KKRTC: ನನ್ನ ಮೇಲೆ ರೇಹಮಾನ್ ಮಸ್ಕಿ ಮಾಡಿರುವ ಆರೋಪಗಳೆಲ್ಲ ಸುಳ್ಳು – ಕಲಬುರಗಿ ವಿಭಾಗ 2ರ ಡಿಸಿ ಸಿದ್ದಪ್ಪ ಗಂಗಾಧರ್

ಕಲಬುರಗಿ: ಕಲಬುರಗಿ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿ ಲಂಚವತಾರಕ್ಕೆ ಬೆಸತ್ತು ಸ್ವಯಂ ನಿವೃತ್ತಿ ಪಡೆದ ಸಿಬ್ಬಂದಿ ಎಂಬ ಶೀರ್ಷಿಕೆಯಡಿ ಇದೇ ಮಾ. 20ರಂದು ವಿಜಯಪಥ ಮೀಡಿಯಾದಲ್ಲಿ ವರದಿ ಪ್ರಕಟಿಸಲಾಗಿತ್ತು.
ಈ ಸಂಬಂಧ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದಪ್ಪ ಗಂಗಾಧರ್ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಸಂಸ್ಥೆಯ ಸ್ವಯಂ ನಿವೃತ್ತ ಸಹಾಯಕ ರೇಹಮಾನ್ ಮಸ್ಕಿ ಅವರು ಸ್ವಯಂ ನಿವೃತ್ತಿ ಹೊಂದಲು ಕಾರಣಗಳೇನು ಹಾಗೂ ನಾನು ಹಣ ಕೆಳದೇ ಇದ್ದರು ನನ್ನ ಮೇಲೆ ಹಣ ಕೇಳಿರುವುದಾಗಿ ಸುಳ್ಳು ಆರೋಪ ಮಾಡಿದ್ದು ಏಕೆ ಎಂಬುದರ ಬಗ್ಗೆ ವಿವರಿಸಿದ್ದಾರೆ.
ಡಿಸಿ ಸಿದ್ದಪ್ಪ ಗಂಗಾಧರ್ ನೀಡಿರುವ ಪತ್ರಿಕಾ ಹೇಳಿಕೆಯಲ್ಲೇನಿದೆ?: ರೇಹಮಾನ್ ಮಸ್ಕಿ, ಸಹಾಯಕ ವಿಭಾಗೀಯ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಾಗ ಅವರಿಗೆ ಅನಾರೋಗ್ಯ ಸಮಸ್ಯೆ ಇದ್ದುದ್ದರಿಂದ 29.05.2023 ರಿಂದ 05.08.2023ರ ವರೆಗೆ ರಜೆ ಮಂಜೂರು ಮಾಡಲಾಗಿತ್ತು.
ಮುಂದುವರಿದು ರಜೆ ಅವಧಿ ಮುಗಿದರೂ ಸಹ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೆ 04.11.2023 ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ ಎಂದು 16.11.2023ರಂದು ಘಟಕ ವ್ಯವಸ್ಥಾಪಕರು ಕಲಬುರಗಿ ಘಟಕ-2ರವರು ವರದಿ ಸಲ್ಲಿಸಿದ ಆಧಾರದ ಮೇಲೆ ಮಸ್ಕಿ ಅವರ ಮೇಲೆ ಗೈರು ಹಾಜರಿ ಪ್ರಕಣ ದಾಖಲಿಸಲಾಗಿತ್ತು.
ಈ ನಡುವೆ ಸುಮಾರು 350 ದಿನಗಳ ಕಾಲ ಗೈರು ಹಾಜರಾಗಿದ್ದರು. ಹೀಗಾಗಿ ಮಸ್ಕಿ ಅವರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದರಿಂದ ನಿಯಮಾವಳಿಯಂತೆ ಈ ಸಿಬ್ಬಂದಿಯ ಮನೆ ವಿಳಾಸಕ್ಕೆ ಕರ್ತವ್ಯಕ್ಕೆ ಹಾಜರಾಗಲು ಕರೆ ಪತ್ರ ಮತ್ತು ಆಪಾದನಾ ಪತ್ರ 2-3 ಭಾರಿ ಭದ್ರತಾ ಸಿಬ್ಬಂದಿಗಳ ಮುಖಾಂತರ ಕಳುಹಿಸಿದರು ಸಹ ಕರೆ ಪತ್ರ ಮಾತ್ರ ಪಡೆದು ಆಪಾದನಾ ಪತ್ರ ಪಡಿಯದೇ ನಿರಾಕರಿಸಿದ್ದರು ಮತ್ತು ಭದ್ರತಾ ಸಿಬ್ಬಂದಿಗಳಿಗೆ ಮನೆ ಬರದಂತೆ ಸೂಚಿಸಿದ್ದರು.
ನಿಗಮ ನಿಯಮಾವಳಿಯಂತೆ ಸದರಿಯವರ ಮನೆ ವಿಳಾಸಕ್ಕೆ ಕಳುಹಿಸಿದ ಆಪಾದನಾ ಪತ್ರ ನಿರಾಕರಿಸಿದಕ್ಕೆ ಭದ್ರತಾ ವರದಿಯ ಆಧಾರದ ಮೇಲೆ ಇವರ ಮೇಲೆ ಶಿಸ್ತು ಪ್ರಕರಣ ದಾಖಲಾಗಿರುತ್ತದೆ. ಹೀಗೆ ಇವರಿಗೆ ಮತೊಂದು ಭಾರಿ ಭದ್ರತಾ ಸಿಬ್ಬಂದಿಯನ್ನು ಮನೆ ವಿಳಾಸಕ್ಕೆ ಆಪಾದನಾ ಪತ್ರ ಜಾರಿ ಮಾಡಲು ಕಳುಹಿಸಿದಾಗ ಸ್ವೀಕರಿಸದೇ ನಿರಾಕರಿಸಿರುತ್ತಾರೆಂದು ವರದಿಯಾಗಿದೆ.

ಮುಂದುವರಿದು ಮಸ್ಕಿ ಅವರು ಕರ್ತವ್ಯಕ್ಕೆ ಹಾಜರಗದೇ ವೈದ್ಯಕೀಯ ಆಧಾರ ಮೇಲೆ ಸ್ವಯಂ ನಿವೃತ್ತಿ ನೀಡಲು ಅರ್ಜಿ ಸಲ್ಲಿಸಿದ್ದರು, ಅದರಂತೆ ನಿಯಮಾವಳಿ ಪ್ರಕಾರ ಸ್ವಯಂ ನಿವೃತ್ತಿ ಅಂಗಿಕರಿಸುವ ಮುನ್ನ ಇವರ ಮೇಲಿರುವ ಎಲ್ಲ ಪ್ರಕಣಗಳನ್ನು ಇತ್ಯಾರ್ಥಗೊಳಿಸಬೇಕೆಂಬ ನಿಯಮವಿರುದರಿಂದ, ಇವವ ಮೇಲಿರುವ ಶಿಸ್ತು ಪ್ರಕರಣಗಳಿಗೆ ಅವರು ವಿಚಾರಣೆ ಪತ್ರಗಳು ಸ್ವೀಕರಿಸದೆ ಮತ್ತು ವಿಚಾರಣೆಗೆ ಸಹಕರಿಸದೇ ಇರುವುದರಿಂದ ನಾನು ಶಿಸ್ತುಪಾಲನಾಧಿಕಾರಿಯಾಗಿ 4500 ರೂ.ಗಳ ದಂಡವಿಧಿಸಿ ಪ್ರಕರಣಗಳ ಇತ್ಯಾರ್ಥ ಪಡಿದ್ದೇವೆ.
ಅದೇ ರೀತಿ 350 ದಿನಗಳ ಕಾಲ ಗೈರು ಹಾಜರಾಗಿರುವ ಪ್ರಕರಣದಲ್ಲಿ ನಿಯಮಾವಳಿಯಂತೆ ಒಂದು ತಿಂಗಳ ವೇತನ ಕಡಿತಗೊಳಿಸಿದ್ದು, ಪ್ರಕರಣ ಇತ್ಯಾರ್ಥ ಪಡೆಸಲಾಗಿದೆ. ಈ ಶಿಸ್ತು ಮತ್ತು ಗೈರು ಹಾಜರಿ ಪ್ರಕರಣಗಳ ಇತ್ಯಾರ್ಥಗೊಂಡ ನಂತರ ಸ್ವಯಂ ನಿವೃತ್ತಿ ಅರ್ಜಿ ನಿಯಮಾವಳಿಯಂತೆ ಅಂಗಿಕರಿಸಲಾಗಿದೆ.
ಮುಂದುವರಿದು ಮಸ್ಕಿ ಅವರಿಗೆ ಗೈರು ಹಾಜರಿ ಪ್ರಕರಣದಲ್ಲಿ ಶಿಸ್ತುಕ್ರಮವಾಗಿ ತಮಗೆ ಒಂದು ತಿಂಗಳ ವೇತನ ಕಡಿತಗೊಳಿಸಿರುತ್ತಾರೆಂದು ವಿಭಾಗೀಯ ಕಚೇರಿ, ಕೆಲವು ಶಾಖೆಗಳಿಗೆ ಹೋಗಿ ಅಲ್ಲಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳ ಮುಂದೆ ಚಿರಾಡುತ್ತಾ ಕಿರಿಚಾಡುತ್ತಾ ಕಚೇರಿಯ ವಾತಾವಣ ಹಾಳು ಮಾಡಿದ್ದಾರೆ.
ಅದು ಅಲ್ಲದೇ ಇವರು ನಿವೃತ್ತಿ ಹೊಂದಿರುವ ಹಣ ನೀಡಲು ಪಿಡಿಸುತ್ತಿದಾರೆಂದು ದೂರಿದ್ದಾರೆ. ಆದರೆ ಇವರು ಅನಾರೋಗ್ಯದಿಂದ ನಿವೃತ್ತಿ ಪಡೆದಿರುವುದರಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ ಕೇಂದ್ರ ಕಚೇರಿಗೆ ವಿನಂತಿಸಿ ಹಣ ತರಿಸಿ ವಿಭಾಗದಲ್ಲಿ ಇವರಿಗಿಂತ ಮುಂಚೆ ನಿವೃತ್ತಿ ಹೊಂದಿದ ಸಿಬ್ಬಂದಿಗಳಿಗೆ ಹಣ ನೀಡದೇ ಇವರಿಗೆ ಮೊದಲ ಆದ್ಯತೆ ನೀಡಿ ಗ್ರಾಚ್ಯುಟಿ, ರಜೆ ನಗದೀಕರಣ, ವಿ.ಆರ್.ಎಸ್ ಹಣಗಳನ್ನು ಅವರ ಖಾತೆಗೆ ಜಮಾ ಮಾಡಲಾಗಿದೆ.
ಇದೆಲ್ಲವನ್ನು ಮಾಡಿದ್ದು, ನಾನು ಇವರಿಗೆ ಯಾವುದೇ ರೀತಿ ಹಣ ನೀಡಲು ಕಿರುಕುಳ ನೀಡಿಲ್ಲ. ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ನನ್ನ ಮೇಲೆ ಈ ರೀತಿ ಇಲ್ಲಸಲ್ಲದ ಆರೋಪ ಮಾಡಿ ನನ್ನ ಮತ್ತು ನಿಗಮದ ಘನತೆಗೆ ಧಕ್ಕೆ ತರುವಂತಹ ಕೆಲಸ ಮಾಡಿದ್ದಾರೆ ರಹಿಮಾನ್ ಮಸ್ಕಿ ಎಂದು ತಮ್ಮ ಮೇಲೆ ಮಾಡಿರುವ ಆರೋಪಗಳೆಲ್ಲವೂ ಸುಳ್ಳು ಎಂದು ಡಿಸಿ ಸಿದ್ದಪ್ಪ ಗಂಗಾಧರ್ ತಿಳಿಸಿದ್ದಾರೆ.
ಇನ್ನು ಮಸ್ಕಿ ಅವರಿಗೆ ನಾನು ಹಣ ಕೇಳಿದಲ್ಲಿ ಪೂರಕ ದಾಖಲಾತಿಗಳೊಂದಿಗೆ ನನ್ನ ಮೇಲೆ ನಿಗಮದ/ ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳಿಗೆ ಮನವಿ ಸಲ್ಲಿಸಬಹುದು. ಅದನ್ನು ಬಿಟ್ಟು ಈ ರೀತಿ ಆರೋಪ ಮಾಡುವುದನ್ನು ಸಹಿಸೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
Related


You Might Also Like
ಮೊಸಳೆಹೊಸಳ್ಳಿ ದುರಂತ: ಮೃತರ ಮನೆಗಳಿಗೆ ವ್ಹೀಲ್ ಚೇರ್ನಲ್ಲೇ ತೆರಳಿ ಸಾಂತ್ವನ ಹೇಳಿದ ಮಾಜಿ ಪ್ರಧಾನಿ ಎಚ್ಡಿಡಿ
ಹಾಸನ: ಜಿಲ್ಲೆಯ ಮೊಸಳೆಹೊಸಳ್ಳಿಯಲ್ಲಿ ಮೊನ್ನೆ ನಡೆದ ಅಪಘಾತ ಪ್ರಕರಣ ನಿಜಕ್ಕೂ ಘನಘೋರ. ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಚಂದನ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಮೂಲಕ...
ಸಾಲಬಾಧೆ-ಗಂಡ, ಇಬ್ಬರು ಮಕ್ಕಳು ಸೇರಿ ನಾಲ್ವರು ಆತ್ಮಹತ್ಯೆಗೆ ಯತ್ನ ಮೂವರು ಮೃತ: ಸಾವು ಬದುಕಿನ ನಡುವೆ ತಾಯಿ ಸೆಣಸಾಟ
ಹೊಸಕೋಟೆ: ಸಾಲಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಮೂವರು ಮೃತಪಟ್ಟಿರುವ ಘಟನೆ ತಾಲೂಕಿನ ಗೊಣಕನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ. ಗಂಡ, ಇಬ್ಬರು ಮಕ್ಕಳನ್ನು...
KSRTC ಹಾಸನ: ಸತ್ಯ ಮರೆಮಾಚಿದ ತನಿಖಾ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮುಂದಾದ ಡಿಸಿ
ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಸನ ವಿಭಾಗದ ತನಿಖಾ ಸಿಬ್ಬಂದಿ ಸತ್ಯ ಮರೆಮಾಚಲು ಬಾಡಿ ಕ್ಯಾಮರಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವೊಂದು ಸಮಯದಲ್ಲಿ ಹ್ಯಾಂಗ್...
KSRTC ಹಾಸನ: ತನಿಖಾಧಿಕಾರಿಗಳ ಬಾಡಿ ಕ್ಯಾಮೆರಾದ ವಿಡಿಯೋ ರೆಕಾರ್ಡಿಂಗ್ ಕೊಡಲು ವಿಫಲ- ಆರೋಪ ಪತ್ರ ಜಾರಿ ಮಾಡಿದ ಡಿಸಿ
ಹಾಸನ: ಸಾರಿಗೆ ಸಂಸ್ಥೆಯ ಮಾರ್ಗ ತನಿಖಾಧಿಕಾರಿಗಳು ಬಾಡಿ ಕ್ಯಾಮೆರಾವನ್ನು ಹಾಕಿಕೊಂಡು ತನಿಖೆ ಮಾಡದ ಪರಿಣಾಮ ಮಾಹಿತಿ ಆಯೋಗದಲ್ಲಿ ಪ್ರಕರಣ ದಾಖಲು ಮಾಡಿದ ನೌಕರನಿಗೆ ವಿಡಿಯೋ ರೆಕಾರ್ಡಿಂಗ್ ಕೊಡಲು...
ಮೆಜೆಸ್ಟಿಕ್ BMTC: ಟೀ ಚೆನ್ನಾಗಿರುವುದಿಲ್ಲ ಬೇರೆ ಅಂಗಡಿಗೆ ಹೋಗೋಣ ಎಂದಿದ್ದಕ್ಕೆ ಚಾಲಕನ ಮೇಲೆ ಹಲ್ಲೆ- ಆರೋಪಿ ಬಂಧನ
ಬೆಂಗಳೂರು: ಈ ಅಂಗಡಿಯಲ್ಲಿ ಬೇಡ ಇಲ್ಲಿ ಟೀ ಚೆನ್ನಾಗಿರುವುದಿಲ್ಲ ಎಂದು ಹೇಳಿ ಅಲ್ಲಿಯೇ ಪಕ್ಕದಲ್ಲಿದ್ದ ಟೀ ಅಂಗಡಿಗೆ ಹೋಗೋಣ ಎಂದು ಸಹೋದ್ಯೋಗಿಗೆ ಹೇಳಿದ್ದಕ್ಕೆ ಕುಪಿತನಾದ ಟೀ ಮಾರುವ...
KRSTC: ಅನ್ಯಮಾರ್ಗದಲ್ಲಿ ಹೋಗಲು ಮಹಿಳಾ ಕಂಡಕ್ಟರನ್ನು ರಾತ್ರಿ ಅರ್ಧದಲ್ಲೇ ಇಳಿಸಿಹೋದ ಸಹೋದ್ಯೋಗಿಗಳು…!
ಸಾರಿಗೆ ಚಾಲನಾ ಸಿಬ್ಬಂದಿಗಳಲ್ಲಿ ಒಬ್ಬರಿಗೊಬ್ಬರು ಆಗುವುದಿಲ್ಲ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಹುತೇಕ ಎಲ್ಲ ಚಾಲನಾ ಸಿಬ್ಬಂದಿಗಳಲ್ಲಿ...
ಕಾಡುಪ್ರಾಣಿಗಳ ದಾಳಿಯಿಂದ ಸತ್ತರೆ ಲಕ್ಷ ಲಕ್ಷ ಪರಿಹಾರ ಸಿಗುತ್ತದೆ ಎಂಬ ಆಸೆಗೆ ಬಿದ್ದು ಪತಿಯನ್ನೇ ಕೊಂದು ಕಥೆ ಕಟ್ಟಿದ ಐನಾತಿ ಪತ್ನಿ
ಮೈಸೂರು: ಕಾಡು ಪ್ರಾಣಿಗಳಿಂದ ಜೀವ ಕಳೆದುಕೊಂಡವರ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಪರಿಹಾರ ಹಣದ ಆಸೆಗೆ ಪತಿಯನ್ನು ತಾನೇ ಕೊಂದು, ಹುಲಿ ಕೊಂದಿದೆ ಅಂತ ನಂಬಿಸಲು ಯತ್ನಿಸಿದ ಪತ್ನಿ...
ರಾಷ್ಟ್ರಕವಿ ಕುವೆಂಪುರಿಗೆ ಭಾರತ ರತ್ನ ಕೊಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಂಪುಟ ನಿರ್ಧಾರ: ಸಚಿವ HKP
ಬೆಂಗಳೂರು: ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರ ಬರಹಗಳು ಮತ್ತು ಚಿಂತನೆಗಳನ್ನು ರಾಷ್ಟ್ರವ್ಯಾಪಿಯಾಗಿಸಲು, ಆ ಮೂಲಕ ಸಮಾಜದಲ್ಲಿ ಜಾತ್ಯತೀತ ಮತ್ತು ಸೌಹಾರ್ದ ಮನೋವೃತ್ತಿಯನ್ನು ಬೆಳೆಸಲು ಕುವೆಂಪು...
ವರದಕ್ಷಿಣೆ ಕಿರುಕುಳ ಆರೋಪ: ಚಲನಚಿತ್ರ ನಿರ್ದೇಶಕ, ನಟ ಎಸ್.ನಾರಾಯಣ್, ಪತ್ನಿ, ಪುತ್ರನ ವಿರುದ್ಧ FIR ದಾಖಲು
ಬೆಂಗಳೂರು: ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಖ್ಯಾತ ಚಲನಚಿತ್ರ ನಿರ್ದೇಶಕ, ನಟ ಎಸ್.ನಾರಾಯಣ್, ಪತ್ನಿ ಹಾಗೂ ಪುತ್ರನ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಸೊಸೆಯೇ ದೂರು...