CrimeNEWSನಮ್ಮರಾಜ್ಯಬೆಂಗಳೂರು

ಲಾಡ್ಜ್​​ನಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟು ಪೊಲೀಸರಿಂದ ಚಿತ್ರಹಿಂಸೆ:  ಕಮಿಷನರ್, ಮಾನವ ಹಕ್ಕುಗಳ ಆಯೋಗಕ್ಕೆ ದೂರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಯಾರೋ ಮಾಡಿದ ತಪ್ಪಿಗೆ ಅಮಾಯಕನನ್ನು ಲಾಡ್ಜ್​​ನಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟು ಕಾಟನ್​ಪೇಟೆ ಪೊಲೀಸರ ಚಿತ್ರಹಿಂಸೆ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಈ ಹಲ್ಲೆ ಆರೋಪವನ್ನು ಕಾಟನ್​ಪೇಟೆ ಪೊಲೀಸರ ವಿರುದ್ಧ ವೆಂಕಟ್ ಎಂಬುವರು ಮಾಡಿದ್ದಾರೆ. ನನ್ನನ್ನು ಠಾಣೆಗೂ ಕರೆದೊಯ್ಯದೇ ಲಾಡ್ಜ್​​ನಲ್ಲಿ ಮೂರು ದಿನಗಳ ಕಾಲ ಕೂಡಿಟ್ಟು ಚಿತ್ರ ಹಿಂಸೆ ನೀಡಿದ್ದಾರೆ ಎಂದು ಮಾನವ ಹಕ್ಕುಗಳ ಆಯೋಗಕ್ಕೆ ವೆಂಕಟ್‌ ದೂರು ನೀಡಿದ್ದಾರೆ.

ಯಾರ ವಿರುದ್ಧ ಆರೋಪ..? ಕಾಟನ್ ಪೇಟೆ ಸಬ್ ಇನ್ಸ್​​ಪೆಕ್ಟರ್ ಸಂತೋಷ್ ಗೌಡ, ಸಿಬ್ಬಂದಿಯಾದ ಧ್ಯಾನ್ ಪ್ರಕಾಶ್ ಹಾಗೂ ಸಚಿನ್ ವಿರುದ್ಧ ಪೊಲೀಸ್ ಕಮಿಷನರ್ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ಕೋಣನಕುಂಟೆ ನಿವಾಸಿ ವೆಂಕಟ್ ದೂರು ನೀಡಿದ್ದು, ಸದ್ಯ ಪೊಲೀಸರ ವಿರುದ್ಧ ದೂರು ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ.

ಏನಿದು ಪ್ರಕರಣ..?: ಜನವರಿ 12 ರಂದು ವೆಂಕಟ್ ಬೆಂಗಳೂರಿನಿಂದ ಮುಳಬಾಗಿಲಿಗೆ ಹೋಗಿದ್ದರು. ಅಲ್ಲಿಂದ ಹುಟ್ಟೂರಾದ ಬೇವಳ್ಳಿಗೆ ಹೋಗಲು ಅಪರಿಚಿತ ಮಣಿ ಎಂಬಾತನಿಂದ ಡ್ರಾಪ್ ಪಡೆಯುತ್ತಿದ್ದರು. ಡ್ರಾಪ್ ಪಡೆಯುತ್ತಿದ್ದ ವ್ಯಕ್ತಿ ವಿರುದ್ಧ ಕಾಟನ್ ಪೇಟೆ ಠಾಣೆಯಲ್ಲಿ 420 ಅಡಿ ಕೇಸ್ ದಾಖಲಾಗಿತ್ತು.

ಮಣಿಯನ್ನು ಹುಡುಕಾಡುತ್ತಿದ್ದ ಕಾಟನ್ ಪೇಟೆ ಪೊಲೀಸರಿಗೆ ಮಣಿ ಲೊಕೇಷನ್ ಮುಳಬಾಗಿಲು ತೋರಿಸಿತ್ತು. ಪೊಲೀಸರು ಮುಳಬಾಗಿಲಿನ ಕೂತಂಡಹಳ್ಳಿ ಕೆರೆ ಬಳಿ ದಾಳಿ ಮಾಡಿ ಮಣಿ ಜತೆ ವೆಂಕಟ್ ಅವ​​ರನ್ನು ಕರೆದೊಯ್ದಿದ್ದಾರೆ. ಆದರೆ ಇಲ್ಲಿ ಮಣಿ ಮೇಲಿದ್ದ ಕೇಸ್​ಗೂ ವೆಂಕಟ್ ಅವ​​ರಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಲಾಗಿದೆ.

ವೆಂಕಟ್ ಆರೋಪ ಏನು..?: ಮುಳಬಾಗಿಲಿನಿಂದ ಕೆರೆದುಕೊಂಡು ಬಂದು ಜನವರಿ 13ರ ಬೆಳಗ್ಗೆ ಕಾಟನ್ ಪೇಟೆಯ ಲಾಡ್ಜ್ ಒಂದರಲ್ಲಿ ನನ್ನನ್ನು ಇರಿಸಿದ್ದರು. ನಾನು ಯಾಕೆ ಇಲ್ಲಿಗೆ ಕರೆದುಕೊಂಡು ಬಂದಿದ್ದೀರಿ ಎಂದು ಪ್ರಶ್ನಿಸಿದೆ. ಸುಮ್ನೆ ಇರಬೇಕು, ಇಲ್ಲವಾದರೆ ಎನ್​ಕೌಂಟ್ ಮಾಡ್ತೀವಿ, ಇರೋ ಕೆಲಸನೂ ಕಳೆದುಕೊಳ್ಳುವ ಹಾಗೆ ಮಾಡ್ತೀವಿ ಎಂದು ಆವಾಜ್ ಹಾಕಿದರು. ಮೂರು ದಿನಗಳ ಕಾಲ ಪೊಲೀಸ್ ಠಾಣೆಗೆ ಕರೆದೊಯ್ಯದೇ ಲಾಡ್ಜ್​ನಲ್ಲಿ ಇಟ್ಟಿದ್ದರು.

ನಮ್ಮ ಮನೆಯವರಿಗೆ ಈ ವಿಷಯ ಗೊತ್ತಾಗಬಾರದು ಎಂಬ ಕಾರಣಕ್ಕೆ ನನ್ನ ಪತ್ನಿಗೆ ಆಗಾಗ ಫೋನ್ ಮಾಡಿಸಿ ಮತನಾಡಿಸುತ್ತಿದ್ದರು. ಆದರೆ ನಾನು ಆಕೆಗೆ ಎಲ್ಲಿದ್ದೀನಿ ಎಂದು ಹೇಳಲು ಬಿಡುತ್ತಿರಲಿಲ್ಲ. ಹೊರಗಿದ್ದೀನಿ, ನಾಳೆ ಬರ್ತಿನೆಂದು ಹೇಳಿಸುತ್ತಿದ್ದರು. ಆದರೆ ಒಮ್ಮೆ ನನಗೆ ನೋವು ತಡೆಯಲಾಗದೆ ಕಣ್ಣೀರು ಇಟ್ಟಿದ್ದೆ. ಇದರಿಂದ ನನ್ನ ಪತ್ನಿಗೆ ಅನುಮಾನ ಬಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಆಗ ವಿಚಾರ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಇನ್ನು ಇತ್ತ ವೆಂಕಟ್ ಫೋನ್ ತೆಗೆಯದಿದ್ದಾಗ ಉಪ್ಪಾರಪೇಟೆ ಠಾಣೆಯಲ್ಲಿ ಪತಿ ಮಿಸ್ಸಿಂಗ್ ಆಗಿದ್ದಾರ ಎಂದು ಪತ್ನಿ ದೂರು ದಾಖಲಿಸಿದ್ದಳು. ನಾನು ಪತಿಗೆ ಕರೆ ಮಾಡಿದಾಗ ಒಮ್ಮೆ ಮೆಜೆಸ್ಟಿಕ್ ಬಳಿ ಅಂದಿದ್ದರು, ಇನ್ನೊಮ್ಮೆ ಮೈಸೂರು ಬ್ಯಾಂಕ್ ಬಳಿ ಇದ್ದೀನಿ ಎಂದಿದ್ದರು. ಮತ್ತೊಮ್ಮೆ ಮಣಿ ಅನ್ನೋರು ಮುಳಬಾಗಿಲಿನಿಂದ ಊರಿಗೆ ಡ್ರಾಪ್ ಕೊಡ್ತಿದ್ದಾರೆ ಎಂದಿದ್ದರು. ನನಗೆ ಯಾಕೋ ಅನುಮಾನ ಬರುತ್ತಿದೆ ಎಂದು ವೆಂಕಟ್ ಪತ್ನಿ ಉಪ್ಪಾರಪೇಟೆ ಠಾಣೆಯಲ್ಲಿ ದೂರು ನೀಡಿದ್ದರು.

ಉಪ್ಪಾರ ಪೇಟೆ ಠಾಣೆಯ ಪೊಲೀಸರು ವೆಂಕಟ್‌ ಅವರ ಮೊಬೈಲ್ ಸಿಡಿಆರ್ ತೆಗೆದು ವಿಚಾರಣೆ ನಡೆಸಿದ್ದಾರೆ. ಆಗ ಕಾಟನ್ ಪೇಟೆ ಲಾಡ್ಜ್ ಒಂದರಲ್ಲಿ ಲೋಕೇಷನ್ ತೋರಿಸುತ್ತಿತ್ತು. ಉಪ್ಪಾರಪೇಟೆ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿ ಅಲ್ಲಿನ ಪೊಲೀಸರು ಎಂಟ್ರಿ ಆಗ್ತಿದ್ದಂತೆ ವೆಂಕಟ್​ನನ್ನು ಲಾಡ್ಜ್​​ನಿಂದ ನಾಲ್ಕನೇ ದಿನಕ್ಕೆ ಬಿಟ್ಟು ಕಳುಹಿಸಿದ್ದಾರೆ.

Leave a Reply

error: Content is protected !!
LATEST
KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ