CRIMENEWSನಮ್ಮಜಿಲ್ಲೆ

KKRTC ವಿಜಯಪುರ: ತಂದೆ ನಿಧನರಾದ ನಾಲ್ಕೇ ದಿನಕ್ಕೆ ಡ್ಯೂಟಿಗೆ ಬರಬೇಕಿತ್ತು ಅಂತ ಚಾಲಕನಿಗೆ ಗೈರುಹಾಜರಿ ಮಾಡಿದ ಡಿಸಿ ನಾರಾಯಣಪ್ಪ ಕುರುಬರ

ವಿಜಯಪಥ ಸಮಗ್ರ ಸುದ್ದಿ
  • ಒಟ್ಟು 58 ದಿನ ರಜೆಯಲ್ಲಿದ್ದ ಚಾಲಕ ಕಂ ನಿರ್ವಾಹಕನಿಗೆ ಹಿಂದೆ ಮುಂದೆ ಗೈರು ಹಾಜರಿ ತೋರಿಸಿ 7ದಿನ ರಜೆ ಮಂಜೂರು ಮಾಡಿದ ಡಿಸಿಯ ನಡೆ ಅನುಮಾನಕ್ಕೆ ಎಡೆ

ವಿಜಯಪುರ: ತನ್ನ ತಂದೆ ನಿಧನರಾಗಿದ್ದಕ್ಕೆ ರಜೆ ಹಾಕಿಕೊಂಡ ಚಾಲಕ ಕಂ ನಿರ್ವಾಹಕನಿಗೆ ಕೇವಲ 7 ದಿನ ಮಾತ್ರ ರೆಜೆಕೊಟ್ಟು ಬಳಿಕ ಗೈರುಹಾಜರಿ ತೊರಿಸುವ ಮೂಲಕ ದೌರ್ಜನ್ಯದಿಂದ ನಡೆದುಕೊಂಡಿದ್ದಾರೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ.

ಇನ್ನು 2020 ರಿಂದ 2021ರ ನಡುವೆ ನಾರಾಯಣಪ್ಪ ಕುರುಬರ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಇದೇ ವಿಜಯಪುರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಇವರ ವಿರುದ್ಧ ಸಾಕಷ್ಟು ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಮಹಿಳೆಯರಿಗೆ ಕಿರಕುಳ ನೀಡಿರುವ ಬಗ್ಗೆ ದುರುಗಳು ಬಂದಿದವು ಎಲ್ಲವನ್ನು ಗಮನಿಸಿದ ಮೇಲಧಿಕಾರಿಗಳು ಹಾಗೂ ಅಂದಿನ ಸಾರಿಗೆ ಸಚಿವರು ವರ್ಗಾವಣೆ ಮಾಡಿದ್ದರು.

ಆದರೆ ಇವರು ತಮ್ಮ ರಾಜಕೀಯ ಪ್ರಭಾವ ಬಳಸಿ ಮತ್ತೆ ವಿಜಯಪುರ ವಿಭಾಗಕ್ಕೆ ಡಿಸಿಯಾಗಿ ಬಂದು ಒಕ್ಕರಿಸಿದ್ದಾರೆ. ಬಂದಮೇಲೆ ಚಾಲಕ ಕಂ ನಿರ್ವಾಹಕ ಹಿರೆಗೆಪ್ಪ ತಳವಾರ ಅವರ ತಂದೆ 2023 ಅಕ್ಟೋಬರ್‌ 17ರಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಈ ನಿಧನರಾಗುವುದಕ್ಕೂ ಮೊದಲ ಮೂರು ದಿನ ಅಂದರೆ ಅ.14ರಿಂದ ಅ.20ರವರೆಗೆ ರಜೆ ಮಂಜೂರು ಮಾಡಿದ್ದಾರೆ.

ಇಲ್ಲಿ ಚಾಲಕ ತನ್ನ ತಂದೆಯನ್ನು ಕಳೆದುಕೊಂಡ ಕೇವಲ ನಾಲ್ಕೆದಿನಕ್ಕೆ ಡ್ಯೂಟಿಗೆ ಬರಬೇಕಿತ್ತು ಎಂದು ಅ.21ರಿಂದ ಗೈರುಹಾಜರಿ ತೋರಿಸಿದ್ದಾರೆ. ಅಲ್ಲದೆ ಈ ಚಾಕಲ 15.09.2023ರಿಂದ 11.11.2023ರ ವರೆಗೆ ರಜೆ ತೆಗೆದುಕೊಂಡಿದ್ದಾರೆ. ಈ ನಡುವೆ ಈ ಮಧ್ಯೆ ಕೇವಲ 7 ದಿನ ರಜೆ ಮಂಜೂರು ಮಾಡಿ ಮತ್ತೆ ಗೈರುಹಾಜರಿ ತೋರಿಸಿದ್ದಾರೆ. ನಿರಂತರವಾಗಿ 58 ದಿನಗಳ ಕಾಲ ರಜೆಯಲ್ಲಿರುವ ವ್ಯಕ್ತಿಗೆ ಮಧ್ಯೆ 7 ದಿನ ರಜೆ ಮಂಜೂರು ಮಾಡುವುದಕ್ಕೆ ನಿಗಮದಲ್ಲಿ ನಿಯಮವಿದೆಯೇ?

ಇಲ್ಲಿ ನಿರಂತರವಾಗಿ ಗೈರು ಹಾಜರಿ ತೋರಿಸಬೇಕಿತ್ತು ಇಲ್ಲ ಚಾಲಕನ ತಂದೆ ನಿಧನರಾದ ದಿನದಿಂದ ಆತ ಡ್ಯೂಟಿಗೆ ಬರುವವರೆಗಾದರೂ ರಜೆ ಮಂಜೂರು ಮಾಡಬೇಕಿತ್ತು. ಇದಾವುದನ್ನು ಮಾಡದೆ 58 ದಿನಗಳ ರಜೆಯಲ್ಲಿ ಹಿಂದೆ ಮುಂದೆ ಗೈರು ಹಾಜರಿ ತೋರಿಸಿ ಮಧ್ಯೆ ರಜೆ ಮಂಜೂರು ಮಾಡಿರುವ ಈ ಡಿಸಿಯ ನಡೆ ಗಮನಿಸಿದರೆ ಅನುಮಾನ ಮೂಡುತ್ತಿದೆ.

ಇದಿಷ್ಟೇ ಅಲ್ಲದೆ ಈ ನಾರಾಯಣಪ್ಪ ಕುರುಬರ ವಿಭಾಗಕ್ಕೆ ಬಂದಾಗಿನಿಂದ ನೌಕರರ ರಜೆಯನ್ನು ಮಂಜೂರು ಮಾಡಲು 50:50 ಪದ್ಧತಿ ಅನುಸರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಹಣ ನೀಡಿದವರಿಗೆ ರಜೆ ಮಂಜೂರು ಮಾಡುವುದು. ಹಣ ನೀಡದೆ ಇದ್ದವರಿಗೆ ರಜೆ ಮಂಜೂರು ಮಾಡದೇ ಪೆಂಡಿಂಗ್ ಇಡುವುದು ಅಥವಾ ದಂಡ ಹಾಕುವುದು ಮಾಡುತ್ತಿದ್ದಾರೆ. ಹಣ ಪಡೆದ ಬಳಿಕ ಪ್ರಕರಣಗಳನ್ನು ವಿಲೇವಾರಿಮಾಡುತ್ತಿದ್ದಾರೆ ಎಂಬ ಆರೋಪ ವಿಭಾಗದಲ್ಲಿ ಕೇಳಿಬರುತ್ತಿದೆ.

ಇನ್ನು ಈತನ ಮೂಲ ಹುದ್ದೆ ಉಪ ಮುಖ್ಯಕಾನೂನು ಅಧಿಕಾರಿ. ಆದರೆ ಮೂಲ ಹುದ್ದೆ ಆತನಿಗೆ ಬೇಕಾಗಿಲ್ಲ. ವಿಭಾಗೀಯ ನಿಯಂತ್ರಣಾಧಿಕಾರಿ ಹುದ್ದೆನೇ ಬೇಕು. ಅದೂ ವಿಜಯಪುರ ವಿಭಾಗವೇ ಬೇಕು. ಈ ಹಿಂದೆ ಭ್ರಷ್ಟಾಚಾರ ಪಕ್ಷಪಾತ ಮತ್ತು ಮಹಿಳೆಯರಿಗೆ ನೀಡಿರುವ ಕಿರಕುಳದ ಆಧಾರದ ಮೇಲೆ ವಿಜಯಪುರ ವಿಭಾಗದಿಂದ ಹುದ್ದೆ ತೋರಿಸದೆ ವರ್ಗಾವಣೆ ಮಾಡಲಾಗಿತ್ತು.

ಆದರೆ ಈಗ ತನ್ನ ರಾಜಕೀಯ ಒತ್ತಡ ಬಳಸಿಕೊಂಡು ಮತ್ತೆ ವಿಜಯಪುರ ವಿಭಾಗಕ್ಕೆ ಒಕ್ಕರಿಸಿದ್ದಾರೆ. ಈತ ಈ ಹಿಂದೆ ವಿಜಯಪುರ ಬಸ್ ನಿಲ್ದಾಣದಲ್ಲಿರುವ ನಂದಿನಿ ಕ್ಯಾಂಟೀನ್ ಬಾಡಿಗೆ ವಿಚಾರದಲ್ಲಿ ಸಂಧಾನ ಪ್ರಕಿಯೇ ಮೂಲಕ ಪ್ರತಿ ತಿಂಗಳು 9.5 ಲಕ್ಷ ಬಾಡಿಗೆ ಇದ್ದ ಕ್ಯಾಂಟೀನ್‌ಗೆ ಕೇವಲ 4 ಲಕ್ಷ ರೂ.ಗಳಿಗೆ ಬಾಡಿಗೆ ಫಿಕ್ಸ್‌ ಮಾಡಿಸಿ ಬಾಡಿಗೆದಾರರಿಂದ ಹಣ ಪಡೆದು ನಿಗಮಕ್ಕೆ ಸುಮಾರು 1.90 ಕೋಟಿ ರೂ.ಗಳಷ್ಟು ಆದಾಯ ಲಾಸ್‌ ಆಗಲು ನೇರವಾಗಿ ಕಾರಣರಾಗಿದ್ದಾರೆ.

ಈ ಸಂಬಂಧ ಈತನ ಮೇಲೆ ದೂರು ಸಹ ದಾಖಲು ಮಾಡಲಾಗಿದೆ. ಆದರೆ ವಿಚಾರಣೆಯಲ್ಲಿ ತಮಗೆ ಬೇಕಾಗಿರುವ ಅಧಿಕಾರಿಗಳನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಿಸಿ ಕೊಂಡಿದ್ದಾರೆ. ಅಲ್ಲದೆ ವಿಜಯಪುರ ವಿಭಾಗದಲ್ಲಿ ಸಾಕಷ್ಟು ದುರುಗಳಿದ್ದರು ಮತ್ತೆ ವಿಜಯಪುರ ವಿಭಾಗಕ್ಕೆ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಬಂದು ಮತ್ತೆ ನೌಕರರ ಸುಲೆಗೆ ಮಾಡುವುದಕ್ಕೆ ನಿಂತಿದ್ದಾರೆ.

ಈತ ವಿಜಯಪುರ ವಿಭಾಗದಲ್ಲಿ ಮಾಡಿರುವ ಭ್ರಷ್ಟಾಚಾರ, ಪಕ್ಷಪಾತ ಮತ್ತು ಮಹಿಳೆಯರಿಗೆ ನೀಡಿರುವ ಕಿರಕುಳ ಹಾಗೂ ನಿಗಮಕ್ಕೆ ಸುಮಾರು 1.98 ಕೋಟಿ ರೂ.ಗಳಷ್ಟು ಆದಾಯ ನಷ್ಟ ಮಾಡಿ ಆರ್ಥಿಕವಾಗಿ ನಿಮಗಕ್ಕೆ ನಷ್ಟ ಮಾಡಿರುವ ಆರೋಪದ ಮೇಲೆ ಕೂಡಲೇ ವಿಚಾರಣ ಪೂರ್ವ ಅಮಾನತು ಮಾಡಿ ಸೂಕ್ತ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ವಿಭಾಗದ ನೌಕರರು ಆಗ್ರಹಿಸಿದ್ದಾರೆ.

ವಿಭಾಗದಲ್ಲಿ ಪೆಂಡಿಂಗ್‌ ಇದ್ದ ರಜೆ ಪ್ರಕರಣಗಳನ್ನು ಇತ್ಯಾರ್ಥ ಮಾಡಿರುವ ಡಿಸಿ ಆದೇಶದ ಪಿಡಿಎಫ್‌ ಪ್ರತಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: Leave Order’s

Megha
the authorMegha

Leave a Reply

error: Content is protected !!