KSRTC ಫೋನ್ಪೇ ಹಗರಣ: ತುಮಕೂರು ಸಾರಿಗೆ ಡಿಸಿ, ಡಿಟಿಒ ಸೇರಿ 5 ಮಂದಿಗೆ ನೋಟಿಸ್ ಜಾರಿ ಮಾಡಿದ ಎಂಡಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದಲ್ಲಿ ನಡೆದುಇದೆ ಎನ್ನಲಾದ ಸುಮಾರು 75500 ರೂಪಾಯಿ ಫೋನ್ಪೇ ಹಗರಣಕ್ಕೆ ಸಂಬಂಧಿಸಿದಂತೆ ತುಮಕೂರು ಸಾರಿಗೆ ಡಿಸಿ, ಡಿಟಿಒ ಸೇರಿ 5 ಮಂದಿಗೆ ಅಪಾದನ ಪತ್ರ ಜಾರಿ ಮಾಡಿರುವ ಎಂಡಿ ಅನ್ಬುಕುಮಾರ್ ಏಳು ದಿನದೊಳಗೆ ಉತ್ತರಿಸುವಂತೆ ತಾಕೀತು ಮಾಡಿದ್ದಾರೆ.
ನಿಗಮದ ತುಮಕೂರು ವಿಭಾಗದಲ್ಲಿ ಸುಮಾರು 75 ಸಾವಿರ ರೂಪಾಯಿಗೂ ಹೆಚ್ಚು ನಡೆದಿರುವ ಫೋನ್ ಪೇ ಹಗರಣದ ಬಗ್ಗೆ ಸಲ್ಲಿಸಿದ್ದ ದೂರು ಪ್ರಕರಣವನ್ನು ಮುಚ್ಚಿ ಹಾಕಲು 20000 ರೂ.ಗಳನ್ನು ಲಂಚವಾಗಿ ನನಗೆ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಸಂಬಂಧಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಚಂದ್ರಶೇಖರ್ ಹಾಗೂ ವಿಭಾಗೀಯ ಸಂಚಲನಾಧಿಕಾರಿ ಕೆ.ಬಸವರಾಜು ಅವರನ್ನು ಅಮಾನುತು ಮಾಡಬೇಕು ಎಂದು ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರಿಗೆ ಸಿ.ನಾಗರಾಜು ಗೂಳೂರು ದಾಖಲೆ ಸಹಿತ ಕಳೆದ 2024ರ ಜನವರಿ 24ರಂದು ದೂರು ಸಲ್ಲಿಸಿದ್ದರು.
ಈ ದೂರಿನನ್ವಯ ಸಂಸ್ಥೆಯ ಎಂಡಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಚಂದ್ರಶೇಖರ್ ಹಾಗೂ ವಿಭಾಗೀಯ ಸಂಚಲನಾಧಿಕಾರಿ ಕೆ.ಬಸವರಾಜು ಸೇರಿದಂತೆ 5 ಮಂದಿ ವಿರುದ್ಧ ಪ್ರಕಣರ ದಾಖಲಿಸಿಕೊಂಡು ಅಪಾದನ ಪತ್ರವನ್ನು ನಿನ್ನೆ ಆರೋಪಿಗಳಿಗೆ ರವಾನಿಸಿದ್ದಾರೆ.
ಜನವರಿಲ್ಲಿ ಬೆಂಗಳೂರಿನ ಶಾಂತಿನಗರದಲ್ಲಿರುವ ಸಂಸ್ಥೆ ಕೇಂದ್ರ ಕೇಚೇರಿಗೆ ಹೋಗಿ ಜಾಗೃತ ವಿಭಾಗದ ನಿರ್ದೇಶಕಿ ನಂದಿನಿ ಅವರಿಗೆ ಲಂಚದ ರೂಪದಲ್ಲಿ ಕೊಟ್ಟಿದ್ದ 20000 ರೂ. ಹಣದ ಜತೆಗೆ ದಾಖಲೆಗಳನ್ನು ನೀಡಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನಾಗರಾಜು ಒತ್ತಾಯಿಸಿದ್ದರು.
ಇದಕ್ಕೆ ಸಂಬಂಧಿಸಿದಂತೆ ತುಮಕೂರು ವಿಭಾಗದ ಡಿಸಿ ಮತ್ತು ಡಿಟಿಒ ಸಂಸ್ಥೆಯ ಮಾನ ಮರ್ಯಾದಿ ಕಳೆದು ಸಾವಿರ ರೂಪಾಯಿಗಾಗಿ ಭಿಕ್ಷೆ ಬೇಡುತ್ತಿದ್ದಾರೆ. ಹೀಗಾಗಿ ಇವರ ವಿರುದ್ಧ ಕಾನೂನು ಕ್ರಮ ಕೈಗೊಂಡು ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದ್ದರು.
ಇನ್ನು ತುಮಕೂರು ಬಸ್ ನಿಲ್ದಾಣದ ಸಂಚಾರ ನಿಯಂತ್ರಕರಿಂದ ಲಂಚ ವಸೂಲಿ ಮಾಡಿರುವ ಬಗ್ಗೆಯೂ ತನಿಖೆ ನಡೆಸಿ ಈ ಅಕ್ರಮದ ಹಿಂದೆ ಇರುವ ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅಮಾನುತು ಮಾಡುವ ಮೂಲಕ ಭ್ರಷ್ಟರ ಹೆಡೆಮುರಿಕಟ್ಟಬೇಕು ಎಂದು ಕೋರಿದ್ದರು.
ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್, ವಿಭಾಗೀಯ ಸಂಚಲನಾಧಿಕಾರಿ ಬಸವರಾಜು ಅವರು ನನ್ನ ಮೇಲೆ ಇಲ್ಲ ಸಲ್ಲದ ರೀತಿಯಲ್ಲಿ ಒತ್ತಡ ತಂದು 03-01-2025 ರಂದು ನೀಡಿರುವ ದೂರಿನ ಅರ್ಜಿಯನ್ನು ವಾಪಸ್ ಪಡೆಯುವಂತೆ ಪೀಡಿಸುತ್ತಿದ್ದಾರೆ. ಅಲ್ಲದೆ ಇವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಾಕ್ಷಿ ನಾಶಪಡಿಸಲು ಪ್ರಯತ್ನಿಸಿರುತ್ತಾರೆ ಎಂದು ಆರೋಪಿಸಿದ್ದರು.
ಜ.12ರಂದು 20 ಸಾವಿರ ಕೊಟ್ಟರು: 12-01-2025ರ ಭಾನುವಾರ ಮಧ್ಯಾಹ್ನ 12ರ ಸಮಯದಲ್ಲಿ ನನ್ನ ಸ್ನೇಹಿತರು ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಕಾರಣ ಹಾಗೂ ನಾನು ಬಸ್ ನಿಲ್ದಾಣದಲ್ಲಿರುವಾಗ ನಿಗಮ ತುಮಕೂರು ವಿಭಾಗದ ತುಮಕೂರು ಘಟಕ-1ಕ್ಕೆ ಸೇರಿದ ತುಮಕೂರು ನಗರದ ನೂತನ ಬಸ್ ನಿಲ್ದಾಣ ಡಿ. ದೇವರಾಜ ಅರಸ್ ಬಸ್ ನಿಲ್ದಾಣದ ಸಹಾಯಕ ಸಂಚಾರ ನರೀಕ್ಷಕ (ಎ.ಟಿ.ಐ) ಬಿ.ಆರ್ ನಾಗರಾಜು ಅವರು ಫೋನ್ ಪೇ ಹಗರಣದ ಪ್ರಕರಣದ ಬಗ್ಗೆ ಮಾತನಾಡಲು ಬಸ್ ನಿಲ್ದಾಣದ ಸಂಚಾರ ನಿಯಂತ್ರಕರ ವಿಶ್ರಾಂತಿ ಕೊಠಡಿಗೆ ಕರೆದುಕೊಂಡು ಹೋದರು.
ಅಲ್ಲಿ ನೀವು 03-01-2025 ರಂದು ನೀಟಿರುವ ಫೋನ್ ಪೇ ಹಗರಣದ ಪ್ರಕರಣದ ಬಗ್ಗೆ ಸಲ್ಲಿಸಿರುವ ದೂರು ಅರ್ಜಿಯನ್ನು ವಾಪಸ್ ಪಡೆದು ಪ್ರಕರಣವನ್ನು ಮುಚ್ಚಿಹಾಕುವಂತೆ ತಿಳಿಸಿ ತುಮಕೂರು ಬಸ್ ನಿಲ್ದಾಣದ ಶಿವಮೊಗ್ಗ ಅಂಕಣದ ಆಗಮನ-ನಿರ್ಗಮನಗಳ ಪುಸ್ತಕದ 17-07-2024 ರ ಪುಟ ಸಂಖ್ಯೆ 15-16ರ, ನಾಲ್ಕು ಹಾಳೆಗಳ ಮಧ್ಯೆ ಸುತ್ತಿ ನನ್ನ ಪ್ಯಾಂಟಿನ ಜೇಬಿಗೆ 20 ಸಾವಿರ ರೂ. ಹಣವನ್ನು ನಾಗರಾಜು ಅವರು ಬಲವಂತದಿಂದ ಏಕಾಏಕಿ ಇಟ್ಟರು.
ಈಗ ನಾನು (ನಾಗರಾಜು) ದೂರು ಮನವಿ ಪತ್ರದೊಂದಿಗೆ ನನಗೆ ನೀಡಿದ ಹಣದ ಕ್ರಮಸಂಖ್ಯೆಯಲ್ಲಿ ತಿಳಿಸಿರುವ ವಿವರದಂತೆ 500 ರೂ.ಗಳ ಮುಖ ಬೆಲೆಯ ಒಟ್ಟು 40 ನೋಟುಗಳ ಮೊತ್ತ 20000 ರೂಪಾಯಿ ನಗದು ಹಣವನ್ನು ಅಡಕಗೊಳಿಸಿರುತ್ತೇನೆ. ಹಾಗೂ ತುಮಕೂರು ಬಸ್ ನಿಲ್ದಾಣದ ಶಿವಮೊಗ್ಗ ಅಂಕಣದ ಆಗಮನ-ನಿರ್ಗಮನಗಳ ನಾಲ್ಕು ಪುಟಗಳ ಹಾಳೆಯಲ್ಲಿ ಸುತ್ತಿಕೊಟ್ಟಿದ್ದ ಹಾಳೆಯನ್ನು ಸಹ ಲಗತ್ತಿಸಿದ್ದೇನೆ ಎಂದು ದೂರು ಕೊಟ್ಟ ವೇಳೆ ವಿವರಿಸಿದ್ದರು.
ಈ ರೀತಿ ಫೋನ್ ವೇ ಹಗರಣ ನಡೆಸಿರುವ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಹಾಗೂ ವಿಭಾಗೀಯ ಸಂಚಲನಾಧಿಕಾರಿಯಾದ ಕೆ.ಬಸವರಾಜು ಅವರು ಈ ಹಗರಣವನ್ನು ಮುಚ್ಚಿಹಾಕಲು ನನಗೆ ಲಂಚದ ರೂಪದಲ್ಲಿ ಈ ರೀತಿ 20,000 ರೂ.ಗಳ ಹಣವನ್ನು ನೀಡಿದ್ದು, ಈ ಇಬ್ಬರು ಅಧಿಕಾರಿಗಳ ವಿರುದ್ಧ ದಯೇ ದಕ್ಷಿಣೆ ತೋರದೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅಮಾನತುಪಡಿಸಿ ತುಮಕೂರು ವಿಭಾಗದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕೊನೆ ಮೊಳೆ ಹೊಡೆಯಬೇಕು ಎಂದು ಎಂಡಿ ಅವರಲ್ಲಿ ಮನವಿ ಮಾಡಿದ್ದರು.
ನಾಗರಾಜು ಅವರ ಎಂಡಿಗೆ ಕೊಟ್ಟ ದೂರಿನ ಬಗ್ಗೆ ವಿಜಯಪಥ ಮೀಡಿಯಾ ಕೂಡ ಜನವರಿ 24ರಂದು ಸಮಗ್ರ ವರದಿ ಮಾಡಿತ್ತು. ನಾಗರಾಜು ಅವರು ಕೊಟ್ಟ ದೂರು ಹಾಗೂ ಮೀಡಿಯಾದಲ್ಲಿ ಬಂದಿರುವ ವರಧಿಯ ಪರಿಣಾಮ ಇಂದು ಭ್ರಷ್ಟ ಅಧಿಕಾರಿಗಳಿಗೆ ಎಂಡಿ ಆಪಾದನ ಪತ್ರ ಕೊಟ್ಟು ಕ್ರಮಕ್ಕೆ ಮುಂಗಿದ್ದಾರೆ.
ಇಲ್ಲಿ ನೌಕರರನ್ನು ಕಾಡುವ ಅಧಿಕಾರಿಗಳಿಗೆ ತಕ್ಕ ಕಾನೂನಿ ಪಾಠ ಕಲಿಸುವ ಅಗತ್ಯವಿದ್ದು ಈ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರು ಯಾವುದೆ ಒತ್ತಡಕ್ಕೆ ಒಳಗಾಗದೆ ಲಂಚಬಾಕರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಸಂಸ್ಥೆಯ ಗೌರವವನ್ನು ಕಾಪಾಡಬೇಕಿದೆ ಎಂದು ನಾಗರಾಜ್ ಮನವಿ ಮಾಡಿದ್ದಾರೆ.
Related

You Might Also Like
BMTC ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದ ಪ್ರಕರಣ: ಕಠಿಣ ಕ್ರಮಕ್ಕೆ ಆಯುಕ್ತರು, ಗೃಹ ಸಚಿವರಿಗೆ ಸಾರಿಗೆ ಸಚಿವರ ಆಗ್ರಹ
ಬೆಂಗಳೂರು: ತಾನು ಕೇಳಿದ ಸ್ಥಳದಲ್ಲಿ ಬಸ್ ನಿಲ್ಲಿಸಿಲ್ಲ ಎಂದು ಮೂರು ದಿನದ ಹಿಂದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ಚಾಲಕನಿಗೆ ಮಹಿಳಾ ಟೆಕ್ಕಿ ಉದ್ಯೋಗಿಯೊಬ್ಬರು ಚಪ್ಪಲಿಯಿಂದ...
KSRTC: ನೌಕರರ ವೇತನ ಹೆಚ್ಚಳ ಸಂಬಂಧ ಸಿಎಂ-ಸಾರಿಗೆ ಸಚಿವರ ನಡುವೆ ಏನೋ ಸರಿ ಇಲ್ಲ..!
ಇಂದು ನಡೆಯಬೇಕಿದ್ದ ಸಭೆ ಮಾಹಿತಿಯೇ ಇಲ್ಲದೆ ರದ್ದು ಇದಕ್ಕೆ ಸಿಎಂ ಸಾರಿಗೆ ಸಚಿವರ ನಡುವೆ ಹೊಂದಾಣಿಕೆ ಕೊರತೆ ಕಾರಣವೆ? ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ...
BMTC: ಸಾಮಾನ್ಯ ಪಾಳಿಯ ಕರ್ತವ್ಯಕ್ಕೆ ಸೀನಿಯರ್ ಚಾಲನಾ ಸಿಬ್ಬಂದಿಗಳ ನಿಯೋಜನೆ ಮಾಡದಿರಲು ತೀರ್ಮಾನ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಗಳ ಸಾಮಾನ್ಯ ಪಾಳಿಯಲ್ಲಿ ಕರ್ತವ್ಯಕ್ಕೆ ಸೀನಿಯರ್ ಚಾಲನಾ ಸಿಬ್ಬಂದಿಗಳನ್ನು ನಿಯೋಜನೆ ಮಾಡದಿರಲು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರ (ಆ) ಅಧ್ಯಕ್ಷತೆಯಲ್ಲಿ...
BMTC: 79ರ ಬದಲು 34ಕಿಮೀ ಕಾರ್ಯಾಚರಣೆ ಮಾಡಿ ಆರ್ಥಿಕ ನಷ್ಟಮಾಡಿದ ಆರೋಪ- ಚಾಲನಾ ಸಿಬ್ಬಂದಿಗೆ ಡಿಎಂ ಮೆಮೋ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸುಮಾರು 3500 ರೂ.ಗಳಷ್ಟು ಆರ್ಥಿಕ ನಷ್ಟವುಂಟಾಗಲು ಕಾರಣರಾಗಿರುತ್ತೀರಿ ಎಂದು ಆರೋಪಿಸಿ ಚಾಲನಾ ಸಿಬ್ಬಂದಿ ವಿರುದ್ಧ ಘಟಕ ವ್ಯವಸ್ಥಾಪಕರು ಆರೋಪಣ ಪತ್ರ...
ಹಾಳಾಗಿರುವ ಒಳಚರಂಡಿ ಸ್ಲ್ಯಾಬ್ ಬದಲಾಯಿಸಿ: ಅಧಿಕಾರಿಗಳಿಗೆ ಸ್ನೇಹಲ್ ತಾಕೀತು
ಬೆಂಗಳೂರು: ಪೂರ್ವ ವಲಯ ವ್ಯಾಪ್ತಿಯಲ್ಲಿ ಹಾಳಾಗಿರುವ ಒಳಚರಂಡಿ ಮೇಲ್ಭಾಗದ ಕವರ್ ಸ್ಲ್ಯಾಬ್ ಬದಲಾಯಿಸಲು ಪೂರ್ವ ವಲಯ ಆಯುಕ್ತರಾದ ಸ್ನೇಹಲ್ ಜಲಮಡಂಳಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಪೂರ್ವ ವಲಯ...
ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಿ: ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ವಸ್ತ್ರದ್ ಸಲಹೆ
ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಸ್ವೀಪ್ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳುವ ಮೂಲಕ ಮತದಾರರಿಗೆ ಜಾಗೃತಿ ಮೂಡಿಸಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ...
ಗ್ರಾಪಂ- ಮನೆ ಬಾಗಿಲಿಗೆ ಇ-ಸ್ವತ್ತು ಖಾತೆ ವಿತರಣೆ: ಜಿಪಂ ಸಿಇಒ ಡಾ.ಅನುರಾಧ
ಪಂಚಾಯತ್ ರಾಜ್ ಇಲಾಖೆಯಿಂದ ಮಹತ್ವಕಾಂಕ್ಷಿ ಕಾರ್ಯಕ್ರಮ ಗ್ರಾಮಠಾಣಾ ವ್ಯಾಪ್ತಿಯ ಮನೆ ಬಾಗಿಲಿಗೇ ಈ ಸ್ವತ್ತು ಖಾತೆ ನೀಡುವ ಯೋಜನೆ ಆರಂಭ ಬೆಂಗಳೂರು ಗ್ರಾಮಾಂತರ: ಪಂಚಾಯತ್ ರಾಜ್ ಮತ್ತು...
ರೈತರಿಗಾಗಿ ಜಿಲ್ಲಾ ಮಟ್ಟದ ಮಾವು- ಹಲಸು ಮೇಳ: ಸಚಿವ ಮುನಿಯಪ್ಪ
ಬೆಂಗಳೂರು ಗ್ರಾಮಾಂತರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಾವು, ಹಲಸು ಮತ್ತು ಇತರೆ ಹಣ್ಣುಗಳ ಪ್ರದರ್ಶನ...
ಖಾಸಗಿ ಕಂಪನಿಯ ಮುಖ್ಯ ಕಾನೂನು ಸಲಹೆಗಾರರಾಗಿ ನೇಮಕಗೊಂಡ ವಕೀಲ ಶಿವರಾಜುರಿಗೆ ಅಭಿನಂದನೆಗಳು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಹಲವು ನೌಕರರು ಸೇರಿದಂತೆ ಇತರರಿಗೆ ಉಚಿತವಾಗಿ ಕಾನೂನು ಸೇವೆ ನೀಡಿದ ಫಲವಾಗಿ ವಕೀಲರಾದ ಎಚ್.ಬಿ.ಶಿವರಾಜು ಅವರಿಗೆ ಕೈ...