KKRTC ವಿಜಯಪುರ: ತಂದೆ ನಿಧನರಾದ ನಾಲ್ಕೇ ದಿನಕ್ಕೆ ಡ್ಯೂಟಿಗೆ ಬರಬೇಕಿತ್ತು ಅಂತ ಚಾಲಕನಿಗೆ ಗೈರುಹಾಜರಿ ಮಾಡಿದ ಡಿಸಿ ನಾರಾಯಣಪ್ಪ ಕುರುಬರ

- ಒಟ್ಟು 58 ದಿನ ರಜೆಯಲ್ಲಿದ್ದ ಚಾಲಕ ಕಂ ನಿರ್ವಾಹಕನಿಗೆ ಹಿಂದೆ ಮುಂದೆ ಗೈರು ಹಾಜರಿ ತೋರಿಸಿ 7ದಿನ ರಜೆ ಮಂಜೂರು ಮಾಡಿದ ಡಿಸಿಯ ನಡೆ ಅನುಮಾನಕ್ಕೆ ಎಡೆ
ವಿಜಯಪುರ: ತನ್ನ ತಂದೆ ನಿಧನರಾಗಿದ್ದಕ್ಕೆ ರಜೆ ಹಾಕಿಕೊಂಡ ಚಾಲಕ ಕಂ ನಿರ್ವಾಹಕನಿಗೆ ಕೇವಲ 7 ದಿನ ಮಾತ್ರ ರೆಜೆಕೊಟ್ಟು ಬಳಿಕ ಗೈರುಹಾಜರಿ ತೊರಿಸುವ ಮೂಲಕ ದೌರ್ಜನ್ಯದಿಂದ ನಡೆದುಕೊಂಡಿದ್ದಾರೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ.
ಇನ್ನು 2020 ರಿಂದ 2021ರ ನಡುವೆ ನಾರಾಯಣಪ್ಪ ಕುರುಬರ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಇದೇ ವಿಜಯಪುರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಇವರ ವಿರುದ್ಧ ಸಾಕಷ್ಟು ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಮಹಿಳೆಯರಿಗೆ ಕಿರಕುಳ ನೀಡಿರುವ ಬಗ್ಗೆ ದುರುಗಳು ಬಂದಿದವು ಎಲ್ಲವನ್ನು ಗಮನಿಸಿದ ಮೇಲಧಿಕಾರಿಗಳು ಹಾಗೂ ಅಂದಿನ ಸಾರಿಗೆ ಸಚಿವರು ವರ್ಗಾವಣೆ ಮಾಡಿದ್ದರು.
ಆದರೆ ಇವರು ತಮ್ಮ ರಾಜಕೀಯ ಪ್ರಭಾವ ಬಳಸಿ ಮತ್ತೆ ವಿಜಯಪುರ ವಿಭಾಗಕ್ಕೆ ಡಿಸಿಯಾಗಿ ಬಂದು ಒಕ್ಕರಿಸಿದ್ದಾರೆ. ಬಂದಮೇಲೆ ಚಾಲಕ ಕಂ ನಿರ್ವಾಹಕ ಹಿರೆಗೆಪ್ಪ ತಳವಾರ ಅವರ ತಂದೆ 2023 ಅಕ್ಟೋಬರ್ 17ರಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಈ ನಿಧನರಾಗುವುದಕ್ಕೂ ಮೊದಲ ಮೂರು ದಿನ ಅಂದರೆ ಅ.14ರಿಂದ ಅ.20ರವರೆಗೆ ರಜೆ ಮಂಜೂರು ಮಾಡಿದ್ದಾರೆ.
ಇಲ್ಲಿ ಚಾಲಕ ತನ್ನ ತಂದೆಯನ್ನು ಕಳೆದುಕೊಂಡ ಕೇವಲ ನಾಲ್ಕೆದಿನಕ್ಕೆ ಡ್ಯೂಟಿಗೆ ಬರಬೇಕಿತ್ತು ಎಂದು ಅ.21ರಿಂದ ಗೈರುಹಾಜರಿ ತೋರಿಸಿದ್ದಾರೆ. ಅಲ್ಲದೆ ಈ ಚಾಕಲ 15.09.2023ರಿಂದ 11.11.2023ರ ವರೆಗೆ ರಜೆ ತೆಗೆದುಕೊಂಡಿದ್ದಾರೆ. ಈ ನಡುವೆ ಈ ಮಧ್ಯೆ ಕೇವಲ 7 ದಿನ ರಜೆ ಮಂಜೂರು ಮಾಡಿ ಮತ್ತೆ ಗೈರುಹಾಜರಿ ತೋರಿಸಿದ್ದಾರೆ. ನಿರಂತರವಾಗಿ 58 ದಿನಗಳ ಕಾಲ ರಜೆಯಲ್ಲಿರುವ ವ್ಯಕ್ತಿಗೆ ಮಧ್ಯೆ 7 ದಿನ ರಜೆ ಮಂಜೂರು ಮಾಡುವುದಕ್ಕೆ ನಿಗಮದಲ್ಲಿ ನಿಯಮವಿದೆಯೇ?
ಇಲ್ಲಿ ನಿರಂತರವಾಗಿ ಗೈರು ಹಾಜರಿ ತೋರಿಸಬೇಕಿತ್ತು ಇಲ್ಲ ಚಾಲಕನ ತಂದೆ ನಿಧನರಾದ ದಿನದಿಂದ ಆತ ಡ್ಯೂಟಿಗೆ ಬರುವವರೆಗಾದರೂ ರಜೆ ಮಂಜೂರು ಮಾಡಬೇಕಿತ್ತು. ಇದಾವುದನ್ನು ಮಾಡದೆ 58 ದಿನಗಳ ರಜೆಯಲ್ಲಿ ಹಿಂದೆ ಮುಂದೆ ಗೈರು ಹಾಜರಿ ತೋರಿಸಿ ಮಧ್ಯೆ ರಜೆ ಮಂಜೂರು ಮಾಡಿರುವ ಈ ಡಿಸಿಯ ನಡೆ ಗಮನಿಸಿದರೆ ಅನುಮಾನ ಮೂಡುತ್ತಿದೆ.
ಇದಿಷ್ಟೇ ಅಲ್ಲದೆ ಈ ನಾರಾಯಣಪ್ಪ ಕುರುಬರ ವಿಭಾಗಕ್ಕೆ ಬಂದಾಗಿನಿಂದ ನೌಕರರ ರಜೆಯನ್ನು ಮಂಜೂರು ಮಾಡಲು 50:50 ಪದ್ಧತಿ ಅನುಸರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಹಣ ನೀಡಿದವರಿಗೆ ರಜೆ ಮಂಜೂರು ಮಾಡುವುದು. ಹಣ ನೀಡದೆ ಇದ್ದವರಿಗೆ ರಜೆ ಮಂಜೂರು ಮಾಡದೇ ಪೆಂಡಿಂಗ್ ಇಡುವುದು ಅಥವಾ ದಂಡ ಹಾಕುವುದು ಮಾಡುತ್ತಿದ್ದಾರೆ. ಹಣ ಪಡೆದ ಬಳಿಕ ಪ್ರಕರಣಗಳನ್ನು ವಿಲೇವಾರಿಮಾಡುತ್ತಿದ್ದಾರೆ ಎಂಬ ಆರೋಪ ವಿಭಾಗದಲ್ಲಿ ಕೇಳಿಬರುತ್ತಿದೆ.
ಇನ್ನು ಈತನ ಮೂಲ ಹುದ್ದೆ ಉಪ ಮುಖ್ಯಕಾನೂನು ಅಧಿಕಾರಿ. ಆದರೆ ಮೂಲ ಹುದ್ದೆ ಆತನಿಗೆ ಬೇಕಾಗಿಲ್ಲ. ವಿಭಾಗೀಯ ನಿಯಂತ್ರಣಾಧಿಕಾರಿ ಹುದ್ದೆನೇ ಬೇಕು. ಅದೂ ವಿಜಯಪುರ ವಿಭಾಗವೇ ಬೇಕು. ಈ ಹಿಂದೆ ಭ್ರಷ್ಟಾಚಾರ ಪಕ್ಷಪಾತ ಮತ್ತು ಮಹಿಳೆಯರಿಗೆ ನೀಡಿರುವ ಕಿರಕುಳದ ಆಧಾರದ ಮೇಲೆ ವಿಜಯಪುರ ವಿಭಾಗದಿಂದ ಹುದ್ದೆ ತೋರಿಸದೆ ವರ್ಗಾವಣೆ ಮಾಡಲಾಗಿತ್ತು.
ಆದರೆ ಈಗ ತನ್ನ ರಾಜಕೀಯ ಒತ್ತಡ ಬಳಸಿಕೊಂಡು ಮತ್ತೆ ವಿಜಯಪುರ ವಿಭಾಗಕ್ಕೆ ಒಕ್ಕರಿಸಿದ್ದಾರೆ. ಈತ ಈ ಹಿಂದೆ ವಿಜಯಪುರ ಬಸ್ ನಿಲ್ದಾಣದಲ್ಲಿರುವ ನಂದಿನಿ ಕ್ಯಾಂಟೀನ್ ಬಾಡಿಗೆ ವಿಚಾರದಲ್ಲಿ ಸಂಧಾನ ಪ್ರಕಿಯೇ ಮೂಲಕ ಪ್ರತಿ ತಿಂಗಳು 9.5 ಲಕ್ಷ ಬಾಡಿಗೆ ಇದ್ದ ಕ್ಯಾಂಟೀನ್ಗೆ ಕೇವಲ 4 ಲಕ್ಷ ರೂ.ಗಳಿಗೆ ಬಾಡಿಗೆ ಫಿಕ್ಸ್ ಮಾಡಿಸಿ ಬಾಡಿಗೆದಾರರಿಂದ ಹಣ ಪಡೆದು ನಿಗಮಕ್ಕೆ ಸುಮಾರು 1.90 ಕೋಟಿ ರೂ.ಗಳಷ್ಟು ಆದಾಯ ಲಾಸ್ ಆಗಲು ನೇರವಾಗಿ ಕಾರಣರಾಗಿದ್ದಾರೆ.
ಈ ಸಂಬಂಧ ಈತನ ಮೇಲೆ ದೂರು ಸಹ ದಾಖಲು ಮಾಡಲಾಗಿದೆ. ಆದರೆ ವಿಚಾರಣೆಯಲ್ಲಿ ತಮಗೆ ಬೇಕಾಗಿರುವ ಅಧಿಕಾರಿಗಳನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಿಸಿ ಕೊಂಡಿದ್ದಾರೆ. ಅಲ್ಲದೆ ವಿಜಯಪುರ ವಿಭಾಗದಲ್ಲಿ ಸಾಕಷ್ಟು ದುರುಗಳಿದ್ದರು ಮತ್ತೆ ವಿಜಯಪುರ ವಿಭಾಗಕ್ಕೆ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಬಂದು ಮತ್ತೆ ನೌಕರರ ಸುಲೆಗೆ ಮಾಡುವುದಕ್ಕೆ ನಿಂತಿದ್ದಾರೆ.
ಈತ ವಿಜಯಪುರ ವಿಭಾಗದಲ್ಲಿ ಮಾಡಿರುವ ಭ್ರಷ್ಟಾಚಾರ, ಪಕ್ಷಪಾತ ಮತ್ತು ಮಹಿಳೆಯರಿಗೆ ನೀಡಿರುವ ಕಿರಕುಳ ಹಾಗೂ ನಿಗಮಕ್ಕೆ ಸುಮಾರು 1.98 ಕೋಟಿ ರೂ.ಗಳಷ್ಟು ಆದಾಯ ನಷ್ಟ ಮಾಡಿ ಆರ್ಥಿಕವಾಗಿ ನಿಮಗಕ್ಕೆ ನಷ್ಟ ಮಾಡಿರುವ ಆರೋಪದ ಮೇಲೆ ಕೂಡಲೇ ವಿಚಾರಣ ಪೂರ್ವ ಅಮಾನತು ಮಾಡಿ ಸೂಕ್ತ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ವಿಭಾಗದ ನೌಕರರು ಆಗ್ರಹಿಸಿದ್ದಾರೆ.
ವಿಭಾಗದಲ್ಲಿ ಪೆಂಡಿಂಗ್ ಇದ್ದ ರಜೆ ಪ್ರಕರಣಗಳನ್ನು ಇತ್ಯಾರ್ಥ ಮಾಡಿರುವ ಡಿಸಿ ಆದೇಶದ ಪಿಡಿಎಫ್ ಪ್ರತಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: Leave Order’s
Related

You Might Also Like
ಸರ್ಕಾರಿ ನೌಕರರು ಜಾತಿ, ಧರ್ಮ ಮಾಡಬಾರದು: ಸಿಎಂ ಸಿದ್ದರಾಮಯ್ಯ ಸಲಹೆ
ಬೆಂಗಳೂರು: ಸರ್ಕಾರಿ ನೌಕರರು ಜಾತಿ, ಧರ್ಮ ಮಾಡಬಾರದು. ಇದು ವೃತ್ತಿಗೆ ಮಾಡುವ ಅವಮಾನ. ನಮ್ಮ ಮೇಲೆ, ಸರ್ಕಾರಿ ನೌಕರರ ಮೇಲೆ ಸಮಾಜದ ಋಣ ಇದೆ ಎಂದು ಮುಖ್ಯಮಂತ್ರಿ...
ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಆಹಾರ ಸಚಿವ ಮುನಿಯಪ್ಪ
ಮೈಸೂರು: ಮೈಸೂರಿನ ದಕ್ಷಿಣ ನಗರದ ಸಗಟು ಮಳಿಗೆ ಬಂಡಿಪಾಲ್ಯಕ್ಕೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಇಂದು ಭೇಟಿ ನೀಡಿ ಆಹಾರ ಧಾನ್ಯಗಳ...
ಪಾದಚಾರಿ ಮಾರ್ಗ ಒತ್ತುವರಿ, ಅನಧಿಕೃತ ಜಾಹೀರಾತು ತೆರವು: ಆಯುಕ್ತ ಸತೀಶ್
ಬೆಂಗಳೂರು: ಬಿಬಿಎಂಪಿ ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ, ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ಹಾಗೂ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಪಾಲಿಕೆ ವ್ಯಾಪ್ತಿಯ ರಾಜರಾಜೇಶ್ವರಿನಗರ ವಲಯದಲ್ಲಿ...
ನಿವೇಶನಗಳಲ್ಲಿ ತ್ಯಾಜ್ಯ ಸಂಗ್ರಹಣೆಯಾದರೆ ನಿವೇಶನ ಮಾಲೀಕರಿಗೆ ದಂಡ ವಿಧಿಸಿ: ಸ್ನೇಹಲ್
ಬೆಂಗಳೂರು: ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಸಂಗ್ರಹಣೆಯಾದಲ್ಲಿ ನಿವೇಶನ ಮಾಲೀಕರಿಗೆ ನೋಟಿಸ್ ನೀಡಿ ದಂಡ ವಿಧಿಸುವಂತೆ ಪೂರ್ವ ವಲಯ ಆಯುಕ್ತರಾದ ಸ್ನೇಹಲ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪೂರ್ವ...
KSRTC ಅಧಿಕಾರಿಗಳು ಕಚೇರಿಗೆ ಬಂದಾಗ ತಮ್ಮ ಹಣ ಎಷ್ಟಿತ್ತು ಹೋಗುವಾಗ ಎಷ್ಟಿದೆ ಅಂತ ತಿಳಿಸಬೇಕು: ಎಂಡಿ ಆದೇಶ
ಬೆಂಗಳೂರು: ರಾಜ್ಯ ಸರ್ಕಾರವು ಕಚೇರಿಗಳಲ್ಲಿ ನಗದು ಘೋಷಣೆ ವಹಿ ನಿರ್ವಹಣೆ ಕುರಿತು ವಿವರವಾಗಿ ಮಾರ್ಗಸೂಚಿಗಳನ್ನು ನೀಡಿ, ನಿಗಮ/ ಮಂಡಳಿಗಳಲ್ಲಿ ಸಹ ನಗದು ಘೋಷಣೆ ವಹಿ ನಿರ್ವಹಣೆ ಮಾಡುವಂತೆ...
ಕರ್ನಾಟಕ ಹೈಕೋರ್ಟ್ ಸಿಜೆಯಾಗಿ ನ್ಯಾ.ವಿಭು ಬಖ್ರು ಪ್ರಮಾಣ ವಚನ ಸ್ವೀಕಾರ
ಬೆಂಗಳೂರು: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ವಿಭು ಬಖ್ರು ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಇಂದು ರಾಜ್ಯಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ...
BMTC ನೌಕರರಿಗೆ ಕಿರುಕುಳ: ಸಮಸ್ಯೆ ಕೇಳದ ಘಟಕ- 20ರ ಡಿಎಂ- ಸರ್ವಾಧಿಕಾರಿಯ ವರ್ತನೆ
2 ಗಂಟೆ ಬಳಿಕ ತನ್ನ ಕಚೇರಿ ಬಾಗಿಲು ಹಾಕಿಕೊಂಡು ಚೇಳಗಳ ಜತೆ ಹರಟೆ ನೌಕರರ ಸಮಸ್ಯೆ ಬಗೆಹರಿಸದೆ ದರ್ಪ ಮೆರೆಯುತ್ತಿರುವ ಕಿರಾತಕ ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ...
BMTC: ಹೋಟೆಲ್ಗೆ ನುಗ್ಗಿದ ಎಲೆಕ್ಟ್ರಿಕ್ ಬಸ್, ಓರ್ವ ಯುವತಿ ಸಾವು, ಮೂವರಿಗೆ ಗಾಯ
ಬೆಂಗಳೂರು: ಕಿಲ್ಲರ್ ಬಿಎಂಟಿಸಿ ಎಂದು ಕರೆಸಿಕೊಳ್ಳುವ ಬೆಂಗಳೂರು ಮಹಾನಗರ ಸಾರಿಗೆಯ ಎಲೆಕ್ಟ್ರಿಕ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಫುಟ್ಪಾತ್ಗೆ ನುಗ್ಗಿದ ಪರಿಣಾಮ ಯುವತಿಯೋರ್ವರು ಮೃತಪಪ್ಟಿದ್ದು, ಫುಟ್ಪಾತ್ ಮೇಲೆ...
ಸಾರಿಗೆ ನೌಕರರು ಮುಷ್ಕರ ಹೂಡುವುದಾಗಿ ಕೊಟ್ಟ ಮುಷ್ಕರದ ನೋಟಿಸ್ ಸಂಬಂಧ ನಿರ್ದೇಶನ ಕೋರಿ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದ ಎಂಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಆ.5ರಿಂದ...