NEWSದೇಶ-ವಿದೇಶರಾಜಕೀಯ

ಬಿಜೆಪಿ ಸರ್ಕಾರ ಜನೋತ್ಸವ ಬದಲಿಗೆ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸಾವರ್ಕರ್ ಉತ್ಸವ ಮಾಡುತ್ತಿದೆ : ಪ್ರಿಯಾಂಕ್ ಖರ್ಗೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಿನಾಯಕ ದಾಮೋದರ್‌ ಸಾವರ್ಕರ್ ಅವರು, ಗೋಮಾಂಸವನ್ನು ಸಹ ಸೇವನೆ ಮಾಡುತ್ತಿದ್ದರು. ಇನ್ನು ಪ್ರಮುಖವಾದ ವಿಷಯವೆಂದರೆ ಅವರು ಪೂರ್ಣ ಪ್ರಮಾಣದಲ್ಲಿ ನಾಸ್ತಿಕವಾದಿ ಆಗಿದ್ದರು ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಾವರ್ಕರ್ ಬ್ರಿಟನ್‍ನಲ್ಲಿದ್ದಾಗ ಗೋಮಾಂಸ ಸೇವನೆ ಮಾಡಿದ್ದರು. ಆದರೆ, ಈ ಬಗ್ಗೆ ಬಿಜೆಪಿಯವರಿಗೆ ಪ್ರಶ್ನಿಸಿದರೆ, ಅವರು ಜೆರ್ಸಿ ಗೋವನ್ನು ತಿಂದಿದ್ದರು ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಸಮಾಜಾಯಿಷಿ ನೀಡುತ್ತಾರೆ ಎಂದರು.

ಅವರ ಸ್ವಂತ ಲೇಖನದಲ್ಲಿ ‘ಗೋವು ಎತ್ತುಗಳಿಗೆ ಮಾತ್ರ ಮಾತೆಯಾಗಿರುತ್ತದೆಯೇ ಹೊರತು ಹಿಂದೂಗಳಿಗಲ್ಲ. ಹಿಂದುತ್ವ ಕೇವಲ ಗೋವಿನ ನಾಲ್ಕು ಕಾಲುಗಳ ಮೇಲೆ ನಿಲ್ಲುವುದಿಲ್ಲ. ಹೀಗಾಗಿ ಗೋವಿನ ಹೊಟ್ಟೆಯೊಳಗೆ 33 ಕೋಟಿ ದೇವತೆಗಳನ್ನು ತುಂಬಲಾಗಿದೆ. ಹಿಂದೂಗಳು ಗೋವು ಪೂಜೆ ಬಿಟ್ಟು ಅಪಾರ ಶಕ್ತಿ ಹೊಂದಿರುವ ಮನುಷ್ಯರ ಪೂಜೆ ಮಾಡಿ ಎಂದು ಹೇಳಿದ್ದಾರೆ ಎಂದರು.

ಆದರೆ, ಬಿಜೆಪಿ ಹಾಗೂ ಆರೆಸ್ಸೆಸ್‍ನವರು ಸಾರ್ವಕರ್ ಅವರನ್ನು ಹಿಂದುತ್ವದ ಪಿತಾಮಹಾ ಎಂದು ನಂಬಿದ್ದಾರೆ. ಇದೇ ಸಾರ್ವಕರ್ ಅವರು ಗೋಮಾತೆಯನ್ನು ಪೂಜಿಸಬಾರದು. ಗೋವು ಪವಿತ್ರ ಪ್ರಾಣಿ ಅಲ್ಲ ಉಪಯೋಗದ ಪ್ರಾಣಿ. ಇನ್ನು ಅಷ್ಟೇಯಲ್ಲದೇ ಗೋ ಮೂತ್ರ ಕುಡಿದರೆ ಬುದ್ಧಿ ಹತ್ಯೆಯಾಗುತ್ತದೆ ಎಂದು ಸಾರ್ವಕರ್ ಹೇಳಿದ್ದಾರೆ ಎಂದರು.

ಧರ್ಮದ ಆಧಾರದ ಮೇಲೆ ನಮ್ಮ ದೇಶ ವಿಭಜನೆ ಮಾಡಬೇಕು ಎಂದು ಮೊದಲು ಧ್ವನಿ ಎತ್ತಿದವರ ಪೂಜೆ ಯಾಕೆ ಮಾಡುತ್ತಿದ್ದೀರಿ. ಇನ್ನೂ, ಸಾವರ್ಕರ್ ನಾಸ್ತಿಕರಾಗಿದ್ದರು, ಈಗ ಪ್ರತಿ ಗಣೇಶೋತ್ಸವದ ಪೆಂಡಾಲ್‍ನಲ್ಲಿ ಸಾವಕರ್ ಫೋಟೋ ಇಡುತ್ತಿರುವುದೇಕೆ? ಆ ಮೂಲಕ ದೇವರು ಮತ್ತು ಸಾವರ್ಕರ್‌ಗೆ ಅಪಮಾನ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ಸಾರ್ವಕರ್ ಗೋ ಮಾತೆ ಪೂಜೆ ಮಾಡಬಾರದು ಎಂದು ಹೇಳಿರುವಾಗ ಇವರು ಗೋಹತ್ಯೆ ನಿಷೇಧ ಹಿಂಪಡೆಯುತ್ತಾರಾ, ಗೋಮೂತ್ರ ಕುಡಿಯುವುದು ನಿಲ್ಲಿಸುತ್ತಾರಾ, ಗೋ ಮಾತೆ ಹೆಸರಲ್ಲಿ ನಡೆಯುತ್ತಿರುವ ಥಳಿತ ಪ್ರಕರಣ ನಿಲ್ಲಿಸುತ್ತಾರಾ ಎಂದು ಆಕ್ರೋಶದಿಂದಲೇ ಪ್ರಶ್ನಿಸಿದರು.

ಹೇಳಿಕೊಳ್ಳಲು ಯಾವುದೇ ಜನಪರ ಸಾಧನೆಗಳನ್ನು ಮಾಡದ ಬಿಜೆಪಿ ಸರ್ಕಾರ ಜನೋತ್ಸವ ಬದಲಿಗೆ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸಾವರ್ಕರ್ ಉತ್ಸವವನ್ನು ಮಾಡುತ್ತಿದೆ. ಅದು ಅಲ್ಲದೆ, ಸಾರ್ವಕರ್ ಅವರು ಸ್ವಾತಂತ್ರ್ಯ ಹೋರಾಟ ಮಾಡುವ ಉದ್ದೇಶ ಇದ್ದಿದ್ದರೆ ಅವರು ವಿದೇಶದಲ್ಲಿ ಬಂಧನವಾದಾಗ ಭಾರತಕ್ಕೆ ಬರಲು ಯಾಕೆ ಒಪ್ಪಲಿಲ್ಲ ಎಂದು ಕೇಳಿದರು.

ಇನ್ನು ಸೆರೆವಾಸದಲ್ಲಿದ್ದಾಗ ಸಾವರ್ಕರ್ ಅವರು ಬ್ರಿಟಿಷರಿಗೆ ಆರು ಬಾರಿ ಕ್ಷಮಾಪಣಾ ಪತ್ರ ಬರೆದಿದ್ದು ಯಾಕೆ? ಈ ಕ್ಷಮಾಪಣಾ ಪತ್ರಗಳನ್ನು ಬಿಜೆಪಿಯವರು ಮಾಸ್ಟರ್ ಸ್ಟ್ರೋಕ್ ಎನ್ನುತ್ತಿದ್ದಾರೆ. ಒಂದು ವೇಳೆ ಪರಿಗಣಿಸಿದರೂ, ಅವರು ಜೈಲಿಂದ ಬಿಡುಗಡೆಯಾದ ನಂತರ ಅವರು ಎಷ್ಟು ಹೋರಾಟ ಮಾಡಿದರು, ಅದರ ಪರಿಣಾಮಗಳೇನು ಎಂದು ವಿವರಿಸಲಿ ಎಂದು ಸವಾಲು ಹಾಕಿದರು.

ಸ್ವತಃ ‘ವೀರ್’ ಎಂದು ಬರೆದುಕೊಂಡ ಸಾವರ್ಕರ್..!: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ ಮಹಾತ್ಮ ಎಂಬ ಬಿರುದು ಕೊಟ್ಟಿದ್ದು, ರವೀಂದ್ರ ನಾಥ ಠಾಗೋರ್, ಸುಭಾಷ್‌ ಚಂದ್ರ ಬೋಸ್ ಅವರಿಗೆ ನೇತಾಜಿ ಎಂಬ ಬಿರುದು ಕೊಟ್ಟಿದ್ದು ಅಜಾದ್ ಹಿಂದ್ ಫೌಜ್‍ನ ಸದಸ್ಯರು. ಆದರೆ, ಸಾವರ್ಕರ್ ಅವರಿಗೆ ವೀರ್ ಎಂದು ಬಿರುದು ಕೊಟ್ಟವರು ಯಾರು ಎಂದು ಹುಡುಕಿದಾಗ, 1923ರಲ್ಲಿ ‘ಲೈಫ್ ಆಫ್ ಬ್ಯಾರಿಸ್ಟರ್ ಸಾವರ್ಕರ್ ಎಂಬ ಪುಸ್ತಕ ಹೊರಬರುತ್ತದೆ.

ಅದರ ಲೇಖಕರು ಚಿತ್ರಗುಪ್ತ. ಅದರಲ್ಲಿ ಸಾವರ್ಕರ್ ಅವರನ್ನು ಇಂದ್ರ, ಚಂದ್ರ, ಹೋರಾಟದ ಮನೋಭಾವ, ಕಿಚ್ಚು, ದೇಶಪ್ರೇಮದ ಬಗ್ಗೆ ಮಿತಿಮೀರಿ ವರ್ಣನೆ ಮಾಡಲಾಗಿದೆ. ಆ ಪುಸ್ತಕದಲ್ಲಿ ಸಾರ್ವಕರ್ ಅವರನ್ನು ‘ವೀರ್ ಸಾವರ್ಕರ್’ ಎಂದು ತಿಳಿಸಿರುತ್ತಾರೆ.

ಲೇಖಕ ಚಿತ್ರಗುಪ್ತ ಬೇರಾರೂ ಅಲ್ಲ ಸಾವರ್ಕರ್ ಅವರೇ: 1966ರಲ್ಲಿ ಸಾವರ್ಕರ್ ಅವರು ನಿಧನರಾದ ನಂತರ, 1987ರಲ್ಲಿ ಈ ಪುಸ್ತಕ 2ನೆ ಆವೃತ್ತಿ ಮುದ್ರಣಕ್ಕೆ ಹೋದಾಗ ಮೊದಲ ಆವೃತ್ತಿಯ ಮುದ್ರಣಕಾರರಾದ ರವೀಂದ್ರ ರಾಮದಾಸ್ ಅವರು ಮುನ್ನುಡಿ ಬರೆದಾಗ ಈ ಪುಸ್ತಕದ ಲೇಖಕ ಚಿತ್ರಗುಪ್ತ ಬೇರಾರೂ ಅಲ್ಲ, ಸ್ವತಃ ಸಾವರ್ಕರ್ ಎಂಬ ಅಂಶವನ್ನು ತಿಳಿಸುತ್ತಾರೆ. ಅಲ್ಲಿಗೆ ಸಾವರ್ಕರ್ ಅವರೇ ತಮಗೆ ತಾವೇ ‘ವೀರ್’ ಎಂದು ಬಿರುದು ಕೊಟ್ಟುಕೊಂಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು.

Leave a Reply

error: Content is protected !!
LATEST
BMTC ಕಂಡಕ್ಟರ್‌ಗೆ ಕಲ್ಲಿನಿಂದ ಹೊಡೆದ ಕಿರಾತಕ: ಆತಂಕದಲ್ಲೇ ಡ್ಯೂಟಿ, ಚಾಲನಾ ಸಿಬ್ಬಂದಿಗಳಿಗಿಲ್ಲ ಜೀವ ರಕ್ಷಣೆ KKRTC ಬಸ್‌ ಪಲ್ಟಿ ಮಹಿಳೆ ಸಾವು- ಒಬ್ಬರ ಸ್ಥಿತಿ ಗಂಭೀರ, 20ಕ್ಕೂ ಹೆಚ್ಚು ಮಂದಿಗೆ ಗಾಯ ವಿಜಯಪಥ ವರದಿ ಪರಿಣಾಮ-KSRTC ಚಾಲಕನಿಗೆ ಕೊಟ್ಟಿದ್ದ ಮೆಮೋ ವಾಪಸ್‌ ಪಡೆದು 20ದಿನಗಳ ರಜೆ ಮಂಜೂರು ಮಾಡಿದ ಡಿಸಿ ಸಾರಿಗೆ ನೌಕರರಿಂದ ಚುನಾಯಿತರಾಗದ ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ ಸರಿ ಸಮಾನ... KSRTC ನೌಕರರ ಸಂಬಳ ಅ.30ರಂದೇ ಬ್ಯಾಂಕ್ ಖಾತೆಗೆ ಜಮೆ: ಸಂಸ್ಥೆ ನಿರ್ದೇಶಕರು ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ : ಸಚಿವ ಎಚ್.ಕೆ. ಪಾಟೀಲ ಹಸಿರು ಪಟಾಕಿ ಬಳಸಿ ದೀಪಾವಳಿ ಹಬ್ಬ ಆಚರಿಸಿ- ನಿಷೇಧಿತ ಪಟಾಕಿ ಮಾರಾಟ, ಬಳಕೆ ನಿಷೇಧ: ಜಿಲ್ಲಾಧಿಕಾರಿ ಡಾ.ಶಿವಶಂಕರ ಕೆಂಗೇರಿ ಕೆರೆಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ ₹5 ಲಕ್ಷ ಪರಿಹಾರ APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ