋ ಹೇಳುತ್ತಾರಲ್ಲ 60 ವರ್ಷವಾದ ಮೇಲೆ ಅರಳುಮರಳು ಎಂಬಂತೆ ಜಂಟಿ ಕ್ರಿಯಾ ಸಮಿತಿಯಲ್ಲಿರುವ ಬಹುತೇಕರು 60ರ ಪ್ರಾಯ ದಾಟಿದವರಾಗಿದ್ದಾರೆ. ಹೀಗಾಗಿಯೇ ಸಾರಿಗೆ ನೌಕರರನ್ನು ಕಾರ್ಮಿಕರು ಕಾರ್ಮಿಕರು ಎಂದು ದಿನಗೂಲಿ ಕಾರ್ಮಿಕರಾಗಿ ಮಾಡಿಕೊಂಡಂತೆಸಂಬೋಧಿಸುತ್ತಿದ್ದಾರೆ.
ನೋಡಿ ಇಡೀ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಚಾಲನಾ ಸಿಬ್ಬಂದಿಯಿಂದ ಪ್ರತಿಯೊಬ್ಬರನ್ನು ನೌಕರರು ಎಂದು ಕರೆಯುತ್ತಾರೆ. ಆದರೆ ಜಂಟಿ ಕ್ರಿಯಾ ಸಮಿತಿಯವರು ಮಾತ್ರ ಕಾರ್ಮಿಕರು ಎಂದು ಕರೆಯುತ್ತಿದ್ದಾರೆ. ಅಂದರೆ ಇವರಿಗೆ ನಿಜವಾಗಲು ನೌಕರರ ಬಗ್ಗೆ ಗೌರ ಎಂಬುವುದೇ ಇಲ್ಲ. ನಾಚಿಕೆಯಾಗಬೇಕು ಇವರಿಗೆ. ಹೀಗೆ ಕರೆದು ಕರೆದೆ ನೌಕರರನ್ನು ಕಳೆದ 3-4 ದಶಕಗಳಿಂದಲೂ ಅಧಿಕಾರಿಗಳು- ನೌಕರರ ನಡುವೆ ಹೊಂದಾಣಿಕೆ ಇಲ್ಲದಂತ ವಾತಾವರಣ ನಿರ್ಮಿಸಿ ಒಡೆದಾಳುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.
ನೇರವಾಗಿ ಅನಂತ ಸುಬ್ಬರಾವ್ ಅವರಿಗೆ ಕೇಳ ಬಯಸುತ್ತೇವೆ. ಸಾರಿಗೆ ನೌಕರರು ಕಾರ್ಮಿಕ ನೌಕರರ ಎಂಬುದನ್ನು ತಾವು ಸ್ಪಷ್ಟಪಡಿಸಿ. ಇಲ್ಲ ಸಾರಿಗೆ ನೌಕರರು ಕಾರ್ಮಿಕರು ಎಂದು ಕರೆಯುವುದೇ ಸರಿ ಎಂದಾದರೆ ನೀವು ಸಾರಿಗೆ ಕಾರ್ಮಿಕರು (ದಿನಗೂಲಿ) ಎಂದು ಎಲ್ಲ ನಿಮ್ಮ ಮನವಿ ಪತ್ರಗಳಲ್ಲಿ ಹಾಕಿ ಸರ್ಕಾರಕ್ಕೆ ಮತ್ತು ಸಾರಿಗೆ ಆಡಳಿತ ಮಂಡಳಿಗೆ ಕೊಡಿ.
ಏನ್ರಿ ಇದು ಕಳೆದ 40-50 ವರ್ಷದಿಂದಲೂ ನಾವು ಸಾರಿಗೆಯ ನೌಕರರ ಪರವಾಗಿ ಇದ್ದೇವೆ ಎಂದು ಹೇಳುವ ನೀವು ಪದೇಪದೆ ಕಾರ್ಮಿಕರು ಕಾರ್ಮಿಕರು ಎಂದು ದಿನಗೂಲಿ ಮಾಡುವವರಂತೆ ಅವರು ಕಾಣುವ ಮೂಲಕ ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಪಡೆಯುವುದಕ್ಕೆ ನಮ್ಮನ್ನೇ ಆಶ್ರಯಿಸಬೇಕು ಎಂಬುದನ್ನು ಪಾಲಿಸಿಕೊಂಡು ಬರುತ್ತಿದ್ದೀರಲ್ಲ.
ಏಕೆ ಸಾರಿಗೆ ನಿಗಮಗಳಲ್ಲಿ ಅಧಿಕಾರಿಗಳು/ನೌಕರರ ಕೈಯಲ್ಲಿ ಏನನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಅವರಿಗೆ ನಾವೇ ಬೇಕು ಎಂಬ ಭ್ರಮೆಯಲ್ಲಿದ್ದಾರ? ಒಂದು ವೇಳೆ ಆ ಭ್ರಮೆಯಲ್ಲಿದ್ದರೆ ಇಂದೆ ಬಿಟ್ಟುಬಿಡಿ ನಾವೇಲ್ಲ ಸಾರಿಗೆ ನೌಕರರು ಚಾಲನಾ ಸಿಬ್ಬಂದಿಗಳು ಎಂದರೆ ಸಿ ದರ್ಜೆ ನೌಕರರು ನಾವು ಡಿ. ಗ್ರೂಪ್ ನೌಕರರಲ್ಲ ಎಂದು ಒಕ್ಕೂಟದ ಪದಾಧಿಕಾರಿಗಳು ಅನಂತ ಸುಬ್ಬರಾವ್ ಸೇರಿದಂತೆ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಮುಷ್ಕರಕ್ಕೆ ಬೆಂಬಲ ನೀಡುವುದಿಲ್ಲ ಎಂಬ ಹೇಳಿಕೆಗೆ ನಮಗೆ ತಾವು ಕೊಟ್ಟಿರುವ ಹಿಂಬರಹದ ಉತ್ತರ ಪತ್ರದಲ್ಲೂ ತಾವು ನಮ್ಮನ್ನು ಕಾರ್ಮಿಕರು ಎಂದೇ ಹಾಕಿದ್ದೀರಿ. ಏಕೆ ನಿಮಗೆ ವಯಸ್ಸಾಗಿದೆ ಎಂಬುದನ್ನಿ ಈ ಮೂಲಕ ನಮಗೆ ನೆನಪಿಸಲು ತಾವು ಈ ರೀತಿ ಕಾರ್ಮಿಕ ಪದ ಬಳಸಿದ್ದೀರಾ ಎಂದು ಒಕ್ಕೂಟದ ಪದಾಧಿಕಾರಿಗಳು ಪ್ರಶ್ನಿಸಿದ್ದಾರೆ.
ಒಟ್ಟಾರೆ ಸಾರಿಗೆ ನೌಕರರನ್ನು ಜಂಟಿಯವರದ ತಾವು ಕಾರ್ಮಿಕರು ಎಂದು ಕರೆಯದಿದ್ದರೆ ತಿಂದದ್ದು ಜೀರ್ಣವಾಗುವುದಿಲ್ಲವೇ? ಇನ್ನಾದರೂ ನಾವು ಸಿ ಗ್ರೂಪ್ ನೌಕರರಿದ್ದೇವೆ ಎಂಬುದನ್ನಾದರೂ ತಿಳಿದು ನಮಗೂ ಗೌರವ ಕೊಡುವುದನ್ನು ಮೊದಲು ಕಲಿಯಿರಿ ಅಮೇಲೆ ನಮ್ಮ ನೌಕರರ ಪರವಾಗಿ ಮುಷ್ಕರ ಮಾಡುವಿರಂತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related

You Might Also Like
KSRTC ನೌಕರರ ಸಾಮಾನ್ಯ ಮರಣ ಪ್ರಕರಣಕ್ಕಿದ್ದ 10 ಲಕ್ಷ ರೂ. ಪರಿಹಾರ ಮೊತ್ತ 14 ಲಕ್ಷ ರೂ.ಗಳಿಗೆ ಏರಿಸಿ ಎಂಡಿ ಆದೇಶ
ಪರಿಷ್ಕರಿಸಿದ 14 ಲಕ್ಷ ರೂ. ಪರಿಹಾರ ಮೊತ್ತ ಸೆಪ್ಟೆಂಬರ್ 1-2025ರಿಂದ ಜಾರಿ ಬೆಂಗಳೂರು: 10 ಲಕ್ಷ ರೂ.ಗಳಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಕುಟುಂಬ...
KSRTC- ಪ್ರತಿಷ್ಠಿತ ವಿಶ್ವ ದಾಖಲೆ ಸೇರಿದ ಶಕ್ತಿ ಯೋಜನೆ: ಅತೀವ ಸಂತಸ, ಹೆಮ್ಮೆಯ ಕ್ಷಣ- ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ 2023ರ ಜೂನ್ 11ರಿಂದ ಜಾರಿಗೆ ಬಂದ ಶಕ್ತಿ ಯೋಜನೆ ಪ್ರತಿಷ್ಠಿತ ವಿಶ್ವ ದಾಖಲೆಗೆ ಸೇರ್ಪಡೆ (Golden Book...
KKRTC ವಿಜಯಪುರ: ಸಂಸ್ಥೆ ನಿಯಮವನ್ನೇ ಗಾಳಿಗೆ ತೂರಿ ಮತ್ತೆ ಮತ್ತೆ ನೌಕರರಿಂದ ಸ್ವಂತ ಕಾರನ್ನು ಸರ್ವಿಸ್ ಮಾಡಿಸಿಕೊಳ್ಳುತ್ತಿರುವ ಡಿಎಂ
ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅದರಲ್ಲೂ ವಿಜಯಪುರ ವಿಭಾಗದಲ್ಲಿ ಇವರ ಬಹುತೇಕ ಎಲ್ಲ ಘಟಕ ವ್ಯವಸ್ಥಾಪಕರು ಸೇರಿದಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳೂ ಅಂಕುಶವಿಲ್ಲದ ಆನೆಯಂತಾಗಿದ್ದಾರೆ. ಅಂದರೆ...
ಕಾವೇರಿ ನದಿಗೆ 31,550 ಕ್ಯೂಸೆಕ್ ನೀರು ಬಿಡುಗಡೆ- ನದಿ ತಟದ ಜನರಿಗೆ ಸೂಚನೆ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ವರುಣನ ಆರ್ಭಟ ಹೆಚ್ಚಾಗಿದ್ದು ಈ ಹಿನ್ನೆಲೆ ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ ಡ್ಯಾಂಗೆ ಒಳಹರಿವು ಹೆಚ್ಚಾಗುತ್ತಿದೆ. ಹೀಗಾಗಿ ನದಿ...
BMTC: ಬ್ರೇಕ್ ಫೇಲಾಗಿ ಕಂದಕಕ್ಕೆ ನುಗ್ಗಿದ ಬಸ್- ಅದೃಷ್ಟವಶಾತ್ ಪ್ರಯಾಣಿಕರು ಸೇಫ್
ಆನೇಕಲ್: ಬ್ರೇಕ್ ಫೇಲಾಗಿ ರಸ್ತೆ ಬದಿಯ ಕಂದಕಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ನುಗ್ಗಿರುವ ಘಟನೆ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಹರಪ್ಪನಹಳ್ಳಿ ಬಳಿ...
ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಸಿಗುತ್ತಿದೆ ಮುಕ್ತಿ
ಬೆಂಗಳೂರು: ರಾಜ್ಯ ರಾಜಧಾನಿಯ ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಮುಕ್ತಿ ಸಿಗುತ್ತಿದೆ. ಹೌದು! ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆ ಉದ್ಘಾಟನೆ ಆಗುತ್ತಿದೆ. ಇಂದು...
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...













